ಪೂಂಛ್ನಲ್ಲಿ ಪಾಕಿಸ್ತಾನದ ಶೆಲ್ ದಾಳಿ: ಲ್ಯಾನ್ಸ್ನಾಯಕ್ ದಿನೇಶ್ ಕುಮಾರ್ ಅಮರ; ಹುಟ್ಟೂರಲ್ಲಿ ಹುತಾತ್ಮ ಯೋಧನಿಗೆ ಭಾವುಕ ವಿದಾಯ
ಜಮ್ಮು - ಕಾಶ್ಮೀರದ ಪೂಂಛ್ ವಲಯದ ಲೈನ್ ಆಫ್ ಕಂಟ್ರೋಲ್ (ಎಲ್ಒಸಿ)ನಲ್ಲಿ ಪಾಕಿಸ್ತಾನದ ಶೆಲ್ ದಾಳಿಗೆ 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (32) ಹುತಾತ್ಮರಾದರು. ಅವರ ಹುಟ್ಟೂರು ಹರಿಯಾಣದ ಪಾಲ್ವಾಲ್ನ ಗುಲಾಬಾದ್ನಲ್ಲಿ ಭಾವುಕರಾದ ಜನ ಅವರಿಗೆ ಅಂತಿಮ ವಿದಾಯ ಹೇಳಿದರು.
(1 / 11)
ಆಪರೇಷನ್ ಸಿಂದೂರದ ಬೆನ್ನಿಗೆ ಪಾಕಿಸ್ತಾನದ ಗಡಿ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತೀಯ ಸೇನೆಯ 5 ಫೀಲ್ಡ್ ರೆಜಿಮೆಂಟ್ನ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ (32) ಹುತಾತ್ಮರಾದರು. ಹುಟ್ಟೂರು ಹರಿಯಾಣದ ಪಾಲ್ವಾಲ್ನ ಗುಲಾಬಾದ್ನಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಜನ ಭಾವುಕರಾಗಿ ಅಂತಿಮ ನಮನ ಸಲ್ಲಿಸಿದರು.
(2 / 11)
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರು 2014ರಲ್ಲಿ ಸೇನೆ ಸೇರಿದ್ದರು. ಅವರು ಪತ್ನಿ ಸೀಮಾ (ವೃತ್ತಿಯಲ್ಲಿ ನ್ಯಾಯವಾದಿ) ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಗುರುವಾರ ಅವರ ಹುಟ್ಟೂರು ಹರಿಯಾಣದ ಪಲ್ವಾಲ್ನ ಗುಲಾಬಾದ್ಗೆ ತಂದ ಸನ್ನಿವೇಶ ಹೀಗಿತ್ತು.
(PTI)(3 / 11)
ಪಾಕಿಸ್ತಾನದ ಅಪ್ರಚೋದಿತ ಶೆಲ್ ದಾಳಿ ಕಾರಣ ಪೂಂಛ್ನಲ್ಲಿ ಹುತಾತ್ಮರಾದ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರು ಗುಲಾಬಾದ್ಗೆ ತಂದ ಸಂದರ್ಭದಲ್ಲಿ ಭಾರತ್ ಮಾತಾ ಕೀ ಜೈ ಹಾಗೂ ದಿನೇಶ್ ಕುಮಾರ್ ಅಮರ್ ರಹೇ ಘೋಷಣೆ ಮುಗಿಲು ಮುಟ್ಟಿತು.
(PTI)(4 / 11)
ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಭಾರತೀಯ ಸೇನಾ ಪಡೆ ಯೋಧರು ಅವರ ಹುಟ್ಟೂರಿಗೆ ಕರೆ ತಂದ ವೇಳೆ ಸಾರ್ವಜನಿಕರು ಅಗಲಿದ ಯೋಧನಿಗೆ ಅಂತಿಮ ನಮನ ಸಲ್ಲಿಸುವುದಕ್ಕೆ ಸೇರಿದ್ದ ದೃಶ್ಯ.
(PTI)(5 / 11)
ಅಲಂಕೃತ ಸೇನಾ ವಾಹನದಲ್ಲಿ ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರವನ್ನು ಹರಿಯಾಣದ ಅವರ ಹುಟ್ಟೂರಿಗೆ ತರಲಾಗಿತ್ತು.
(PTI)(6 / 11)
ಕೇಂದ್ರ ಸರ್ಕಾರದ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಅವರು ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
(PTI)(7 / 11)
ಲ್ಯಾನ್ಸ್ ನಾಯಕ ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರದ ಎದುರು ಕುಟುಂಬ ಸದಸ್ಯರು ಕಣ್ಣೀರಾದರು. ನೆರೆದ ಜನ ಭಾವುಕರಾಗಿದ್ದರು.
(PTI)(8 / 11)
ಹರಿಯಾಣ ಸಚಿವ ವಿಪುಲ್ ಗೋಯೆಲ್ ಅವರು ದಿನೇಶ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
(PTI)(9 / 11)
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾದ ಸುದ್ದಿ ತಿಳಿದ ಬಳಿಕ ಕುಟುಂಬ ಸದಸ್ಯರು ದುಃಖದ ಮಡುವಿನಲ್ಲಿ ಮುಳುಗಿದರು. ಸಾಂತ್ವನ ಮನಸ್ಸು ತಟ್ಟದಾಯಿತು.
(PTI)(10 / 11)
ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾದ ಸುದ್ದಿ ತಿಳಿದು ಗದ್ಗದಿತರಾದ ಅವರ ತಂದೆ, ಒಬ್ಬ ಮಗ ಮಾತ್ರ ಹೋಗಿರುವುದು, ಇನ್ನೂ ಇಬ್ಬರಿದ್ದಾರೆ ಭಾರತ ಮಾತೆಯ ಸೇವೆ ಮಾಡಲು ಎಂದು ಪ್ರತಿಕ್ರಿಯಿಸಿದರು.
(PTI)ಇತರ ಗ್ಯಾಲರಿಗಳು