ಅಂತೂ ಇಂತೂ ಭಾವಿ ಪತಿಯನ್ನು ಪರಿಚಯಿಸಿದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ, ಇವರೇ ನೋಡಿ ವರ
ಬಿಗ್ ಬಾಸ್ ಮೂಲಕ ಕನ್ನಡಿಗರಿಗೆ ಹೆಚ್ಚು ಪರಿಚಿತರಾದವರು, ಪ್ರಖರ ಭಾಷಣಕಾರ್ತಿ ಚೈತ್ರಾ ಕುಂದಾಪುರ. ಇದೀಗ ಇದೇ ಚೈತ್ರಾ ಬಾಳ ಬಂಧನಕ್ಕೆ ಬಲಗಾಲಿಡುತ್ತಿದ್ದಾರೆ. ಇಂದು ಶ್ರೀಕಾಂತ್ ಕಶ್ಯಪ್ ಎಂಬುವವರನ್ನು ಕೈ ಹಿಡಿಯುತ್ತಿದ್ದಾರೆ. ಈ ವರೆಗೂ ಭಾವಿ ಪತಿಯ ಬಗ್ಗೆ ಮಾತನಾಡದ ಚೈತ್ರಾ, ವಿಶೇಷ ಪೋಸ್ಟ್ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
(1 / 8)
ಹಿಂದುತ್ವದ ಬಗ್ಗೆ ತಮ್ಮ ಪ್ರಖರ ಭಾಷಣಗಳ ಮೂಲಕವೇ ಸದ್ದು ಮಾಡಿದ್ದ, ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದ ಚೈತ್ರಾ ಕುಂದಾಪುರ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ.
(2 / 8)
ಇಂದು (ಮೇ 9) ಕಮಲಶಿಲೆ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀಕಾಂತ್ ಕಶ್ಯಪ್ ಅವರ ಕೈ ಹಿಡಿಯಲಿದ್ದಾರೆ ಚೈತ್ರಾ ಕುಂದಾಪುರ.
(3 / 8)
ಅಂದಹಾಗೆ, ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ಕಶ್ಯಪ್ ಅವರದ್ದು 12 ವರ್ಷಗಳ ಪ್ರೀತಿ. ಒಂದೇ ಕಾಲೇಜಿನಲ್ಲಿಯೇ ಓದಿದ್ದ ಈ ಜೋಡಿ, ಇದೀಗ ಬಾಳ ಬಂಧನಕ್ಕೆ ಬಲಗಾಲಿಡುತ್ತಿದ್ದಾರೆ.
(4 / 8)
ಈಗಾಗಲೇ ಕುಂದಾಪುರದ ಮನೆಯಲ್ಲಿ ಮದರಂಗಿ ಶಾಸ್ತ್ರವನ್ನೂ ಮುಗಿಸಿಕೊಂಡಿದ್ದಾರೆ ಚೈತ್ರಾ. ಆದರೆ, ಹುಡುಗ ಯಾರು ಎಂಬುದನ್ನು ಮಾತ್ರ ಗೌಪ್ಯವಾಗಿಟ್ಟಿದ್ದರು.
(5 / 8)
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ, "ಬದುಕಿನ ಸಂಕಷ್ಟದಿಂದ ಸಂಭ್ರಮದವರೆಗೂ ಜೊತೆ ನಿಂತ ಜೀವದೊಂದಿಗೆ ಸಪ್ತಪದಿ ಇಡುವ ಸಮಯ ಬಂದಿದೆ. ನಿಮ್ಮೆಲ್ಲರ ಹಾರೈಕೆ ನಮ್ಮನ್ನು ಕಾಯಲಿ..." ಎಂದಿದ್ದಾರೆ.
(6 / 8)
ಅಂದಹಾಗೆ ಶ್ರೀಕಾಂತ್ ಕಶ್ಯಪ್, ಮೂಲತಃ ಹಿರಿಯಡ್ಕದವರು. ಅನಿಮೇಷನ್ ಕೋರ್ಸ್ ಮುಗಿಸಿದ್ದಾರೆ. ಇದೆಲ್ಲದರ ಜತೆಗೆ ಜೋತಿಷ್ಯ, ವಾಸ್ತುಶಾಸ್ತ್ರದಲ್ಲಿಯೂ ಪ್ರಾವಿಣ್ಯತೆ ಪಡೆದಿದ್ದಾರೆ.
(7 / 8)
ಯಾವುದೇ ಆಡಂಬರ ಇಲ್ಲದೆ, ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ಚೈತ್ರಾ ಅವರ ಮದುವೆ ನೆರವೇರಲಿದೆ.
ಇತರ ಗ್ಯಾಲರಿಗಳು