ಬೆಂಗಳೂರಿನಿಂದ ಹೊರಟಿತು ಅನುಭವ ಮಂಟಪ ರಥಯಾತ್ರೆ, ಕೂಡಲಸಂಗಮದಲ್ಲಿ ಬಸವಜಯಂತಿ ವಿಭಿನ್ನ ಆಚರಣೆಗೆ ಸಿದ್ದತೆ
- ಕರ್ನಾಟಕ ಸರ್ಕಾರವು ಈ ಬಾರಿ ಬಸವಜಯಂತಿಯನ್ನು ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದು. ಇದರ ಭಾಗವಾಗಿಯೇ ಅನುಭವ ಮಂಟಪ ರಥಯಾತ್ರೆ ಕರ್ನಾಟಕದ್ಯಂತ ಸಂಚರಿಸಲಿದೆ.
- ಕರ್ನಾಟಕ ಸರ್ಕಾರವು ಈ ಬಾರಿ ಬಸವಜಯಂತಿಯನ್ನು ಬಾಗಲಕೋಟೆ ಜಿಲ್ಲೆ ಕೂಡಲಸಂಗಮದಲ್ಲಿ ಹಮ್ಮಿಕೊಂಡಿದ್ದು. ಇದರ ಭಾಗವಾಗಿಯೇ ಅನುಭವ ಮಂಟಪ ರಥಯಾತ್ರೆ ಕರ್ನಾಟಕದ್ಯಂತ ಸಂಚರಿಸಲಿದೆ.
(1 / 7)
ಈ ವರ್ಷದ ಬಸವಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮ ಭಾಗವಾಗಿ ರಥಯಾತ್ರೆ ರೂಪಿಸಲಾಗಿದೆ.
(2 / 7)
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬಸವ ಜಯಂತಿಯ ಅಂಗವಾಗಿ ಬಾಗಲಕೋಟೆಯ ಕೂಡಲಸಂಗಮದಲ್ಲಿ ಹಮ್ಮಿಕೊಳ್ಳಲಿರುವ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ಕಾರ್ಯಕ್ರಮದ ಲಾಂಛನ ಬಿಡುಗಡೆ ಹಾಗೂ ರಥಯಾತ್ರೆಗೆ ಚಾಲನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
(3 / 7)
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಗಣ್ಯರು ಬೆಂಗಳೂರಿನ ವಿಧಾನಸೌಧದ ಎದುರು ‘ಅನುಭವ ಮಂಟಪ-ಬಸವಾದಿ ಶರಣರ ವೈಭವ-2025’ ರಥಯಾತ್ರೆಗೆ ಚಾಲನೆ ನೀಡಿದರು.
(4 / 7)
ಈಗಾಗಲೇ ಮಂಡ್ಯದ ಮೂಲಕ ಮೈಸೂರಿಗೆ 'ಅನುಭವ ಮಂಟಪ-ಬಸವಾದಿ ಶರಣರ ವೈಭವ-2025' ರಥಯಾತ್ರೆ ತಲುಪಿದ್ದು, ಮುಂದಿನ ಎರಡು ವಾರ ಕರ್ನಾಟಕದಾದ್ಯಂತ ಪ್ರವಾಸ ಕೈಗೊಳ್ಳಲಿದೆ.
(5 / 7)
ಅನುಭವ ಮಂಟಪ, ಬಸವಣ್ಣನವರ ವಿಚಾರ ಧಾರೆಯನ್ನು ಜಾಗೃತಿ ಮೂಡಿಸುವ ಭಾಗವಾಗಿ ರಥಯಾತ್ರೆ ರೂಪಿಸಲಾಗಿದ್ದು, ವಿಭಿನ್ನ ಪರಿಕಲ್ಪನೆಯಿಂದ ಗಮನ ಸೆಳೆಯುತ್ತಿದೆ.
ಇತರ ಗ್ಯಾಲರಿಗಳು