ಐಪಿಎಸ್‌ ರಂಗನಟ: ಮೂರು ದಶಕ ಕರ್ನಾಟಕ ಪೊಲೀಸ್‌ ಅಧಿಕಾರಿಯಾಗಿ ನಿವೃತ್ತಿ; ಶುರುವಾಗಿದೆ ರಂಗಕಲಾವಿದರ ಪ್ರವೃತ್ತಿ, ಕಾಯ್ಕಿಣಿ ನಾಟಕದಲ್ಲಿ ಅಭಿನಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಸ್‌ ರಂಗನಟ: ಮೂರು ದಶಕ ಕರ್ನಾಟಕ ಪೊಲೀಸ್‌ ಅಧಿಕಾರಿಯಾಗಿ ನಿವೃತ್ತಿ; ಶುರುವಾಗಿದೆ ರಂಗಕಲಾವಿದರ ಪ್ರವೃತ್ತಿ, ಕಾಯ್ಕಿಣಿ ನಾಟಕದಲ್ಲಿ ಅಭಿನಯ

ಐಪಿಎಸ್‌ ರಂಗನಟ: ಮೂರು ದಶಕ ಕರ್ನಾಟಕ ಪೊಲೀಸ್‌ ಅಧಿಕಾರಿಯಾಗಿ ನಿವೃತ್ತಿ; ಶುರುವಾಗಿದೆ ರಂಗಕಲಾವಿದರ ಪ್ರವೃತ್ತಿ, ಕಾಯ್ಕಿಣಿ ನಾಟಕದಲ್ಲಿ ಅಭಿನಯ

ವೃತ್ತಿಯಲ್ಲಿ ಪೊಲೀಸ್‌ ಅಧಿಕಾರಿಯಾದರೂ ಪ್ರವೃತ್ತಿಯಲ್ಲಿ ವಿಭಿನ್ನ ಕಲಾ ಪ್ರತಿಭೆ ಹೊಂದಿರುವವರು ಕರ್ನಾಟಕದಲ್ಲಿದ್ದಾರೆ. ಐಪಿಎಸ್‌ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕೆಲಸ ಮಾಡಿದ ಗೋಪಾಲ್‌ ಹೊಸೂರ್‌ ಅವರೂ ನಾಟಕದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದಾರೆ.

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ ದಕ್ಷತೆಯಿಂದಲೇ ಹೆಸರು ಮಾಡಿದ್ದ ಗೋಪಾಲ್‌ ಹೊಸೂರ್‌ ಅವರ ಹೆಸರನ್ನು ನೀವು ಕೇಳಿರಬಹುದು. ಅವರೀಗ ನಾಟಕವೊಂದರಲ್ಲಿ ಅಭಿನಯಿಸಿ ತಮ್ಮ ಕಲಾವಂತಿಕೆಯನ್ನೂ ಮರೆದಿದ್ದಾರೆ.
icon

(1 / 7)

ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ ದಕ್ಷತೆಯಿಂದಲೇ ಹೆಸರು ಮಾಡಿದ್ದ ಗೋಪಾಲ್‌ ಹೊಸೂರ್‌ ಅವರ ಹೆಸರನ್ನು ನೀವು ಕೇಳಿರಬಹುದು. ಅವರೀಗ ನಾಟಕವೊಂದರಲ್ಲಿ ಅಭಿನಯಿಸಿ ತಮ್ಮ ಕಲಾವಂತಿಕೆಯನ್ನೂ ಮರೆದಿದ್ದಾರೆ.

ಗೋಪಾಲ್ ಹೊಸೂರು ಅವರು ಅಂದು ವೀರಪ್ಪನ್ ಕಾರ್ಯಾಚರಣೆಯ ಹೊತ್ತಿನಲ್ಲಿ ಗುಂಡೇಟು ತಿಂದರೂ ಎದೆಗುಂದದೆ ಬದುಕುಳಿದು ಪೊಲೀಸ್ ಇಲಾಖೆಯ ಮುಖ್ಯ ಹುದ್ದೆಗಳಲ್ಲಿ ಸೇವೆಸಲ್ಲಿಸಿ,2013 ರಲ್ಲಿ ರಾಜ್ಯಗುಪ್ತದಳ ಇಲಾಖೆಯನ್ನು ಮುನ್ನಡೆಸಿ ನಿವೃತ್ತಿಹೊಂದಿದವರು.
icon

(2 / 7)

ಗೋಪಾಲ್ ಹೊಸೂರು ಅವರು ಅಂದು ವೀರಪ್ಪನ್ ಕಾರ್ಯಾಚರಣೆಯ ಹೊತ್ತಿನಲ್ಲಿ ಗುಂಡೇಟು ತಿಂದರೂ ಎದೆಗುಂದದೆ ಬದುಕುಳಿದು ಪೊಲೀಸ್ ಇಲಾಖೆಯ ಮುಖ್ಯ ಹುದ್ದೆಗಳಲ್ಲಿ ಸೇವೆಸಲ್ಲಿಸಿ,2013 ರಲ್ಲಿ ರಾಜ್ಯಗುಪ್ತದಳ ಇಲಾಖೆಯನ್ನು ಮುನ್ನಡೆಸಿ ನಿವೃತ್ತಿಹೊಂದಿದವರು.

ಕಾರಾಗೃಹ ಇಲಾಖೆಯ ಐಜಿಪಿಯಾಗಿದ್ದಾಗ ಗೋಪಾಲ್‌ ಹೊಸೂರ್ ಅವರು ಕೈದಿಗಳಲ್ಲೂ ರಂಗ ಕಲಾವಿದರು ಇರುವುದನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಈಗ ಅವರೇ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಜತೆಗಿರುವನು ಚಂದಿರ ನಾಟಕದಲ್ಲಿ ಖಾಜಿಯ ಪಾತ್ರದಲ್ಲಿ ಕಾಣಿಸಿಕೊಂಡರು.
icon

(3 / 7)

ಕಾರಾಗೃಹ ಇಲಾಖೆಯ ಐಜಿಪಿಯಾಗಿದ್ದಾಗ ಗೋಪಾಲ್‌ ಹೊಸೂರ್ ಅವರು ಕೈದಿಗಳಲ್ಲೂ ರಂಗ ಕಲಾವಿದರು ಇರುವುದನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದರು. ಈಗ ಅವರೇ ಬೆಂಗಳೂರಿನಲ್ಲಿ ಪ್ರದರ್ಶನಗೊಂಡ ಜತೆಗಿರುವನು ಚಂದಿರ ನಾಟಕದಲ್ಲಿ ಖಾಜಿಯ ಪಾತ್ರದಲ್ಲಿ ಕಾಣಿಸಿಕೊಂಡರು.

ಗೋಪಾಲ್‌ ಹೊಸೂರ್‌ ಅವರು ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದವರು. ಹಲವು ಸಿಎಂಗಳ ಕಾಲದಲ್ಲಿ ಗುಪ್ತಚರ ಇಲಾಖೆಯನ್ನು ನಿಭಾಯಿಸಿ ವಿಶ್ವಾಸ ಪಡೆದವರು. ಪೊಲೀಸ್‌ ವೃತ್ತಿಯಾಚೆಗೂ ಒಳ್ಳೆಯದನ್ನು ಬೆಂಬಲಿಸುತ್ತಾ ಬಂದವರು.
icon

(4 / 7)

ಗೋಪಾಲ್‌ ಹೊಸೂರ್‌ ಅವರು ಹಲವು ಜಿಲ್ಲೆಗಳಲ್ಲಿ ಎಸ್ಪಿಯಾಗಿ ಕೆಲಸ ಮಾಡಿದವರು. ಹಲವು ಸಿಎಂಗಳ ಕಾಲದಲ್ಲಿ ಗುಪ್ತಚರ ಇಲಾಖೆಯನ್ನು ನಿಭಾಯಿಸಿ ವಿಶ್ವಾಸ ಪಡೆದವರು. ಪೊಲೀಸ್‌ ವೃತ್ತಿಯಾಚೆಗೂ ಒಳ್ಳೆಯದನ್ನು ಬೆಂಬಲಿಸುತ್ತಾ ಬಂದವರು.

ಮೈಸೂರಿನಲ್ಲಿ ಖ್ಯಾತ ಕಲಾವಿದ, ರಂಗಾಯಣದಲ್ಲಿದ್ದ ಹುಲುಗಪ್ಪ ಕಟ್ಟಿಮನಿ ಅವರು ಸಂಕಲ್ಪ ಎನ್ನುವ ತಂಡ ಕಟ್ಟಿಕೊಂಡು ಬರೀ ಕೈದಿಗಳಿಗೆ ನಾಟಕವನ್ನು ಮಾಡಲು ಮುಂದಾದಾಗ ಬೆನ್ನಿಗೆ ನಿಂತವರು ಗೋಪಾಲ್‌ ಹೊಸೂರ್‌ ಅವರೇ.
icon

(5 / 7)

ಮೈಸೂರಿನಲ್ಲಿ ಖ್ಯಾತ ಕಲಾವಿದ, ರಂಗಾಯಣದಲ್ಲಿದ್ದ ಹುಲುಗಪ್ಪ ಕಟ್ಟಿಮನಿ ಅವರು ಸಂಕಲ್ಪ ಎನ್ನುವ ತಂಡ ಕಟ್ಟಿಕೊಂಡು ಬರೀ ಕೈದಿಗಳಿಗೆ ನಾಟಕವನ್ನು ಮಾಡಲು ಮುಂದಾದಾಗ ಬೆನ್ನಿಗೆ ನಿಂತವರು ಗೋಪಾಲ್‌ ಹೊಸೂರ್‌ ಅವರೇ.

ಎಂತದೋ ಸನ್ನಿವೇಶದಲ್ಲಿ ಅಪರಾಧವೆಸಗಿ ಜೈಲು ಸೇರಿದ ಹಲವರಲ್ಲಿ ಕಲಾವಿದನೂ ಇರುತ್ತಾನೆ ಎನ್ನುವ ಆಶಯದೊಂದಿಗೆ ಜೈಲುಹಕ್ಕಿಗಳ ರಂಗಯಾನವನ್ನು ಹುಲುಗಪ್ಪ ಕಟ್ಟಿಮನಿ ಆರಂಭಿಸಿದಾಗ ಇದು ಯಶಸ್ವಿಗೊಳ್ಳಲು ಬೆಂಬಲಕ್ಕೆ ನಿಂತವರೇ ಗೋಪಾಲ್‌ ಹೊಸೂರು.
icon

(6 / 7)

ಎಂತದೋ ಸನ್ನಿವೇಶದಲ್ಲಿ ಅಪರಾಧವೆಸಗಿ ಜೈಲು ಸೇರಿದ ಹಲವರಲ್ಲಿ ಕಲಾವಿದನೂ ಇರುತ್ತಾನೆ ಎನ್ನುವ ಆಶಯದೊಂದಿಗೆ ಜೈಲುಹಕ್ಕಿಗಳ ರಂಗಯಾನವನ್ನು ಹುಲುಗಪ್ಪ ಕಟ್ಟಿಮನಿ ಆರಂಭಿಸಿದಾಗ ಇದು ಯಶಸ್ವಿಗೊಳ್ಳಲು ಬೆಂಬಲಕ್ಕೆ ನಿಂತವರೇ ಗೋಪಾಲ್‌ ಹೊಸೂರು.

ನಿವೃತ್ತಿ ನಂತರವೂ ಬೆಂಗಳೂರಿನಲ್ಲಿ ಸಕ್ರಿಯರಾಗಿರುವ ಗೋಪಾಲ್‌ ಹೊಸೂರ್‌ ಅವರು ತಮ್ಮ ರಂಗ ನಂಟಿನ ನೆನಪುಗಳಗೊಂದಿಗೆ ಈಗ ಜಯಂತ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ನಾಟಕದಲ್ಲಿ ಅಭಿನಯಿಸಿದರು. ಹುಲುಗಪ್ಪ ಕಟ್ಟಿಮನಿ ಅವರ ಕೋರಿಕೆಗೆ ಮನ್ನಿಸಿ ತಮ್ಮೊಳಗೊಬ್ಬ ಕಲಾವಿದನೂ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟರು.
icon

(7 / 7)

ನಿವೃತ್ತಿ ನಂತರವೂ ಬೆಂಗಳೂರಿನಲ್ಲಿ ಸಕ್ರಿಯರಾಗಿರುವ ಗೋಪಾಲ್‌ ಹೊಸೂರ್‌ ಅವರು ತಮ್ಮ ರಂಗ ನಂಟಿನ ನೆನಪುಗಳಗೊಂದಿಗೆ ಈಗ ಜಯಂತ ಕಾಯ್ಕಿಣಿ ಅವರ ಜತೆಗಿರುವನು ಚಂದಿರ ನಾಟಕದಲ್ಲಿ ಅಭಿನಯಿಸಿದರು. ಹುಲುಗಪ್ಪ ಕಟ್ಟಿಮನಿ ಅವರ ಕೋರಿಕೆಗೆ ಮನ್ನಿಸಿ ತಮ್ಮೊಳಗೊಬ್ಬ ಕಲಾವಿದನೂ ಇದ್ದಾರೆ ಎನ್ನುವುದನ್ನು ತೋರಿಸಿಕೊಟ್ಟರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು