ಇತ್ತೀಚೆಗಷ್ಟೇ ಶುರುವಾದ ಹೊಸ ಧಾರಾವಾಹಿ ಶೀಘ್ರದಲ್ಲಿಯೇ ಮುಕ್ತಾಯ!? ಶುರುವಾಯ್ತು ಕೊನೇ ಸಂಚಿಕೆಗಳ ಶೂಟಿಂಗ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇತ್ತೀಚೆಗಷ್ಟೇ ಶುರುವಾದ ಹೊಸ ಧಾರಾವಾಹಿ ಶೀಘ್ರದಲ್ಲಿಯೇ ಮುಕ್ತಾಯ!? ಶುರುವಾಯ್ತು ಕೊನೇ ಸಂಚಿಕೆಗಳ ಶೂಟಿಂಗ್‌

ಇತ್ತೀಚೆಗಷ್ಟೇ ಶುರುವಾದ ಹೊಸ ಧಾರಾವಾಹಿ ಶೀಘ್ರದಲ್ಲಿಯೇ ಮುಕ್ತಾಯ!? ಶುರುವಾಯ್ತು ಕೊನೇ ಸಂಚಿಕೆಗಳ ಶೂಟಿಂಗ್‌

  • ಕನ್ನಡ ಕಿರುತೆರೆ ವೀಕ್ಷಕರಿಗೆ ಇದೀಗ ಶಾಕಿಂಗ್‌ ಸುದ್ದಿಯೊಂದು ಇಲ್ಲಿದೆ. ಇತ್ತೀಚೆಗಷ್ಟೇ  ಶುರುವಾಗಿದ್ದ ಸೀರಿಯಲ್‌ವೊಂದು ಇದೀಗ ಅಂತ್ಯದ ಮುನ್ಸೂಚನೆ ನೀಡಿದೆ. ಅಂದರೆ, ಸದ್ದಿಲ್ಲದೆ, ತನ್ನ ಕೊನೇ ಸಂಚಿಕೆಗಳನ್ನು ಚಿತ್ರೀಕರಣ ಮಾಡುತ್ತಿದೆ. ಈ ಮೂಲಕ ಮುಂದಿನ ಎರಡ್ಮೂರು ವಾರಗಳಲ್ಲಿ ಹೊಸ ಸೀರಿಯಲ್‌ ಶುರುವಾದಷ್ಟೇ ಬೇಗ ಅಂತ್ಯವಾಗಲಿದೆ ಎನ್ನಲಾಗುತ್ತಿದೆ. ಯಾವುದದು?

ಕಲರ್ಸ್‌ ಕನ್ನಡದಲ್ಲಿ ಹಾರರ್‌ ಪ್ರೇಮಕಥೆಯ ʻನೂರು ಜನ್ಮಕೂʼ ಸೀರಿಯಲ್‌ ಕಳೆದ ವರ್ಷದ ಡಿಸೆಂಬರ್‌ 24ರಂದು ಪ್ರಸಾರ ಆರಂಭಿಸಿತ್ತು. ಅದಾದ ಮೇಲೆ ಡಿವೋರ್ಸ್‌ ಲಾಯರ್‌ ಮದುವೆ ಕಥೆಯಾದ ʻವಧುʼ ಮತ್ತು ʻಯಜಮಾನʼ ಧಾರಾವಾಹಿಗಳು ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಪ್ರಸಾರ ಆರಂಭಿಸಿದ್ದವು. ಈ ಸೀರಿಯಲ್‌ಗಳ ಆಗಮನದ ಹಿನ್ನೆಲೆಯಲ್ಲಿ ಕೆಲವು ಸೀರಿಯಲ್‌ಗಳು ಅಂತ್ಯವಾದವು, ಇನ್ನು ಕೆಲವು ಸಮಯದಲ್ಲಿ ಏರುಪೇರಾದವು. 
icon

(1 / 9)

ಕಲರ್ಸ್‌ ಕನ್ನಡದಲ್ಲಿ ಹಾರರ್‌ ಪ್ರೇಮಕಥೆಯ ʻನೂರು ಜನ್ಮಕೂʼ ಸೀರಿಯಲ್‌ ಕಳೆದ ವರ್ಷದ ಡಿಸೆಂಬರ್‌ 24ರಂದು ಪ್ರಸಾರ ಆರಂಭಿಸಿತ್ತು. ಅದಾದ ಮೇಲೆ ಡಿವೋರ್ಸ್‌ ಲಾಯರ್‌ ಮದುವೆ ಕಥೆಯಾದ ʻವಧುʼ ಮತ್ತು ʻಯಜಮಾನʼ ಧಾರಾವಾಹಿಗಳು ಬಿಗ್‌ ಬಾಸ್‌ ಮುಗಿಯುತ್ತಿದ್ದಂತೆ ಪ್ರಸಾರ ಆರಂಭಿಸಿದ್ದವು. ಈ ಸೀರಿಯಲ್‌ಗಳ ಆಗಮನದ ಹಿನ್ನೆಲೆಯಲ್ಲಿ ಕೆಲವು ಸೀರಿಯಲ್‌ಗಳು ಅಂತ್ಯವಾದವು, ಇನ್ನು ಕೆಲವು ಸಮಯದಲ್ಲಿ ಏರುಪೇರಾದವು. 
(Image\ Jio Hotstar)

ಕಲರ್ಸ್‌ ಕನ್ನಡದ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ವಧು ಮತ್ತು ಯಜಮಾನ ಸೀರಿಯಲ್‌ಗಳಿಗೆ, ವೀಕ್ಷಕ ಪ್ರಭು ಮರುಳಾಗಲಿಲ್ಲ. ಅದಕ್ಕೂ ಮೊದಲು ಬಂದಿದ್ದ ನೂರು ಜನ್ಮಕೂ ಧಾರಾವಾಹಿಯೂ ನಿರಾಸೆ ಮೂಡಿಸಿತು. ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಈ ಸೀರಿಯಲ್‌ಗಳಿಗೆ ದಕ್ಕಲಿಲ್ಲ. 
icon

(2 / 9)

ಕಲರ್ಸ್‌ ಕನ್ನಡದ ವಾಹಿನಿಯಲ್ಲಿ ಪ್ರಸಾರ ಆರಂಭಿಸಿರುವ ವಧು ಮತ್ತು ಯಜಮಾನ ಸೀರಿಯಲ್‌ಗಳಿಗೆ, ವೀಕ್ಷಕ ಪ್ರಭು ಮರುಳಾಗಲಿಲ್ಲ. ಅದಕ್ಕೂ ಮೊದಲು ಬಂದಿದ್ದ ನೂರು ಜನ್ಮಕೂ ಧಾರಾವಾಹಿಯೂ ನಿರಾಸೆ ಮೂಡಿಸಿತು. ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಈ ಸೀರಿಯಲ್‌ಗಳಿಗೆ ದಕ್ಕಲಿಲ್ಲ. 

ಈ ನಡುವೆ ಪ್ರಸಾರದ ಸ್ಲಾಟ್‌ಗಳ ಬದಲಾವಣೆಯಿಂದಲೂ ಈ ಧಾರಾವಾಹಿಗಳು ಇದೀಗ ಅಡಕತ್ತರಿಯಲ್ಲಿವೆ ಎಂಬ ಮಾತೀಗ ಕಿರುತೆರೆ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದರೆ, ಈಗಷ್ಟೇ ಪ್ರಸಾರ ಆರಂಭಿಸಿದ ಸೀರಿಯಲ್‌ಗಳ ಪೈಕಿ ಒಂದು ಸೀರಿಯಲ್‌ ಇನ್ನೇನು ಶೀಘ್ರದಲ್ಲಿ ಕೊನೆಯಾಗಲಿದೆ ಎಂದೇ ಹೇಳಲಾಗುತ್ತಿದೆ.
icon

(3 / 9)

ಈ ನಡುವೆ ಪ್ರಸಾರದ ಸ್ಲಾಟ್‌ಗಳ ಬದಲಾವಣೆಯಿಂದಲೂ ಈ ಧಾರಾವಾಹಿಗಳು ಇದೀಗ ಅಡಕತ್ತರಿಯಲ್ಲಿವೆ ಎಂಬ ಮಾತೀಗ ಕಿರುತೆರೆ ಅಂಗಳದಲ್ಲಿ ಕೇಳಿಬರುತ್ತಿದೆ. ಅಂದರೆ, ಈಗಷ್ಟೇ ಪ್ರಸಾರ ಆರಂಭಿಸಿದ ಸೀರಿಯಲ್‌ಗಳ ಪೈಕಿ ಒಂದು ಸೀರಿಯಲ್‌ ಇನ್ನೇನು ಶೀಘ್ರದಲ್ಲಿ ಕೊನೆಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಡಿಸೆಂಬರ್‌ 23ರಂದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆರಂಭಿಸಿ, ಕೇವಲ ಎರಡೇ ತಿಂಗಳಿಗೆ ತನ್ನ ವೀಕ್ಷಕರಿಗೆ ಬೇಸರದ ಸುದ್ದಿ ನೀಡಿತ್ತು ನೂರು ಜನ್ಮಕೂ ಧಾರಾವಾಹಿ. ಪ್ರತಿ ರಾತ್ರಿ 8:30ಕ್ಕೆ ಪ್ರಸಾರವಾಗುತ್ತಿದ್ದ ಈ ಸೀರಿಯಲ್‌, ಟಿಆರ್‌ಪಿಯಲ್ಲಿ ನಿರೀಕ್ಷಿತ ಗಡಿ ಮುಟ್ಟಲಿಲ್ಲ
icon

(4 / 9)

ಡಿಸೆಂಬರ್‌ 23ರಂದು ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಆರಂಭಿಸಿ, ಕೇವಲ ಎರಡೇ ತಿಂಗಳಿಗೆ ತನ್ನ ವೀಕ್ಷಕರಿಗೆ ಬೇಸರದ ಸುದ್ದಿ ನೀಡಿತ್ತು ನೂರು ಜನ್ಮಕೂ ಧಾರಾವಾಹಿ. ಪ್ರತಿ ರಾತ್ರಿ 8:30ಕ್ಕೆ ಪ್ರಸಾರವಾಗುತ್ತಿದ್ದ ಈ ಸೀರಿಯಲ್‌, ಟಿಆರ್‌ಪಿಯಲ್ಲಿ ನಿರೀಕ್ಷಿತ ಗಡಿ ಮುಟ್ಟಲಿಲ್ಲ

ಆ ಒಂದು ಕಾರಣಕ್ಕೆ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಲಾಗಿತ್ತು.  ಮಾರ್ಚ್‌ 8ರಿಂದ ವಾರಾಂತ್ಯದ ಎರಡು ದಿನಕ್ಕೆ ಶಿಫ್ಟ್‌ ಆಗಿತ್ತು ನೂರು ಜನ್ಮಕೂ. ಈಗ ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ ಈ ಸೀರಿಯಲ್‌ ಕೊನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 
icon

(5 / 9)

ಆ ಒಂದು ಕಾರಣಕ್ಕೆ ಶನಿವಾರ ಮತ್ತು ಭಾನುವಾರಕ್ಕೆ ಸೀಮಿತಗೊಳಿಸಲಾಗಿತ್ತು.  ಮಾರ್ಚ್‌ 8ರಿಂದ ವಾರಾಂತ್ಯದ ಎರಡು ದಿನಕ್ಕೆ ಶಿಫ್ಟ್‌ ಆಗಿತ್ತು ನೂರು ಜನ್ಮಕೂ. ಈಗ ಸದ್ಯದ ಕೆಲ ಮೂಲಗಳ ಮಾಹಿತಿ ಪ್ರಕಾರ ಈ ಸೀರಿಯಲ್‌ ಕೊನೆಯಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಜನವರಿ 27ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ವಧು ಸೀರಿಯಲ್‌ ಶುರುವಾದರೆ, ರಾತ್ರಿ 10ಕ್ಕೆ ಪ್ರಸಾರ ಆರಂಭಿಸಿತ್ತು ಯಜಮಾನ ಧಾರಾವಾಹಿ. ಈ ಸೀರಿಯಲ್‌ಗಳೂ ಹೈಪ್‌ ಸೃಷ್ಟಿಸಿದ್ದವು. ಆದರೆ, ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಮಾತ್ರ ಇವುಗಳಿಗೆ ದಕ್ಕಲಿಲ್ಲ. 
icon

(6 / 9)

ಜನವರಿ 27ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9:30ಕ್ಕೆ ವಧು ಸೀರಿಯಲ್‌ ಶುರುವಾದರೆ, ರಾತ್ರಿ 10ಕ್ಕೆ ಪ್ರಸಾರ ಆರಂಭಿಸಿತ್ತು ಯಜಮಾನ ಧಾರಾವಾಹಿ. ಈ ಸೀರಿಯಲ್‌ಗಳೂ ಹೈಪ್‌ ಸೃಷ್ಟಿಸಿದ್ದವು. ಆದರೆ, ನಿರೀಕ್ಷಿತ ಪ್ರಮಾಣದ ಟಿಆರ್‌ಪಿ ಮಾತ್ರ ಇವುಗಳಿಗೆ ದಕ್ಕಲಿಲ್ಲ. 

9:30ರ ಬದಲು ರಾತ್ರಿ 10:30ಕ್ಕೆ ಪ್ರಸಾರ ಆರಂಭಿಸಿ ಮತ್ತಷ್ಟು ಅನುಮಾನ ಮೂಡಿಸಿದೆ ವಧು ಸೀರಿಯಲ್.‌ ಹೀಗಿರುವಾಗ ಈ ಸೀರಿಯಲ್‌ಗಳ ಪೈಕಿ ಒಂದು ಧಾರಾವಾಹಿ ಮುಕ್ತಾಯವಾಗಬಹುದು ಎಂದೂ ಹೇಳಲಾಗುತ್ತಿದೆ. 
icon

(7 / 9)

9:30ರ ಬದಲು ರಾತ್ರಿ 10:30ಕ್ಕೆ ಪ್ರಸಾರ ಆರಂಭಿಸಿ ಮತ್ತಷ್ಟು ಅನುಮಾನ ಮೂಡಿಸಿದೆ ವಧು ಸೀರಿಯಲ್.‌ ಹೀಗಿರುವಾಗ ಈ ಸೀರಿಯಲ್‌ಗಳ ಪೈಕಿ ಒಂದು ಧಾರಾವಾಹಿ ಮುಕ್ತಾಯವಾಗಬಹುದು ಎಂದೂ ಹೇಳಲಾಗುತ್ತಿದೆ. 

ಕಲರ್ಸ್‌ ಕನ್ನಡದ ನೂರು ಜನ್ಮಕೂ, ವಧು, ಯಜಮಾನ ಸೀರಿಯಲ್‌ಗಳ ಪೈಕಿ ಅದಕ್ಕೂ ಮೊದಲು ಶುರುವಾದ ದೃಷ್ಟಿಬೊಟ್ಟು ಸೀರಿಯಲ್ ಸಹ ಮೋಡಿ ಮಾಡುತ್ತಿಲ್ಲ. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕಮಾಲ್‌ ಮಾಡಿಲ್ಲ. 
icon

(8 / 9)

ಕಲರ್ಸ್‌ ಕನ್ನಡದ ನೂರು ಜನ್ಮಕೂ, ವಧು, ಯಜಮಾನ ಸೀರಿಯಲ್‌ಗಳ ಪೈಕಿ ಅದಕ್ಕೂ ಮೊದಲು ಶುರುವಾದ ದೃಷ್ಟಿಬೊಟ್ಟು ಸೀರಿಯಲ್ ಸಹ ಮೋಡಿ ಮಾಡುತ್ತಿಲ್ಲ. ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕಮಾಲ್‌ ಮಾಡಿಲ್ಲ. 

ಒಟ್ಟಾರೆಯಾಗಿ ಈ ನಾಲ್ಕು ಧಾರಾವಾಹಿಗಳ ಪೈಕಿ ಒಂದು ಸೀರಿಯಲ್‌ ಇನ್ನೇನು ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಲಿದೆ
icon

(9 / 9)

ಒಟ್ಟಾರೆಯಾಗಿ ಈ ನಾಲ್ಕು ಧಾರಾವಾಹಿಗಳ ಪೈಕಿ ಒಂದು ಸೀರಿಯಲ್‌ ಇನ್ನೇನು ಶೀಘ್ರದಲ್ಲಿ ಮುಕ್ತಾಯವಾಗಲಿದೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಲಿದೆ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು