Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ Photos

Karnataka Rains: ಕರುನಾಡಲ್ಲಿ ಭಾರೀ ಮಳೆ, ತುಂಬಿ ಹರಿಯುತ್ತಿವೆ ಬಹುತೇಕ ಹೊಳೆ, ಹೀಗಿದೆ ನೋಡಿ ಜಲ ಕಳೆ photos

  • Karnataka Rivers ಕರ್ನಾಟಕದ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ಅವುಗಳ ನೋಟ ಇಲ್ಲಿದೆ. 

ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.
icon

(1 / 9)

ಚಿಕ್ಕಮಗಳೂರು ಜಿಲ್ಲೆಯ ಕಳಸ ಬಳಿಯಲ್ಲಿ ಭದ್ರಾ ನದಿ ತುಂಬಿ ಹರಿಯುತ್ತಿದೆ. ಆ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಭದ್ರಾ ನದಿಗೆ ಹೆಚ್ಚಿನ ನೀರು ಬರುತ್ತಿದೆ. ಭದ್ರಾ ಜಲಾಶಯಕ್ಕೂ ಒಳ ಹರಿವು ಹೆಚ್ಚಿದೆ.
(ನವೀನ್‌ ರೆಡ್ಡಿ)

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯಲ್ಲಿ ಕಾಳಿ ನದಿ ಹರಿವು ಜೋರಾಗಿದೆ. ಉತ್ತರ ಕನ್ನಡದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾಳಿ ನದಿಯಲ್ಲಿ ಹೆಚ್ಚಿನ ನೀರಿದೆ.
icon

(2 / 9)

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಬಳಿಯಲ್ಲಿ ಕಾಳಿ ನದಿ ಹರಿವು ಜೋರಾಗಿದೆ. ಉತ್ತರ ಕನ್ನಡದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾಳಿ ನದಿಯಲ್ಲಿ ಹೆಚ್ಚಿನ ನೀರಿದೆ.
(ಪ್ರಶಾಂತ್‌)

ಕೇರಳದಲ್ಲಿ ಭಾರೀ ಮಳೆಯಾಗಿ ಕಪಿಲಾ ನದಿ ತುಂಬಿದೆ. ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮೈಸೂರು ಜಿಲ್ಲೆ ನಂಜನಗೂಡು ಮಲ್ಲನಮೂಲೆ ಬಳಿ ಕಪಿಲಾ ನದಿ ಕಂಡಿದ್ದು ಹೀಗೆ.
icon

(3 / 9)

ಕೇರಳದಲ್ಲಿ ಭಾರೀ ಮಳೆಯಾಗಿ ಕಪಿಲಾ ನದಿ ತುಂಬಿದೆ. ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದರಿಂದ ಮೈಸೂರು ಜಿಲ್ಲೆ ನಂಜನಗೂಡು ಮಲ್ಲನಮೂಲೆ ಬಳಿ ಕಪಿಲಾ ನದಿ ಕಂಡಿದ್ದು ಹೀಗೆ.

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿ ಕೃಷ್ಣಾ ನದಿ ತುಂಬಿ ಬರುತ್ತಿದೆ. ಈಗಾಗಲೇ ಆಲಮಟ್ಟಿಯಿಂದಲೂ ನೀರು ಹರಿ ಬಿಡುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ.
icon

(4 / 9)

ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿ ಕೃಷ್ಣಾ ನದಿ ತುಂಬಿ ಬರುತ್ತಿದೆ. ಈಗಾಗಲೇ ಆಲಮಟ್ಟಿಯಿಂದಲೂ ನೀರು ಹರಿ ಬಿಡುತ್ತಿರುವುದರಿಂದ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಬಳಿಯಲ್ಲಿ ತುಂಗಾ ನದಿ ಭಾರೀ ಜೋರಾಗಿಯೇ ಹರಿಯುತ್ತಿದೆ, ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ ನೀರಿನ ಮಟ್ಟ ಏರಿಕೆ ಕಂಡಿದೆ.
icon

(5 / 9)

ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಬಳಿಯಲ್ಲಿ ತುಂಗಾ ನದಿ ಭಾರೀ ಜೋರಾಗಿಯೇ ಹರಿಯುತ್ತಿದೆ, ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ತುಂಗಾ ನೀರಿನ ಮಟ್ಟ ಏರಿಕೆ ಕಂಡಿದೆ.

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನದ ಮಳೆಯಿಂದ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಬಳಿ ಕುಮಾರಧಾರ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
icon

(6 / 9)

ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹಾಸನದ ಮಳೆಯಿಂದ ಕಡಬ ತಾಲ್ಲೂಕಿನ ಸುಬ್ರಹ್ಮಣ್ಯ ಬಳಿ ಕುಮಾರಧಾರ ನದಿ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
(ಅಕ್ಷತಾ ಉಚ್ಚಂಗಿ)

ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿನ ಮಳೆಯಿಂದಾಗಿ ಹೇಮಾವತಿ ನದಿ ಕೂಡ ಹೆಚ್ಚು ನೀರು ಕಂಡಿದೆ. ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ.
icon

(7 / 9)

ಚಿಕ್ಕಮಗಳೂರು ಹಾಗೂ ಹಾಸನ ಭಾಗದಲ್ಲಿನ ಮಳೆಯಿಂದಾಗಿ ಹೇಮಾವತಿ ನದಿ ಕೂಡ ಹೆಚ್ಚು ನೀರು ಕಂಡಿದೆ. ಜಲಾಶಯಕ್ಕೂ ಹೆಚ್ಚಿನ ನೀರು ಹರಿದು ಬರುತ್ತಿದೆ.

ಮಲೆನಾಡಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಶಿಕಾರಿಪುರ ಗಡಿ ಭಾಗದ ಚೋರಡಿ ಬಳಿ ಕುಮದ್ವತಿ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 
icon

(8 / 9)

ಮಲೆನಾಡಿನಲ್ಲಿ ಎಡಬಿಡದೇ ಮಳೆಯಾಗುತ್ತಿರುವುದರಿಂದ ಶಿವಮೊಗ್ಗ ಶಿಕಾರಿಪುರ ಗಡಿ ಭಾಗದ ಚೋರಡಿ ಬಳಿ ಕುಮದ್ವತಿ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಮೈಸೂರು ಹಾಗೂ ಹಾಸನ ಹೆದ್ದಾರಿಯ ಕೃಷ್ಣರಾಜನಗರ ಬಳಿ ಕಾವೇರಿ ಹೊಳೆ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.
icon

(9 / 9)

ಮೈಸೂರು ಹಾಗೂ ಹಾಸನ ಹೆದ್ದಾರಿಯ ಕೃಷ್ಣರಾಜನಗರ ಬಳಿ ಕಾವೇರಿ ಹೊಳೆ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ.


ಇತರ ಗ್ಯಾಲರಿಗಳು