ಅವನು ತ್ಯಾಗಕ್ಕೆ ಇನ್ನೊಂದು ಹೆಸರು, ಕರ್ಣನ ಹೆಸರೇ ನಿಧಿಯ ಉಸಿರು; ಕರ್ಣ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅವನು ತ್ಯಾಗಕ್ಕೆ ಇನ್ನೊಂದು ಹೆಸರು, ಕರ್ಣನ ಹೆಸರೇ ನಿಧಿಯ ಉಸಿರು; ಕರ್ಣ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ

ಅವನು ತ್ಯಾಗಕ್ಕೆ ಇನ್ನೊಂದು ಹೆಸರು, ಕರ್ಣನ ಹೆಸರೇ ನಿಧಿಯ ಉಸಿರು; ಕರ್ಣ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ

ಜೀ ಕನ್ನಡದಲ್ಲಿ ಇನ್ನೇನು ಶೀಘ್ರದಲ್ಲಿ ಪ್ರಸಾರ ಆರಂಭಿಸಲಿರುವ ಕರ್ಣ ಧಾರಾವಾಹಿಯ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಇದೇ ಪ್ರೋಮೋ ಮೂಲಕ ನಾಯಕಿ ಯಾರೆಂಬ ಕುತೂಹಲವನ್ನೂ ತಣಿಸಿದೆ ಸೀರಿಯಲ್‌ ತಂಡ. ಚೆಂದದ ಹಾಡಿನ ಮೂಲಕ ಕಥಾನಾಯಕನನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮೆಡಿಕಲ್‌ ವಿದ್ಯಾರ್ಥಿಯಾಗಿ ಭವ್ಯಾ ಗೌಡ ಕಂಡಿದ್ದಾರೆ.

ಜೀ ಕನ್ನಡದ ಬಹುನಿರೀಕ್ಷಿತ ಕರ್ಣ ಧಾರಾವಾಹಿಯ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಕಥಾನಾಯಕ ಕರ್ಣನ ಪ್ರೇಯಸಿ ಯಾರು ಎಂಬುದನ್ನು ರಿವೀಲ್‌ ಮಾಡಲಾಗಿದೆ.
icon

(1 / 8)

ಜೀ ಕನ್ನಡದ ಬಹುನಿರೀಕ್ಷಿತ ಕರ್ಣ ಧಾರಾವಾಹಿಯ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಈ ಪ್ರೋಮೋದಲ್ಲಿ ಕಥಾನಾಯಕ ಕರ್ಣನ ಪ್ರೇಯಸಿ ಯಾರು ಎಂಬುದನ್ನು ರಿವೀಲ್‌ ಮಾಡಲಾಗಿದೆ.
(Zee Kannada)

ಈ ಹಿಂದೆಯೇ ಕರ್ಣ ಸೀರಿಯಲ್‌ನಲ್ಲಿ ಕಿರಣ್‌ ರಾಜ್‌ಗೆ ಜೋಡಿಯಾಗಿ ಬಿಗ್‌ ಬಾಸ್‌ ಖ್ಯಾತಿಯ ಭವ್ಯಾ ಗೌಡ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅಧಿಕೃತವಾಗಿ ಎರಡನೇ ಪ್ರೋಮೋದಲ್ಲಿ ಭವ್ಯಾ ಗೌಡ ಕಂಡಿದ್ದಾರೆ.
icon

(2 / 8)

ಈ ಹಿಂದೆಯೇ ಕರ್ಣ ಸೀರಿಯಲ್‌ನಲ್ಲಿ ಕಿರಣ್‌ ರಾಜ್‌ಗೆ ಜೋಡಿಯಾಗಿ ಬಿಗ್‌ ಬಾಸ್‌ ಖ್ಯಾತಿಯ ಭವ್ಯಾ ಗೌಡ ಜೋಡಿಯಾಗಲಿದ್ದಾರೆ ಎಂಬ ಸುದ್ದಿಯಿತ್ತು. ಈಗ ಅಧಿಕೃತವಾಗಿ ಎರಡನೇ ಪ್ರೋಮೋದಲ್ಲಿ ಭವ್ಯಾ ಗೌಡ ಕಂಡಿದ್ದಾರೆ.

ಅಂದಹಾಗೆ, ಕರ್ಣ ಸೀರಿಯಲ್‌ನಲ್ಲಿ ಮೆಡಿಕಲ್‌ ಕಲಿಯುವ ವಿದ್ಯಾರ್ಥಿಯಾಗಿ ಭವ್ಯಾ ಗೌಡ ಅವರ ಪಾತ್ರ ಸಾಗುತ್ತದೆ. ಅವರಿಗಿಲ್ಲಿ ನಿಧಿ ಹೆಸರಿನ ಪಾತ್ರ.
icon

(3 / 8)

ಅಂದಹಾಗೆ, ಕರ್ಣ ಸೀರಿಯಲ್‌ನಲ್ಲಿ ಮೆಡಿಕಲ್‌ ಕಲಿಯುವ ವಿದ್ಯಾರ್ಥಿಯಾಗಿ ಭವ್ಯಾ ಗೌಡ ಅವರ ಪಾತ್ರ ಸಾಗುತ್ತದೆ. ಅವರಿಗಿಲ್ಲಿ ನಿಧಿ ಹೆಸರಿನ ಪಾತ್ರ.

ಎಲ್ಲ ಜೀವಗಳ ನೋವಿಗೂ ಮಿಡಿಯುವವನಾಗಿ ಕರ್ಣ ಕಂಡರೆ, ಆ ಕರ್ಣನ ಹೆಸರೇ ನಿಧಿಯ ಉಸಿರು ಎಂಬಂತೆ ಪ್ರೋಮೋದಲ್ಲಿ ಚಿತ್ರೀಕರಿಸಲಾಗಿದೆ.
icon

(4 / 8)

ಎಲ್ಲ ಜೀವಗಳ ನೋವಿಗೂ ಮಿಡಿಯುವವನಾಗಿ ಕರ್ಣ ಕಂಡರೆ, ಆ ಕರ್ಣನ ಹೆಸರೇ ನಿಧಿಯ ಉಸಿರು ಎಂಬಂತೆ ಪ್ರೋಮೋದಲ್ಲಿ ಚಿತ್ರೀಕರಿಸಲಾಗಿದೆ.

ಚೆಂದದ ಹಾಡಿನ ಮೂಲಕ ಈ ಜೋಡಿಯ ನಡುವಿನ ಸಂಬಂಧ ಹೇಗಿರಲಿದೆ ಎಂಬುದನ್ನು ಚಿತ್ರೀಕರಿಸಿದ್ದಾರೆ ನಿರ್ದೇಶಕರು. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್‌ ಶುರುವಾಗಲಿದೆ.
icon

(5 / 8)

ಚೆಂದದ ಹಾಡಿನ ಮೂಲಕ ಈ ಜೋಡಿಯ ನಡುವಿನ ಸಂಬಂಧ ಹೇಗಿರಲಿದೆ ಎಂಬುದನ್ನು ಚಿತ್ರೀಕರಿಸಿದ್ದಾರೆ ನಿರ್ದೇಶಕರು. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್‌ ಶುರುವಾಗಲಿದೆ.

ಅಂದಹಾಗೆ ಮನು ಜಿ ಎಚ್‌ ಈ ಧಾರಾವಾಹಿಯ ನಿರ್ದೇಶಕರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಶರಣ್ ಕುಮಾರ್ ಅವರ ಸಂಕಲನ ಈ ಸೀರಿಯಲ್‌ಗಿದೆ.
icon

(6 / 8)

ಅಂದಹಾಗೆ ಮನು ಜಿ ಎಚ್‌ ಈ ಧಾರಾವಾಹಿಯ ನಿರ್ದೇಶಕರು. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಶರಣ್ ಕುಮಾರ್ ಅವರ ಸಂಕಲನ ಈ ಸೀರಿಯಲ್‌ಗಿದೆ.

ಆಶಿಕ್ ಕುಸುಗೊಳ್ಳಿ ಅವರ ಡಿಐ, ಸುನಾದ್ ಗೌತಮ್ ಅವರ ಸಂಗೀತ ಈ ಹಾಡಿಗಿದೆ. ವಿಕಾಸ್ ನೇಗಿಲೋಣಿ ಸಾಹಿತ್ಯ ಬರೆದಿದ್ದು, ನಿನಾದ ನಾಯಕ್ ಹಾಡಿಗೆ ಧ್ವನಿ ನೀಡಿದ್ದಾರೆ.
icon

(7 / 8)

ಆಶಿಕ್ ಕುಸುಗೊಳ್ಳಿ ಅವರ ಡಿಐ, ಸುನಾದ್ ಗೌತಮ್ ಅವರ ಸಂಗೀತ ಈ ಹಾಡಿಗಿದೆ. ವಿಕಾಸ್ ನೇಗಿಲೋಣಿ ಸಾಹಿತ್ಯ ಬರೆದಿದ್ದು, ನಿನಾದ ನಾಯಕ್ ಹಾಡಿಗೆ ಧ್ವನಿ ನೀಡಿದ್ದಾರೆ.

ಸದ್ಯ ಪ್ರೋಮೋ ಮೂಲಕವೇ ಸಾಕಷ್ಟು ವೀಕ್ಷಕರನ್ನು ಸೆಳೆದಿರುವ ಈ ಸೀರಿಯಲ್‌ ಇದೇ ಮಾಸಾಂತ್ಯಕ್ಕೆ ಶುರುವಾಗುವ ಸಾಧ್ಯತೆ ಇದೆ.
icon

(8 / 8)

ಸದ್ಯ ಪ್ರೋಮೋ ಮೂಲಕವೇ ಸಾಕಷ್ಟು ವೀಕ್ಷಕರನ್ನು ಸೆಳೆದಿರುವ ಈ ಸೀರಿಯಲ್‌ ಇದೇ ಮಾಸಾಂತ್ಯಕ್ಕೆ ಶುರುವಾಗುವ ಸಾಧ್ಯತೆ ಇದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು