ಕರ್ನಾಟಕದ ಈ ಹಿರಿಯ ಶಾಸಕರು ಸಚಿವರಾಗಲೇ ಇಲ್ಲ; 10 ನಾಯಕರ ಪಟ್ಟಿಯಲ್ಲಿ ಯಾರಿದ್ದಾರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದ ಈ ಹಿರಿಯ ಶಾಸಕರು ಸಚಿವರಾಗಲೇ ಇಲ್ಲ; 10 ನಾಯಕರ ಪಟ್ಟಿಯಲ್ಲಿ ಯಾರಿದ್ದಾರೆ

ಕರ್ನಾಟಕದ ಈ ಹಿರಿಯ ಶಾಸಕರು ಸಚಿವರಾಗಲೇ ಇಲ್ಲ; 10 ನಾಯಕರ ಪಟ್ಟಿಯಲ್ಲಿ ಯಾರಿದ್ದಾರೆ

ಕರ್ನಾಟಕದ ವಿವಿಧ ಪಕ್ಷಗಳಿಂದ ಗೆದ್ದ ಈ ಶಾಸಕರು ಸಚಿವರಾಗಬೇಕಿತ್ತು. ಕೆಲವರು ಶಾಸಕರಾಗಿಯೇ ಉಳಿದು ನಿಧನರಾದರು. ಇನ್ನು ಕೆಲವರು ನಿವೃತ್ತರಾದರು. ಹಲವರು ಆಯ್ಕೆಯಾದರೂ ಸಚಿವರಾಗಿಯೇ ಇಲ್ಲ. ಅಂತವರ ಪಟ್ಟಿ ಇಲ್ಲಿದೆ.

ನಾಲ್ಕೈದು ದಶಕಗಳ ಹಿಂದೆಯೇ ಬಿಜೆಪಿಯಲ್ಲಿ ಗಟ್ಟಿಯಾಗಿ ನೆಲೆಯೂರಿ ಹಾಸನ ಜಿಲ್ಲೆ ಸಕಲೇಶಪುರ ಶಾಸಕರಾಗಿ, ವಿಧಾನಪರಿಷತ್‌ ಸದಸ್ಯರು ಆದ ಬಿಬಿ ಶಿವಪ್ಪ ಅವರು ಸಚಿವರಾಗಲೇ ಇಲ್ಲ. ಅವರು ಇರುವವರೆಗೂ ಬಿಜೆಪಿ ಸರ್ಕಾರ ರಚನೆಯಾಗಲಿಲ್ಲ. ಕಾಂಗ್ರೆಸ್‌ಗೆ ಹೋಗಿ ನಂತರ ಬಿಜೆಪಿಗೆ ಮರಳಿದ ಶಿವಪ್ಪ ಅವರು ದಶಕದ ಹಿಂದೆಯೇ ಕಾಲವಾದರು.
icon

(1 / 10)

ನಾಲ್ಕೈದು ದಶಕಗಳ ಹಿಂದೆಯೇ ಬಿಜೆಪಿಯಲ್ಲಿ ಗಟ್ಟಿಯಾಗಿ ನೆಲೆಯೂರಿ ಹಾಸನ ಜಿಲ್ಲೆ ಸಕಲೇಶಪುರ ಶಾಸಕರಾಗಿ, ವಿಧಾನಪರಿಷತ್‌ ಸದಸ್ಯರು ಆದ ಬಿಬಿ ಶಿವಪ್ಪ ಅವರು ಸಚಿವರಾಗಲೇ ಇಲ್ಲ. ಅವರು ಇರುವವರೆಗೂ ಬಿಜೆಪಿ ಸರ್ಕಾರ ರಚನೆಯಾಗಲಿಲ್ಲ. ಕಾಂಗ್ರೆಸ್‌ಗೆ ಹೋಗಿ ನಂತರ ಬಿಜೆಪಿಗೆ ಮರಳಿದ ಶಿವಪ್ಪ ಅವರು ದಶಕದ ಹಿಂದೆಯೇ ಕಾಲವಾದರು.

ಮೈಸೂರಿನ ಚಾಮರಾಜ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ನಂತರ ಜೆಡಿಎಸ್‌ಗೆ ಪಕ್ಷಾಂತರಗೊಂಡು ಆ ಪಕ್ಷದಿಂದ ಸೋಲು ಅನುಭವಿಸಿದವರು ಶಂಕರಲಿಂಗೇಗೌಡ. ಬಿಜೆಪಿಯಲ್ಲಿದ್ದಾಗ ಅವರು ಸಚಿವರಾಗುವ ಹಿರಿತನ ಇದ್ದರೂ ಅವಕಾಶ ಸಿಗಲಿಲ್ಲ. ಬಿಜೆಪಿಯೊಂದಿಗೆ ಮುನಿಸಿಕೊಂಡು ಜೆಡಿಎಸ್‌ ಸೇರಿ ನಂತರ ಕಾಲವಾದರು ಗೌಡರು.
icon

(2 / 10)

ಮೈಸೂರಿನ ಚಾಮರಾಜ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ನಂತರ ಜೆಡಿಎಸ್‌ಗೆ ಪಕ್ಷಾಂತರಗೊಂಡು ಆ ಪಕ್ಷದಿಂದ ಸೋಲು ಅನುಭವಿಸಿದವರು ಶಂಕರಲಿಂಗೇಗೌಡ. ಬಿಜೆಪಿಯಲ್ಲಿದ್ದಾಗ ಅವರು ಸಚಿವರಾಗುವ ಹಿರಿತನ ಇದ್ದರೂ ಅವಕಾಶ ಸಿಗಲಿಲ್ಲ. ಬಿಜೆಪಿಯೊಂದಿಗೆ ಮುನಿಸಿಕೊಂಡು ಜೆಡಿಎಸ್‌ ಸೇರಿ ನಂತರ ಕಾಲವಾದರು ಗೌಡರು.

ಧಾರವಾಡದ ಚಂದ್ರಕಾಂತ ಬೆಲ್ಲದ ಅವರು ಕೂಡ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾದವರು. ಹಿರಿತನ ಇದ್ದರೂ ರಾಜಕೀಯ ಕಾರಣದಿಂದ ಸಚಿವರಾಗಲೇ ಇಲ್ಲ. ಕೊನೆಗೆ ಅವರ ಪುತ್ರ ಅರವಿಂದ ಬೆಲ್ಲದ ಈಗ ಮೂರನೇ ಬಾರಿ ಶಾಸಕ. ನಿವೃತ್ತ ಜೀವನ ನಡೆಸುತ್ತಿದ್ದಾರೆ ಚಂದ್ರಕಾಂತ ಬೆಲ್ಲದ.
icon

(3 / 10)

ಧಾರವಾಡದ ಚಂದ್ರಕಾಂತ ಬೆಲ್ಲದ ಅವರು ಕೂಡ ನಾಲ್ಕು ಬಾರಿ ಬಿಜೆಪಿಯಿಂದ ಶಾಸಕರಾದವರು. ಹಿರಿತನ ಇದ್ದರೂ ರಾಜಕೀಯ ಕಾರಣದಿಂದ ಸಚಿವರಾಗಲೇ ಇಲ್ಲ. ಕೊನೆಗೆ ಅವರ ಪುತ್ರ ಅರವಿಂದ ಬೆಲ್ಲದ ಈಗ ಮೂರನೇ ಬಾರಿ ಶಾಸಕ. ನಿವೃತ್ತ ಜೀವನ ನಡೆಸುತ್ತಿದ್ದಾರೆ ಚಂದ್ರಕಾಂತ ಬೆಲ್ಲದ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ ಸಹಿತ ಮೂರು ಕ್ಷೇತ್ರದಿಂದ ಶಾಸಕರಾಗಿ ಬಿಜೆಪಿಗೆ ಹೋಗಿ ಅಲ್ಲಿಯೂ ಗೆದ್ದು ಸದ್ಯ ಮೊಳಕಾಲ್ಮೂರು ಶಾಸಕರಾಗಿರುವ ಎನ್‌ವೈ ಗೋಪಾಲಕೃಷ್ಣ ಅವರು ಆರು ಬಾರಿ ಶಾಸಕರಾದರೂ ಸಚಿವರಾಗಿಲ್ಲ.
icon

(4 / 10)

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಳ್ಳಾರಿ ಗ್ರಾಮೀಣ, ಕೂಡ್ಲಿಗಿ ಸಹಿತ ಮೂರು ಕ್ಷೇತ್ರದಿಂದ ಶಾಸಕರಾಗಿ ಬಿಜೆಪಿಗೆ ಹೋಗಿ ಅಲ್ಲಿಯೂ ಗೆದ್ದು ಸದ್ಯ ಮೊಳಕಾಲ್ಮೂರು ಶಾಸಕರಾಗಿರುವ ಎನ್‌ವೈ ಗೋಪಾಲಕೃಷ್ಣ ಅವರು ಆರು ಬಾರಿ ಶಾಸಕರಾದರೂ ಸಚಿವರಾಗಿಲ್ಲ.

ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರದಿಂದ ಜನತಾಪರಿವಾರ, ಜನತಾದಳ ಎಸ್‌, ಕೆಜೆಪಿ ಹಾಗೂ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕ, ಒಮ್ಮೆ ಪರಿಷತ್‌ ಸದಸ್ಯರಾಗಿ ಉಪಸಭಾಪತಿಯೂ ಆಗಿದ್ದ ಬಿ.ಆರ್.ಪಾಟೀಲ್‌ ಅವರು ಕೂಡ ಸಚಿವರಾಗಲೂ ಈವರೆಗೂ ಆಗಿಯೇ ಇಲ್ಲ.
icon

(5 / 10)

ಕಲಬುರಗಿ ಜಿಲ್ಲೆಯ ಅಳಂದ ಕ್ಷೇತ್ರದಿಂದ ಜನತಾಪರಿವಾರ, ಜನತಾದಳ ಎಸ್‌, ಕೆಜೆಪಿ ಹಾಗೂ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಶಾಸಕ, ಒಮ್ಮೆ ಪರಿಷತ್‌ ಸದಸ್ಯರಾಗಿ ಉಪಸಭಾಪತಿಯೂ ಆಗಿದ್ದ ಬಿ.ಆರ್.ಪಾಟೀಲ್‌ ಅವರು ಕೂಡ ಸಚಿವರಾಗಲೂ ಈವರೆಗೂ ಆಗಿಯೇ ಇಲ್ಲ.

ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಜನತಾಪರಿವಾರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆ, ಒತ್ತುವರಿ ತೆರವು ಸಮಿತಿಯ ಅಧ್ಯಕ್ಷರಾಗಿ, ವಿಭಿನ್ನ ರಾಜಕಾರಣಿಯಾದ ಎ.ಟಿ.ರಾಮಸ್ವಾಮಿ ಅವರು ಕೂಡ ಸಚಿವರಾಗುವ ಅವಕಾಶ ಪಡೆಯಲಿಲ್ಲ.
icon

(6 / 10)

ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದಿಂದ ಜನತಾಪರಿವಾರದ ಶಾಸಕರಾಗಿ ನಾಲ್ಕು ಬಾರಿ ಆಯ್ಕೆ, ಒತ್ತುವರಿ ತೆರವು ಸಮಿತಿಯ ಅಧ್ಯಕ್ಷರಾಗಿ, ವಿಭಿನ್ನ ರಾಜಕಾರಣಿಯಾದ ಎ.ಟಿ.ರಾಮಸ್ವಾಮಿ ಅವರು ಕೂಡ ಸಚಿವರಾಗುವ ಅವಕಾಶ ಪಡೆಯಲಿಲ್ಲ.

ಕೊಡಗು ಜಿಲ್ಲೆಯ ಮಡಿಕೇರಿ, ನಂತರ ವಿರಾಜಪೇಟೆಯಿಂದ ನಾಲ್ಕು ಬಾರಿ ಶಾಸಕರಾಗಿ ಉಪ ಸಭಾಧ್ಯಕ್ಷ. ವಿಧಾನಸಭೆ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಕೂಡ ಈವರೆಗೂ ಸಚಿವರಾಗಿಲ್ಲ.
icon

(7 / 10)

ಕೊಡಗು ಜಿಲ್ಲೆಯ ಮಡಿಕೇರಿ, ನಂತರ ವಿರಾಜಪೇಟೆಯಿಂದ ನಾಲ್ಕು ಬಾರಿ ಶಾಸಕರಾಗಿ ಉಪ ಸಭಾಧ್ಯಕ್ಷ. ವಿಧಾನಸಭೆ ಅಧ್ಯಕ್ಷರಾದ ಕೆ.ಜಿ.ಬೋಪಯ್ಯ ಕೂಡ ಈವರೆಗೂ ಸಚಿವರಾಗಿಲ್ಲ.

ಚಾಮರಾಜನಗರ ಜಿಲ್ಲೆಯ ಮಾಜಿ ಸಚಿವ ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರು ಸಂತೇಮರಳ್ಳಿ ಕ್ಷೇತ್ರದಲ್ಲಿ ಜನತಾದಳ ಹಾಗೂ ಸಂದಳದಿಂದ ಶಾಸಕರಾಗಿ ಬಹಳ ವರ್ಷದ ನಂತರ ಈಗ ಕೊಳ್ಳೆಗಾಲದಿಂದ ಕಾಂಗ್ರೆಸ್‌ ಶಾಸಕ. ಹಿರಿಯರಾದ ಇವರಿಗೂ ಸಚಿವರಾಗುವ ಅವಕಾಶ ಒದಗಿ ಬಂದಿಲ್ಲ.
icon

(8 / 10)

ಚಾಮರಾಜನಗರ ಜಿಲ್ಲೆಯ ಮಾಜಿ ಸಚಿವ ರಾಚಯ್ಯ ಅವರ ಪುತ್ರ ಎ.ಆರ್.ಕೃಷ್ಣಮೂರ್ತಿ ಅವರು ಸಂತೇಮರಳ್ಳಿ ಕ್ಷೇತ್ರದಲ್ಲಿ ಜನತಾದಳ ಹಾಗೂ ಸಂದಳದಿಂದ ಶಾಸಕರಾಗಿ ಬಹಳ ವರ್ಷದ ನಂತರ ಈಗ ಕೊಳ್ಳೆಗಾಲದಿಂದ ಕಾಂಗ್ರೆಸ್‌ ಶಾಸಕ. ಹಿರಿಯರಾದ ಇವರಿಗೂ ಸಚಿವರಾಗುವ ಅವಕಾಶ ಒದಗಿ ಬಂದಿಲ್ಲ.

ಚಿತ್ರದುರ್ಗ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದಲ್ಲಿ ಗೆದ್ದ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೂ ಸಚಿವ ಸ್ಥಾನದ ಅದೃಷ್ಟ ಒಲಿದು ಬಂದಿಲ್ಲ.
icon

(9 / 10)

ಚಿತ್ರದುರ್ಗ ಕ್ಷೇತ್ರದ ಶಾಸಕರಾಗಿ ಐದು ಬಾರಿ ಆಯ್ಕೆಯಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷದಲ್ಲಿ ಗೆದ್ದ ಜಿ.ಎಚ್‌.ತಿಪ್ಪಾರೆಡ್ಡಿ ಅವರಿಗೂ ಸಚಿವ ಸ್ಥಾನದ ಅದೃಷ್ಟ ಒಲಿದು ಬಂದಿಲ್ಲ.

ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದಿಂದ ಮೊದಲು ಬಿಜೆಪಿ, ನಂತರ ಜೆಡಿಎಸ್‌, ಈಗ ಕಾಂಗ್ರೆಸ್‌ ಸೇರಿ ಐದು ಬಾರಿ ಆಯ್ಕೆಯಾಗಿರುವ ಎಚ್‌.ಸಿ.ಬಾಲಕೃಷ್ಣ ಅವರಿಗೂ ಸಚಿವರಾಗುವ ಅವಕಾಶ ಈವರೆಗೂ ಒದಗಿ ಬಂದಿಲ್ಲ.
icon

(10 / 10)

ರಾಮನಗರ ಜಿಲ್ಲೆಯ ಮಾಗಡಿ ಕ್ಷೇತ್ರದಿಂದ ಮೊದಲು ಬಿಜೆಪಿ, ನಂತರ ಜೆಡಿಎಸ್‌, ಈಗ ಕಾಂಗ್ರೆಸ್‌ ಸೇರಿ ಐದು ಬಾರಿ ಆಯ್ಕೆಯಾಗಿರುವ ಎಚ್‌.ಸಿ.ಬಾಲಕೃಷ್ಣ ಅವರಿಗೂ ಸಚಿವರಾಗುವ ಅವಕಾಶ ಈವರೆಗೂ ಒದಗಿ ಬಂದಿಲ್ಲ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು