MM Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mm Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ

MM Hills Ugadi 2025: ಮಾದಪ್ಪನ ಬೆಟ್ಟದಲ್ಲಿ ಯುಗಾದಿ ರಥೋತ್ಸವಕ್ಕೆ ಭಕ್ತರ ಸಡಗರ, ನಾಳೆಯಿಂದ ಆರಂಭ ಹೇಗಿದೆ ಸಿದ್ದತೆ

  • MM Hills Ugadi 2025: ಚಾಮರಾಜನಗರ ಜಿಲ್ಲೆಯ ಪ್ರಸಿದ್ದ ಯಾತ್ರಾ ಸ್ಥಳವಾದ ಮಲೈಮಹದೇಶ್ವರ ಬೆಟ್ಟದಲ್ಲಿ ಮಾರ್ಚ್‌ 27ರಿಂದಲೇ ಯುಗಾದಿ ಜಾತ್ಸಾ ಮಹೋತ್ಸವ, ರಥೋತ್ಸವಕ್ಕೆ ಸಿದ್ದತೆಗಳು ಜೋರಾಗಿವೆ. ಗುರುವಾರದಿಂದ ಚಟುವಟಿಕೆ ಶುರುವಾಗಲಿವೆ.

ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಮಲೈ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು. ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.
icon

(1 / 8)

ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದ ಮಲೈ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು. ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.

ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುಗಾದಿ ಜಾತ್ರೆಗೆ ಭಕ್ತರು ಬರುವುದರಿಂದ ಭಾರೀ ಭದ್ರತೆ ಸಹಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
icon

(2 / 8)

ಬೆಟ್ಟಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯುಗಾದಿ ಜಾತ್ರೆಗೆ ಭಕ್ತರು ಬರುವುದರಿಂದ ಭಾರೀ ಭದ್ರತೆ ಸಹಿತ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಮಲೈ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರೆ ಕಾರಣದಿಂದ ಮಾಹಿತಿ ಕೇಂದ್ರ ಆರಂಭಿಸಿ ಭಕ್ತರಿಗೆ ಮಾಹಿತಿ ಒದಗಿಸಲಾಗುತ್ತಿದೆ.
icon

(3 / 8)

ಮಲೈ ಮಹದೇಶ್ವರ ಕ್ಷೇತ್ರಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು ಭಾಗದಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಜಾತ್ರೆ ಕಾರಣದಿಂದ ಮಾಹಿತಿ ಕೇಂದ್ರ ಆರಂಭಿಸಿ ಭಕ್ತರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ಮಲೈ ಮಹದೇಶ್ವರ ಬೆಟ್ಟಕ್ಕೆ ಕೆಲವರು ಮೆಟ್ಟಿಲುಗಳನ್ನು ಏರಿ ಆಗಮಿಸುತ್ತಾರೆ, ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಬೆಟ್ಟಕ್ಕೆ ಬರುವ ಸಂಪ್ರದಾಯವಿದೆ.
icon

(4 / 8)

ಮಲೈ ಮಹದೇಶ್ವರ ಬೆಟ್ಟಕ್ಕೆ ಕೆಲವರು ಮೆಟ್ಟಿಲುಗಳನ್ನು ಏರಿ ಆಗಮಿಸುತ್ತಾರೆ, ಬಿಸಿಲನ್ನೂ ಲೆಕ್ಕಿಸದೇ ಭಕ್ತರು ಬೆಟ್ಟಕ್ಕೆ ಬರುವ ಸಂಪ್ರದಾಯವಿದೆ.

ಬೆಟ್ಟದಲ್ಲಿ ದೀಪಾಲಂಕಾರ ಸಹಿತ ಭಕ್ತರನ್ನು ಆಕರ್ಷಿಸಲು ವಿವಿಧ ಚಟುವಟಿಕೆಗಳು ನಡೆದಿವೆ. ಭಾನುವಾರದವರಗೂ ಯುಗಾದಿ ಜಾತ್ರಾ ಮಹೋತ್ಸವ ಬೆಟ್ಟದಲ್ಲಿ ಇರಲಿದೆ.
icon

(5 / 8)

ಬೆಟ್ಟದಲ್ಲಿ ದೀಪಾಲಂಕಾರ ಸಹಿತ ಭಕ್ತರನ್ನು ಆಕರ್ಷಿಸಲು ವಿವಿಧ ಚಟುವಟಿಕೆಗಳು ನಡೆದಿವೆ. ಭಾನುವಾರದವರಗೂ ಯುಗಾದಿ ಜಾತ್ರಾ ಮಹೋತ್ಸವ ಬೆಟ್ಟದಲ್ಲಿ ಇರಲಿದೆ.

ಮಲೈ ಮಹದಶ್ವರ ಬೆಟ್ಟದಲ್ಲಿ ಯುಗಾದಿ ದಿನ ನಡೆಯುವ ಜಾತ್ರೆಗಾಗಿ ರಥವನ್ನು ಅಣಿಗೊಳಿಸಲಾಗುತ್ತಿದೆ.
icon

(6 / 8)

ಮಲೈ ಮಹದಶ್ವರ ಬೆಟ್ಟದಲ್ಲಿ ಯುಗಾದಿ ದಿನ ನಡೆಯುವ ಜಾತ್ರೆಗಾಗಿ ರಥವನ್ನು ಅಣಿಗೊಳಿಸಲಾಗುತ್ತಿದೆ.

ಈಗಾಗಲೇ ಯುಗಾದಿ ಜಾತ್ರಾ ಮಹೋತ್ಸವೂ ಸೇರಿದಂತೆ ನಾನಾ ಧಾರ್ಮಿಕ ಚಟುವಟಿಕೆಗಳು ಬೆಟ್ಟದಲ್ಲಿ ನಡೆದಿವೆ. ಇದಕ್ಕಾಗಿ ಮಲೈಮಹದೇಶ್ವರ ಸ್ವಾಮಿಗೆ ಅಲಂಕಾರಗಳು ನಡೆದಿವೆ.
icon

(7 / 8)

ಈಗಾಗಲೇ ಯುಗಾದಿ ಜಾತ್ರಾ ಮಹೋತ್ಸವೂ ಸೇರಿದಂತೆ ನಾನಾ ಧಾರ್ಮಿಕ ಚಟುವಟಿಕೆಗಳು ಬೆಟ್ಟದಲ್ಲಿ ನಡೆದಿವೆ. ಇದಕ್ಕಾಗಿ ಮಲೈಮಹದೇಶ್ವರ ಸ್ವಾಮಿಗೆ ಅಲಂಕಾರಗಳು ನಡೆದಿವೆ.

ಮಲೈ ಮಹದೇಶ್ವರ ಬೆಟ್ಟ ಮಹದೇಶ್ವರ ಸ್ವಾಮಿಗೆ ಬುಧವಾರ ಹೂವಿನ ಅಲಂಕಾರ ಮಾಡಲಾಗಿತ್ತು. ಗುರುವಾರದಿಂದಲೂ ನಾಲ್ಕು ದಿನ ವಿವಿಧ ಅಲಂಕಾರ ಇರಲಿದೆ.
icon

(8 / 8)

ಮಲೈ ಮಹದೇಶ್ವರ ಬೆಟ್ಟ ಮಹದೇಶ್ವರ ಸ್ವಾಮಿಗೆ ಬುಧವಾರ ಹೂವಿನ ಅಲಂಕಾರ ಮಾಡಲಾಗಿತ್ತು. ಗುರುವಾರದಿಂದಲೂ ನಾಲ್ಕು ದಿನ ವಿವಿಧ ಅಲಂಕಾರ ಇರಲಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು