2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋಲು ಅನುಭವಿಸಿದ 8 ಪ್ರಮುಖರು: ಪ್ರಜ್ವಲ್‌ ರೇವಣ್ಣರಿಂದ ಭಗವಂತ ಖೂಬಾರವರೆಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋಲು ಅನುಭವಿಸಿದ 8 ಪ್ರಮುಖರು: ಪ್ರಜ್ವಲ್‌ ರೇವಣ್ಣರಿಂದ ಭಗವಂತ ಖೂಬಾರವರೆಗೆ

2024 ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸೋಲು ಅನುಭವಿಸಿದ 8 ಪ್ರಮುಖರು: ಪ್ರಜ್ವಲ್‌ ರೇವಣ್ಣರಿಂದ ಭಗವಂತ ಖೂಬಾರವರೆಗೆ

  • ಕರ್ನಾಟಕದ ಲೋಕಸಭೆ ಚುನಾವಣೆ 2024 ರಲ್ಲಿ ಹಲವರು ಗೆದ್ದರೆ, ಪ್ರಮುಖರು ಕೂಡ ಸೋಲು ಅನುಭವಿಸಿದರು. ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ನ ಪ್ರಮುಖರು ಸೋಲು ಕಂಡರು. ಅವರ ಪಟ್ಟಿ ಇಲ್ಲಿದೆ.

2024 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಲವು ಪ್ರಮುಖರು ಸೋಲು ಅನುಭವಿಸಿದರು.
icon

(1 / 9)

2024 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಹಲವು ಪ್ರಮುಖರು ಸೋಲು ಅನುಭವಿಸಿದರು.

ನಟ ಶಿವರಾಜಕುಮಾರ್‌ ಪತ್ನಿ, ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್‌ ಶಿವಮೊಗ್ಗದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ದ ಸೋತರು. ಹಿಂದೊಮ್ಮೆ ಜೆಡಿಎಸ್‌ನಿಂದಲೂ ಅವರು ಸೋತಿದ್ದರು.
icon

(2 / 9)

ನಟ ಶಿವರಾಜಕುಮಾರ್‌ ಪತ್ನಿ, ಮಾಜಿ ಸಿಎಂ ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್‌ ಶಿವಮೊಗ್ಗದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ದ ಸೋತರು. ಹಿಂದೊಮ್ಮೆ ಜೆಡಿಎಸ್‌ನಿಂದಲೂ ಅವರು ಸೋತಿದ್ದರು.

ಹಾಸನದಲ್ಲಿ ಜೆಡಿಎಸ್‌ ನಿಂದ ಸಂಸದರಾಗಿದ್ದ ಯುವ ನಾಯಕ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಚುನಾವಣೆಗೂ ಮುನ್ನ ಸಿಡಿ ಪ್ರಕರಣದಲ್ಲಿ ಸಿಲುಕಿ ಸೋಲು ಕಂಡರು. ಇಲ್ಲಿ ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ ಗೆದ್ದರು.
icon

(3 / 9)

ಹಾಸನದಲ್ಲಿ ಜೆಡಿಎಸ್‌ ನಿಂದ ಸಂಸದರಾಗಿದ್ದ ಯುವ ನಾಯಕ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಚುನಾವಣೆಗೂ ಮುನ್ನ ಸಿಡಿ ಪ್ರಕರಣದಲ್ಲಿ ಸಿಲುಕಿ ಸೋಲು ಕಂಡರು. ಇಲ್ಲಿ ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ ಗೆದ್ದರು.

ಕೇಂದ್ರದಲ್ಲಿ ಸಚಿವರಾಗಿದ್ದ, ಎರಡು ಬಾರಿ ಬೀದರ್‌ನಿಂದ ಬಿಜೆಪಿ ಸಂಸದರಾಗಿದ್ದ ಭಗವಂತ ಖೂಬಾ ಇಲ್ಲಿ ಯುವಕ ಸಾಗರ್‌ ಖಂಡ್ರೆ ವಿರುದ್ದ ಸೋತರು. ಹಿಂದೆ ಸಾಗರ್‌ ತಂದೆ ಈಶ್ವರ ಖಂಡ್ರೆ ಅವರನ್ನು ಖೂಬಾ ಸೋಲಿಸಿದ್ದರು.
icon

(4 / 9)

ಕೇಂದ್ರದಲ್ಲಿ ಸಚಿವರಾಗಿದ್ದ, ಎರಡು ಬಾರಿ ಬೀದರ್‌ನಿಂದ ಬಿಜೆಪಿ ಸಂಸದರಾಗಿದ್ದ ಭಗವಂತ ಖೂಬಾ ಇಲ್ಲಿ ಯುವಕ ಸಾಗರ್‌ ಖಂಡ್ರೆ ವಿರುದ್ದ ಸೋತರು. ಹಿಂದೆ ಸಾಗರ್‌ ತಂದೆ ಈಶ್ವರ ಖಂಡ್ರೆ ಅವರನ್ನು ಖೂಬಾ ಸೋಲಿಸಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿದ್ದ, ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್‌ ಈ ಬಾರಿ ಖ್ಯಾತ ವೈದ್ಯ ಡಾ.ಸಿ.ಎನ್‌.ಮಂಜುನಾಥ್‌ ವಿರುದ್ದ ಸೋಲು ಅನುಭವಿಸಿದರು.
icon

(5 / 9)

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೂರು ಬಾರಿ ಸಂಸದರಾಗಿದ್ದ, ಡಿಸಿಎಂ ಡಿಕೆಶಿ ಸಹೋದರ ಡಿಕೆ ಸುರೇಶ್‌ ಈ ಬಾರಿ ಖ್ಯಾತ ವೈದ್ಯ ಡಾ.ಸಿ.ಎನ್‌.ಮಂಜುನಾಥ್‌ ವಿರುದ್ದ ಸೋಲು ಅನುಭವಿಸಿದರು.

ಬಳ್ಳಾರಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಇ.ತುಕಾರಂ ವಿರುದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಸೋಲು ಕಂಡರು. ಹಿಂದೆ ಇಲ್ಲಿಂದಲೇ ಒಮ್ಮೆ ಅವರು ಸಂಸದರಾಗಿದ್ದರು.
icon

(6 / 9)

ಬಳ್ಳಾರಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಇ.ತುಕಾರಂ ವಿರುದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಸೋಲು ಕಂಡರು. ಹಿಂದೆ ಇಲ್ಲಿಂದಲೇ ಒಮ್ಮೆ ಅವರು ಸಂಸದರಾಗಿದ್ದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ ನಾಯಕ,,ಮಾಜಿ ಸ್ಪೀಕರ್‌ ವೆಂಕಟಪ್ಪ ಅವರ ಪುತ್ರ ಪ್ರೊ. ರಾಜೀವ್‌ಗೌಡ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಸೋತರು.
icon

(7 / 9)

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಕಾಂಗ್ರೆಸ್‌ ನಾಯಕ,,ಮಾಜಿ ಸ್ಪೀಕರ್‌ ವೆಂಕಟಪ್ಪ ಅವರ ಪುತ್ರ ಪ್ರೊ. ರಾಜೀವ್‌ಗೌಡ ಅವರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಸೋತರು.

ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಕಣಕ್ಕಿಳಿದಿದ್ದ ಜಯಪ್ರಕಾಶ್‌ ಹೆಗ್ಡೆ ಹಿರಿಯ ಬಿಜೆಪಿ ನಾಯಕ ಕೋಟಾ ಶ್ರೀನಿವಾಸಪೂಜಾರಿ ವಿರುದ್ದ ಸೋಲನುಭವಿಸಿದರು.
icon

(8 / 9)

ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಿಂದ ಕಣಕ್ಕಿಳಿದಿದ್ದ ಜಯಪ್ರಕಾಶ್‌ ಹೆಗ್ಡೆ ಹಿರಿಯ ಬಿಜೆಪಿ ನಾಯಕ ಕೋಟಾ ಶ್ರೀನಿವಾಸಪೂಜಾರಿ ವಿರುದ್ದ ಸೋಲನುಭವಿಸಿದರು.

ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಶಾಸಕರಾಗಿ. ಸಂಸದರೂ ಆಗಿದ್ದ ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್‌ ನಿಂದ ಕಣಕ್ಕಿಳಿದು ವಿ.ಸೋಮಣ್ಣ ವಿರುದ್ದ ಸೋತರು,
icon

(9 / 9)

ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಶಾಸಕರಾಗಿ. ಸಂಸದರೂ ಆಗಿದ್ದ ಮುದ್ದಹನುಮೇಗೌಡ ಅವರು ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್‌ ನಿಂದ ಕಣಕ್ಕಿಳಿದು ವಿ.ಸೋಮಣ್ಣ ವಿರುದ್ದ ಸೋತರು,


ಇತರ ಗ್ಯಾಲರಿಗಳು