Lakshmi Narayan Rajyoga: ಲಕ್ಷ್ಮಿ ನಾರಾಯಣ ರಾಜಯೋಗದಿಂದ ಮಾರ್ಚ್ 31 ರಿಂದ ಈ ಮೂರು ರಾಶಿಯವರಿಗೆ ಅದೃಷ್ಟ
ಮಾರ್ಚ್ 31ರ ಲಕ್ಷ್ಮಿ ನಾರಾಯಣ ರಾಜಯೋಗವು ಶುಕ್ರ ಮತ್ತು ಬುಧ ಸಂಯೋಗದಿಂದ ರಚಿಸಲ್ಪಟ್ಟಿದೆ, ಇದು ಹಲವಾರು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ರಾಜಯೋಗದ ಪ್ರಭಾವದಿಂದ 3 ರಾಶಿಗಳ ಜನರ ಮೇಲೆ ಉತ್ತಮ ಪರಿಣಾಮ ಬೀರಲಿವೆ.
(1 / 5)
ವೈದಿಕ ಜ್ಯೋತಿಷ್ಯದ ಪ್ರಕಾರ, 24 ಗಂಟೆಗಳ ನಂತರ ವಿಶೇಷ ರಾಜಯೋಗ ರೂಪುಗೊಳ್ಳಿದೆ. ಇದರ ಪರಿಣಾಮ ದೇಶ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಬೀಳಲಿದೆ. ಶುಕ್ರ ಮತ್ತು ಬುಧ ಸಂಯೋಗ ಮಾರ್ಚ್ 31 ರಂದು ಪ್ರಾರಂಭವಾಗುತ್ತದೆ.
(2 / 5)
ಈ ರಾಜಯೋಗದ ಪ್ರಭಾವದಿಂದ ಸಿಂಹ, ಕರ್ಕಾಟಕ ಹಾಗೂ ಮಿಥುನ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಯಾವ ರಾಶಿಯವರು ಯಾವ ರೀತಿಯ ಫಲ ಪಡೆಯುತ್ತಾರೆ ನೋಡೋಣ.
(3 / 5)
ಸಿಂಹ: ಲಕ್ಷ್ಮೀನಾರಾಯಣ ರಾಜಯೋಗವು ನಿಮಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ವಿದೇಶಕ್ಕೆ ಹೋಗುವ ಯೋಜನೆ ಇದ್ದರೆ ಅದು ಪೂರ್ಣಗೊಳ್ಳುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ನಿಮಗೆ ಅದೃಷ್ಟ ಹಿಂಬಾಲಿಸುತ್ತದೆ. ನೀವು ಪ್ರಸ್ತುತ ಕೆಲಸ ಮಾಡುತ್ತಿರುವ ಯೋಜನೆಯಿಂದ ಅಪಾರ ಹಣ ಹರಿದು ಬರಲಿದೆ. ಯಾವುದೇ ಶುಭ ಸಮಾರಂಭ ಅಥವಾ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಬಹುದು.
(4 / 5)
ಕರ್ಕಾಟಕ: ಈ ರಾಶಿಯವರಿಗೆ ಲಕ್ಷ್ಮಿ ನಾರಾಯಣ ರಾಜಯೋಗವು ಬಹಳ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಹೊಸ ಅವಕಾಶಗಳನ್ನು ಪಡೆಯಬಹುದು. ಹಾಗೇ ಈ ಸಮಯದಲ್ಲಿ ನೀವು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ ವ್ಯಾಪಾರಿಗಳು ಹಣ ಗಳಿಸಬಹುದು. ವ್ಯಾಪಾರದಲ್ಲಿ ಹೂಡಿಕೆ ಚೆನ್ನಾಗಿ ಆಗುತ್ತದೆ.
(5 / 5)
ಮಿಥುನ: ಲಕ್ಷ್ಮಿನಾರಾಯಣ ರಾಜಯೋಗದ ಫಲವಾಗಿ ಮಿಥುನ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಏಕೆಂದರೆ ಈ ಯೋಗವು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಮೊದಲಿಗಿಂತ ಉತ್ತಮಗೊಳಿಸುತ್ತದೆ. ದಾಂಪತ್ಯ ಜೀವನದಲ್ಲಿ ಸುಧಾರಣೆಯ ಹಾದಿಯು ಮೊದಲಿಗಿಂತ ಉತ್ತಮವಾಗಿದೆ. ಅವಿವಾಹಿತರಿಗೆ ಈ ಸಮಯ ವಿವಾಹ ಯೋಗವನ್ನುಂಟು ಮಾಡುತ್ತದೆ. ಆಸ್ತಿ ಖರೀದಿಸಲಿದ್ದೀರಿ. ನಿಮ್ಮ ಬಹುತೇಕ ಇಷ್ಟಾರ್ಥಗಳು ನೆರವೇರುತ್ತದೆ.
ಇತರ ಗ್ಯಾಲರಿಗಳು