Wayanad Land slides: ವಯನಾಡಿನಲ್ಲಿ ಫಟಾಫಟ್ ಸೇತುವೆ ನಿರ್ಮಿಸಿದ ಸೇನಾ ಸಿಬ್ಬಂದಿ, ಹೀಗಿತ್ತು ಸೇನಾ ತಂಡಗಳ ಕಾರ್ಯಾಚರಣೆ photos
- Indian army service ಎಂತಹ ಸನ್ನಿವೇಶದಲ್ಲೂ ಭಾರತೀಯ ಸೇನೆ( Indian army) ಪರಿಸ್ಥಿತಿಯನ್ನು ನಿಭಾಯಿಸಿ ಜನರ ಪರ ನಿಲ್ಲುತ್ತದೆ. ವಯನಾಡಿನಲ್ಲೂ(Wayanad Landslides) ಅದೇ ಆಗಿದ್ದು. ರಾತ್ರೋರಾತ್ರಿ ಸೇನಾ ತಂಡಗಳು ಸೇತುವೆಗಳನ್ನು ನಿರ್ಮಿಸಿ ಜನರಿಗೆ ನೆರವಾಗಿದ್ದು ವಿಶೇಷ. ಇದರ ಕುರಿತ ಚಿತ್ರಣ ಇಲ್ಲಿದೆ.
- Indian army service ಎಂತಹ ಸನ್ನಿವೇಶದಲ್ಲೂ ಭಾರತೀಯ ಸೇನೆ( Indian army) ಪರಿಸ್ಥಿತಿಯನ್ನು ನಿಭಾಯಿಸಿ ಜನರ ಪರ ನಿಲ್ಲುತ್ತದೆ. ವಯನಾಡಿನಲ್ಲೂ(Wayanad Landslides) ಅದೇ ಆಗಿದ್ದು. ರಾತ್ರೋರಾತ್ರಿ ಸೇನಾ ತಂಡಗಳು ಸೇತುವೆಗಳನ್ನು ನಿರ್ಮಿಸಿ ಜನರಿಗೆ ನೆರವಾಗಿದ್ದು ವಿಶೇಷ. ಇದರ ಕುರಿತ ಚಿತ್ರಣ ಇಲ್ಲಿದೆ.
(1 / 7)
ಕೇರಳದ ವಯನಾಡು ಜಿಲ್ಲೆಯಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿ 255 ಕ್ಕೂ ಹೆಚ್ಚು ಮೃತಪಟ್ಟಿ ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇವರ ನೆರವಿಗೆ ನಿಂತಿದ್ದು ಭಾರತೀಯ ಸೇನೆ.
(2 / 7)
ಆರು ಭಾರತೀಯ ಸೇನೆಯ ಪರಿಹಾರ ತಂಡಗಳು, ವೈದ್ಯಕೀಯ ತಂಡಗಳು, ಶ್ವಾನ ತಂಡಗಳು ಮತ್ತು ಇಂಜಿನಿಯರ್ ಟಾಸ್ಕ್ ಫೋರ್ಸ್ ಅಟ್ಟಮಾಲ, ಮುಂಡಕ್ಕೈ ಮತ್ತು ಚೂರಲ್ಮಾಲಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
(4 / 7)
ಬೈಲಿ ಬ್ರಿಡ್ಜ್ ಪ್ಯಾನೆಲ್ಗಳನ್ನು ಬಳಸಿಕೊಂಡು ಸುಧಾರಿತ ಕಾಲು ದಾರಿಯನ್ನು ಚೂರಲ್ಮಾಲ-ಮುಂಡೆಕ್ಕೈ ಸಂಪರ್ಕಿಸುವ ಕೆಲಸವನ್ನುಇಂಜಿನಿಯರ್ ಟಾಸ್ಕ್ಫೋರ್ಸ್ ತಂಡ ರಾತ್ರೋರಾತ್ರಿ ಪೂರ್ಣಗೊಳಿಸಲಾಗಿದೆ.
(5 / 7)
ಈ ತತ್ಕ್ಷಣದ ಸೇತುವೆಯು ನದಿಯ ಇನ್ನೊಂದು ಬದಿಯಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತದೆ ಎನ್ನುವುದು ಸೇನೆಯ ಅಭಿಪ್ರಾಯ.
(6 / 7)
ಇದೇ ರೀತಿ ಮೀಪಾಡಿ-ಚೂರ್ಮಲಾದಲ್ಲಿ ಮದ್ರಾಸ್ ಇಂಜಿನಿಯರ್ಸ್ ಟಾಸ್ಕ್ ಫೋರ್ಸ್ ನಿಂದ ಎ ಕ್ಲಾಸ್ 24 ಬೈಲಿ ಸೇತುವೆ ನಿರ್ಮಾಣವು ರಾತ್ರಿಯಿಡೀ ನಡೆದು ಈಗ ಬಳಕೆಗೂ ಅಣಿಯಾಗಿದೆ.
ಇತರ ಗ್ಯಾಲರಿಗಳು