ಕರ್ನಾಟಕದ 8 ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳು ಬೇಕಾಗಿದ್ದಾರೆ, ಬೆಂಗಳೂರು, ಧಾರವಾಡ, ಮಂಡ್ಯ , ರಾಯಚೂರು ವಿವಿಗಳಲ್ಲಿ ಪ್ರಭಾರ ಆಡಳಿತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದ 8 ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳು ಬೇಕಾಗಿದ್ದಾರೆ, ಬೆಂಗಳೂರು, ಧಾರವಾಡ, ಮಂಡ್ಯ , ರಾಯಚೂರು ವಿವಿಗಳಲ್ಲಿ ಪ್ರಭಾರ ಆಡಳಿತ

ಕರ್ನಾಟಕದ 8 ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳು ಬೇಕಾಗಿದ್ದಾರೆ, ಬೆಂಗಳೂರು, ಧಾರವಾಡ, ಮಂಡ್ಯ , ರಾಯಚೂರು ವಿವಿಗಳಲ್ಲಿ ಪ್ರಭಾರ ಆಡಳಿತ

 ಕರ್ನಾಟಕದಲ್ಲಿ ಉನ್ನತ ಶಿಕ್ಷಣ ನೀಡುವ ಪ್ರಮುಖ ವಿಶ್ವವಿದ್ಯಾನಿಲಯಗಳಿಗೆ ಕಾಯಂ ಕುಲಪತಿಗಳಿಲ್ಲ. ಬೆಂಗಳೂರಿನ ಎರಡು, ಧಾರವಾಡ, ಗದಗ, ವಿಜಯಪುರ, ಮಂಡ್ಯ, ರಾಯಚೂರು ವಿಶ್ವವಿದ್ಯಾನಿಲಯಗಳಿಗೆ ಇನ್ನಷ್ಟೇ ಕಾಯಂ ಕುಲಪತಿ ನೇಮಿಸಬೇಕಿದೆ.

ಬೆಂಗಳೂರಿನಲ್ಲಿ ನಾಲ್ಕು ವರ್ಷದ ಹಿಂದೆ ರೂಪುಗೊಂಡಿದ್ದ ನೃಪತುಂಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಶ್ರೀನಿವಾಸ ಬಳ್ಳಿ ಅವರ ಅವಧಿ ಮುಕ್ತಾಯಗೊಂಡು ಈಗ ಪ್ರೊ. ಫಜೀಹಾ ಸುಲ್ತಾನ ಹಂಗಾಮಿ ಕುಲಪತಿಯಾಗಿದ್ದಾರೆ.
icon

(1 / 8)

ಬೆಂಗಳೂರಿನಲ್ಲಿ ನಾಲ್ಕು ವರ್ಷದ ಹಿಂದೆ ರೂಪುಗೊಂಡಿದ್ದ ನೃಪತುಂಗಾ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಪ್ರೊ.ಶ್ರೀನಿವಾಸ ಬಳ್ಳಿ ಅವರ ಅವಧಿ ಮುಕ್ತಾಯಗೊಂಡು ಈಗ ಪ್ರೊ. ಫಜೀಹಾ ಸುಲ್ತಾನ ಹಂಗಾಮಿ ಕುಲಪತಿಯಾಗಿದ್ದಾರೆ.

ಐದು ವರ್ಷದ ಹಿಂದೆ ರೂಪುಗೊಂಡಿದ್ದ ಬೆಂಗಳೂರು ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾಯಂ ಕುಲಪತಿ ಇಲ್ಲ. ಡಾ.ಗೋಮತಿ ದೇವಿ ಅವರ ಅವಧಿ ಮುಗಿದ ನಂತರ ಇಲ್ಲಿ ಪ್ರೊ.ಉಷಾದೇವಿ ಸಿ ಹಂಗಾಮಿ ಕುಲಪತಿಯಾಗಿದ್ದಾರೆ. 
icon

(2 / 8)

ಐದು ವರ್ಷದ ಹಿಂದೆ ರೂಪುಗೊಂಡಿದ್ದ ಬೆಂಗಳೂರು ನಗರದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಕಾಯಂ ಕುಲಪತಿ ಇಲ್ಲ. ಡಾ.ಗೋಮತಿ ದೇವಿ ಅವರ ಅವಧಿ ಮುಗಿದ ನಂತರ ಇಲ್ಲಿ ಪ್ರೊ.ಉಷಾದೇವಿ ಸಿ ಹಂಗಾಮಿ ಕುಲಪತಿಯಾಗಿದ್ದಾರೆ. 

ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲೂ ಪೂರ್ಣಾವಧಿ ಕುಲಪತಿ ಇಲ್ಲ. ಪ್ರೊ.ಕೆ.ಬಿ.ಗುಡಸಿ ಅವರ ಅವಧಿ ಮುಗಿದ ಬಳಿಕ ಇಲ್ಲಿ ಡಾ.ಜಯಶ್ರೀ ಎಸ್. ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
icon

(3 / 8)

ಹಳೆಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲೂ ಪೂರ್ಣಾವಧಿ ಕುಲಪತಿ ಇಲ್ಲ. ಪ್ರೊ.ಕೆ.ಬಿ.ಗುಡಸಿ ಅವರ ಅವಧಿ ಮುಗಿದ ಬಳಿಕ ಇಲ್ಲಿ ಡಾ.ಜಯಶ್ರೀ ಎಸ್. ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಂಡ್ಯ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿದ್ದ ಪ್ರೊ.ಪುಟ್ಟರಾಜು ಅವರ ಅವಧಿ ಮುಗಿದು ಈಗ ಹಂಗಾಮಿ ಕುಲಪತಿಯಾಗಿ ಪ್ರೊ.ಶಿವಚಿತ್ತಪ್ಪ ಅವರು ನಾಲ್ಕು ತಿಂಗಳಿನಿಂದ ಹಂಗಾಮಿ ಕುಲಪತಿಯಾಗಿದ್ದಾರೆ.
icon

(4 / 8)

ಮಂಡ್ಯ ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿದ್ದ ಪ್ರೊ.ಪುಟ್ಟರಾಜು ಅವರ ಅವಧಿ ಮುಗಿದು ಈಗ ಹಂಗಾಮಿ ಕುಲಪತಿಯಾಗಿ ಪ್ರೊ.ಶಿವಚಿತ್ತಪ್ಪ ಅವರು ನಾಲ್ಕು ತಿಂಗಳಿನಿಂದ ಹಂಗಾಮಿ ಕುಲಪತಿಯಾಗಿದ್ದಾರೆ.

ರಾಯಚೂರಿನಲ್ಲೂ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಕುಲಪತಿಯಾಗಿದ್ದ ಪ್ರೊ.ಹರೀಶ್‌ ರಾಮಸ್ವಾಮಿ ಅವರ ಅವಧಿ ಮುಗಿದು ಈಗ ರಾಯಚೂರು ವಿಶ್ವವಿದ್ಯಾಲಯದಲ್ಲಿ ಡಾ.ಸುಯಮೀಂದ್ರ ಎಸ್.ಕುಲಕರ್ಣಿ ಪ್ರಭಾರ ಕುಲಪತಿಯಾಗಿದ್ದಾರೆ.
icon

(5 / 8)

ರಾಯಚೂರಿನಲ್ಲೂ ಹೊಸ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಕುಲಪತಿಯಾಗಿದ್ದ ಪ್ರೊ.ಹರೀಶ್‌ ರಾಮಸ್ವಾಮಿ ಅವರ ಅವಧಿ ಮುಗಿದು ಈಗ ರಾಯಚೂರು ವಿಶ್ವವಿದ್ಯಾಲಯದಲ್ಲಿ ಡಾ.ಸುಯಮೀಂದ್ರ ಎಸ್.ಕುಲಕರ್ಣಿ ಪ್ರಭಾರ ಕುಲಪತಿಯಾಗಿದ್ದಾರೆ.

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಒಂದೂವರೆ ದಶಕದ ಹಿಂದೆ ಆರಂಭಗೊಂಡು ಮೂರನೇ ಕುಲಪತಿಯಾಗಿದ್ದ ಪ್ರೊ.ನಾಗೇಶ್‌ ಬೆಟ್ಟಕೋಟೆ ಅವಧಿ ಮುಗಿದಿದೆ. ಈಗ ಅವರ ಅವಧಿಯನ್ನು ಆರು ತಿಂಗಳವರೆಗೂ ಹಂಗಾಮಿಯಾಗಿ ಬೆಟ್ಟಕೋಟೆ ಅವರೇ ಮುಂದುವರದಿದ್ದಾರೆ.
icon

(6 / 8)

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಒಂದೂವರೆ ದಶಕದ ಹಿಂದೆ ಆರಂಭಗೊಂಡು ಮೂರನೇ ಕುಲಪತಿಯಾಗಿದ್ದ ಪ್ರೊ.ನಾಗೇಶ್‌ ಬೆಟ್ಟಕೋಟೆ ಅವಧಿ ಮುಗಿದಿದೆ. ಈಗ ಅವರ ಅವಧಿಯನ್ನು ಆರು ತಿಂಗಳವರೆಗೂ ಹಂಗಾಮಿಯಾಗಿ ಬೆಟ್ಟಕೋಟೆ ಅವರೇ ಮುಂದುವರದಿದ್ದಾರೆ.

ಗದಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಕೆಎಸ್‌ಆರ್‌ಡಿಪಿಆರ್)   ವಿಶ್ವವಿದ್ಯಾನಿಲಯ ಕುಲಪತಿಯಾಗಿದ್ದ ವಿಷ್ಣುಕಾಂತ ಚಟಪಲ್ಲಿ ಅವರ ಅವಧಿ ಮುಗಿದು ಈಗ  ಪ್ರೊ.ಡಾ.ಸುರೇಶ ನಾಡಗೌಡರ ಹಂಗಾಮಿ ಕುಲಪತಿಯಾಗಿದ್ದಾರೆ.
icon

(7 / 8)

ಗದಗದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ಕೆಎಸ್‌ಆರ್‌ಡಿಪಿಆರ್)   ವಿಶ್ವವಿದ್ಯಾನಿಲಯ ಕುಲಪತಿಯಾಗಿದ್ದ ವಿಷ್ಣುಕಾಂತ ಚಟಪಲ್ಲಿ ಅವರ ಅವಧಿ ಮುಗಿದು ಈಗ  ಪ್ರೊ.ಡಾ.ಸುರೇಶ ನಾಡಗೌಡರ ಹಂಗಾಮಿ ಕುಲಪತಿಯಾಗಿದ್ದಾರೆ.

ವಿಜಯಪುರದಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ತುಳಸಿಮಾಲಾ ಅವರ ಅವಧಿ ಮುಗಿದಿದೆ. ಈಗ ಪ್ರೊ.ಶಾಂತಾದೇವಿ ಟಿ. ಇಲ್ಲಿನ  ಹಂಗಾಮಿ ಕುಲಪತಿಯಾಗಿದ್ದಾರೆ.
icon

(8 / 8)

ವಿಜಯಪುರದಲ್ಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ತುಳಸಿಮಾಲಾ ಅವರ ಅವಧಿ ಮುಗಿದಿದೆ. ಈಗ ಪ್ರೊ.ಶಾಂತಾದೇವಿ ಟಿ. ಇಲ್ಲಿನ  ಹಂಗಾಮಿ ಕುಲಪತಿಯಾಗಿದ್ದಾರೆ.


ಇತರ ಗ್ಯಾಲರಿಗಳು