ಕರ್ನಾಟಕ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ 2 ವರ್ಷ:ಸಿದ್ದರಾಮಯ್ಯ ಸಂಪುಟದಲ್ಲಿರುವ ಟಾಪ್‌ 10 ಸಚಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ 2 ವರ್ಷ:ಸಿದ್ದರಾಮಯ್ಯ ಸಂಪುಟದಲ್ಲಿರುವ ಟಾಪ್‌ 10 ಸಚಿವರು

ಕರ್ನಾಟಕ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ 2 ವರ್ಷ:ಸಿದ್ದರಾಮಯ್ಯ ಸಂಪುಟದಲ್ಲಿರುವ ಟಾಪ್‌ 10 ಸಚಿವರು

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಎರಡು ವರ್ಷ ಮೇ 20 ಕ್ಕೆ ತುಂಬಲಿದೆ. ಈ ಅವಧಿಯಲ್ಲಿ ಚೆನ್ನಾಗಿ ಕೆಲಸ ಮಾಡಿದ 10 ಸಚಿವರ ಪಟ್ಟಿ ಇಲ್ಲಿದೆ.

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಬಹುತೇಕ ಎರಡು ವರ್ಷದ ಹಿಂದೆ ರಚನೆಯಾಗಿತ್ತು,
icon

(1 / 11)

ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಬಹುತೇಕ ಎರಡು ವರ್ಷದ ಹಿಂದೆ ರಚನೆಯಾಗಿತ್ತು,

1. ಕೃಷ್ಣಬೈರೇಗೌಡ- ಕಂದಾಯ ಸಚಿವ: ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಅವರು ಗಮನ ಸೆಳೆಯುವಂತೆ ಕೆಲಸ ಮಾಡಿದವರು. ಪ್ರತಿ ಜಿಲ್ಲೆಗೆ ಭೇಟಿ, ಜನರ ಹೆಚ್ಚು ಅವಲಂಬನೆಯಾಗಿರುವ ಕಂದಾಯ ಇಲಾಖೆ ಕಾರ್ಯಕ್ಷಮತೆ ಜನಮುಖಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಖುದ್ದು ಸಿಎಂ ಸಿದ್ದರಾಮಯ್ಯ ಅವರಿಂದಲೇ ಮೆಚ್ಚುಗೆ ಪಡೆದವರು ಇವರು..
icon

(2 / 11)

1. ಕೃಷ್ಣಬೈರೇಗೌಡ- ಕಂದಾಯ ಸಚಿವ: ಕಂದಾಯ ಸಚಿವರಾಗಿ ಕೃಷ್ಣಬೈರೇಗೌಡ ಅವರು ಗಮನ ಸೆಳೆಯುವಂತೆ ಕೆಲಸ ಮಾಡಿದವರು. ಪ್ರತಿ ಜಿಲ್ಲೆಗೆ ಭೇಟಿ, ಜನರ ಹೆಚ್ಚು ಅವಲಂಬನೆಯಾಗಿರುವ ಕಂದಾಯ ಇಲಾಖೆ ಕಾರ್ಯಕ್ಷಮತೆ ಜನಮುಖಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಖುದ್ದು ಸಿಎಂ ಸಿದ್ದರಾಮಯ್ಯ ಅವರಿಂದಲೇ ಮೆಚ್ಚುಗೆ ಪಡೆದವರು ಇವರು..

2. ಎಂ.ಬಿ.ಪಾಟೀಲ್‌ ಬೃಹತ್‌ ಕೈಗಾರಿಕೆ, ಮೂಲಸೌಕರ್ಯ ಸಚಿವರು: ಕೈಗಾರಿಕಾ ಸಚಿವರಾಗಿ ಎಂ.ಬಿ.ಪಾಟೀಲರು ಜಾಗತಿಕ ಹೂಡಿಕೆದಾರರ ಸಮಾವೇಶ, ಆಯೋಜಿಸಿ ಗಮನ ಸೆಳೆದವರು. ವಿವಿಧ ವಲಯದ ಕೈಗಾರಿಕೆಗಳ ಪ್ರಗತಿ ವಿಚಾರದಲ್ಲಿ ಕರ್ನಾಟಕ ಮುಂಚೂಣಿ ರಾಜ್ಯ ಇರುವ ನಿಟ್ಟಿನಲ್ಲಿ ಇಲಾಖೆಯನ್ನು ಸಕ್ರಿಯವಾಗಿ ಇಟ್ಟುರುವುದು ಇವರ ವಿಶೇಷ.
icon

(3 / 11)

2. ಎಂ.ಬಿ.ಪಾಟೀಲ್‌ ಬೃಹತ್‌ ಕೈಗಾರಿಕೆ, ಮೂಲಸೌಕರ್ಯ ಸಚಿವರು: ಕೈಗಾರಿಕಾ ಸಚಿವರಾಗಿ ಎಂ.ಬಿ.ಪಾಟೀಲರು ಜಾಗತಿಕ ಹೂಡಿಕೆದಾರರ ಸಮಾವೇಶ, ಆಯೋಜಿಸಿ ಗಮನ ಸೆಳೆದವರು. ವಿವಿಧ ವಲಯದ ಕೈಗಾರಿಕೆಗಳ ಪ್ರಗತಿ ವಿಚಾರದಲ್ಲಿ ಕರ್ನಾಟಕ ಮುಂಚೂಣಿ ರಾಜ್ಯ ಇರುವ ನಿಟ್ಟಿನಲ್ಲಿ ಇಲಾಖೆಯನ್ನು ಸಕ್ರಿಯವಾಗಿ ಇಟ್ಟುರುವುದು ಇವರ ವಿಶೇಷ.

3. ಈಶ್ವರ ಖಂಡ್ರೆ, ಅರಣ್ಯ, ಪರಿಸರ ಹಾಗೂ ಜೀವಿ ಶಾಸ್ತ್ರ ಸಚಿವರುಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎಲ್ಲೆಡೆ ಪ್ರವಾಸ ಕೈಗೊಂಡು ಅರಣ್ಯ, ಮಾನವ ವನ್ಯಜೀವಿಗಳ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಹಸುರೀಕರಣ ಯೋಜನೆಗಳ ಜಾರಿ ವಿಚಾರದಲ್ಲೂ ಗಮನಾರ್ಹ ಎನ್ನುವ ರೀತಿ ಕೆಲಸ ಮಾಡುದ್ದಾರೆ.
icon

(4 / 11)

3. ಈಶ್ವರ ಖಂಡ್ರೆ, ಅರಣ್ಯ, ಪರಿಸರ ಹಾಗೂ ಜೀವಿ ಶಾಸ್ತ್ರ ಸಚಿವರುಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾಗಿ ಎಲ್ಲೆಡೆ ಪ್ರವಾಸ ಕೈಗೊಂಡು ಅರಣ್ಯ, ಮಾನವ ವನ್ಯಜೀವಿಗಳ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಹಸುರೀಕರಣ ಯೋಜನೆಗಳ ಜಾರಿ ವಿಚಾರದಲ್ಲೂ ಗಮನಾರ್ಹ ಎನ್ನುವ ರೀತಿ ಕೆಲಸ ಮಾಡುದ್ದಾರೆ.

4. ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರು:  ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಯೋಜನೆಗಳ ಜಾರಿಗೆ ಒತ್ತು ನೀಡುತ್ತಿದ್ದಾರೆ. ಈಗಾಗಲೇ ಎತ್ತಿನಹೊಳೆ ಮೊದಲ ಹಂತದ ಯೋಜನೆಗೂ ಚಾಲನೆ ಸಿಕ್ಕಿದೆ. ಬೆಂಗಳೂರು ನಗರದ ಪ್ರಗತಿಗೆ ಬೃಹತ್‌ ಯೋಜನೆಗಳನ್ನೇ ರೂಪಿಸಿದ್ದಾರೆ. ಕಾವೇರಿ ಕುಡಿಯುವ ನೀರಿನ ಯೋಜನಗೆ ಚಾಲನೆಯೂ ಸಿಕ್ಕಿದೆ.
icon

(5 / 11)

4. ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವರು: ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಯೋಜನೆಗಳ ಜಾರಿಗೆ ಒತ್ತು ನೀಡುತ್ತಿದ್ದಾರೆ. ಈಗಾಗಲೇ ಎತ್ತಿನಹೊಳೆ ಮೊದಲ ಹಂತದ ಯೋಜನೆಗೂ ಚಾಲನೆ ಸಿಕ್ಕಿದೆ. ಬೆಂಗಳೂರು ನಗರದ ಪ್ರಗತಿಗೆ ಬೃಹತ್‌ ಯೋಜನೆಗಳನ್ನೇ ರೂಪಿಸಿದ್ದಾರೆ. ಕಾವೇರಿ ಕುಡಿಯುವ ನೀರಿನ ಯೋಜನಗೆ ಚಾಲನೆಯೂ ಸಿಕ್ಕಿದೆ.

5.ರಾಮಲಿಂಗಾರೆಡ್ಡಿ, ಸಾರಿಗೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಹಾಗು ಮುಜರಾಯಿ ಸಚಿವರು:ಕರ್ನಾಟಕದ ಹಿರಿಯ ರಾಜಕಾರಣಿಯಾಗಿ ಹಲವು ಬಾರಿ ಸಚಿವರಾಗಿ ಕೆಲಸ ಮಾಡಿರುವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿ ಹೊಸ ಬಸ್‌ಗಳ ಖರೀದಿ, ಸೇವೆ ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಕೂಡ ಗೊಂದಲವಿಲ್ಲದೇ ಜಾರಿಯಲ್ಲಿದೆ. ಮುಜರಾಯಿ ಸಚಿವರಾಗಿ ದೇಗುಲಗಳ ಅಭಿವೃದ್ದಿ ಪ್ರಾಧಿಕಾರ ರಚಿಸಿ ಜನಸ್ನೇಹಿಯಾಗಿವ ಪ್ರಯತ್ನ ಮಾಡಿದ್ದಾರೆ.
icon

(6 / 11)

5.ರಾಮಲಿಂಗಾರೆಡ್ಡಿ, ಸಾರಿಗೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಹಾಗು ಮುಜರಾಯಿ ಸಚಿವರು:ಕರ್ನಾಟಕದ ಹಿರಿಯ ರಾಜಕಾರಣಿಯಾಗಿ ಹಲವು ಬಾರಿ ಸಚಿವರಾಗಿ ಕೆಲಸ ಮಾಡಿರುವ ರಾಮಲಿಂಗಾರೆಡ್ಡಿ ಅವರು ಸಾರಿಗೆ ಸಚಿವರಾಗಿ ಹೊಸ ಬಸ್‌ಗಳ ಖರೀದಿ, ಸೇವೆ ಸುಧಾರಣೆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಶಕ್ತಿ ಯೋಜನೆ ಕೂಡ ಗೊಂದಲವಿಲ್ಲದೇ ಜಾರಿಯಲ್ಲಿದೆ. ಮುಜರಾಯಿ ಸಚಿವರಾಗಿ ದೇಗುಲಗಳ ಅಭಿವೃದ್ದಿ ಪ್ರಾಧಿಕಾರ ರಚಿಸಿ ಜನಸ್ನೇಹಿಯಾಗಿವ ಪ್ರಯತ್ನ ಮಾಡಿದ್ದಾರೆ.

6.ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವರು:ಈ ಹಿಂದೆ ಸಾರಿಗೆ, ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದ ಚಲುವರಾಯಸ್ವಾಮಿ ಅವರು ಈಗ ಕೃಷಿ ಸಚಿವರಾಗಿಯೂ ಸಕ್ರಿಯರಾಗಿದ್ದಾರೆ, ಕೃಷಿಕರಿಗೆ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸವನ್ನೂ ಕೈಗೊಂಡಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೂ ಒತ್ತು ನೀಡಿದ್ದಾರೆ.
icon

(7 / 11)

6.ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವರು:ಈ ಹಿಂದೆ ಸಾರಿಗೆ, ಆರೋಗ್ಯ ಸಚಿವರಾಗಿ ಕೆಲಸ ಮಾಡಿದ್ದ ಚಲುವರಾಯಸ್ವಾಮಿ ಅವರು ಈಗ ಕೃಷಿ ಸಚಿವರಾಗಿಯೂ ಸಕ್ರಿಯರಾಗಿದ್ದಾರೆ, ಕೃಷಿಕರಿಗೆ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಬಹುತೇಕ ಜಿಲ್ಲೆಗಳಲ್ಲಿ ಪ್ರವಾಸವನ್ನೂ ಕೈಗೊಂಡಿದ್ದಾರೆ. ಕೃಷಿ ವಿಶ್ವವಿದ್ಯಾನಿಲಯ ಸ್ಥಾಪನೆಗೂ ಒತ್ತು ನೀಡಿದ್ದಾರೆ.

7. ಎಚ್‌ಕೆ ಪಾಟೀಲ್‌, ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವರು.ಕರ್ನಾಟಕದ ಹಿರಿಯ ರಾಜಕಾರಣಿ ಎಚ್‌.ಕೆ.ಪಾಟೀಲರು ಪ್ರವಾಸೋದ್ಯಮ ಸಚಿವರಾಗಿ ಕರ್ನಾಟಕದಲ್ಲಿ ಪಾರಂಪರಿಕ ತಾಣಗಳ ದತ್ತು ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಪ್ರವಾಸೋದ್ಯಮ ತಾಣಗಳು, ಸರ್ಕ್ಯೂಟ್‌ಗಳ ಪ್ರಗತಿ ಯೋಜನೆಗೂ ಒತ್ತು ಕೊಟ್ಟಿದ್ದಾರೆ.
icon

(8 / 11)

7. ಎಚ್‌ಕೆ ಪಾಟೀಲ್‌, ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವರು.ಕರ್ನಾಟಕದ ಹಿರಿಯ ರಾಜಕಾರಣಿ ಎಚ್‌.ಕೆ.ಪಾಟೀಲರು ಪ್ರವಾಸೋದ್ಯಮ ಸಚಿವರಾಗಿ ಕರ್ನಾಟಕದಲ್ಲಿ ಪಾರಂಪರಿಕ ತಾಣಗಳ ದತ್ತು ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಪ್ರವಾಸೋದ್ಯಮ ತಾಣಗಳು, ಸರ್ಕ್ಯೂಟ್‌ಗಳ ಪ್ರಗತಿ ಯೋಜನೆಗೂ ಒತ್ತು ಕೊಟ್ಟಿದ್ದಾರೆ.

8. ಲಕ್ಷ್ಮಿ ಹೆಬ್ಬಾಳಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರು:ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಬಹುತೇಕ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ತಲುಪಿಸಲು ಪ್ರಯತ್ನಿಸಿದ್ದಾರೆ. ಅಂಗನವಾಡಿಗಳ ಅಭಿವೃದ್ದಿ, ಹಿರಿಯ ನಾಗರೀಕರ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.
icon

(9 / 11)

8. ಲಕ್ಷ್ಮಿ ಹೆಬ್ಬಾಳಕರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರು:ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಾದ ನಂತರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿ ಬಹುತೇಕ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ತಲುಪಿಸಲು ಪ್ರಯತ್ನಿಸಿದ್ದಾರೆ. ಅಂಗನವಾಡಿಗಳ ಅಭಿವೃದ್ದಿ, ಹಿರಿಯ ನಾಗರೀಕರ ಕಲ್ಯಾಣದ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ.

9. ದಿನೇಶ್‌ ಗುಂಡೂರಾವ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು:ಈ ಹಿಂದೆ ಆಹಾರ ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಅವರು ಈ ಬಾರಿ ಆರೋಗ್ಯ ಸಚಿವರಾಗಿ ಚಟುವಟಿಕೆಯಿಂದಲೇ ಕೆಲಸ ಮಾಡುತ್ತಿದ್ದಾರೆ.ಜಿಲ್ಲೆಗಳ ಭೇಟಿ, ಆರೋಗ್ಯ ಇಲಾಖೆ ಯೋಜನೆ ಜಾರಿ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ.
icon

(10 / 11)

9. ದಿನೇಶ್‌ ಗುಂಡೂರಾವ್‌, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು:ಈ ಹಿಂದೆ ಆಹಾರ ಸಚಿವರಾಗಿದ್ದ ದಿನೇಶ್‌ ಗುಂಡೂರಾವ್‌ ಅವರು ಈ ಬಾರಿ ಆರೋಗ್ಯ ಸಚಿವರಾಗಿ ಚಟುವಟಿಕೆಯಿಂದಲೇ ಕೆಲಸ ಮಾಡುತ್ತಿದ್ದಾರೆ.ಜಿಲ್ಲೆಗಳ ಭೇಟಿ, ಆರೋಗ್ಯ ಇಲಾಖೆ ಯೋಜನೆ ಜಾರಿ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ.

10.ಸಂತೋಷ್‌ ಲಾಡ್‌ ಕಾರ್ಮಿಕ ಸಚಿವರು:ಸಂತೋಷ್‌ಲಾಡ್‌ ಅವರು ಎರಡನೇ ಬಾರಿಗೆ ಕಾರ್ಮಿಕ ಸಚಿವರಾಗಿ ಕೆಲಸ ಮಾಡುತ್ತಿರುವವರು. ಕಾರ್ಮಿಕ ಇಲಾಖೆಯಿಂದ ಯೋಜನೆಗಳ ಜಾರಿ, ಗಿಗ್‌ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದಾರೆ.
icon

(11 / 11)

10.ಸಂತೋಷ್‌ ಲಾಡ್‌ ಕಾರ್ಮಿಕ ಸಚಿವರು:ಸಂತೋಷ್‌ಲಾಡ್‌ ಅವರು ಎರಡನೇ ಬಾರಿಗೆ ಕಾರ್ಮಿಕ ಸಚಿವರಾಗಿ ಕೆಲಸ ಮಾಡುತ್ತಿರುವವರು. ಕಾರ್ಮಿಕ ಇಲಾಖೆಯಿಂದ ಯೋಜನೆಗಳ ಜಾರಿ, ಗಿಗ್‌ ಕಾರ್ಮಿಕರಿಗೆ ಪ್ರತ್ಯೇಕ ಮಂಡಳಿ ರಚಿಸಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು