ಕರ್ನಾಟಕದಲ್ಲೇ ಮೊದಲ ಬಾರಿ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ ಸಾರ್ವಜನಿಕರಿಂದ ಅತಿರುದ್ರ ಮಹಾಯಾಗ, ಹೇಗಿದೆ ತಯಾರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರ್ನಾಟಕದಲ್ಲೇ ಮೊದಲ ಬಾರಿ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ ಸಾರ್ವಜನಿಕರಿಂದ ಅತಿರುದ್ರ ಮಹಾಯಾಗ, ಹೇಗಿದೆ ತಯಾರಿ

ಕರ್ನಾಟಕದಲ್ಲೇ ಮೊದಲ ಬಾರಿ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿದೆ ಸಾರ್ವಜನಿಕರಿಂದ ಅತಿರುದ್ರ ಮಹಾಯಾಗ, ಹೇಗಿದೆ ತಯಾರಿ

ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಿಟಿಲಾಪುರ ಸದಾಶಿವ ರುದ್ರ ದೇವಸ್ಥಾನದಲ್ಲಿ ಸಾರ್ವಜನಿಕರು ಅತಿರುದ್ರ ಮಹಾಯಾಗವನ್ನು ಮೇ 4ರವರೆಗೆ ಆಯೋಜಿಸಿದ್ದಾರೆ. ಚಿತ್ರನೋಟ ಇಲ್ಲಿದೆಮಾಹಿತಿ: ಹರೀಶ ಮಾಂಬಾಡಿ,ಮಂಗಳೂರು

ರುದ್ರಯಾಗ, ಶತರುದ್ರಯಾಗ, ಅತಿರುದ್ರಯಾಗ ಖಾಸಗಿಯಾಗಿಯೋ ಅಥವಾ ಮಠ, ಮಂದಿರಗಳ ಪ್ರಾಯೋಜಕತ್ವದಲ್ಲಿ ನಡೆಯುವುದುಂಟು. ಆದರೆ ಸಾರ್ವಜನಿಕವಾಗಿ  ಅತಿಮಹಾರುದ್ರಯಾಗವೊಂದು ನಡೆಯುತ್ತಿರುವುದು ವಿರಳ. ದಕ್ಷಿಣ ಭಾರತದಲ್ಲೇ ಮೊದಲು ಎಂಬಂತೆ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಳ್ಳಿಯೊಂದರಲ್ಲಿ ಇರುವ ನಿಟಿಲಾಪುರ ಸದಾಶಿವ ರುದ್ರ ದೇವಸ್ಥಾನದಲ್ಲಿ ಸಾರ್ವಜನಿಕರೆಲ್ಲ ಸೇರಿ ಅತಿಮಹಾರುದ್ರಯಾಗವನ್ನು ನಡೆಸುತ್ತಿದ್ದಾರೆ. ಮೇ.2ಕ್ಕೆ ಯಾಗದ ಪ್ರಕ್ರಿಯೆಗಳು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ.
icon

(1 / 9)

ರುದ್ರಯಾಗ, ಶತರುದ್ರಯಾಗ, ಅತಿರುದ್ರಯಾಗ ಖಾಸಗಿಯಾಗಿಯೋ ಅಥವಾ ಮಠ, ಮಂದಿರಗಳ ಪ್ರಾಯೋಜಕತ್ವದಲ್ಲಿ ನಡೆಯುವುದುಂಟು. ಆದರೆ ಸಾರ್ವಜನಿಕವಾಗಿ ಅತಿಮಹಾರುದ್ರಯಾಗವೊಂದು ನಡೆಯುತ್ತಿರುವುದು ವಿರಳ. ದಕ್ಷಿಣ ಭಾರತದಲ್ಲೇ ಮೊದಲು ಎಂಬಂತೆ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹಳ್ಳಿಯೊಂದರಲ್ಲಿ ಇರುವ ನಿಟಿಲಾಪುರ ಸದಾಶಿವ ರುದ್ರ ದೇವಸ್ಥಾನದಲ್ಲಿ ಸಾರ್ವಜನಿಕರೆಲ್ಲ ಸೇರಿ ಅತಿಮಹಾರುದ್ರಯಾಗವನ್ನು ನಡೆಸುತ್ತಿದ್ದಾರೆ. ಮೇ.2ಕ್ಕೆ ಯಾಗದ ಪ್ರಕ್ರಿಯೆಗಳು ಆರಂಭಗೊಂಡಿದ್ದು, 4ರವರೆಗೆ ನಡೆಯಲಿದೆ.

ಕಾಶಿ ಸಂಸ್ಥಾನ ಮಠಾಧೀಶ್ವರ ಶ್ರೀ 1008 ಜಗದ್ಗುರು ಕಾಶೀಪೀಠ ವಾರನಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, 24 ಸಂತರು ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ
icon

(2 / 9)

ಕಾಶಿ ಸಂಸ್ಥಾನ ಮಠಾಧೀಶ್ವರ ಶ್ರೀ 1008 ಜಗದ್ಗುರು ಕಾಶೀಪೀಠ ವಾರನಾಸಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ತಂತ್ರಿಗಳಾದ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, 24 ಸಂತರು ಹಾಗೂ ನಾನಾ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ

ಈಗಾಗಲೇ 11 ಹೋಮಕುಂಡಗಳನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 30ರಿಂದಲೇ ರುದ್ರಪಠಣ ಆರಂಭಗೊಂಡಿದೆ. ಅತಿರುದ್ರ (14,641 ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡಲಾಗುತ್ತದೆ.
icon

(3 / 9)

ಈಗಾಗಲೇ 11 ಹೋಮಕುಂಡಗಳನ್ನು ಸ್ಥಾಪಿಸಲಾಗಿದ್ದು, ಮಾರ್ಚ್ 30ರಿಂದಲೇ ರುದ್ರಪಠಣ ಆರಂಭಗೊಂಡಿದೆ. ಅತಿರುದ್ರ (14,641 ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡಲಾಗುತ್ತದೆ.

ಮೇ 3 ಮತ್ತು 4ರಂದು ಸುಮಾರು 260ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಿ 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಲಿದ್ದಾರೆ
icon

(4 / 9)

ಮೇ 3 ಮತ್ತು 4ರಂದು ಸುಮಾರು 260ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಿ 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಲಿದ್ದಾರೆ

ಮೇ. 2ರಂದು ಶುಕ್ರವಾರವೇ ಕಾರ್ಯಕ್ರಮಗಳು ಆರಂಭಗೊಂಡಿವೆ. 3ರಂದು ಸಂಜೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮತ್ತು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನವಾಗುತ್ತದೆ.
icon

(5 / 9)

ಮೇ. 2ರಂದು ಶುಕ್ರವಾರವೇ ಕಾರ್ಯಕ್ರಮಗಳು ಆರಂಭಗೊಂಡಿವೆ. 3ರಂದು ಸಂಜೆ ಕಲ್ಲಡ್ಕ ಪೇಟೆಯಿಂದ ಹಸಿರು ಹೊರೆಕಾಣಿಕೆ ಶೋಭಾಯಾತ್ರೆ ಮತ್ತು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಆಗಮನವಾಗುತ್ತದೆ.

4ರಂದು ಭಾನುವಾರ 4ರಂದು ಬೆಳಗ್ಗೆ ಗಂಟೆ ೫ರಿಂದ ಅತಿಮಹಾರುದ್ರಯಾಗ ಪ್ರಾರಂಭ ಬೆಳಗ್ಗೆ  11 ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ೬ರಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ
icon

(6 / 9)

4ರಂದು ಭಾನುವಾರ 4ರಂದು ಬೆಳಗ್ಗೆ ಗಂಟೆ ೫ರಿಂದ ಅತಿಮಹಾರುದ್ರಯಾಗ ಪ್ರಾರಂಭ ಬೆಳಗ್ಗೆ 11 ಕ್ಕೆ ಪೂರ್ಣಾಹುತಿ, ಮಹಾಪೂಜೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಅನ್ನಸಂತರ್ಪಣೆ. ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ೬ರಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ

ರುದ್ರ (ಒಂದು ಬಾರಿ) ಏಕಾದಶ ರುದ್ರ (11 ಬಾರಿ) ಶತರುದ್ರ (121 ಬಾರಿ), ಮಹಾರುದ್ರ, (1331ಬಾರಿ), ಅತಿರುದ್ರ (14,641 ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡುವುದು ಶಿಷ್ಟ ಸಮಾಜದಲ್ಲಿ ಆಚರಣೆಯಲ್ಲಿ ಕಂಡು ಬಂದಿದೆ. ನಿಟಿಲಾಕ್ಷ ಸನ್ನಿಧಿಯಲ್ಲಿ ನಡೆಯುವುದು ಅತಿಮಹಾರುದ್ರಯಾಗ. ಇದಕ್ಕಾಗಿ 14,641 ಬಾರಿ ರುದ್ರಪಾರಾಯಣವಾಗಬೇಕು.
icon

(7 / 9)

ರುದ್ರ (ಒಂದು ಬಾರಿ) ಏಕಾದಶ ರುದ್ರ (11 ಬಾರಿ) ಶತರುದ್ರ (121 ಬಾರಿ), ಮಹಾರುದ್ರ, (1331ಬಾರಿ), ಅತಿರುದ್ರ (14,641 ಬಾರಿ) ಪಾರಾಯಣ ಮಾಡಿ ಈ ಜಪದ ದಶಾಂಶದಲ್ಲಿ ಯಾಗವನ್ನು ಮಾಡುವುದು ಶಿಷ್ಟ ಸಮಾಜದಲ್ಲಿ ಆಚರಣೆಯಲ್ಲಿ ಕಂಡು ಬಂದಿದೆ. ನಿಟಿಲಾಕ್ಷ ಸನ್ನಿಧಿಯಲ್ಲಿ ನಡೆಯುವುದು ಅತಿಮಹಾರುದ್ರಯಾಗ. ಇದಕ್ಕಾಗಿ 14,641 ಬಾರಿ ರುದ್ರಪಾರಾಯಣವಾಗಬೇಕು.

ಈ ಹಿನ್ನೆಲೆಯಲ್ಲಿ ಮಾ.30ರಿಂದಲೇ ರುದ್ರಪಠಣ ಆರಂಭಗೊಂಡಿತ್ತು. ಕೊನೇ ದಿನ ಸುಮಾರು 300ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಲಿದ್ದಾರೆ. 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಿ ಯಾಗದ ಪರಿಪೂರ್ಣತೆ ಎಂಬ ಮಹಾಸಂಕಲ್ಪ ಮಾಡಲಾಗಿದೆ.
icon

(8 / 9)

ಈ ಹಿನ್ನೆಲೆಯಲ್ಲಿ ಮಾ.30ರಿಂದಲೇ ರುದ್ರಪಠಣ ಆರಂಭಗೊಂಡಿತ್ತು. ಕೊನೇ ದಿನ ಸುಮಾರು 300ಕ್ಕೂ ಹೆಚ್ಚು ಋತ್ವಿಜರು ಆಗಮಿಸಿ ರುದ್ರ ಪಾರಾಯಣವನ್ನು ಮಾಡಲಿದ್ದಾರೆ. 4ರಂದು 11 ಪ್ರತ್ಯೇಕ ಕುಂಡಗಳಲ್ಲಿ ರುದ್ರ ದೇವರಿಗೆ ಸುವಸ್ತುಗಳಿಂದ ಹವಿಸ್ಸನ್ನು ಸಮರ್ಪಿಸಿ ಯಾಗದ ಪರಿಪೂರ್ಣತೆ ಎಂಬ ಮಹಾಸಂಕಲ್ಪ ಮಾಡಲಾಗಿದೆ.

ಇಂಥದ್ದೊಂದು ಯಾಗ ನಡೆಸಬೇಕಾದರೆ, ರುದ್ರಪಾರಾಯಣವನ್ನು ಮಾಡುವವರಿಂದ ತೊಡಗಿಸಿ, ಹೋಮಕುಂಡಗಳ ನಿರ್ಮಾಣಪರ್ಯಂತ ಸಾಕಷ್ಟು ದಿನಗಳ ಕೆಲಸ ಹಾಗೂ ರುದ್ರನ ಸನ್ನಿಧಿ ದೊರಕಬೇಕು. ನಿಟಿಲಾಕ್ಷ ಸದಾಶಿವ ರುದ್ರ ದೇವರ ಸನ್ನಿಧಿ ಇದಕ್ಕೆ ಪೂರಕವಾದ ವಾತಾವರಣ ಒದಗಿಸಿದೆ. ಇದಕ್ಕೆ ಸ್ಥಳೀಯರು ಸಾಥ್ ನೀಡಿದ್ದು, ಶ್ರಮದಾನದ ಮೂಲಕ ಕ್ಷೇತ್ರವನ್ನು ಯಾಗಕ್ಕೆ ಸಜ್ಜುಗೊಳಿಸಿದ್ದಾರೆ. ಇದೀಗ ನಿಟಿಲಾಕ್ಷ ಸನ್ನಿಧಿಯಲ್ಲಿ ರುದ್ರಪಠಣ ಮೊಳಗುತ್ತಿದೆ.
icon

(9 / 9)

ಇಂಥದ್ದೊಂದು ಯಾಗ ನಡೆಸಬೇಕಾದರೆ, ರುದ್ರಪಾರಾಯಣವನ್ನು ಮಾಡುವವರಿಂದ ತೊಡಗಿಸಿ, ಹೋಮಕುಂಡಗಳ ನಿರ್ಮಾಣಪರ್ಯಂತ ಸಾಕಷ್ಟು ದಿನಗಳ ಕೆಲಸ ಹಾಗೂ ರುದ್ರನ ಸನ್ನಿಧಿ ದೊರಕಬೇಕು. ನಿಟಿಲಾಕ್ಷ ಸದಾಶಿವ ರುದ್ರ ದೇವರ ಸನ್ನಿಧಿ ಇದಕ್ಕೆ ಪೂರಕವಾದ ವಾತಾವರಣ ಒದಗಿಸಿದೆ. ಇದಕ್ಕೆ ಸ್ಥಳೀಯರು ಸಾಥ್ ನೀಡಿದ್ದು, ಶ್ರಮದಾನದ ಮೂಲಕ ಕ್ಷೇತ್ರವನ್ನು ಯಾಗಕ್ಕೆ ಸಜ್ಜುಗೊಳಿಸಿದ್ದಾರೆ. ಇದೀಗ ನಿಟಿಲಾಕ್ಷ ಸನ್ನಿಧಿಯಲ್ಲಿ ರುದ್ರಪಠಣ ಮೊಳಗುತ್ತಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು