ಕೊಪ್ಪಳದ ಗಂಗಾವತಿ ತಾಲ್ಲೂಕಲ್ಲಿ ಕುರಿ ಹಿಡಿಯಲು ಬಂದು ಸೆರೆ ಸಿಕ್ಕ ಭಾರೀ ಗಾತ್ರದ ಚಿರತೆ: ಹೀಗಿತ್ತು ಆರ್ಭಟ
- ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಿಕೇರಿಯಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಸೆರೆಗೆ ಸಿಕ್ಕಿದೆ. ಗಾಯಗೊಂಡು ಆರ್ಭಟದಲ್ಲಿ ತೊಡಗಿದ್ದ ಕ್ಷಣಗಳು ಹೀಗಿದ್ದವು.
- ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಸಿದ್ದಿಕೇರಿಯಲ್ಲಿ ಆಹಾರ ಅರಸಿ ಬಂದ ಚಿರತೆಯೊಂದು ಸೆರೆಗೆ ಸಿಕ್ಕಿದೆ. ಗಾಯಗೊಂಡು ಆರ್ಭಟದಲ್ಲಿ ತೊಡಗಿದ್ದ ಕ್ಷಣಗಳು ಹೀಗಿದ್ದವು.
(1 / 6)
ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಹಸಿರು ವಾತಾವರಣ, ಪೊದಗಳಿವೆ. ಅಲ್ಲಿಯೇ ಬದುಕು ಕಂಡುಕೊಂಡಿರುವ ಚಿರತೆಗಳು ಆಗಾಗ ಆಹಾರ ಅರಸಿ ಊರ ಕಡೆ ಬರುತ್ತವೆ.
(Tweetzballari)(2 / 6)
ನಾಯಿ, ಮೇಕೆ, ಕುರಿಗಳನ್ನು ಹೊತ್ತುಕೊಂಡು ಹೋಗುತ್ತವೆ, ಇದು ಆಗಾಗ ನಡೆಯುತ್ತಲೇ ಇರುತ್ತದೆ. ಈ ಬಾರಿಯೂ ಗಂಗಾವತಿ ತಾಲ್ಲೂಕಿನ ಸಿದ್ದಿಕೇರಿಯಲ್ಲಿ ಇದೇ ರೀತಿ ಚಿರತೆ ಬಂದಿತ್ತು.
(3 / 6)
ಕೆಲವು ದಿನಗಳಿಂದ ಉಪಟಳ ನೀಡುತ್ತಿದ್ದ ಮಾಹಿತಿ ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಿರತೆ ಸೆರೆಗೆ ಕ್ರಮವ ವಹಿಸಿದ್ದರು,
(4 / 6)
ನಿಖರ ಮಾಹಿತಿ ಮೇರೆಗೆ ಬಂದಾಗ ಕುರಿ ಹಿಡಿಯಲು ಬಂದು ದೊಡ್ಡಿಯಲ್ಲಿ ಚಿರತೆ ಸಿಕ್ಕಿ ಹಾಕಿಕೊಂಡು ಅಲ್ಲಿಯೇ ಮಲಗಿತ್ತು. ಆನಂತರ ಅದನ್ನು ಸೆರೆ ಹಿಡಿದು ಕಾಡಿಗೆ ಬಿಡಲಾಯಿತು.
(5 / 6)
ಕೊಪ್ಪಳ. ಬಳ್ಳಾರಿ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಇರುವುದರಿಂದ ಸಾಕಷ್ಟು ಚಿರತೆಗಳು ಇಲ್ಲಿ ಬದುಕು ಕಂಡುಕೊಂಡಿವೆ. ಸಾಕಷ್ಟು ಚಿರತೆಗಳನ್ನು ಇಲ್ಲಿ ಸೆರೆ ಹಿಡಿಯಲಾಗಿದೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರ ತೋಟಕ್ಕೂ ಬಂದಿದ್ದ ಚಿರತೆ ಸೆರೆ ಹಿಡಿಯಲಾಗಿತ್ತು.
ಇತರ ಗ್ಯಾಲರಿಗಳು