ʻಕರ್ಣʼ ಸೀರಿಯಲ್‌ ಸಲುವಾಗಿ ಕೊನೆಯಾಗಲು ಅಣಿಯಾಗ್ತಿದೆ 700 ಸಂಚಿಕೆ ಪೂರೈಸಿರುವ ಧಾರಾವಾಹಿ, ಯಾವುದದು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಕರ್ಣʼ ಸೀರಿಯಲ್‌ ಸಲುವಾಗಿ ಕೊನೆಯಾಗಲು ಅಣಿಯಾಗ್ತಿದೆ 700 ಸಂಚಿಕೆ ಪೂರೈಸಿರುವ ಧಾರಾವಾಹಿ, ಯಾವುದದು?

ʻಕರ್ಣʼ ಸೀರಿಯಲ್‌ ಸಲುವಾಗಿ ಕೊನೆಯಾಗಲು ಅಣಿಯಾಗ್ತಿದೆ 700 ಸಂಚಿಕೆ ಪೂರೈಸಿರುವ ಧಾರಾವಾಹಿ, ಯಾವುದದು?

  • ಮೊದಲ ಪ್ರೋಮೋ ಮೂಲಕವೇ ನಿರೀಕ್ಷೆಯನ್ನು ಆಕಾಶಕ್ಕೆ ಕೊಂಡೊಯ್ದಿರುವ ಧಾರಾವಾಹಿ ಕರ್ಣ. ಈ ಪ್ರೋಮೋ ರಿಲೀಸ್‌ ಆದ ಬಳಿಕ, ಜೀ ಕನ್ನಡದ ಯಾವ ಸೀರಿಯಲ್‌ ಅಂತ್ಯವಾಗಲಿದೆ ಎಂಬ ಕುತೂಹಲ ವೀಕ್ಷಕರಲ್ಲಿದೆ. ಈಗ ಕಿರುತೆರೆ ವಲಯದ ಕೆಲ ಮೂಲಗಳ ಪ್ರಕಾರ, ಪ್ರಮುಖ ಸೀರಿಯಲ್‌ವೊಂದು ಇನ್ನೇನು ಮುಂದಿನ ತಿಂಗಳಲ್ಲಿ ಅಂತ್ಯಕಾಣಲಿದೆ ಎನ್ನಲಾಗುತ್ತಿದೆ.

ಜೀ ಕನ್ನಡದಲ್ಲಿ ಕರ್ಣ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದೇ ತಡ ಧಾರಾವಾಹಿ ಮೇಲಿನ ವೀಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ.
icon

(1 / 10)

ಜೀ ಕನ್ನಡದಲ್ಲಿ ಕರ್ಣ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದೇ ತಡ ಧಾರಾವಾಹಿ ಮೇಲಿನ ವೀಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ.
(Zee Kannada )

ಅದರಲ್ಲೂ ಕರ್ಣ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ನಟ ಕಿರಣ್‌ ರಾಜ್‌. ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲಿ ನಟಿಸಿದ್ದರು ಈ ನಟ.
icon

(2 / 10)

ಅದರಲ್ಲೂ ಕರ್ಣ ಸೀರಿಯಲ್‌ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ನಟ ಕಿರಣ್‌ ರಾಜ್‌. ಈ ಹಿಂದೆ ಕನ್ನಡತಿ ಸೀರಿಯಲ್‌ನಲ್ಲಿ ನಟಿಸಿದ್ದರು ಈ ನಟ.

ಕಲರ್ಸ್‌ ಕನ್ನಡದಲ್ಲಿ ಕನ್ನಡತಿ ಸೀರಿಯಲ್‌ ಮುಗಿದ ಬಳಿಕ ರಾನಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.
icon

(3 / 10)

ಕಲರ್ಸ್‌ ಕನ್ನಡದಲ್ಲಿ ಕನ್ನಡತಿ ಸೀರಿಯಲ್‌ ಮುಗಿದ ಬಳಿಕ ರಾನಿ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.

ಆದರೆ, ಆ ಸಿನಿಮಾ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಹಾಗಂತ ಕಿರಣ್‌ ರಾಜ್‌ ಸಿನಿಮಾದಿಂದ ಹಿಂದೆ ಸರಿದಿಲ್ಲ. ಅದಾದ ಮೇಲೆ ಜಾಕಿ ಅನ್ನೋ ಚಿತ್ರದಲ್ಲಿಯೂ ಬಿಜಿಯಾಗಿದ್ದಾರವರು.
icon

(4 / 10)

ಆದರೆ, ಆ ಸಿನಿಮಾ ಹೇಳಿಕೊಳ್ಳುವ ಯಶಸ್ಸು ಕಾಣಲಿಲ್ಲ. ಹಾಗಂತ ಕಿರಣ್‌ ರಾಜ್‌ ಸಿನಿಮಾದಿಂದ ಹಿಂದೆ ಸರಿದಿಲ್ಲ. ಅದಾದ ಮೇಲೆ ಜಾಕಿ ಅನ್ನೋ ಚಿತ್ರದಲ್ಲಿಯೂ ಬಿಜಿಯಾಗಿದ್ದಾರವರು.

ಇದೆಲ್ಲದರ ನಡುವೆ ಕರ್ಣನಾಗಿ ಮತ್ತೆ ಕಿರುತೆರೆ ವೀಕ್ಷಕರ ಮನಗೆಲ್ಲಲು ಆಗಮಿಸುತ್ತಿದ್ದಾರೆ. ಹೆತ್ತವರಿಗೆ ಬೇಡವಾದ, ಊರಿಗೆ ಬೇಕಾದ ವೈದ್ಯನ ಕಥೆ ಈ ಕರ್ಣ.
icon

(5 / 10)

ಇದೆಲ್ಲದರ ನಡುವೆ ಕರ್ಣನಾಗಿ ಮತ್ತೆ ಕಿರುತೆರೆ ವೀಕ್ಷಕರ ಮನಗೆಲ್ಲಲು ಆಗಮಿಸುತ್ತಿದ್ದಾರೆ. ಹೆತ್ತವರಿಗೆ ಬೇಡವಾದ, ಊರಿಗೆ ಬೇಕಾದ ವೈದ್ಯನ ಕಥೆ ಈ ಕರ್ಣ.

ಈ ಕರ್ಣ ಸೀರಿಯಲ್‌ನಲ್ಲಿ ಬಹುತಾರಾಗಣವೇ ಇದೆ. ಟಿ. ಎಸ್‌ ನಾಗಾಭರಣ ಪ್ರಮುಖ ಪಾತ್ರದಲ್ಲಿದ್ದರೆ, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಈ ಸೀರಿಯಲ್‌ನ ನಾಯಕಿಯರು.
icon

(6 / 10)

ಈ ಕರ್ಣ ಸೀರಿಯಲ್‌ನಲ್ಲಿ ಬಹುತಾರಾಗಣವೇ ಇದೆ. ಟಿ. ಎಸ್‌ ನಾಗಾಭರಣ ಪ್ರಮುಖ ಪಾತ್ರದಲ್ಲಿದ್ದರೆ, ಭವ್ಯಾ ಗೌಡ ಮತ್ತು ನಮ್ರತಾ ಗೌಡ ಈ ಸೀರಿಯಲ್‌ನ ನಾಯಕಿಯರು.

ಹಾಗಾದರೆ, ಈ ಸೀರಿಯಲ್‌ ಅದ್ಯಾವಾಗ ಶುರು? ಈ ಪ್ರಶ್ನೆಗೆ ಇದೀಗ ಕಿರುತೆರೆಯ ಕೆಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
icon

(7 / 10)

ಹಾಗಾದರೆ, ಈ ಸೀರಿಯಲ್‌ ಅದ್ಯಾವಾಗ ಶುರು? ಈ ಪ್ರಶ್ನೆಗೆ ಇದೀಗ ಕಿರುತೆರೆಯ ಕೆಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಮೇ ತಿಂಗಳಾಂತ್ಯಕ್ಕೆ ಕರ್ಣ ಸೀರಿಯಲ್‌ ಪ್ರಸಾರ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಇನ್ನೊಂದು ಪ್ರೋಮೋ ಬಿಡುಗಡೆ ಆಗಲಿದೆ. ಅದಾದ ಮೇಲೆ ಬಿಡುಗಡೆ ದಿನಾಂಕದ ಪ್ರೋಮೋ ಹೊರಬೀಳಲಿದೆ.
icon

(8 / 10)

ಮೇ ತಿಂಗಳಾಂತ್ಯಕ್ಕೆ ಕರ್ಣ ಸೀರಿಯಲ್‌ ಪ್ರಸಾರ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಇನ್ನೊಂದು ಪ್ರೋಮೋ ಬಿಡುಗಡೆ ಆಗಲಿದೆ. ಅದಾದ ಮೇಲೆ ಬಿಡುಗಡೆ ದಿನಾಂಕದ ಪ್ರೋಮೋ ಹೊರಬೀಳಲಿದೆ.

ಒಂದು ಸೀರಿಯಲ್‌ ಶುರುವಾಗಬೇಕೆಂದರೆ ಇನ್ನೊಂದು ಸೀರಿಯಲ್‌ ಮುಕ್ತಾಯವಾಗಲೇಬೇಕು. ಹಾಗಾದರೆ ಕರ್ಣನ ಸಲುವಾಗಿ ಮುಗಿಯುವ ಸೀರಿಯಲ್‌ ಯಾವುದು? ಅದಕ್ಕೂ ಇಲ್ಲಿ ಉತ್ತರವಿದೆ.
icon

(9 / 10)

ಒಂದು ಸೀರಿಯಲ್‌ ಶುರುವಾಗಬೇಕೆಂದರೆ ಇನ್ನೊಂದು ಸೀರಿಯಲ್‌ ಮುಕ್ತಾಯವಾಗಲೇಬೇಕು. ಹಾಗಾದರೆ ಕರ್ಣನ ಸಲುವಾಗಿ ಮುಗಿಯುವ ಸೀರಿಯಲ್‌ ಯಾವುದು? ಅದಕ್ಕೂ ಇಲ್ಲಿ ಉತ್ತರವಿದೆ.

ಅಂದಹಾಗೆ, ಜೀ ಕನ್ನಡದಲ್ಲಿ ಈಗಾಗಲೇ 700 ಪ್ಲಸ್‌ ಸಂಚಿಕೆಗಳನ್ನು ಪೂರೈಸಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್‌ ಕೊನೆಯಾಗಲಿದೆ ಎನ್ನಲಾಗುತ್ತಿದೆ. ಈ ಧಾರಾವಾಹಿ ಮುಗಿದ ಬಳಿಕ ಕರ್ಣ ಧಾರಾವಾಹಿ ಶುರುವಾಗಲಿದೆ. ಕರ್ಣ 6:30ಕ್ಕೆ ಪ್ರಸಾರ ಆಗಲಿದ್ಯಾ ಅಥವಾ ಸ್ಲಾಟ್‌ ಬದಲಾಗಲಿದ್ಯಾ ಎಂಬುದನ್ನು ಕಾದುನೋಡಬೇಕು.
icon

(10 / 10)

ಅಂದಹಾಗೆ, ಜೀ ಕನ್ನಡದಲ್ಲಿ ಈಗಾಗಲೇ 700 ಪ್ಲಸ್‌ ಸಂಚಿಕೆಗಳನ್ನು ಪೂರೈಸಿರುವ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸೀರಿಯಲ್‌ ಕೊನೆಯಾಗಲಿದೆ ಎನ್ನಲಾಗುತ್ತಿದೆ. ಈ ಧಾರಾವಾಹಿ ಮುಗಿದ ಬಳಿಕ ಕರ್ಣ ಧಾರಾವಾಹಿ ಶುರುವಾಗಲಿದೆ. ಕರ್ಣ 6:30ಕ್ಕೆ ಪ್ರಸಾರ ಆಗಲಿದ್ಯಾ ಅಥವಾ ಸ್ಲಾಟ್‌ ಬದಲಾಗಲಿದ್ಯಾ ಎಂಬುದನ್ನು ಕಾದುನೋಡಬೇಕು.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು