Karnataka Kumbh Mela 2025: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ಶಿವಸ್ತುತಿ ನಿನಾದ: ಹೀಗಿದ್ದವು ಅಪರೂಪದ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Kumbh Mela 2025: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ಶಿವಸ್ತುತಿ ನಿನಾದ: ಹೀಗಿದ್ದವು ಅಪರೂಪದ ಕ್ಷಣಗಳು

Karnataka Kumbh Mela 2025: ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕಾವೇರಿ ಆರತಿ, ಶಿವಸ್ತುತಿ ನಿನಾದ: ಹೀಗಿದ್ದವು ಅಪರೂಪದ ಕ್ಷಣಗಳು

  • ಮೈಸೂರು ಜಿಲ್ಲೆಯ ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಭಾಗವಾಗಿ ಕಾವೇರಿ ಆರತಿಯ ವೈಭವ ಮಂಗಳವಾರ ರಾತ್ರಿ ಗಮನ ಸೆಳೆಯಿತು. ಈ ವೇಳೆ ನಡೆದ ಅಲ್ಲಿನ ಕ್ಷಣಗಳು ಹೀಗಿದ್ದವು.

ತಿ,ನರಸೀಪುರ ಕುಂಭಮೇಳದ ಭಾಗವಾಗಿ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು, ಗಂಟೆಗಳ ನಾದವನ್ನು ಹೊಮ್ಮಿಸಿತು. ಶಿವಸ್ತುತಿ ನಿನಾದವೂ ನದಿಯ ಹಿನ್ನೆಲೆಯಲ್ಲಿ ಕೇಳಿ ಬಂದಿತು ಚಾಮರಗಳನ್ನು ಬೀಸಿದರು.  
icon

(1 / 10)

ತಿ,ನರಸೀಪುರ ಕುಂಭಮೇಳದ ಭಾಗವಾಗಿ ಕಾವೇರಿ ಆರತಿ ಓಂಕಾರದ ಮೂಲಕದ ಚಾಲನೆ ದೊರಕಿತು. ದೂಪಾರತಿಯನ್ನು ಮಾಡಿದ ಅರ್ಚಕರ ತಂಡವು, ಗಂಟೆಗಳ ನಾದವನ್ನು ಹೊಮ್ಮಿಸಿತು. ಶಿವಸ್ತುತಿ ನಿನಾದವೂ ನದಿಯ ಹಿನ್ನೆಲೆಯಲ್ಲಿ ಕೇಳಿ ಬಂದಿತು ಚಾಮರಗಳನ್ನು ಬೀಸಿದರು.  

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಗಮನ ಸೆಳೆದ ಕಾವೇರಿ ಆರತಿ ವೈಭವ.
icon

(2 / 10)

ಮೈಸೂರು ಜಿಲ್ಲೆ ತಿ.ನರಸೀಪುರದಲ್ಲಿ ಆಯೋಜನೆಗೊಂಡಿರುವ ಕುಂಭಮೇಳದಲ್ಲಿ ಮಂಗಳವಾರ ರಾತ್ರಿ ಗಮನ ಸೆಳೆದ ಕಾವೇರಿ ಆರತಿ ವೈಭವ.
(prajavani)

ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಅಂಗವಾಗಿ ಮಂಗಳವಾರ ರಾತ್ರಿ ಕಾವೇರಿ ಆರತಿ ಭಕ್ತರನ್ನು ಸೆಳೆಯಿತು. ಒಂದುಗಂಟೆಗೂ ಹೆಚ್ಚು ಕಾಲ ಭಕ್ತಲೋಕವನ್ನೇ ಸೃಷ್ಟಿಸಿತು.
icon

(3 / 10)

ತಿ.ನರಸೀಪುರ ತ್ರಿವೇಣಿ ಸಂಗಮದಲ್ಲಿ ಕುಂಭಮೇಳದ ಅಂಗವಾಗಿ ಮಂಗಳವಾರ ರಾತ್ರಿ ಕಾವೇರಿ ಆರತಿ ಭಕ್ತರನ್ನು ಸೆಳೆಯಿತು. ಒಂದುಗಂಟೆಗೂ ಹೆಚ್ಚು ಕಾಲ ಭಕ್ತಲೋಕವನ್ನೇ ಸೃಷ್ಟಿಸಿತು.

ಕುಂಭಮೇಳದ ಕಾವೇರಿ ಆರತಿಯಲ್ಲಿ ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು. 
icon

(4 / 10)

ಕುಂಭಮೇಳದ ಕಾವೇರಿ ಆರತಿಯಲ್ಲಿ ಶಿವಸ್ತುತಿಯು ಮೊಳಗುತ್ತಿದ್ದಂತೆ ದೀಪಗಳನ್ನು ಒಂಭತ್ತು ಅರ್ಚಕರು ಹೊತ್ತಿಸಿದರು. ಕಾವೇರಿ ಮಾತೆಗೆ ಮೂರು ಸುತ್ತು ಬೆಳಗಿ, ಆಗಸಕ್ಕೆ ತೋರಿದರು. ನೋಡುತ್ತಿದ್ದ ಭಕ್ತರು, ಕೈ ಮುಗಿದರು. ‘ಕಾಲಭೈರವ’, ‘ರುದ್ರ’ ಶ್ಲೋಕಗಳ ಗೀತೆಗಳ ಹಿಮ್ಮೇಳವು ಭಾವ ತೀವ್ರತೆಯನ್ನು ಹೆಚ್ಚಿಸಿತು. 

ತಿನರಸೀಪುರ ಕುಂಭಮೇಳದ ಕಾವೇರಿ ಆರತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ವಿವಿಧ ಮಠಾಧೀಶರು ಭಾಗಿಯಾದರು.
icon

(5 / 10)

ತಿನರಸೀಪುರ ಕುಂಭಮೇಳದ ಕಾವೇರಿ ಆರತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ವಿವಿಧ ಮಠಾಧೀಶರು ಭಾಗಿಯಾದರು.

ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ  ಹರಿದು ಬಂದಿದ್ದ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು
icon

(6 / 10)

ದಕ್ಷಿಣ ಪ್ರಯಾಗ ಎಂದೇ ಪ್ರಸಿದ್ಧಿ ಪಡೆದಿರುವ ಮೈಸೂರು ಜಿಲ್ಲೆಯ ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ  ಹರಿದು ಬಂದಿದ್ದ ಭಕ್ತ ಸಾಗರವು ‘ಕಾವೇರಿ ಆರತಿ’ಯ ಬೆಳಗನ್ನು ಕಣ್ತುಂಬಿಕೊಂಡಿತು

ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಮೈಸೂರು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಬರ ಮಾಡಿಕೊಂಡರು.
icon

(7 / 10)

ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಮೈಸೂರು ಡಿಸಿ ಲಕ್ಷ್ಮಿಕಾಂತ ರೆಡ್ಡಿ ಬರ ಮಾಡಿಕೊಂಡರು.

ಮಹಾಕುಂಭಮೇಳದ ಪುಣ್ಯಸ್ನಾನ ಮಾಡಿ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿ ದೋಣಿಯಲ್ಲಿ ಹೊರಟರು.
icon

(8 / 10)

ಮಹಾಕುಂಭಮೇಳದ ಪುಣ್ಯಸ್ನಾನ ಮಾಡಿ ಬಂದಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ತಿ.ನರಸೀಪುರ ಕುಂಭಮೇಳಕ್ಕೆ ಆಗಮಿಸಿ ದೋಣಿಯಲ್ಲಿ ಹೊರಟರು.

ಕಾವೇರಿ ನದಿ, ಕಪಿಲಾ ನದಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಪೂಜೆಗಳನ್ನು ಸಲ್ಲಿಸಿದರು.
icon

(9 / 10)

ಕಾವೇರಿ ನದಿ, ಕಪಿಲಾ ನದಿಯ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಪೂಜೆಗಳನ್ನು ಸಲ್ಲಿಸಿದರು.

ಡಿಕೆ ಶಿವಕುಮಾರ್‌ ಅವರು ಕಾವೇರಿ ಆರತಿಯನ್ನೂ ವೀಕ್ಷಿಸಿ ಬಹಳ ಹೊತ್ತಿನವರೆಗೂ ಕುಂಭಮೇಳದಲ್ಲಿಯೇ ಇದ್ದರು.
icon

(10 / 10)

ಡಿಕೆ ಶಿವಕುಮಾರ್‌ ಅವರು ಕಾವೇರಿ ಆರತಿಯನ್ನೂ ವೀಕ್ಷಿಸಿ ಬಹಳ ಹೊತ್ತಿನವರೆಗೂ ಕುಂಭಮೇಳದಲ್ಲಿಯೇ ಇದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು