ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ

  • ಕರ್ನಾಟಕ ಸರ್ಕಾರವು ಈ ಬಾರಿ ಬಸವಜಯಂತಿಯನ್ನು ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದು. ಇದರ ಭಾಗವಾಗಿಯೇ ಅನುಭವ ಮಂಟಪ ರಥಯಾತ್ರೆ ಕರ್ನಾಟಕದ್ಯಂತ ಸಂಚರಿಸಲಿದೆ.

ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.
icon

(1 / 7)

ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಸವ ಜಯಂತಿಯ ಅಂಗವಾಗಿ ಬಾಗಲಕೋಟೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ಲಾಂಛನ ಬಿಡುಗಡೆ ಹಾಗೂ ರಥಯಾತ್ರೆಗೆ ಚಾಲನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
icon

(2 / 7)

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಸವ ಜಯಂತಿಯ ಅಂಗವಾಗಿ ಬಾಗಲಕೋಟೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ಲಾಂಛನ ಬಿಡುಗಡೆ ಹಾಗೂ ರಥಯಾತ್ರೆಗೆ ಚಾಲನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಗಣ್ಯರು ಬೆಂಗಳೂರಿನ ವಿಧಾನಸೌಧದ ಎದುರು ‘ಅನುಭವ ಮಂಟಪ-ಬಸವಾದಿ ಶರಣರ ವೈಭವ-2025’ ರಥಯಾತ್ರೆಗೆ ಚಾಲನೆ ನೀಡಿದರು.
icon

(3 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಗಣ್ಯರು ಬೆಂಗಳೂರಿನ ವಿಧಾನಸೌಧದ ಎದುರು ‘ಅನುಭವ ಮಂಟಪ-ಬಸವಾದಿ ಶರಣರ ವೈಭವ-2025’ ರಥಯಾತ್ರೆಗೆ ಚಾಲನೆ ನೀಡಿದರು.

ಈಗಾಗಲೇ ಮಂಡ್ಯದ ಮೂಲಕ ಮೈಸೂರಿಗೆ  'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ರಥಯಾತ್ರೆ ತಲುಪಿದ್ದು, ಮುಂದಿನ ಎರಡು ವಾರ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದೆ.
icon

(4 / 7)

ಈಗಾಗಲೇ ಮಂಡ್ಯದ ಮೂಲಕ ಮೈಸೂರಿಗೆ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ರಥಯಾತ್ರೆ ತಲುಪಿದ್ದು, ಮುಂದಿನ ಎರಡು ವಾರ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದೆ.

ಅನುಭವ ಮಂಟಪ, ಬಸವಣ್ಣನವರ ವಿಚಾರ ಧಾರೆಯನ್ನು ಜಾಗೃತಿ ಮೂಡಿಸುವ ಭಾಗವಾಗಿ ರಥಯಾತ್ರೆ ರೂಪಿಸಲಾಗಿದ್ದು, ವಿಭಿನ್ನ ಪರಿಕಲ್ಪನೆಯಿಂದ ಗಮನ ಸೆಳೆಯುತ್ತಿದೆ.
icon

(5 / 7)

ಅನುಭವ ಮಂಟಪ, ಬಸವಣ್ಣನವರ ವಿಚಾರ ಧಾರೆಯನ್ನು ಜಾಗೃತಿ ಮೂಡಿಸುವ ಭಾಗವಾಗಿ ರಥಯಾತ್ರೆ ರೂಪಿಸಲಾಗಿದ್ದು, ವಿಭಿನ್ನ ಪರಿಕಲ್ಪನೆಯಿಂದ ಗಮನ ಸೆಳೆಯುತ್ತಿದೆ.

ಬೆಂಗಳೂರು ವಿಧಾನಸೌಧದ ಎದುರು ಆರಂಭಗೊಂಡ ರಥಯಾತ್ರೆ ವೇಳೆ ವಿವಿಧ ಕಲಾವಿದರು ಪ್ರದರ್ಶನದೊಂದಿಗೆ ಗಮನ ಸೆಳೆದರು.
icon

(6 / 7)

ಬೆಂಗಳೂರು ವಿಧಾನಸೌಧದ ಎದುರು ಆರಂಭಗೊಂಡ ರಥಯಾತ್ರೆ ವೇಳೆ ವಿವಿಧ ಕಲಾವಿದರು ಪ್ರದರ್ಶನದೊಂದಿಗೆ ಗಮನ ಸೆಳೆದರು.

'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ರಥಯಾತ್ರೆ ಉದ್ಘಾಟನೆ ವೇಳೆ ಯಕ್ಷಗಾನ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.
icon

(7 / 7)

'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ರಥಯಾತ್ರೆ ಉದ್ಘಾಟನೆ ವೇಳೆ ಯಕ್ಷಗಾನ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು