ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ

ಕರ್ನಾಟಕದಲ್ಲಿ ಬೇಸಿಗೆಯಲ್ಲೂ ಹೆಚ್ಚು ನೀರು ಹೊಂದಿರುವ ಜಲಾಶಯವಿದು, 118 ವರ್ಷದಲ್ಲಿ ತುಂಬಿದ್ದು ಮೂರೇ ಬಾರಿ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿ ಕಣಿವೆಯಲ್ಲಿರುವ ವಾಣಿ ವಿಲಾಸ ಸಾಗರ ಜಲಾಶಯವು ಬೇಸಿಗೆಯಲ್ಲೂ ಹೆಚ್ಚಿನ ನೀರಿನ ಸಂಗ್ರಹವನ್ನು ಈ ಬಾರಿ ಹೊಂದಿದೆ. ಚಿತ್ರಗಳು: ಲಕ್ಷ್ಮಿ ಮಂಜುನಾಥ್‌, ವಿವಿಪುರ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42  ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಶೇ. 91ರಷ್ಟು ನೀರು ಜಲಾಶಯದಲ್ಲಿದೆ.
icon

(1 / 8)

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ 1907 ರಲ್ಲಿ ನಿರ್ಮಾಣಗೊಂಡ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ಈ ಬಾರಿ ಹೆಚ್ಚಿನ ನೀರಿದೆ. ಸದ್ಯ 27.82 ಟಿಎಂಸಿ ಸಂಗ್ರಹವಿದೆ. ಜಲಾಶಯದಲ್ಲಿ 30.42 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಶೇ. 91ರಷ್ಟು ನೀರು ಜಲಾಶಯದಲ್ಲಿದೆ.

ಹಿರಿಯೂರು ತಾಲ್ಲೂಕಿನಲ್ಲಿರುವ ಹಸಿರು ಗುಡ್ಡಗಳ ನಡುವೆ ಇರುವ ಈ ಜಲಾಶಯದ ನೋಟವೂ ಚೆನ್ನಾಗಿದೆ. ಮೇಲ್ಭಾಗದಿಂದ ನೋಡಿದರೆ ಭಾರತದ ಬಾವುಟದಂತೆ ಕಾಣಿಸಲಿದೆ.
icon

(2 / 8)

ಹಿರಿಯೂರು ತಾಲ್ಲೂಕಿನಲ್ಲಿರುವ ಹಸಿರು ಗುಡ್ಡಗಳ ನಡುವೆ ಇರುವ ಈ ಜಲಾಶಯದ ನೋಟವೂ ಚೆನ್ನಾಗಿದೆ. ಮೇಲ್ಭಾಗದಿಂದ ನೋಡಿದರೆ ಭಾರತದ ಬಾವುಟದಂತೆ ಕಾಣಿಸಲಿದೆ.
(Rajneet kate)

ಹಿರಿಯೂರಿನ ವಿ. ವಿ.ಪುರ ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಕಳೆದ ವರ್ಷ ಭರ್ತಿಯಾಗಿತ್ತು. ಈ ಕಾರಣದಿಂದ ಈ ಬಾರಿ ಜಲಾಶಯದಲ್ಲಿ ನೀರು ಈಗಲೂ ಇದೆ.
icon

(3 / 8)

ಹಿರಿಯೂರಿನ ವಿ. ವಿ.ಪುರ ವಾಣಿವಿಲಾಸ ಜಲಾಶಯ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಕಳೆದ ವರ್ಷ ಭರ್ತಿಯಾಗಿತ್ತು. ಈ ಕಾರಣದಿಂದ ಈ ಬಾರಿ ಜಲಾಶಯದಲ್ಲಿ ನೀರು ಈಗಲೂ ಇದೆ.

ವೇದಾವತಿ ನದಿಯು ವೇದ ಮತ್ತು ಆವತಿಯು ವೇದಾವತಿ ನದಿಯ ಎರಡು ಉಪನದಿಗಳು ಪಶ್ಚಿಮ ಘಟ್ಟಗಳಲ್ಲಿನ ಬಾಬಾಬುಡನ್‌ಗಿರಿ ಪರ್ವತಗಳಿಂದ ಉಗಮಿಸುತ್ತವೆ ಮತ್ತು ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹರಿಯುತ್ತವೆ.
icon

(4 / 8)

ವೇದಾವತಿ ನದಿಯು ವೇದ ಮತ್ತು ಆವತಿಯು ವೇದಾವತಿ ನದಿಯ ಎರಡು ಉಪನದಿಗಳು ಪಶ್ಚಿಮ ಘಟ್ಟಗಳಲ್ಲಿನ ಬಾಬಾಬುಡನ್‌ಗಿರಿ ಪರ್ವತಗಳಿಂದ ಉಗಮಿಸುತ್ತವೆ ಮತ್ತು ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹರಿಯುತ್ತವೆ.

ವಿವಿ ಸಾಗರ ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ನಂತರ ಸಿರುಗುಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಸೇರುತ್ತದೆ. ಈ ಬಾರಿಯೂ ಕೋಡಿ ಬಿದ್ದಿದೆ.
icon

(5 / 8)

ವಿವಿ ಸಾಗರ ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ನಂತರ ಸಿರುಗುಪ್ಪ ತಾಲ್ಲೂಕು ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಸೇರುತ್ತದೆ. ಈ ಬಾರಿಯೂ ಕೋಡಿ ಬಿದ್ದಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬರಪೀಡಿತ ಪ್ರದೇಶಗಳಲ್ಲಿ 12,135 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಉದ್ದೇಶ. ಅದನ್ನು ಈ ಜಲಾಶಯ ಈಡೇರಿಸಿಕೊಂಡು ಬರುತ್ತಿದೆ.
icon

(6 / 8)

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬರಪೀಡಿತ ಪ್ರದೇಶಗಳಲ್ಲಿ 12,135 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವುದು ವಾಣಿ ವಿಲಾಸ ಸಾಗರ ಯೋಜನೆಯ ಮುಖ್ಯ ಉದ್ದೇಶ. ಅದನ್ನು ಈ ಜಲಾಶಯ ಈಡೇರಿಸಿಕೊಂಡು ಬರುತ್ತಿದೆ.

ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರಲ್ಲಿರುವ ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದ್ದು, ಪ್ರವಾಸಿಗರನ್ನು ಬೇಸಿಗೆಯಲ್ಲಿ ಕೈ ಬೀಸಿ ಕರೆಯುತ್ತಿದೆ. ಈ ಬಾರಿ ಹೆಚ್ಚಿನ ನೀರು ಇರುವುದರಿಂದ ಪ್ರವಾಸಿಗರು ಹೆಚ್ಚು ಬರುತ್ತಿದ್ದಾರೆ.
icon

(7 / 8)

ಹಿರಿಯೂರು ಪಟ್ಟಣದಿಂದ 18 ಕಿ.ಮೀ ದೂರಲ್ಲಿರುವ ವಿವಿ ಸಾಗರ ರಾಜ್ಯದ ವಿಶಿಷ್ಟ ಜಲಾಶಯವಾಗಿದ್ದು, ಪ್ರವಾಸಿಗರನ್ನು ಬೇಸಿಗೆಯಲ್ಲಿ ಕೈ ಬೀಸಿ ಕರೆಯುತ್ತಿದೆ. ಈ ಬಾರಿ ಹೆಚ್ಚಿನ ನೀರು ಇರುವುದರಿಂದ ಪ್ರವಾಸಿಗರು ಹೆಚ್ಚು ಬರುತ್ತಿದ್ದಾರೆ.

ವೇದಾವತಿ ನದಿಗೆ ಅಡ್ಡಲಾಗಿ 1897 ರಿಂದ 1907 ರ ಅವಧಿಯಲ್ಲಿ ಮೈಸೂರು ಮಹಾರಾಜರಾಗಿದ್ದ ಕೃಷ್ಣ ರಾಜ ಒಡೆಯರ್ ಬಹದ್ದೂರ್ ಅವರ "ಕೆಂಪ ನಂಜಮ್ಮಣ್ಣಿ ವಾಣಿ ವಿಲಸಾ  ಸನ್ನಿಧಾನ " ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ.
icon

(8 / 8)

ವೇದಾವತಿ ನದಿಗೆ ಅಡ್ಡಲಾಗಿ 1897 ರಿಂದ 1907 ರ ಅವಧಿಯಲ್ಲಿ ಮೈಸೂರು ಮಹಾರಾಜರಾಗಿದ್ದ ಕೃಷ್ಣ ರಾಜ ಒಡೆಯರ್ ಬಹದ್ದೂರ್ ಅವರ "ಕೆಂಪ ನಂಜಮ್ಮಣ್ಣಿ ವಾಣಿ ವಿಲಸಾ ಸನ್ನಿಧಾನ " ಅವರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು