Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ; ಭಕ್ತರ ಪುಣ್ಯ ಸ್ನಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ; ಭಕ್ತರ ಪುಣ್ಯ ಸ್ನಾನ

Cauvery Theerthodbhava 2024: ಕೊಡಗಿನ ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಿದ ಕಾವೇರಿ ಮಾತೆ; ಭಕ್ತರ ಪುಣ್ಯ ಸ್ನಾನ

  • ಕೊಡಗಿನ ಕಾವೇರಿ ತುಲಾ ಸಂಕ್ರಮಣದಲ್ಲಿ ಅವಿರ್ಭವಿಸುವ ತೀರ್ಥೋದ್ಭವ ಈ ಬಾರಿಯೂ ಸಾಂಗವಾಗಿ ನೆರವೇರಿತು. ಭಕ್ತರ ಕಾವೇರಿ ಉದ್ಘೋಷದ ನಡುವೆ ನಡೆ ತೀರ್ಥೋದ್ಭವ 2024ರ ಕ್ಷಣಗಳು ಹೀಗಿದ್ದವು.

ಕೊಡಗಿನ ಜೀವನದಿ ಮಾತೆ ಕಾವೇರಿ ಗುರುವಾರ ಬೆಳಿಗ್ಗೆ 7.40ರ  ಸಮಯದ  ತುಲಾ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು. ಈ ವೇಳೆ ಅಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸ್ನಾನ ಮಾಡಿ ತೀರ್ಥ ಸೇವಿಸಿದರು.( ಚಿತ್ರ: ಎಚ್‌ಟಿ ಅನಿಲ್‌)
icon

(1 / 9)

ಕೊಡಗಿನ ಜೀವನದಿ ಮಾತೆ ಕಾವೇರಿ ಗುರುವಾರ ಬೆಳಿಗ್ಗೆ 7.40ರ  ಸಮಯದ  ತುಲಾ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಆವೀರ್ಭವಿಸಿದಳು. ಈ ವೇಳೆ ಅಲ್ಲಿ ನೆರೆದಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಸ್ನಾನ ಮಾಡಿ ತೀರ್ಥ ಸೇವಿಸಿದರು.( ಚಿತ್ರ: ಎಚ್‌ಟಿ ಅನಿಲ್‌)

 ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಬ್ರಹ್ಮಗಿರಿಯ ಗಿರಿಕಂದರಗಳಿಂದ ಮಾರ್ಧನಿಸಿದ ಕಾವೇರಿ ಮಾತೆಗೆ ಜೈ ಎಂಬ ಭಕ್ತರ ಮುಗಿಲುಮುಟ್ಟಿತು.  
icon

(2 / 9)

 ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ಅವರ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ನಡೆಯುತ್ತಿದ್ದರೆ, ಬ್ರಹ್ಮಗಿರಿಯ ಗಿರಿಕಂದರಗಳಿಂದ ಮಾರ್ಧನಿಸಿದ ಕಾವೇರಿ ಮಾತೆಗೆ ಜೈ ಎಂಬ ಭಕ್ತರ ಮುಗಿಲುಮುಟ್ಟಿತು.  

ಶ್ರದ್ಧಾಭಕ್ತಿಯ ಈ ಕ್ಷಣವನ್ನು  ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತ ಸಾಗರ ಸಮಾಗಮಗೊಂಡಿತ್ತು.  ಕೊಡಗು   ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು  ಆಗಮಿಸಿದ್ದರು. 
icon

(3 / 9)

ಶ್ರದ್ಧಾಭಕ್ತಿಯ ಈ ಕ್ಷಣವನ್ನು  ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯ ಭಕ್ತ ಸಾಗರ ಸಮಾಗಮಗೊಂಡಿತ್ತು.  ಕೊಡಗು   ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಭಕ್ತರು  ಆಗಮಿಸಿದ್ದರು. 

