ಕರ್ನಾಟಕ ಹವಾಮಾನ: ಬೀದರ್‌ ಬಿಸಿಲು ತಡ್ಕೊಳ್ಳೋದು ಬಲು ಕಷ್ಟ, 40 ಡಿಗ್ರಿ ದಾಟಿದೆ ಬಳ್ಳಾರಿ, ಗದಗ ಸೇರಿ 11 ಜಿಲ್ಲೆಗಳ ಗರಿಷ್ಠ ತಾಪಮಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕ ಹವಾಮಾನ: ಬೀದರ್‌ ಬಿಸಿಲು ತಡ್ಕೊಳ್ಳೋದು ಬಲು ಕಷ್ಟ, 40 ಡಿಗ್ರಿ ದಾಟಿದೆ ಬಳ್ಳಾರಿ, ಗದಗ ಸೇರಿ 11 ಜಿಲ್ಲೆಗಳ ಗರಿಷ್ಠ ತಾಪಮಾನ

ಕರ್ನಾಟಕ ಹವಾಮಾನ: ಬೀದರ್‌ ಬಿಸಿಲು ತಡ್ಕೊಳ್ಳೋದು ಬಲು ಕಷ್ಟ, 40 ಡಿಗ್ರಿ ದಾಟಿದೆ ಬಳ್ಳಾರಿ, ಗದಗ ಸೇರಿ 11 ಜಿಲ್ಲೆಗಳ ಗರಿಷ್ಠ ತಾಪಮಾನ

ಕರ್ನಾಟಕ ಹವಾಮಾನ: ಕರ್ನಾಟಕದ ಉತ್ತರ ಒಳನಾಡು ಪ್ರದೇಶದ ಬೀದರ್‌ ಬಿಸಿಲು ತಡ್ಕೊಳ್ಳೋದು ಬಲು ಕಷ್ಟ ಎನ್ನುವಂತಾಗಿದೆ. 45 ಡಿಗ್ರಿ ಸೆಲ್ಶಿಯಸ್ ದಾಟಿದೆ. ಬಳ್ಳಾರಿ, ಗದಗ ಸೇರಿ 11 ಜಿಲ್ಲೆಗಳ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿ ಉಷ್ಣದ ಅಲೆಗಳ ಸುಡು ಬಿಸಿಲು ಚರ್ಮ ಸುಡತೊಡಗಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಹವಾಮಾನ ಗಮನಿಸಿದರೆ 10 ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 11 ಜಿಲ್ಲೆಗಳಲ್ಲಿ ಸುಡು ಬಿಸಿಲು ಚರ್ಮ ಸುಡುತ್ತಿರುವುದಲ್ಲದೆ, ಗಂಟಲು ಆರುವಂತೆ ಮಾಡತೊಡಗಿದೆ. ಈ ಪೈಕಿ ಬೀದರ್‌ನಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಗಡಿದಾಟಿದ್ದು, ಜನರು ಕಂಗೆಡುವಂತಾಗಿದೆ.
icon

(1 / 12)

ಕರ್ನಾಟಕ ಹವಾಮಾನ ಗಮನಿಸಿದರೆ 10 ಜಿಲ್ಲೆಗಳಲ್ಲಿ ಮಳೆಯ ವಾತಾವರಣ ಇದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ 11 ಜಿಲ್ಲೆಗಳಲ್ಲಿ ಸುಡು ಬಿಸಿಲು ಚರ್ಮ ಸುಡುತ್ತಿರುವುದಲ್ಲದೆ, ಗಂಟಲು ಆರುವಂತೆ ಮಾಡತೊಡಗಿದೆ. ಈ ಪೈಕಿ ಬೀದರ್‌ನಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಶಿಯಸ್ ಗಡಿದಾಟಿದ್ದು, ಜನರು ಕಂಗೆಡುವಂತಾಗಿದೆ.

ಬೀದರ್ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗೂ ಮೇಲೆ ಏರಿಕೆಯಾಗಿದೆ. ಬೀದರ್‌ನ ಗರಿಷ್ಠ ತಾಪಮಾನ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ನಡುವೆ ದಾಖಲಾದ ಮಟ್ಟಿಗೆ 45.8 ಡಿಗ್ರಿ ಸೆಲ್ಶಿಯಸ್‌ ಆಗಿತ್ತು. ಇದು ಇನ್ನೂ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
icon

(2 / 12)

ಬೀದರ್ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ಗೂ ಮೇಲೆ ಏರಿಕೆಯಾಗಿದೆ. ಬೀದರ್‌ನ ಗರಿಷ್ಠ ತಾಪಮಾನ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ನಡುವೆ ದಾಖಲಾದ ಮಟ್ಟಿಗೆ 45.8 ಡಿಗ್ರಿ ಸೆಲ್ಶಿಯಸ್‌ ಆಗಿತ್ತು. ಇದು ಇನ್ನೂ ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

ಕಲಬುರಗಿಯಲ್ಲಿ ಕೂಡ ಸುಡುಬಿಸಿಲಿನ ಅನುಭವ. ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆ ನಡುವೆ ಇಲ್ಲಿ ದಾಖಲಾದ ಗರಿಷ್ಠ ತಾಪಮಾನ 43.9 ಡಿಗ್ರಿ ಸೆಲ್ಶಿಯಸ್. ಈ ಸುಡು ಬಿಸಿಲಿನ ಅನುಭವ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
icon

(3 / 12)

ಕಲಬುರಗಿಯಲ್ಲಿ ಕೂಡ ಸುಡುಬಿಸಿಲಿನ ಅನುಭವ. ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆ ನಡುವೆ ಇಲ್ಲಿ ದಾಖಲಾದ ಗರಿಷ್ಠ ತಾಪಮಾನ 43.9 ಡಿಗ್ರಿ ಸೆಲ್ಶಿಯಸ್. ಈ ಸುಡು ಬಿಸಿಲಿನ ಅನುಭವ ಇನ್ನೂ ಕೆಲವು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಯಚೂರು - ಬಿಸಿಲ ನಾಡು ಎಂದು ಜನಪ್ರಿಯವಾಗಿರುವ ಪ್ರದೇಶಗಳ ಪೈಕಿ ಒಂದು. ಇಲ್ಲಿ ನಿನ್ನೆ ದಾಖಲಾದ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಶಿಯಸ್. ಚರ್ಮ ಚುರ್‌ಗುಟ್ಟುವ ಬಿಸಿಲಿನ ತಾಪಕ್ಕೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
icon

(4 / 12)

ರಾಯಚೂರು - ಬಿಸಿಲ ನಾಡು ಎಂದು ಜನಪ್ರಿಯವಾಗಿರುವ ಪ್ರದೇಶಗಳ ಪೈಕಿ ಒಂದು. ಇಲ್ಲಿ ನಿನ್ನೆ ದಾಖಲಾದ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಶಿಯಸ್. ಚರ್ಮ ಚುರ್‌ಗುಟ್ಟುವ ಬಿಸಿಲಿನ ತಾಪಕ್ಕೆ ಮುಂಜಾಗ್ರತೆ ವಹಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಬಳ್ಳಾರಿ ಜನರಿಗೆ ಸುಡುಬಿಸಿಲು ಹೊಸದಲ್ಲ. ಆದಾಗ್ಯೂ ಈ ವರ್ಷ ಬಿಸಿಲು ಸ್ವಲ್ಪ ಹೆಚ್ಚೇ ಇದೆ ಎಂದು ಹೇಳುತ್ತಿದ್ದಾರೆ. ನಿನ್ನೆ ಬಳ್ಳಾರಿಯಲ್ಲಿ 43.3 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
icon

(5 / 12)

ಬಳ್ಳಾರಿ ಜನರಿಗೆ ಸುಡುಬಿಸಿಲು ಹೊಸದಲ್ಲ. ಆದಾಗ್ಯೂ ಈ ವರ್ಷ ಬಿಸಿಲು ಸ್ವಲ್ಪ ಹೆಚ್ಚೇ ಇದೆ ಎಂದು ಹೇಳುತ್ತಿದ್ದಾರೆ. ನಿನ್ನೆ ಬಳ್ಳಾರಿಯಲ್ಲಿ 43.3 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಯಾದಗಿರಿಯಲ್ಲೂ ಬಿಸಿಲು ಕಡಿಮಯೇನಲ್ಲ. ಜನರು ಕಂಗಾಲಾಗುವಂತೆ ಮಾಡುವ ಬಿಸಿಲು ಈ ಬಾರಿಯೂ ತನ್ನ ಪ್ರತಾಪ ತೋರುತ್ತಿದೆ. ನಿನ್ನೆ ಯಾದಗಿರಿಯಲ್ಲಿ 43 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
icon

(6 / 12)

ಯಾದಗಿರಿಯಲ್ಲೂ ಬಿಸಿಲು ಕಡಿಮಯೇನಲ್ಲ. ಜನರು ಕಂಗಾಲಾಗುವಂತೆ ಮಾಡುವ ಬಿಸಿಲು ಈ ಬಾರಿಯೂ ತನ್ನ ಪ್ರತಾಪ ತೋರುತ್ತಿದೆ. ನಿನ್ನೆ ಯಾದಗಿರಿಯಲ್ಲಿ 43 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ವಿಜಯಪುರವೂ ಭೌಗೋಳಿಕವಾಗಿ ಬಿಸಿಲು ಹೆಚ್ಚಿರುವ ಪ್ರದೇಶ. ಇಲ್ಲಿನ ಜನರು ಬಿಸಿಲಿಗೆ ಒಗ್ಗಿಕೊಂಡಿದ್ದಾರಾದರೂ, ಈ ಬಾರಿ ತಾಪಮಾನ ತುಸು ಹೆಚ್ಚು ಎಂದು ಹೇಳುತ್ತಿದ್ದಾರೆ. ನಿನ್ನೆ ವಿಜಯಪುರದಲ್ಲಿ 42.2 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.
icon

(7 / 12)

ವಿಜಯಪುರವೂ ಭೌಗೋಳಿಕವಾಗಿ ಬಿಸಿಲು ಹೆಚ್ಚಿರುವ ಪ್ರದೇಶ. ಇಲ್ಲಿನ ಜನರು ಬಿಸಿಲಿಗೆ ಒಗ್ಗಿಕೊಂಡಿದ್ದಾರಾದರೂ, ಈ ಬಾರಿ ತಾಪಮಾನ ತುಸು ಹೆಚ್ಚು ಎಂದು ಹೇಳುತ್ತಿದ್ದಾರೆ. ನಿನ್ನೆ ವಿಜಯಪುರದಲ್ಲಿ 42.2 ಡಿಗ್ರಿ ಸೆಲ್ಶಿಯಸ್ ತಾಪಮಾನ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ಕಾವು ಎಂಥವರನ್ನೂ ಕಂಗೆಡಿಸುವಂಥದ್ದು. ಈ ಬಾರಿ ಬಹುತೇಕ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚೇ ಬಿಸಿಲು ಕಾಡಿದೆ. ನಿನ್ನೆ ಬೆಳಗಾವಿಯಲ್ಲಿ 41.5 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
icon

(8 / 12)

ಬೆಳಗಾವಿ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ಕಾವು ಎಂಥವರನ್ನೂ ಕಂಗೆಡಿಸುವಂಥದ್ದು. ಈ ಬಾರಿ ಬಹುತೇಕ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚೇ ಬಿಸಿಲು ಕಾಡಿದೆ. ನಿನ್ನೆ ಬೆಳಗಾವಿಯಲ್ಲಿ 41.5 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಕೊಪ್ಪಳದಲ್ಲೂ ಈ ಬಾರಿ ಬಿಸಿಲು ಬಹಳ ಕಾಡತೊಡಗಿದ್ದು, ಕಳೆದ ಕೆಲವು ದಿನಗಳಿಂದ ನಿತ್ಯವೂ ಎಂಬಂತೆ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚೇ ಕಾಡಿದೆ. ನಿನ್ನೆ ಗರಿಷ್ಠ ತಾಪಮಾನ 41.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
icon

(9 / 12)

ಕೊಪ್ಪಳದಲ್ಲೂ ಈ ಬಾರಿ ಬಿಸಿಲು ಬಹಳ ಕಾಡತೊಡಗಿದ್ದು, ಕಳೆದ ಕೆಲವು ದಿನಗಳಿಂದ ನಿತ್ಯವೂ ಎಂಬಂತೆ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚೇ ಕಾಡಿದೆ. ನಿನ್ನೆ ಗರಿಷ್ಠ ತಾಪಮಾನ 41.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಗದಗ ಜಿಲ್ಲೆಯಲ್ಲಿ ಕೂಡ ಬಿಸಿಲಿನ ಝಳ ಜನ ಜಾನುವಾರುಗಳು ಕಂಗೆಡುವಂತೆ ಮಾಡಿದೆ. ಇಲ್ಲಿ ನಿನ್ನೆ ಗರಿಷ್ಠ ತಾಪಮಾನ 41.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
icon

(10 / 12)

ಗದಗ ಜಿಲ್ಲೆಯಲ್ಲಿ ಕೂಡ ಬಿಸಿಲಿನ ಝಳ ಜನ ಜಾನುವಾರುಗಳು ಕಂಗೆಡುವಂತೆ ಮಾಡಿದೆ. ಇಲ್ಲಿ ನಿನ್ನೆ ಗರಿಷ್ಠ ತಾಪಮಾನ 41.3 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಚಿತ್ರದುರ್ಗ ಕೋಟೆಗಳ ನಾಡು ಎಂದೇ ಗುರುತಿಸಿಕೊಂಡಿದ್ದು, ಕಲ್ಲು ಬಂಡೆಗಳು ಕೂಡ ಬಿಸಿಲಿನ ಶಾಖಕ್ಕೆ ಒಡೆದು ಹೋಗುತ್ತವೇನೋ ಎಂಬ ಭಯ ಕಾಡಿದೆ. ಹೌದು ಇಲ್ಲಿ ನಿನ್ನೆ ಗರಿಷ್ಠ ತಾಪಮಾನ 40.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
icon

(11 / 12)

ಚಿತ್ರದುರ್ಗ ಕೋಟೆಗಳ ನಾಡು ಎಂದೇ ಗುರುತಿಸಿಕೊಂಡಿದ್ದು, ಕಲ್ಲು ಬಂಡೆಗಳು ಕೂಡ ಬಿಸಿಲಿನ ಶಾಖಕ್ಕೆ ಒಡೆದು ಹೋಗುತ್ತವೇನೋ ಎಂಬ ಭಯ ಕಾಡಿದೆ. ಹೌದು ಇಲ್ಲಿ ನಿನ್ನೆ ಗರಿಷ್ಠ ತಾಪಮಾನ 40.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲೂ ಸಹಜವಾಗಿಯೇ ಗರಿಷ್ಠ ಉಷ್ಣಾಂಶ ಏರಿಕೆಯಾಗತೊಡಗಿದೆ. ಪಕ್ಕದ ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಲ್ಲೂ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯಲ್ಲಿ 40.4 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
icon

(12 / 12)

ಬಾಗಲಕೋಟೆ ಜಿಲ್ಲೆಯಲ್ಲೂ ಸಹಜವಾಗಿಯೇ ಗರಿಷ್ಠ ಉಷ್ಣಾಂಶ ಏರಿಕೆಯಾಗತೊಡಗಿದೆ. ಪಕ್ಕದ ವಿಜಯಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಲ್ಲೂ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಗಡಿ ದಾಟಿದೆ. ನಿನ್ನೆ ಬಾಗಲಕೋಟೆ ಜಿಲ್ಲೆಯಲ್ಲಿ 40.4 ಡಿಗ್ರಿ ಸೆಲ್ಶಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು