ಬೇಸಿಗೆ ಬಿಸಿಲಿಗೆ ಹೂಗಿಡಗಳು ಒಣಗುತ್ತಿವೆಯಾ; ಅಡುಗೆಮನೆಯಲ್ಲಿರುವ ಈ 4 ವಸ್ತುಗಳನ್ನು ಬಳಸಿದರೆ ಹೂದೋಟ ಹಸಿರಾಗಿರುತ್ತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬೇಸಿಗೆ ಬಿಸಿಲಿಗೆ ಹೂಗಿಡಗಳು ಒಣಗುತ್ತಿವೆಯಾ; ಅಡುಗೆಮನೆಯಲ್ಲಿರುವ ಈ 4 ವಸ್ತುಗಳನ್ನು ಬಳಸಿದರೆ ಹೂದೋಟ ಹಸಿರಾಗಿರುತ್ತೆ

ಬೇಸಿಗೆ ಬಿಸಿಲಿಗೆ ಹೂಗಿಡಗಳು ಒಣಗುತ್ತಿವೆಯಾ; ಅಡುಗೆಮನೆಯಲ್ಲಿರುವ ಈ 4 ವಸ್ತುಗಳನ್ನು ಬಳಸಿದರೆ ಹೂದೋಟ ಹಸಿರಾಗಿರುತ್ತೆ

  • Gardening Tips: ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚು. ಕೆಲವೊಮ್ಮೆ ಹೂಗಿಡಗಳಿಗೆ ನೀರುಣಿಸಿದರೂ ಹೂದೋಟದಲ್ಲಿನ ಸಸ್ಯಗಳು ಒಣಗುತ್ತವೆ. ಅವುಗಳನ್ನು ಹಸಿರಾಗಿಸಲು ನೀವು ಮನೆಯಲ್ಲೇ ಮಾಡುವ ಕೆಲವು ವಿಶೇಷ ರಸಗೊಬ್ಬರಗಳನ್ನು ಬಳಸಬಹುದು.

ಬೇಸಿಗೆಗೆ ಸೂರ್ಯನ ಶಾಖ ಮನುಷ್ಟಯರಿಗೆ ವಿಪರೀತ ಹಾನಿ ಮಾಡುವುದಲ್ಲದೆ, ಮನೆಯಲ್ಲಿರುವ ಹೂಗಿಡಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಸಸ್ಯಗಳನ್ನು ನೋಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೂ, ಬೇಸಿಗೆಯ ದಿನಗಳಲ್ಲಿ ಸಸ್ಯವನ್ನು ನೋಡಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಮನೆಯಲ್ಲಿಯೇ ಕೆಲವು ತಂತ್ರಗಳನ್ನು ನೀವು ಅನುಸರಿಸಬಹುದು.
icon

(1 / 6)

ಬೇಸಿಗೆಗೆ ಸೂರ್ಯನ ಶಾಖ ಮನುಷ್ಟಯರಿಗೆ ವಿಪರೀತ ಹಾನಿ ಮಾಡುವುದಲ್ಲದೆ, ಮನೆಯಲ್ಲಿರುವ ಹೂಗಿಡಗಳ ಬೆಳವಣಿಗೆ ಮೇಲೂ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಸಸ್ಯಗಳನ್ನು ನೋಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೂ, ಬೇಸಿಗೆಯ ದಿನಗಳಲ್ಲಿ ಸಸ್ಯವನ್ನು ನೋಡಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಮನೆಯಲ್ಲಿಯೇ ಕೆಲವು ತಂತ್ರಗಳನ್ನು ನೀವು ಅನುಸರಿಸಬಹುದು.

ಅಡುಗೆಮನೆಯಲ್ಲಿರುವ 3 ವಸ್ತುಗಳನ್ನು ಬಳಸಿಕೊಂಡು, ಬೇಸಿಗೆಯಲ್ಲಿ ಹೂಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಇವು ಬಿಸಿಲಿನಲ್ಲಿಯೂ ನಿಮ್ಮ ಸಸ್ಯಗಳನ್ನು ಆರೋಗ್ಯಕರವಾಗಿಡಲು ನೆರವಾಗುತ್ತವೆ. ಬೇಸಿಗೆಯಲ್ಲಿ ನಿಮ್ಮ ತೋಟದಲ್ಲಿನ ಸಸ್ಯಗಳನ್ನು ನೋಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ.
icon

(2 / 6)

ಅಡುಗೆಮನೆಯಲ್ಲಿರುವ 3 ವಸ್ತುಗಳನ್ನು ಬಳಸಿಕೊಂಡು, ಬೇಸಿಗೆಯಲ್ಲಿ ಹೂಗಿಡಗಳನ್ನು ಚೆನ್ನಾಗಿ ನೋಡಿಕೊಳ್ಳಬಹುದು. ಇವು ಬಿಸಿಲಿನಲ್ಲಿಯೂ ನಿಮ್ಮ ಸಸ್ಯಗಳನ್ನು ಆರೋಗ್ಯಕರವಾಗಿಡಲು ನೆರವಾಗುತ್ತವೆ. ಬೇಸಿಗೆಯಲ್ಲಿ ನಿಮ್ಮ ತೋಟದಲ್ಲಿನ ಸಸ್ಯಗಳನ್ನು ನೋಡಿಕೊಳ್ಳುವುದು ಹೇಗೆ ಎಂದು ತಿಳಿಯೋಣ.

ಈರುಳ್ಳಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ. ಬೇಸಿಗೆಯಲ್ಲಿ ನಿಮ್ಮ ಹೂದೋಟವನ್ನು ಹಸಿರಾಗಿಡಲು ನೀವು ಈರುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಈರುಳ್ಳಿ ಸಿಪ್ಪೆಗಳನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅಷ್ಟರಲ್ಲಿ ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ. ನಂತರ, ನೀವು ಅದನ್ನು ಸಸ್ಯಗಳ ಮೇಲೆ ಸುರಿಯಬಹುದು. ಇದು ಕೀಟಗಳು ಮತ್ತು ರೋಗಗಳಿಂದ ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
icon

(3 / 6)

ಈರುಳ್ಳಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇರುತ್ತವೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ. ಬೇಸಿಗೆಯಲ್ಲಿ ನಿಮ್ಮ ಹೂದೋಟವನ್ನು ಹಸಿರಾಗಿಡಲು ನೀವು ಈರುಳ್ಳಿ ಸಿಪ್ಪೆಗಳನ್ನು ಬಳಸಬಹುದು. ಈರುಳ್ಳಿ ಸಿಪ್ಪೆಗಳನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಅಷ್ಟರಲ್ಲಿ ನೀರಿನ ಬಣ್ಣ ಸ್ವಲ್ಪ ಬದಲಾಗುತ್ತದೆ. ನಂತರ, ನೀವು ಅದನ್ನು ಸಸ್ಯಗಳ ಮೇಲೆ ಸುರಿಯಬಹುದು. ಇದು ಕೀಟಗಳು ಮತ್ತು ರೋಗಗಳಿಂದ ಸಸ್ಯಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಬೇಸಿಗೆಯಲ್ಲಿಯೂ ತೋಟವನ್ನು ಹಸಿರಾಗಿಡಲು ಮತ್ತು ಒಣಗಿದ ಸಸ್ಯಗಳನ್ನು ಮತ್ತೆ ಹಸಿರಾಗಿಸಲು ನೀವು ಅಕ್ಕಿ ನೀರನ್ನು ಬಳಸಬಹುದು. ಒಂದು ಲೀಟರ್ ಬೆಚ್ಚಗಿನ ನೀರಿನಲ್ಲಿ ಬೆರಳೆಣಿಕೆಯಷ್ಟು ಅಕ್ಕಿಯನ್ನು ನೆನೆಸಿಡಿ. ನಂತರ ಈ ನೀರನ್ನು ಸೋಸಿ ಬೇರ್ಪಡಿಸಿ. ಸಾಮಾನ್ಯವಾಗಿ ಅಕ್ಕಿ ಸೋಸಿದ ನೀರು ಕೂಡಾ ಬಳಸಬಹುದು. ಈ ದ್ರವಕ್ಕೆ 1 ಟೀಸ್ಪೂನ್ ಸೋಡಾ ಮತ್ತು ಬಿಳಿ ವಿನೆಗರ್ ಸೇರಿಸಿ. ಈ ದ್ರಾವಣವನ್ನು ಹೂಗಿಡಗಳ ಬುಡಕ್ಕೆ ಹಾಕಿ.
icon

(4 / 6)

ಬೇಸಿಗೆಯಲ್ಲಿಯೂ ತೋಟವನ್ನು ಹಸಿರಾಗಿಡಲು ಮತ್ತು ಒಣಗಿದ ಸಸ್ಯಗಳನ್ನು ಮತ್ತೆ ಹಸಿರಾಗಿಸಲು ನೀವು ಅಕ್ಕಿ ನೀರನ್ನು ಬಳಸಬಹುದು. ಒಂದು ಲೀಟರ್ ಬೆಚ್ಚಗಿನ ನೀರಿನಲ್ಲಿ ಬೆರಳೆಣಿಕೆಯಷ್ಟು ಅಕ್ಕಿಯನ್ನು ನೆನೆಸಿಡಿ. ನಂತರ ಈ ನೀರನ್ನು ಸೋಸಿ ಬೇರ್ಪಡಿಸಿ. ಸಾಮಾನ್ಯವಾಗಿ ಅಕ್ಕಿ ಸೋಸಿದ ನೀರು ಕೂಡಾ ಬಳಸಬಹುದು. ಈ ದ್ರವಕ್ಕೆ 1 ಟೀಸ್ಪೂನ್ ಸೋಡಾ ಮತ್ತು ಬಿಳಿ ವಿನೆಗರ್ ಸೇರಿಸಿ. ಈ ದ್ರಾವಣವನ್ನು ಹೂಗಿಡಗಳ ಬುಡಕ್ಕೆ ಹಾಕಿ.

ದಾಲ್ಚಿನ್ನಿ ಪುಡಿ ಸಸ್ಯದ ಬೇರುಗಳನ್ನು ತ್ವರಿತವಾಗಿ ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸಸ್ಯಗಳು ಒಣಗುವುದನ್ನು ತಡೆಯುವಲ್ಲಿಯೂ ಪರಿಣಾಮಕಾರಿಯಾಗಿದೆ. ಬೇಸಿಗೆಗೆ ಹೂದೋಟ ಒಣಗಲು ಪ್ರಾರಂಭಿಸಿದರೆ, ನೀವು ಸಸ್ಯಗಳಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಬಹುದು. ನೀವು ಚಮಚ ದಾಲ್ಚಿನ್ನಿ ಪುಡಿಯನ್ನು ಸಸ್ಯದ ಬುಡದ ಬಳಿ ಇರಿಸಿದರೆ ಸಾಕು.
icon

(5 / 6)

ದಾಲ್ಚಿನ್ನಿ ಪುಡಿ ಸಸ್ಯದ ಬೇರುಗಳನ್ನು ತ್ವರಿತವಾಗಿ ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಸಸ್ಯಗಳು ಒಣಗುವುದನ್ನು ತಡೆಯುವಲ್ಲಿಯೂ ಪರಿಣಾಮಕಾರಿಯಾಗಿದೆ. ಬೇಸಿಗೆಗೆ ಹೂದೋಟ ಒಣಗಲು ಪ್ರಾರಂಭಿಸಿದರೆ, ನೀವು ಸಸ್ಯಗಳಿಗೆ ದಾಲ್ಚಿನ್ನಿ ಪುಡಿಯನ್ನು ಸೇರಿಸಬಹುದು. ನೀವು ಚಮಚ ದಾಲ್ಚಿನ್ನಿ ಪುಡಿಯನ್ನು ಸಸ್ಯದ ಬುಡದ ಬಳಿ ಇರಿಸಿದರೆ ಸಾಕು.

ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ರಂಜಕ ಮತ್ತು ಇತರ ಪೋಷಕಾಂಶಗಳಿರುತ್ತವೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ. ಬೇಸಿಗೆಯಲ್ಲಿ, ಬಾಳೆ ಸಿಪ್ಪೆಗಳನ್ನು ಬಳಸಿಕೊಂಡು ಸೂರ್ಯನಿಂದ ಗಿಡಗಳನ್ನು ರಕ್ಷಿಸಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಮುಂಚಿತವಾಗಿ ತುಸು ಒಣಗಿಸಿ. ಅದನ್ನು ಪುಡಿ ಮಾಡಿ. ಈ ಪುಡಿಯನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ. ಇದು ಸಸ್ಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಹೂವು ಮತ್ತು ಹಣ್ಣುಗಳನ್ನು ಉತ್ಪಾದಿಸಲು ಸಸ್ಯಗಳಿಗೆ ನೆರವಾಗುತ್ತದೆ. (ಇದು ವಿವಿಧ ಮಾಧ್ಯಮ ವರದಿಗಳ ಮಾಹಿತಿ ಆದರಿಸಿದ ಬರಹ)
icon

(6 / 6)

ಬಾಳೆಹಣ್ಣಿನ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ರಂಜಕ ಮತ್ತು ಇತರ ಪೋಷಕಾಂಶಗಳಿರುತ್ತವೆ. ಇದು ಸಸ್ಯಗಳಿಗೆ ಪ್ರಯೋಜನಕಾರಿ. ಬೇಸಿಗೆಯಲ್ಲಿ, ಬಾಳೆ ಸಿಪ್ಪೆಗಳನ್ನು ಬಳಸಿಕೊಂಡು ಸೂರ್ಯನಿಂದ ಗಿಡಗಳನ್ನು ರಕ್ಷಿಸಬಹುದು. ಬಾಳೆಹಣ್ಣಿನ ಸಿಪ್ಪೆಯನ್ನು ಮುಂಚಿತವಾಗಿ ತುಸು ಒಣಗಿಸಿ. ಅದನ್ನು ಪುಡಿ ಮಾಡಿ. ಈ ಪುಡಿಯನ್ನು ಮಣ್ಣಿನಲ್ಲಿ ಮಿಶ್ರಣ ಮಾಡಿ. ಇದು ಸಸ್ಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ಹೂವು ಮತ್ತು ಹಣ್ಣುಗಳನ್ನು ಉತ್ಪಾದಿಸಲು ಸಸ್ಯಗಳಿಗೆ ನೆರವಾಗುತ್ತದೆ. (ಇದು ವಿವಿಧ ಮಾಧ್ಯಮ ವರದಿಗಳ ಮಾಹಿತಿ ಆದರಿಸಿದ ಬರಹ)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು