ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿ ಕಣಿವೆಯಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯವು ಬೇಸಿಗೆಯಲ್ಲೂ ಹೆಚ್ಚಿನ ನೀರಿನ ಸಂಗ್ರಹವನ್ನು ಈ ಬಾರಿ ಹೊಂದಿದೆ. ಚಿತ್ರಗಳು: ಲಕ್ಷ್ಮಿ ಮಂಜುನಾಥ್, ವಿವಿಪುರ
(1 / 8)
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಶೇ. 91ರಷ್ಟು ನೀರು ಜಲಾಶಯದಲ್ಲಿದೆ.
(2 / 8)
ಹಿರಿಯೂರು ತಾಲ್ಲೂಕಿನಲ್ಲಿರುವ ಹಸಿರು ಗುಡ್ಡಗಳ ನಡುವೆ ಇರುವ ಈ ಜಲಾಶಯದ ನೋಟವೂ ಚೆನ್ನಾಗಿದೆ. ಮೇಲ್ಭಾಗದಿಂದ ನೋಡಿದರೆ ಭಾರತದ ಬಾವುಟದಂತೆ ಕಾಣಿಸಲಿದೆ.
(Rajneet kate)(3 / 8)
ಹಿರಿಯೂರಿನ ವಿ. ವಿ.ಪುರ ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಕಳೆದ ವರ್ಷ ಭರ್ತಿಯಾಗಿತ್ತು. ಈ ಕಾರಣದಿಂದ ಈ ಬಾರಿ ಜಲಾಶಯದಲ್ಲಿ ನೀರು ಈಗಲೂ ಇದೆ.
(4 / 8)
ವೇದಾವತಿ ನದಿಯು ವೇದ ಮತ್ತು ಆವತಿಯು ವೇದಾವತಿ ನದಿಯ ಎರಡು ಉಪನದಿಗಳು ಪಶ್ಚಿಮ ಘಟ್ಟಗಳಲ್ಲಿನ ಬಾಬಾಬುಡನ್ಗಿರಿ ಪರ್ವತಗಳಿಂದ ಉಗಮಿಸುತ್ತವೆ ಮತ್ತು ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹರಿಯುತ್ತವೆ.
(5 / 8)
ವಿವಿ ಸಾಗರ ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ನಂತರ ಸಿರುಗುಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಸೇರುತ್ತದೆ. ಈ ಬಾರಿಯೂ ಕೋಡಿ ಬಿದ್ದಿದೆ.
(6 / 8)
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬರಪೀಡಿತ ಪ್ರದೇಶಗಳಲ್ಲಿ 12,135 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಉದ್ದೇಶ. ಅದನ್ನು ಈ ಜಲಾಶಯ ಈಡೇರಿಸಿಕೊಂಡು ಬರುತ್ತಿದೆ.
(7 / 8)
ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರಲ್ಲಿರುವ ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದ್ದು, ಪ್ರವಾಸಿಗರನ್ನು ಬೇಸಿಗೆಯಲ್ಲಿ ಕೈ ಬೀಸಿ ಕರೆಯುತ್ತಿದೆ. ಈ ಬಾರಿ ಹೆಚ್ಚಿನ ನೀರು ಇರುವುದರಿಂದ ಪ್ರವಾಸಿಗರು ಹೆಚ್ಚು ಬರುತ್ತಿದ್ದಾರೆ.
ಇತರ ಗ್ಯಾಲರಿಗಳು