Seetha Rama Serial: ಸಿಹಿ ರೂಪದಲ್ಲಿ ಸೀತಮ್ಮನ ಮಡಿಲು ಸೇರಿದ ಸುಬ್ಬಿ, ಹೌಹಾರಿದ ಭಾರ್ಗವಿ; ರೋಚಕ ಘಟ್ಟದತ್ತ ಸೀತಾ ರಾಮ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Seetha Rama Serial: ಸಿಹಿ ರೂಪದಲ್ಲಿ ಸೀತಮ್ಮನ ಮಡಿಲು ಸೇರಿದ ಸುಬ್ಬಿ, ಹೌಹಾರಿದ ಭಾರ್ಗವಿ; ರೋಚಕ ಘಟ್ಟದತ್ತ ಸೀತಾ ರಾಮ ಧಾರಾವಾಹಿ

Seetha Rama Serial: ಸಿಹಿ ರೂಪದಲ್ಲಿ ಸೀತಮ್ಮನ ಮಡಿಲು ಸೇರಿದ ಸುಬ್ಬಿ, ಹೌಹಾರಿದ ಭಾರ್ಗವಿ; ರೋಚಕ ಘಟ್ಟದತ್ತ ಸೀತಾ ರಾಮ ಧಾರಾವಾಹಿ

  • Seetha Rama Serial Feb 11th 2025 Episode: ಸೀತಾ ರಾಮ ಸೀರಿಯಲ್‌ ರೋಚಕ ಘಟ್ಟದತ್ತ ಸಾಗುತ್ತಿದೆ. ಇಲ್ಲಿಯವರೆಗೂ ಸಿಹಿ ಇಲ್ಲದೆ, ಕಂಗಾಲಾಗಿದ್ದ ಸೀತಾ ಮಡಿಲಿಗೆ ಸಿಹಿಯ ಆಗಮನವಾಗಿದೆ. ಇತ್ತ ಭಾರ್ಗವಿಗೂ ಬಿಸಿ ಮುಟ್ಟಿಸಿದ್ದಾಳೆ ಸೀತಾ. 

ಸೀತಾ ರಾಮ ಸೀರಿಯಲ್‌ನಲ್ಲಿ ಒಂದಷ್ಟು ರೋಚಕ ಸನ್ನಿವೇಶಗಳು ವೀಕ್ಷಕರನ್ನು ನಿಬ್ಬೆರಗು ಮಾಡಿವೆ. ಅದರಂತೆ ಇಂದಿನ ಸಂಚಿಕೆಯಲ್ಲಿ (ಫೆ. 11) ಏನೆಲ್ಲ ಹೈಲೈಟ್‌ ಇರಬಹುದು ಎಂಬುದಕ್ಕೆ, ಪ್ರೋಮೋ ರಿಲೀಸ್‌ ಮಾಡಿದೆ ಜೀ ಕನ್ನಡ ವಾಹಿನಿ. 
icon

(1 / 10)

ಸೀತಾ ರಾಮ ಸೀರಿಯಲ್‌ನಲ್ಲಿ ಒಂದಷ್ಟು ರೋಚಕ ಸನ್ನಿವೇಶಗಳು ವೀಕ್ಷಕರನ್ನು ನಿಬ್ಬೆರಗು ಮಾಡಿವೆ. ಅದರಂತೆ ಇಂದಿನ ಸಂಚಿಕೆಯಲ್ಲಿ (ಫೆ. 11) ಏನೆಲ್ಲ ಹೈಲೈಟ್‌ ಇರಬಹುದು ಎಂಬುದಕ್ಕೆ, ಪ್ರೋಮೋ ರಿಲೀಸ್‌ ಮಾಡಿದೆ ಜೀ ಕನ್ನಡ ವಾಹಿನಿ. 
(Image\ Zee Kannada Facebook)

ಸಿಹಿ ಇಲ್ಲ ಅನ್ನೋ ನೋವಿನಲ್ಲಿ ಸೀತಾ ಮಾನಸಿಕವಾಗಿ ಸಾಕಷ್ಟು ಬಳಲಿದ್ದಾಳೆ. ಹೀಗಿರುವಾಗಲೇ ಭಾರ್ಗವಿಯ ಕಟು ಮಾತುಗಳು ಸೀತಾಳ ಕೋಪವನ್ನು ನೆತ್ತಿಗೇರುವಂತೆ ಮಾಡಿದೆ. ಸಿಹಿ ಆವತ್ತೇ ಆಕ್ಸಿಡೆಂಟ್‌ ಸತ್ತಿದ್ದರೆ ಚೆನ್ನಾಗಿತ್ತು ಎಂದು ಭಾರ್ಗವಿ ಹೇಳಿದ್ದಾಳೆ. 
icon

(2 / 10)

ಸಿಹಿ ಇಲ್ಲ ಅನ್ನೋ ನೋವಿನಲ್ಲಿ ಸೀತಾ ಮಾನಸಿಕವಾಗಿ ಸಾಕಷ್ಟು ಬಳಲಿದ್ದಾಳೆ. ಹೀಗಿರುವಾಗಲೇ ಭಾರ್ಗವಿಯ ಕಟು ಮಾತುಗಳು ಸೀತಾಳ ಕೋಪವನ್ನು ನೆತ್ತಿಗೇರುವಂತೆ ಮಾಡಿದೆ. ಸಿಹಿ ಆವತ್ತೇ ಆಕ್ಸಿಡೆಂಟ್‌ ಸತ್ತಿದ್ದರೆ ಚೆನ್ನಾಗಿತ್ತು ಎಂದು ಭಾರ್ಗವಿ ಹೇಳಿದ್ದಾಳೆ. 

ಆವತ್ತೇ ನಿನ್ನ ಮಗಳು ಸತ್ತಿದ್ದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದು ತನ್ನೊಳಗಿನ ಕೋಪ ತಾಪವನ್ನು ಭಾರ್ಗವಿ ಸೀತಾಳ ಮುಂದೆಯೇ ಹೊರಗೆಡವಿದ್ದಾಳೆ. 
icon

(3 / 10)

ಆವತ್ತೇ ನಿನ್ನ ಮಗಳು ಸತ್ತಿದ್ದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದು ತನ್ನೊಳಗಿನ ಕೋಪ ತಾಪವನ್ನು ಭಾರ್ಗವಿ ಸೀತಾಳ ಮುಂದೆಯೇ ಹೊರಗೆಡವಿದ್ದಾಳೆ. 

ಭಾರ್ಗವಿ ಮಾತಿಗೆ ಕಡು ಕೋಪದಲ್ಲಿಯೇ ಟೇಬಲ್‌ ಮೇಲಿದ್ದ ಚಾಕುವನ್ನು ಹಿಡಿದು, ಭಾರ್ಗವಿಯ ಕೊರಳಿನ ಬಳಿ ಚಾಕು ಹಿಡಿದಿದ್ದಾಳೆ. ಅಷ್ಟರಲ್ಲಿ ಸೂರ್ಯಪ್ರಕಾಶ್‌ ಮತ್ತು ವಿಶ್ವನ ಆಗಮನವಾಗಿದೆ. 
icon

(4 / 10)

ಭಾರ್ಗವಿ ಮಾತಿಗೆ ಕಡು ಕೋಪದಲ್ಲಿಯೇ ಟೇಬಲ್‌ ಮೇಲಿದ್ದ ಚಾಕುವನ್ನು ಹಿಡಿದು, ಭಾರ್ಗವಿಯ ಕೊರಳಿನ ಬಳಿ ಚಾಕು ಹಿಡಿದಿದ್ದಾಳೆ. ಅಷ್ಟರಲ್ಲಿ ಸೂರ್ಯಪ್ರಕಾಶ್‌ ಮತ್ತು ವಿಶ್ವನ ಆಗಮನವಾಗಿದೆ. 

ಸೀತಾ ಮಾನಸಿಕವಾಗಿ ತುಂಬ ನೋವಲ್ಲಿದ್ದಾಳೆ. ಅವಳನ್ನು ಹೇಗಾದರೂ ಮಾಡಿ, ಆಸ್ಪತ್ರೆಗೆ ಕಳಿಸಿಕೊಡಿ ಅಪ್ಪಾಜಿ ಎಂದು ಸೂರ್ಯಪ್ರಕಾಶ್‌ ಬಳಿ ಬೇಡಿದ್ದಾನೆ ವಿಶ್ವ. ಸೀತಾಳ ವರ್ತನೆ ಕಂಡು ಮನೆ ಮಂದಿಯೂ ಕೊಂಚ ಶಾಕ್‌ಗೆ ಒಳಗಾಗಿದ್ದಾರೆ.
icon

(5 / 10)

ಸೀತಾ ಮಾನಸಿಕವಾಗಿ ತುಂಬ ನೋವಲ್ಲಿದ್ದಾಳೆ. ಅವಳನ್ನು ಹೇಗಾದರೂ ಮಾಡಿ, ಆಸ್ಪತ್ರೆಗೆ ಕಳಿಸಿಕೊಡಿ ಅಪ್ಪಾಜಿ ಎಂದು ಸೂರ್ಯಪ್ರಕಾಶ್‌ ಬಳಿ ಬೇಡಿದ್ದಾನೆ ವಿಶ್ವ. ಸೀತಾಳ ವರ್ತನೆ ಕಂಡು ಮನೆ ಮಂದಿಯೂ ಕೊಂಚ ಶಾಕ್‌ಗೆ ಒಳಗಾಗಿದ್ದಾರೆ.

ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಸಮಯಕ್ಕೆ ಸರಿಯಾಗಿ ರಾಮನ ಎಂಟ್ರಿಯಾಗಿದೆ. ಜತೆಯಲ್ಲಿ ಸಿಹಿಯ ರೂಪದಲ್ಲಿನ ಸುಬ್ಬಿಯನ್ನೂ ಆತ ಕರೆತಂದಿದ್ದಾನೆ. 
icon

(6 / 10)

ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಸಮಯಕ್ಕೆ ಸರಿಯಾಗಿ ರಾಮನ ಎಂಟ್ರಿಯಾಗಿದೆ. ಜತೆಯಲ್ಲಿ ಸಿಹಿಯ ರೂಪದಲ್ಲಿನ ಸುಬ್ಬಿಯನ್ನೂ ಆತ ಕರೆತಂದಿದ್ದಾನೆ. 

ಆಸ್ಪತ್ರೆಗೆ ಕರೆದೊಯ್ತಿದ್ದ ಸಿಬ್ಬಂದಿಯಿಂದ ಸೀತಾಳನ್ನು ಬಿಡಿಸಿದ ರಾಮ್, ಎಲ್ಲರನ್ನು ಹಿಂದಕ್ಕೆ ಸರಿಸಿದ್ದಾನೆ. ಅಷ್ಟರಲ್ಲಿ ನಿನಗೆ ಸೀತಮ್ಮ ಬೇಕೋ ಬೇಡ್ವೋ ಎಂದು ಸುಬ್ಬಿಯನ್ನು ಕೇಳಿದ್ದಾಳೆ ಸಿಹಿ. ತಕ್ಷಣ ಕಾರ್‌ನಿಂದ ಇಳಿದು ಸೀತಮ್ಮ ಎಂದು ಜೋರಾಗಿ ಕೂಗಿದ್ದಾಳೆ ಸಿಹಿ ವೇಷದಲ್ಲಿರುವ ಸುಬ್ಬಿ. 
icon

(7 / 10)

ಆಸ್ಪತ್ರೆಗೆ ಕರೆದೊಯ್ತಿದ್ದ ಸಿಬ್ಬಂದಿಯಿಂದ ಸೀತಾಳನ್ನು ಬಿಡಿಸಿದ ರಾಮ್, ಎಲ್ಲರನ್ನು ಹಿಂದಕ್ಕೆ ಸರಿಸಿದ್ದಾನೆ. ಅಷ್ಟರಲ್ಲಿ ನಿನಗೆ ಸೀತಮ್ಮ ಬೇಕೋ ಬೇಡ್ವೋ ಎಂದು ಸುಬ್ಬಿಯನ್ನು ಕೇಳಿದ್ದಾಳೆ ಸಿಹಿ. ತಕ್ಷಣ ಕಾರ್‌ನಿಂದ ಇಳಿದು ಸೀತಮ್ಮ ಎಂದು ಜೋರಾಗಿ ಕೂಗಿದ್ದಾಳೆ ಸಿಹಿ ವೇಷದಲ್ಲಿರುವ ಸುಬ್ಬಿ. 

ಸೀತಮ್ಮ ಎಂದು ಕೂಗುತ್ತಿದ್ದಂತೆ, ಸೀತಾಳ ಕಣ್ಣು ಅರಳಿವೆ, ಕಿವಿ ನಿಮಿರಿವೆ. ಸಿಹಿಯನ್ನೇ ಹೋಲುವ ಹುಡುಗಿ ಮತ್ತೆ ದೇಸಾಯಿ ಕುಟುಂಬಕ್ಕೆ ಎಂಟ್ರಿಯಾಗುತ್ತಿದ್ದಂತೆ, ಭಾರ್ಗವಿ, ತಾತ, ವಿಶ್ವ, ಸಾಧನಾ ಅಚ್ಚರಿಗೊಂಡಿದ್ದಾರೆ. 
icon

(8 / 10)

ಸೀತಮ್ಮ ಎಂದು ಕೂಗುತ್ತಿದ್ದಂತೆ, ಸೀತಾಳ ಕಣ್ಣು ಅರಳಿವೆ, ಕಿವಿ ನಿಮಿರಿವೆ. ಸಿಹಿಯನ್ನೇ ಹೋಲುವ ಹುಡುಗಿ ಮತ್ತೆ ದೇಸಾಯಿ ಕುಟುಂಬಕ್ಕೆ ಎಂಟ್ರಿಯಾಗುತ್ತಿದ್ದಂತೆ, ಭಾರ್ಗವಿ, ತಾತ, ವಿಶ್ವ, ಸಾಧನಾ ಅಚ್ಚರಿಗೊಂಡಿದ್ದಾರೆ. 

ಭಾರ್ಗವಿಯಂತೂ ಸಿಹಿಯನ್ನ ನೋಡುತ್ತಿದ್ದಂತೆ, ಶಾಕ್‌ಗೆ ಒಳಗಾಗಿದ್ದಾಳೆ. ಅದ್ಹೇಗೆ ಈ ಸಿಹಿ ಬದುಕಿ ಬರಲು ಸಾಧ್ಯ ಎಂದೇ ಯೋಚನೆ ಮಾಡುತ್ತಿದ್ದಾಳೆ ಭಾರ್ಗವಿ. 
icon

(9 / 10)

ಭಾರ್ಗವಿಯಂತೂ ಸಿಹಿಯನ್ನ ನೋಡುತ್ತಿದ್ದಂತೆ, ಶಾಕ್‌ಗೆ ಒಳಗಾಗಿದ್ದಾಳೆ. ಅದ್ಹೇಗೆ ಈ ಸಿಹಿ ಬದುಕಿ ಬರಲು ಸಾಧ್ಯ ಎಂದೇ ಯೋಚನೆ ಮಾಡುತ್ತಿದ್ದಾಳೆ ಭಾರ್ಗವಿ. 

ನೇರವಾಗಿ ಸೀತಮ್ಮನ ಬಳಿ ಓಡಿ ಬಂದು, ಬಿಗಿಯಾದ ಅಪ್ಪುಗೆ ನೀಡಿದ್ದಾಳೆ ಸಿಹಿ ರೂಪದಲ್ಲಿರುವ ಸುಬ್ಬಿ. ಈ ಮೂಲಕ ಒಂದು ಕೌತುಕದ ಏಪಿಸೋಡ್‌ ಇಂದು ಪ್ರಸಾರವಾಗಲಿದೆ. ಸಿಹಿಯ ಸಾವಿನ ರಹಸ್ಯ ಇನ್ನಾದರೂ ಬಯಲಾಗುತ್ತಾ? ಭಾರ್ಗವಿಯ ಮತ್ತೊಂದು ಮುಖದ ಅನಾವರಣ ಯಾವಾಗ? ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಉತ್ತರ ಸಿಗಲಿದೆ.  
icon

(10 / 10)

ನೇರವಾಗಿ ಸೀತಮ್ಮನ ಬಳಿ ಓಡಿ ಬಂದು, ಬಿಗಿಯಾದ ಅಪ್ಪುಗೆ ನೀಡಿದ್ದಾಳೆ ಸಿಹಿ ರೂಪದಲ್ಲಿರುವ ಸುಬ್ಬಿ. ಈ ಮೂಲಕ ಒಂದು ಕೌತುಕದ ಏಪಿಸೋಡ್‌ ಇಂದು ಪ್ರಸಾರವಾಗಲಿದೆ. ಸಿಹಿಯ ಸಾವಿನ ರಹಸ್ಯ ಇನ್ನಾದರೂ ಬಯಲಾಗುತ್ತಾ? ಭಾರ್ಗವಿಯ ಮತ್ತೊಂದು ಮುಖದ ಅನಾವರಣ ಯಾವಾಗ? ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಉತ್ತರ ಸಿಗಲಿದೆ.  

Manjunath Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು