Prakash Raj: ಚಕ್ರವರ್ತಿಯೀಗ ಬೆತ್ತಲೆ, ದ್ವೇಷ, ಬೂಟಾಟಿಕೆ ಒದ್ದೋಡಿಸಿದ್ದಕ್ಕೆ ಸ್ವಾಭಿಮಾನಿ ಕರ್ನಾಟಕಕ್ಕೆ ಧನ್ಯವಾದ; ಪ್ರಕಾಶ್ ರಾಜ್
- Karnataka Election 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ (Congress) ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಕೈ ಪಾಳಯದ ಅಮೋಘ ಗೆಲುವಿನ ಸಂಭ್ರಮದಲ್ಲಿದೆ. ಈ ನಡುವೆ ನಟ ಪ್ರಕಾಶ್ ರಾಜ್ (Prakash Raj), ಕರ್ನಾಟಕದಲ್ಲಿ ಬಿಜೆಪಿ (BJP) ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಹೀಗೆ ಟ್ವಿಟ್ ಮಾಡಿದ್ದಾರೆ.
- Karnataka Election 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ (Congress) ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದಿದೆ. ಕೈ ಪಾಳಯದ ಅಮೋಘ ಗೆಲುವಿನ ಸಂಭ್ರಮದಲ್ಲಿದೆ. ಈ ನಡುವೆ ನಟ ಪ್ರಕಾಶ್ ರಾಜ್ (Prakash Raj), ಕರ್ನಾಟಕದಲ್ಲಿ ಬಿಜೆಪಿ (BJP) ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಹೀಗೆ ಟ್ವಿಟ್ ಮಾಡಿದ್ದಾರೆ.
(1 / 7)
ನಟ ಪ್ರಕಾಶ್ ರಾಜ್ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಜೆಪಿ ವಿರೋಧಿ ಅವರ ಟ್ವಿಟ್ಗಳು ವಿವಾದಕ್ಕೂ ಕಾರಣವಾದ ಉದಾಹರಣೆಗಳಿವೆ. (Photo/HT web)
(2 / 7)
ಕರ್ನಾಟಕದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಹೋನಾಯವಾಗಿ ಸೋತ ಬಿಜೆಪಿಗೆ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. (Photo/HT web)
(3 / 7)
ಬಿಜೆಪಿ ಬಾವುಟಗಳ ಮೂಟೆ ಹೊತ್ತ ಎತ್ತಿನ ಬಂಡೆ ಜತೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕರೆದುಕೊಂಡು ಹೊರಟಿದ್ದಾರೆ. ಚಿತ್ರದಲ್ಲಿ ಎತ್ತಿನ ಬಂಡಿಯನ್ನು ಅಮಿತ್ ಶಾ ಮುನ್ನಡೆಸುತ್ತಿದ್ದಾರೆ. (Photo/HT web)
(4 / 7)
ಈ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್, ದ್ವೇಷ, ಬೂಟಾಟಿಕೆಯನ್ನು, ಓದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು.. ಬೆತ್ತಲೆಯಾದ ಚಕ್ರವರ್ತಿ ಎಂದು ಟ್ವಿಟ್ ಮಾಡಿದ್ದಾರೆ. (Photo/HT web)
(5 / 7)
ಕರ್ನಾಟಕದಲ್ಲಿ ಚುನಾವಣೆ ಕಾವು ಜೋರಾಗುತ್ತಿದ್ದಂತೆ, ಪ್ರಧಾನಿ ಮೋದಿ ಹಲವು ರೋಡ್ ಶೋಗಳನ್ನು ನಡೆಸಿದ್ದರು. ಆಗಲೇ ಕರ್ನಾಟಕದಲ್ಲಿ ಮೋದಿಯ ಬಗ್ಗೆ ಟೀಕೆ ಮಾಡಿದ್ದರು ಪ್ರಕಾಶ್ ರಾಜ್. (Photo/HT web)
(6 / 7)
ನಟ ಕಿಚ್ಚ ಸುದೀಪ್ ಬಿಜೆಪಿಗೆ ಕೈ ಜೋಡಿಸುತ್ತಿದ್ದಂತೆ ಅವರ ಬಗ್ಗೆಯೂ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದರು ಪ್ರಕಾಶ್ ರಾಜ್. (Photo/HT web)
ಇತರ ಗ್ಯಾಲರಿಗಳು