ಕಾವೇರಿ ಮಾತೆಯ ನಾಮಸ್ಮರಣೆಯ ನಡುವೆ   ಪ್ರತಿವರ್ಷದಂತೆ ಈ ದಿನ ಕೂಡ ತುಲಾ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು
icon

(4 / 9)

ಕಾವೇರಿ ಮಾತೆಯ ನಾಮಸ್ಮರಣೆಯ ನಡುವೆ   ಪ್ರತಿವರ್ಷದಂತೆ ಈ ದಿನ ಕೂಡ ತುಲಾ ಲಗ್ನದಲ್ಲಿ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು

ಕಾವೇರಿ ತೀರ್ಥೋದ್ಭವದ ಉಸ್ತುವಾರಿ ಹೊತ್ತ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕೊಡಗಿನ ದಿರಿಸಿನಲ್ಲಿಯೇ ಕುಟುಂಬದೊಂದಿಗೆ ತಲಕಾವೇರಿಗೆ ಆಗಮಿಸಿದರು.
icon

(5 / 9)

ಕಾವೇರಿ ತೀರ್ಥೋದ್ಭವದ ಉಸ್ತುವಾರಿ ಹೊತ್ತ ವೀರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕೊಡಗಿನ ದಿರಿಸಿನಲ್ಲಿಯೇ ಕುಟುಂಬದೊಂದಿಗೆ ತಲಕಾವೇರಿಗೆ ಆಗಮಿಸಿದರು.

ತಲಕಾವೇರಿ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವಾರು ಭಕ್ತರು ಕೊಡಗಿನ ನಾನಾ ಭಾಗಗಳಿಂದ ಪಾದಯಾತ್ರ ಮೂಲಕ ಆಗಮಿಸಿದರು.
icon

(6 / 9)

ತಲಕಾವೇರಿ ತೀರ್ಥೋದ್ಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹಲವಾರು ಭಕ್ತರು ಕೊಡಗಿನ ನಾನಾ ಭಾಗಗಳಿಂದ ಪಾದಯಾತ್ರ ಮೂಲಕ ಆಗಮಿಸಿದರು.

ತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು ಸಾಗರೋಪಾದಿಯಲ್ಲಿ ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರುತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು  ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರು
icon

(7 / 9)

ತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು ಸಾಗರೋಪಾದಿಯಲ್ಲಿ ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರುತಲಕಾವೇರಿಯಲ್ಲಿ ಪುಣ್ಯ ಸ್ನಾನ ಮಾಡಿ ತೀರ್ಥ ಸ್ವೀಕರಿಸಲು  ಭಕ್ತರು ಸೇರಿದ್ದರು. ರಾತ್ರಿಯಿಂದಲೇ ತೀರ್ಥೋದ್ಭವಕ್ಕೆ ದೂರದೂರುಗಳಿಂದ ಸಾವಿರಾರು ಭಕ್ತರು ಬಂದಿದ್ದರು

ತಲಕಾವೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಿದ್ದರಿಂದ ಭಕ್ತರ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು..
icon

(8 / 9)

ತಲಕಾವೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ತಲಕಾವೇರಿಗೆ ವಾಹನಗಳ ಪ್ರವೇಶ ನಿಷೇಧಿಸಿದ್ದರಿಂದ ಭಕ್ತರ ಪ್ರಯಾಣಕ್ಕೆ ಕೆ.ಎಸ್.ಆರ್.ಟಿ.ಸಿ. ವತಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು..

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ಪುಣ್ಯ ಕಾಲದಲ್ಲಿ ಭಕ್ತರು ತೀರ್ಥೋದ್ಭವ ವೀಕ್ಷಿಸಲು ಆಗಮಿಸುತ್ತಲೇ ಇದ್ದರು. 
icon

(9 / 9)

ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ಪುಣ್ಯ ಕಾಲದಲ್ಲಿ ಭಕ್ತರು ತೀರ್ಥೋದ್ಭವ ವೀಕ್ಷಿಸಲು ಆಗಮಿಸುತ್ತಲೇ ಇದ್ದರು. 


ಇತರ ಗ್ಯಾಲರಿಗಳು