Summer Travel 2025: ಬೇಸಿಗೆ ರಜೆಯ ಅವಧಿಯಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕದ ಬೆಸ್ಟ್‌ 10 ತಾಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Travel 2025: ಬೇಸಿಗೆ ರಜೆಯ ಅವಧಿಯಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕದ ಬೆಸ್ಟ್‌ 10 ತಾಣಗಳು

Summer Travel 2025: ಬೇಸಿಗೆ ರಜೆಯ ಅವಧಿಯಲ್ಲಿ ನೀವು ಭೇಟಿ ನೀಡಬಹುದಾದ ಕರ್ನಾಟಕದ ಬೆಸ್ಟ್‌ 10 ತಾಣಗಳು

  • Summer Travel 2025: ಕರ್ನಾಟಕವು ಪ್ರವಾಸಿ ತಾಣಗಳ ಸಂಗಮ. ಬೇಸಿಗೆ ವೇಳೆ ನೀವು ಭೇಟಿ ನೀಡಲು ಅತ್ಯುತ್ತಮ ಪ್ರವಾಸಿ ತಾಣಗಳಿವೆ. ಅಂತಹ ಹತ್ತು ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬಿಳಿಗಿರಿರಂಗನಬೆಟ್ಟ:ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಳಿಗಿರಿರಂಗನ ಬೆಟ್ಟ.ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಆಗ್ನೇಯ ಕರ್ನಾಟಕದಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿರುವ ದಕ್ಷಿಣ ಪರ್ವತದ ಒಂದು ಬೆಟ್ಟ ಪ್ರದೇಶವಾಗಿದೆ ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಇಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ದೇಗುಲ, ಬೆಟ್ಟ ಸಾಲುಗಳು, ವನ್ಯಜೀವಿ ಸಫಾರಿಗೆ ಅವಕಾಶವಿದೆ
icon

(1 / 10)

ಬಿಳಿಗಿರಿರಂಗನಬೆಟ್ಟ:ಚಾಮರಾಜನಗರ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಬಿಳಿಗಿರಿರಂಗನ ಬೆಟ್ಟ.ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬಿಳಿಗಿರಿರಂಗನ ಬೆಟ್ಟಗಳು ಆಗ್ನೇಯ ಕರ್ನಾಟಕದಲ್ಲಿ ತಮಿಳುನಾಡಿನ ಈರೋಡ್ ಜಿಲ್ಲೆಯ ಗಡಿಯಲ್ಲಿರುವ ದಕ್ಷಿಣ ಪರ್ವತದ ಒಂದು ಬೆಟ್ಟ ಪ್ರದೇಶವಾಗಿದೆ ಈ ಪ್ರದೇಶವನ್ನು ಬಿಳಿಗಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಇಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ದೇಗುಲ, ಬೆಟ್ಟ ಸಾಲುಗಳು, ವನ್ಯಜೀವಿ ಸಫಾರಿಗೆ ಅವಕಾಶವಿದೆ

ಆಲಮಟ್ಟಿ ಲವಕುಶ ಉದ್ಯಾನಉತ್ತರ ಕರ್ನಾಟಕದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಆಲಮಟ್ಟಿ ಜಲಾಶಯದ ಪ್ರವಾಸಿ ತಾಣಗಳು ಹಲವು. ಇದರಲ್ಲಿ ಲವಕುಶ ಉದ್ಯಾನ ರಾಮಾಯಾಣದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಲಾವಿದರು ಇಲ್ಲಿ ರಾಮಾಯಣದ ಸನ್ನಿವೇಶಗಳನ್ನು ಅದ್ಭುತವಾಗಿಯೇ ಮೂಡಿಸಿದ್ದಾರೆ. ಆಲಮಟ್ಟಿ ಹಿನ್ನೀರಿನ ನಡುವೆ ಇದನ್ನು ನೋಡುವುದೇ ಚೆಂದ.
icon

(2 / 10)

ಆಲಮಟ್ಟಿ ಲವಕುಶ ಉದ್ಯಾನಉತ್ತರ ಕರ್ನಾಟಕದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಆಲಮಟ್ಟಿ ಜಲಾಶಯದ ಪ್ರವಾಸಿ ತಾಣಗಳು ಹಲವು. ಇದರಲ್ಲಿ ಲವಕುಶ ಉದ್ಯಾನ ರಾಮಾಯಾಣದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಕಲಾವಿದರು ಇಲ್ಲಿ ರಾಮಾಯಣದ ಸನ್ನಿವೇಶಗಳನ್ನು ಅದ್ಭುತವಾಗಿಯೇ ಮೂಡಿಸಿದ್ದಾರೆ. ಆಲಮಟ್ಟಿ ಹಿನ್ನೀರಿನ ನಡುವೆ ಇದನ್ನು ನೋಡುವುದೇ ಚೆಂದ.

ಬೆಂಗಳೂರು ನಂದಿಬೆಟ್ಟ: ನಂದಿ ಬೆಟ್ಟ ರಾಜ್ಯ ರಾಜಧಾನಿ ಬೆಂಗಳೂರಿನ ಹತ್ತಿರದ ಪ್ರವಾಸಿ ತಾಣಗಳಾದ ನಂದಿ ಬೆಟ್ಟಗಳು ವಿಹಾರಕ್ಕಾಗಿ ಸ್ಥಳ ಹುಡುಕುತ್ತಿರುವವರಿಗೆ ಒಳ್ಳೆಯ ಸ್ಥಳವಾಗಿದೆ. ನಂದಿ ಬೆಟ್ಟದ ಮೇಲೆ ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು, ಬೆಟ್ಟದ ತುದಿಗೆ ಚಾರಣ ಮಾಡಿ. ಶಾಂತ ಸರೋವರಗಳು, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಆಕರ್ಷಕ ಭೂದೃಶ್ಯವು ಇದನ್ನು ಒಂದು ಆನಂದದಾಯಕ ತಾಣ ಎನ್ನಿಸಲಿದೆ.
icon

(3 / 10)

ಬೆಂಗಳೂರು ನಂದಿಬೆಟ್ಟ: ನಂದಿ ಬೆಟ್ಟ ರಾಜ್ಯ ರಾಜಧಾನಿ ಬೆಂಗಳೂರಿನ ಹತ್ತಿರದ ಪ್ರವಾಸಿ ತಾಣಗಳಾದ ನಂದಿ ಬೆಟ್ಟಗಳು ವಿಹಾರಕ್ಕಾಗಿ ಸ್ಥಳ ಹುಡುಕುತ್ತಿರುವವರಿಗೆ ಒಳ್ಳೆಯ ಸ್ಥಳವಾಗಿದೆ. ನಂದಿ ಬೆಟ್ಟದ ಮೇಲೆ ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು, ಬೆಟ್ಟದ ತುದಿಗೆ ಚಾರಣ ಮಾಡಿ. ಶಾಂತ ಸರೋವರಗಳು, ಸುಂದರವಾದ ದೇವಾಲಯಗಳು, ಐತಿಹಾಸಿಕ ಕೋಟೆಗಳು ಮತ್ತು ಆಕರ್ಷಕ ಭೂದೃಶ್ಯವು ಇದನ್ನು ಒಂದು ಆನಂದದಾಯಕ ತಾಣ ಎನ್ನಿಸಲಿದೆ.

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಊರು ಶ್ರೀರಂಗಪಟ್ಟಣ., ಕಾವೇರಿ ನದಿಯ ದ್ವೀಪವಾದ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಹೆಸರುವಾಸಿ ಆಗಿದೆ. ಇದು ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾಗಿದೆ. ಇದು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರ (ವಿಷ್ಣುಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳು) ಎಂದು ಪರಿಗಣಿಸಲಾಗಿದೆ. ಇಲ್ಲಿ ಟಿಪ್ಪುಸುಲ್ತಾನ್‌ ಕಾಲದ ಸ್ಮಾರಕಗಳು, ಕಾವೇರಿ ನದಿ ತೀರ, ಸಮೀಪದಲ್ಲೇ ರಂಗನತಿಟ್ಟು ಪಕ್ಷಿಧಾಮ, ಬಲಮುರಿ ತೀರ, ಕೃಷ್ಣರಾಜ ಸಾಗರ ಬೃಂದಾವನಗಳಿವೆ.
icon

(4 / 10)

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಊರು ಶ್ರೀರಂಗಪಟ್ಟಣ., ಕಾವೇರಿ ನದಿಯ ದ್ವೀಪವಾದ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ದೇಶದ ಅತ್ಯಂತ ಪೂಜ್ಯ ದೇವಾಲಯಗಳಲ್ಲಿ ಹೆಸರುವಾಸಿ ಆಗಿದೆ. ಇದು ವಿಷ್ಣುವಿನ ಅವತಾರವಾದ ರಂಗನಾಥನಿಗೆ ಸಮರ್ಪಿತವಾಗಿದೆ. ಇದು ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರ (ವಿಷ್ಣುಗೆ ಅರ್ಪಿತವಾದ ಐದು ಪ್ರಮುಖ ದೇವಾಲಯಗಳು) ಎಂದು ಪರಿಗಣಿಸಲಾಗಿದೆ. ಇಲ್ಲಿ ಟಿಪ್ಪುಸುಲ್ತಾನ್‌ ಕಾಲದ ಸ್ಮಾರಕಗಳು, ಕಾವೇರಿ ನದಿ ತೀರ, ಸಮೀಪದಲ್ಲೇ ರಂಗನತಿಟ್ಟು ಪಕ್ಷಿಧಾಮ, ಬಲಮುರಿ ತೀರ, ಕೃಷ್ಣರಾಜ ಸಾಗರ ಬೃಂದಾವನಗಳಿವೆ.

ಚಿಕ್ಕಮಗಳೂರು: ಚಿಕ್ಕಮಗಳೂರು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ಈ ಪ್ರಶಾಂತ ಜಿಲ್ಲೆಯು ಪ್ರಕೃತಿಯ ಮಡಿಲಲ್ಲಿ ಉತ್ತಮ ವಾಸ್ತವ್ಯವನ್ನು ಇಷ್ಟಪಡುವ ಯಾರಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್‌ನಿಂದ ಹಿಡಿದು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್‌ವರೆಗೆ ಇಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಶೃಂಗೇರಿ, ಹರಿಹರಪುರ, ಕಳಸ, ಹೊರನಾಡು ಸಹಿತ ಪ್ರಮುಖ ದೇಗುಲಗಳೂ ಜಿಲ್ಲೆಯಲ್ಲಿವೆ.
icon

(5 / 10)

ಚಿಕ್ಕಮಗಳೂರು: ಚಿಕ್ಕಮಗಳೂರು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲ್ಪಡುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ಈ ಪ್ರಶಾಂತ ಜಿಲ್ಲೆಯು ಪ್ರಕೃತಿಯ ಮಡಿಲಲ್ಲಿ ಉತ್ತಮ ವಾಸ್ತವ್ಯವನ್ನು ಇಷ್ಟಪಡುವ ಯಾರಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್‌ನಿಂದ ಹಿಡಿದು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್‌ವರೆಗೆ ಇಲ್ಲಿ ಹಲವಾರು ಚಟುವಟಿಕೆಗಳನ್ನು ಮಾಡಬಹುದು. ಶೃಂಗೇರಿ, ಹರಿಹರಪುರ, ಕಳಸ, ಹೊರನಾಡು ಸಹಿತ ಪ್ರಮುಖ ದೇಗುಲಗಳೂ ಜಿಲ್ಲೆಯಲ್ಲಿವೆ.

ಶಾಂತಿಸಾಗರ ದಾವಣಗೆರೆ: ಏಷ್ಯಾದ ಅತಿ ದೊಡ್ಡ ಎರಡನೇ ಕೆರೆ ಎಂದು ಹೆಸರುವಾಸಿಯಾಗಿದೆ ಶಾಂತಿ ಸಾಗರ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು ಸೂಳೆಕೆರೆ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಇಲ್ಲಿ ಬೋಟಿಂಗ್‌ ಸಹಿತ ಹಲವು ಸೇವೆಗಳಿವೆ.
icon

(6 / 10)

ಶಾಂತಿಸಾಗರ ದಾವಣಗೆರೆ: ಏಷ್ಯಾದ ಅತಿ ದೊಡ್ಡ ಎರಡನೇ ಕೆರೆ ಎಂದು ಹೆಸರುವಾಸಿಯಾಗಿದೆ ಶಾಂತಿ ಸಾಗರ. ದಾವಣಗೆರೆ ನಗರ ಕೇಂದ್ರದಿಂದ 40 ಕಿ.ಮೀ ಹಾಗೂ ಚೆನ್ನಗಿರಿಯಿಂದ ಸುಮಾರು 20 ಕಿ.ಮೀ ಗಳಷ್ಟು ದೂರದಲ್ಲಿರುವ ಈ ಕೆರೆಗೆ ಶಾಂತಿ ಸಾಗರ ಎಂಬ ಹೆಸರನ್ನಿಡಲಾಗಿದ್ದರೂ ಸಹ ಬಹುತೇಕ ಜನರಲ್ಲಿ ಇದು ಸೂಳೆಕೆರೆ ಎಂಬ ಹೆಸರಿನಿಂದಲೇ ಪ್ರಸಿದ್ಧವಾಗಿದೆ. ಇಲ್ಲಿ ಬೋಟಿಂಗ್‌ ಸಹಿತ ಹಲವು ಸೇವೆಗಳಿವೆ.

ಕೊಡಚಾದ್ರಿ: ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗೆ ಹೊಂದಿಕೊಂಡಂತೆ ಇರುವ  ಕೊಡಾಚಾದ್ರಿ ಬೆಟ್ಟಗಳು ಇತರ ಬೆಟ್ಟಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿಯನ್ನು ಪ್ರೀತಿಸುವ ಜನರಿಗೆ ಇದು ಸೂಕ್ತ ಸ್ಥಳವಾಗಿದೆ, ಪಶ್ಚಿಮ ಘಟ್ಟದ ​​ಒಂದು ಭಾಗವಾದ ಕೊಡಚಾದ್ರಿ ಬೆಟ್ಟ ಶ್ರೇಣಿ ಶಿವಮೊಗ್ಗ ಜಿಲ್ಲೆಯ ಅತಿ ಎತ್ತರದ ಶಿಖರವೆಂದು ಪರಿಗಣಿಸಲಾಗಿದೆ. ಸಮೀಪದಲ್ಲಿಯೇ ಕೊಲ್ಲೂರು ದೇವಸ್ಥಾನವೂ ಇದೆ.
icon

(7 / 10)

ಕೊಡಚಾದ್ರಿ: ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಕೊಡಾಚಾದ್ರಿ ಬೆಟ್ಟಗಳು ಇತರ ಬೆಟ್ಟಗಳಿಗಿಂತ ಸಾಕಷ್ಟು ಭಿನ್ನವಾಗಿದೆ. ಸಾಹಸ ಪ್ರಿಯರಿಗೆ ಮತ್ತು ಪ್ರಕೃತಿಯನ್ನು ಪ್ರೀತಿಸುವ ಜನರಿಗೆ ಇದು ಸೂಕ್ತ ಸ್ಥಳವಾಗಿದೆ, ಪಶ್ಚಿಮ ಘಟ್ಟದ ​​ಒಂದು ಭಾಗವಾದ ಕೊಡಚಾದ್ರಿ ಬೆಟ್ಟ ಶ್ರೇಣಿ ಶಿವಮೊಗ್ಗ ಜಿಲ್ಲೆಯ ಅತಿ ಎತ್ತರದ ಶಿಖರವೆಂದು ಪರಿಗಣಿಸಲಾಗಿದೆ. ಸಮೀಪದಲ್ಲಿಯೇ ಕೊಲ್ಲೂರು ದೇವಸ್ಥಾನವೂ ಇದೆ.

ಕೊಡಗು:ಕೊಡಗು ಕೂಡ ಬೇಸಿಗೆ ವೇಳೆ ಪ್ರವಾಸಕ್ಕೆ ಅತ್ಯುತ್ತಮ ತಾಣ. ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗಿಗೆ ಹೋದವರು ಅಲ್ಲಿನ ಹಸಿರು, ಬೆಟ್ಟ ತಾಣಗಳಿಗೆ ಮನ ಸೋಲದವರೇ ಇಲ್ಲ. ಕೂರ್ಗ್ ಆಕರ್ಷಕ ಕಾಫಿ ಮತ್ತು ಮಸಾಲೆ ತೋಟಗಳು, ಸುಂದರವಾದ ಅರಣ್ಯ ಪ್ರದೇಶ, ಸುಂದರವಾದ ಜಲಪಾತಗಳು ಮತ್ತು ಈ ಸ್ಥಳದ ಮಂಜಿನ ಭೂದೃಶ್ಯವು ಕೂರ್ಗ್ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ ಮತ್ತು ರಾಜನ ಆಸನದೊಂದಿಗೆ, ಕೊಡಗು ಕುಟುಂಬ ಪ್ರವಾಸಕ್ಕೆ ಸೂಕ್ತವಾದ ತಾಣ ಎನ್ನಿಸಿದೆ.
icon

(8 / 10)

ಕೊಡಗು:ಕೊಡಗು ಕೂಡ ಬೇಸಿಗೆ ವೇಳೆ ಪ್ರವಾಸಕ್ಕೆ ಅತ್ಯುತ್ತಮ ತಾಣ. ಕರ್ನಾಟಕದ ಕಾಶ್ಮೀರ ಎಂದು ಕರೆಯಿಸಿಕೊಳ್ಳುವ ಕೊಡಗಿಗೆ ಹೋದವರು ಅಲ್ಲಿನ ಹಸಿರು, ಬೆಟ್ಟ ತಾಣಗಳಿಗೆ ಮನ ಸೋಲದವರೇ ಇಲ್ಲ. ಕೂರ್ಗ್ ಆಕರ್ಷಕ ಕಾಫಿ ಮತ್ತು ಮಸಾಲೆ ತೋಟಗಳು, ಸುಂದರವಾದ ಅರಣ್ಯ ಪ್ರದೇಶ, ಸುಂದರವಾದ ಜಲಪಾತಗಳು ಮತ್ತು ಈ ಸ್ಥಳದ ಮಂಜಿನ ಭೂದೃಶ್ಯವು ಕೂರ್ಗ್ ಅನ್ನು 'ಭಾರತದ ಸ್ಕಾಟ್ಲೆಂಡ್' ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ ಮತ್ತು ರಾಜನ ಆಸನದೊಂದಿಗೆ, ಕೊಡಗು ಕುಟುಂಬ ಪ್ರವಾಸಕ್ಕೆ ಸೂಕ್ತವಾದ ತಾಣ ಎನ್ನಿಸಿದೆ.

ಸಕಲೇಶಪುರ:ಹಾಸನ ಜಿಲ್ಲೆಯ ಸಕಲೇಶಪುರ ಸರ್ವಋತುಗಳಲ್ಲೂ ಹಸಿರು ಹೊಂದಿರುವ ತಾಣ. ಎತ್ತರದ ಬೆಟ್ಟಗಳು, ಪ್ರಕೃತಿ ಸೌಂದರ್ಯ ಸಕಲೇಶಪುರದಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಸಕಲೇಶಪುರ ಸಮೀಪವೇ ಇರುವ ಮಂಜರಾಬಾದ್ ಕೋಟೆಯಂತೂ ವಿಶೇಷ ಎನ್ನಿಸಲಿದೆ.
icon

(9 / 10)

ಸಕಲೇಶಪುರ:ಹಾಸನ ಜಿಲ್ಲೆಯ ಸಕಲೇಶಪುರ ಸರ್ವಋತುಗಳಲ್ಲೂ ಹಸಿರು ಹೊಂದಿರುವ ತಾಣ. ಎತ್ತರದ ಬೆಟ್ಟಗಳು, ಪ್ರಕೃತಿ ಸೌಂದರ್ಯ ಸಕಲೇಶಪುರದಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಸಕಲೇಶಪುರ ಸಮೀಪವೇ ಇರುವ ಮಂಜರಾಬಾದ್ ಕೋಟೆಯಂತೂ ವಿಶೇಷ ಎನ್ನಿಸಲಿದೆ.

ಕಬಿನಿ ಹಿನ್ನೀರು:ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು ಬೇಸಿಗೆ ಬೆಸ್ಟ್‌ ಪ್ರವಾಸಿ ತಾಣ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲ ಕ್ರೀಡೆಗಳು ಅಥವಾ ದಡದಲ್ಲಿ ಶಿಬಿರ ಹೂಡುವವರೆಗೆ, ಕಬಿನಿಯು ತನ್ನ ಪ್ರವಾಸಿಗರಿಗೆ ನೀಡಲು ಹಲವು ಸಂಗತಿಗಳನ್ನು ಹೊಂದಿದೆ. ಇದು ಎಲ್ಲಾ ಪ್ರಕೃತಿ ಪ್ರಿಯರಿಗೆ ಸೂಕ್ತವಾದ ರಜಾ ತಾಣವಾಗಿದೆ.
icon

(10 / 10)

ಕಬಿನಿ ಹಿನ್ನೀರು:ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರು ಬೇಸಿಗೆ ಬೆಸ್ಟ್‌ ಪ್ರವಾಸಿ ತಾಣ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯಿಂದ ಹಿಡಿದು ಕಬಿನಿ ನದಿಯಲ್ಲಿ ಸಾಹಸಮಯ ಜಲ ಕ್ರೀಡೆಗಳು ಅಥವಾ ದಡದಲ್ಲಿ ಶಿಬಿರ ಹೂಡುವವರೆಗೆ, ಕಬಿನಿಯು ತನ್ನ ಪ್ರವಾಸಿಗರಿಗೆ ನೀಡಲು ಹಲವು ಸಂಗತಿಗಳನ್ನು ಹೊಂದಿದೆ. ಇದು ಎಲ್ಲಾ ಪ್ರಕೃತಿ ಪ್ರಿಯರಿಗೆ ಸೂಕ್ತವಾದ ರಜಾ ತಾಣವಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು