Bigg Boss Kannada 11: ಮಹಿಳಾ ಸ್ಪರ್ಧಿಗೆ ಬಿಗ್ ಶಾಕ್! ಫಿನಾಲೆಗೆ ಎಂಟ್ರಿಕೊಟ್ಟಿದ್ದ ಲೇಡಿ ಕಂಟೆಸ್ಟಂಟ್ ಎಲಿಮಿನೇಟ್?
- ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಂತಿಮ 20 ಸ್ಪರ್ಧಿಗಳಲ್ಲಿ ಕೇವಲ ಆರೇ ಸ್ಪರ್ಧಿಗಳು ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಇವರಲ್ಲಿ ಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈಗ ಅಚ್ಚರಿಯ ವಿಚಾರ ಏನೆಂದರೆ, ಇಬ್ಬರು ಮಹಿಳಾ ಸ್ಪರ್ಧಿಗಳ ಪೈಕಿ ಒಬ್ಬರು ಕಪ್ ಗೆಲ್ಲುವ ರೇಸ್ನಿಂದ ಹಿಂದೆ ಸರಿದಿದ್ದಾರೆ.
- ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆಗೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ಅಂತಿಮ 20 ಸ್ಪರ್ಧಿಗಳಲ್ಲಿ ಕೇವಲ ಆರೇ ಸ್ಪರ್ಧಿಗಳು ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಇವರಲ್ಲಿ ಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈಗ ಅಚ್ಚರಿಯ ವಿಚಾರ ಏನೆಂದರೆ, ಇಬ್ಬರು ಮಹಿಳಾ ಸ್ಪರ್ಧಿಗಳ ಪೈಕಿ ಒಬ್ಬರು ಕಪ್ ಗೆಲ್ಲುವ ರೇಸ್ನಿಂದ ಹಿಂದೆ ಸರಿದಿದ್ದಾರೆ.
(1 / 7)
ಕಳೆದ ಸೆಪ್ಟೆಂಬರ್ 29ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿತ್ತು. ಆರಂಭದಲ್ಲಿ 17 ಮಂದಿ ಸ್ಪರ್ಧಿಗಳು ಈ ಶೋನಲ್ಲಿ ಭಾಗವಹಿಸಿದ್ದರು.
(2 / 7)
ಅದಾದ ಮೇಲೆ ಮೂರೇ ವಾರ ಕಳೆಯುವಷ್ಟರಲ್ಲಿ ಕೆಟ್ಟ ಪದ ಬಳಕೆ ಆರೋಪದ ಮೇಲೆ ಲಾಯರ್ ಜಗದೀಶ್ ಮತ್ತು ಹಲ್ಲೆ ಮಾಡಿದ್ದಕ್ಕೆ ರಂಜಿತ್ ನೇರವಾಗಿ ಮನೆಯಿಂದ ಎಲಿಮಿನೇಟ್ ಆದರು.
(3 / 7)
ಇವರ ನಿರ್ಗಮನದ ಬಳಿಕ ಬಿಗ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟವರೇ ಹಳ್ಳಿ ಹಕ್ಕಿ ಹನುಮಂತು. ತಮ್ಮ ಹಾಡುಗಳಿಂದಲೇ, ಮನೆಮಂದಿಯನ್ನಷ್ಟೇ ಅಲ್ಲ ವೀಕ್ಷಕರನ್ನು ಸೆಳೆದರು ಹನುಮಂತ ಲಮಾಣಿ.
(4 / 7)
ಅದಾದ ಮೇಲೆ ರಜತ್ ಕಿಶನ್ ಮತ್ತು ಶೋಭಾ ಶೆಟ್ಟಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದರು. ಶೋಭಾ ಶೆಟ್ಟಿ ಎರಡೇ ವಾರದಲ್ಲಿ ಆಚೆ ಬಂದರೆ, ರಜತ್ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ.
(5 / 7)
ಈಗ ಇದೇ ಬಿಗ್ ಬಾಸ್ ಶೋ, ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಅಂತಿಮವಾಗಿ ರಜತ್, ಹನುಮಂತ, ಭವ್ಯಾ ಗೌಡ, ಮೋಕ್ಷಿತಾ ಪೈ, ಉಗ್ರಂ ಮಂಜು ಮತ್ತು ತ್ರಿವಿಕ್ರಂ ಕಪ್ನ ಸನಿಹ ಬಂದಿದ್ದಾರೆ.
(6 / 7)
ಇದೀಗ ಈ ಆರು ಜನರ ಪೈಕಿ ಇಂದು ಇಬ್ಬರು ಮಹಿಳಾ ಸ್ಪರ್ಧಿಗಳ ಪೈಕಿ ಒಬ್ಬರು ಎಲಿಮಿನೇಟ್ ಆಗಿದ್ದಾರೆ. ಇನ್ನೇನು ಶೋ ಆರಂಭವಾಗುತ್ತಿದ್ದಂತೆ, ಅವರು ಯಾರು ಎಂಬುದು ಅಧಿಕೃತವಾಗಲಿದೆ.
ಇತರ ಗ್ಯಾಲರಿಗಳು