Maha Kumbh 2025: ಮಹಾಕುಂಭ ಮೇಳದಲ್ಲಿ ಪವಿತ್ರ ಆಚರಣೆಯಾದ ಶಾಹಿ ಸ್ನಾನ ಕೈಗೊಂಡ ಲಕ್ಷಾಂತರ ಭಕ್ತರು; ಇಲ್ಲಿವೆ ಫೋಟೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maha Kumbh 2025: ಮಹಾಕುಂಭ ಮೇಳದಲ್ಲಿ ಪವಿತ್ರ ಆಚರಣೆಯಾದ ಶಾಹಿ ಸ್ನಾನ ಕೈಗೊಂಡ ಲಕ್ಷಾಂತರ ಭಕ್ತರು; ಇಲ್ಲಿವೆ ಫೋಟೋ

Maha Kumbh 2025: ಮಹಾಕುಂಭ ಮೇಳದಲ್ಲಿ ಪವಿತ್ರ ಆಚರಣೆಯಾದ ಶಾಹಿ ಸ್ನಾನ ಕೈಗೊಂಡ ಲಕ್ಷಾಂತರ ಭಕ್ತರು; ಇಲ್ಲಿವೆ ಫೋಟೋ

ಪುಷ್ಯ ಪೂರ್ಣಿಮೆಯಂದು ಮಹಾಕುಂಭ ಮೇಳವು ಶಾಹಿ ಸ್ನಾನದೊಂದಿಗೆ ಪ್ರಾರಂಭವಾಗುತ್ತಿದ್ದಂತೆ ಪ್ರಯಾಗ್ ರಾಜ್ ತ್ರಿವೇಣಿ ಸಂಗಮದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಆಧ್ಯಾತ್ಮಿಕ ಕಾರ್ಯಕ್ರಮವು 45 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಪುಷ್ಯ ಪೂರ್ಣಿಮೆಯಂದು ಪವಿತ್ರ ಆಚರಣೆಯಾದ ಶಾಹಿ ಸ್ನಾನದೊಂದಿಗೆ ಮಹಾಕುಂಭ ಪ್ರಾರಂಭವಾಗುತ್ತಿದ್ದಂತೆ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದಲ್ಲಿ ಭಾರಿ ಸಂಖ್ಯೆಯ ಭಕ್ತರು ಜಮಾಯಿಸಿದ್ದರು.
icon

(1 / 16)

ಪುಷ್ಯ ಪೂರ್ಣಿಮೆಯಂದು ಪವಿತ್ರ ಆಚರಣೆಯಾದ ಶಾಹಿ ಸ್ನಾನದೊಂದಿಗೆ ಮಹಾಕುಂಭ ಪ್ರಾರಂಭವಾಗುತ್ತಿದ್ದಂತೆ ಪ್ರಯಾಗ್‍ರಾಜ್‍ನ ತ್ರಿವೇಣಿ ಸಂಗಮದಲ್ಲಿ ಭಾರಿ ಸಂಖ್ಯೆಯ ಭಕ್ತರು ಜಮಾಯಿಸಿದ್ದರು.

(Source: Prayagraj district administration)

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಆಧ್ಯಾತ್ಮಿಕ ಕಾರ್ಯಕ್ರಮವು 45 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಭಕ್ತರೊಬ್ಬರು ಸೋಮವಾರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಶಂಖ ಊದುತ್ತಿರುವ ಚಿತ್ರವನ್ನು ಕಾಣಬಹುದು.
icon

(2 / 16)

ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಆಧ್ಯಾತ್ಮಿಕ ಕಾರ್ಯಕ್ರಮವು 45 ಕೋಟಿಗೂ ಹೆಚ್ಚು ಭಕ್ತರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಫೆಬ್ರವರಿ 26 ರಂದು ಮುಕ್ತಾಯಗೊಳ್ಳಲಿದೆ. ಭಕ್ತರೊಬ್ಬರು ಸೋಮವಾರ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಶಂಖ ಊದುತ್ತಿರುವ ಚಿತ್ರವನ್ನು ಕಾಣಬಹುದು.

(HT Photo)

ಜಾಗತಿಕವಾಗಿ ಅತಿದೊಡ್ಡ ಆಧ್ಯಾತ್ಮಿಕ ಕೂಟವಾದ ಈ ವರ್ಷದ ಮಹಾ ಕುಂಭವು 144 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಆಕಾಶ ಜೋಡಣೆ (ಸೂರ್ಯ, ಚಂದ್ರ ಮತ್ತು ಗುರುಗಳ ಜೋಡಣೆ) ಯಿಂದ ಇನ್ನಷ್ಟು ವಿಶೇಷವಾಗಿದೆ. ಚಿತ್ರದಲ್ಲಿ, ಭಕ್ತರು ಸೋಮವಾರ ಮುಂಜಾನೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು.
icon

(3 / 16)

ಜಾಗತಿಕವಾಗಿ ಅತಿದೊಡ್ಡ ಆಧ್ಯಾತ್ಮಿಕ ಕೂಟವಾದ ಈ ವರ್ಷದ ಮಹಾ ಕುಂಭವು 144 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಆಕಾಶ ಜೋಡಣೆ (ಸೂರ್ಯ, ಚಂದ್ರ ಮತ್ತು ಗುರುಗಳ ಜೋಡಣೆ) ಯಿಂದ ಇನ್ನಷ್ಟು ವಿಶೇಷವಾಗಿದೆ. ಚಿತ್ರದಲ್ಲಿ, ಭಕ್ತರು ಸೋಮವಾರ ಮುಂಜಾನೆ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು.

(HT Photo)

ಭಕ್ತರು ಜವಾಹರಲಾಲ್ ನೆಹರು ಮಾರ್ಗ ಮೂಲಕ ಸಂಗಮ ಮೇಳ ಪ್ರದೇಶವನ್ನು ಪ್ರವೇಶಿಸಿ ತ್ರಿವೇಣಿ ಮಾರ್ಗದ ಮೂಲಕ ನಿರ್ಗಮಿಸುತ್ತಾರೆ. ಪ್ರಮುಖ ಸ್ನಾನದ ಹಬ್ಬಗಳ ಸಮಯದಲ್ಲಿ, ಅಕ್ಷಯವತ ದರ್ಶನವನ್ನು ಮುಚ್ಚಲಾಗುತ್ತದೆ. ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಆರ್‌ಎಎಫ್, ಪೊಲೀಸ್ ಮತ್ತು ಸಿಆರ್‌ಪಿಎಫ್ ತಂಡಗಳ ಬಂದೋಬಸ್ತ್ ಮಾಡಲಾಗಿದೆ.
icon

(4 / 16)

ಭಕ್ತರು ಜವಾಹರಲಾಲ್ ನೆಹರು ಮಾರ್ಗ ಮೂಲಕ ಸಂಗಮ ಮೇಳ ಪ್ರದೇಶವನ್ನು ಪ್ರವೇಶಿಸಿ ತ್ರಿವೇಣಿ ಮಾರ್ಗದ ಮೂಲಕ ನಿರ್ಗಮಿಸುತ್ತಾರೆ. ಪ್ರಮುಖ ಸ್ನಾನದ ಹಬ್ಬಗಳ ಸಮಯದಲ್ಲಿ, ಅಕ್ಷಯವತ ದರ್ಶನವನ್ನು ಮುಚ್ಚಲಾಗುತ್ತದೆ. ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದ್ದು, ಆರ್‌ಎಎಫ್, ಪೊಲೀಸ್ ಮತ್ತು ಸಿಆರ್‌ಪಿಎಫ್ ತಂಡಗಳ ಬಂದೋಬಸ್ತ್ ಮಾಡಲಾಗಿದೆ.

(Source: Prayagraj district administration)

ಒಂದು ವಾರದ ಹಿಂದೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಸುಮಾರು 50 ಲಕ್ಷ (5 ಮಿಲಿಯನ್) ಜನರು ಕುಂಭಮೇಳ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಪುಷ್ಯ ಪೂರ್ಣಿಮೆಯ ಸ್ನಾನ ಉತ್ಸವಕ್ಕೆ ಎಲ್ಲಾ ಸಿದ್ಧತೆಗಳು ಸಿದ್ಧವಾಗಿವೆ ಎಂದು ಮಹಾಕುಂಭ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಕಿರಣ್ ಆನಂದ್ ಖಚಿತಪಡಿಸಿದ್ದಾರೆ.
icon

(5 / 16)

ಒಂದು ವಾರದ ಹಿಂದೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ. ಭಾನುವಾರ ಸಂಜೆಯ ವೇಳೆಗೆ ಸುಮಾರು 50 ಲಕ್ಷ (5 ಮಿಲಿಯನ್) ಜನರು ಕುಂಭಮೇಳ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಪುಷ್ಯ ಪೂರ್ಣಿಮೆಯ ಸ್ನಾನ ಉತ್ಸವಕ್ಕೆ ಎಲ್ಲಾ ಸಿದ್ಧತೆಗಳು ಸಿದ್ಧವಾಗಿವೆ ಎಂದು ಮಹಾಕುಂಭ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಕಿರಣ್ ಆನಂದ್ ಖಚಿತಪಡಿಸಿದ್ದಾರೆ.

(Source: Prayagraj district administration)

ಪಂಚಾಯಿತಿ ಅಖಾಡ ಬಡಾ ಉದಾಸೀನ್‌ನ ಚವಾನಿ ಪ್ರವೇಶ ಮೆರವಣಿಗೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ನಗರದಲ್ಲಿ ಭಾನುವಾರ ನಡೆಯಿತು.
icon

(6 / 16)

ಪಂಚಾಯಿತಿ ಅಖಾಡ ಬಡಾ ಉದಾಸೀನ್‌ನ ಚವಾನಿ ಪ್ರವೇಶ ಮೆರವಣಿಗೆಯು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ನಗರದಲ್ಲಿ ಭಾನುವಾರ ನಡೆಯಿತು.

(Deepak Gupta/HT Photo)

ಪ್ರಯಾಗ್ ರಾಜ್‍ನಮಹಾಕುಂಭ ನಗರದಲ್ಲಿ ಭಾನುವಾರ ನಡೆದ ಮಹಾಕುಂಭ 2025ರ ಸಂದರ್ಭದಲ್ಲಿ ಬೂದಿಯಿಂದ ಆವೃತವಾದ ನಾಗಾ ಸಾಧು ತನ್ನ ಶಿಬಿರದಲ್ಲಿ ಕುಳಿತಿರುವ ದೃಶ್ಯವಿದು.
icon

(7 / 16)

ಪ್ರಯಾಗ್ ರಾಜ್‍ನಮಹಾಕುಂಭ ನಗರದಲ್ಲಿ ಭಾನುವಾರ ನಡೆದ ಮಹಾಕುಂಭ 2025ರ ಸಂದರ್ಭದಲ್ಲಿ ಬೂದಿಯಿಂದ ಆವೃತವಾದ ನಾಗಾ ಸಾಧು ತನ್ನ ಶಿಬಿರದಲ್ಲಿ ಕುಳಿತಿರುವ ದೃಶ್ಯವಿದು.

(Deepak Gupta/HT Photo)

ಸೋಮವಾರ ಪ್ರಯಾಗ್‌ರಾಜ್‌ನ ಮಹಾಕುಂಭದ ಸಂದರ್ಭದಲ್ಲಿ ಮಹಿಳೆಯೊಬ್ಬರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
icon

(8 / 16)

ಸೋಮವಾರ ಪ್ರಯಾಗ್‌ರಾಜ್‌ನ ಮಹಾಕುಂಭದ ಸಂದರ್ಭದಲ್ಲಿ ಮಹಿಳೆಯೊಬ್ಬರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

(HT Photo)

ಭಕ್ತರಿಗೆ, ಮಹಾಕುಂಭ ಮೇಳ 2025 ಕೇವಲ ಒಂದು ಕೂಟವಲ್ಲ. ಇದು ಅವರ ನಂಬಿಕೆ ಮತ್ತು ಭಕ್ತಿಯ ಪ್ರದರ್ಶನವಾಗಿದೆ. 
icon

(9 / 16)

ಭಕ್ತರಿಗೆ, ಮಹಾಕುಂಭ ಮೇಳ 2025 ಕೇವಲ ಒಂದು ಕೂಟವಲ್ಲ. ಇದು ಅವರ ನಂಬಿಕೆ ಮತ್ತು ಭಕ್ತಿಯ ಪ್ರದರ್ಶನವಾಗಿದೆ. 

(HT Photo)

ಪುಷ್ಯ ಪೂರ್ಣಿಮೆಯಂದು ಮಹಾಕುಂಭವು ಶಾಹಿ ಸ್ನಾನದೊಂದಿಗೆ ಪ್ರಾರಂಭವಾಯಿತು. ಪ್ರಯಾಗ್ ರಾಜ್‍ನ ತ್ರಿವೇಣಿ ಸಂಗಮದಲ್ಲಿ ಸಾಕಷ್ಟು ಜನಸಮೂಹಕ್ಕೆ ಸಾಕ್ಷಿಯಾಯಿತು. ಫೆಬ್ರವರಿ 26ರ ವೇಳೆಗೆ 45 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.
icon

(10 / 16)

ಪುಷ್ಯ ಪೂರ್ಣಿಮೆಯಂದು ಮಹಾಕುಂಭವು ಶಾಹಿ ಸ್ನಾನದೊಂದಿಗೆ ಪ್ರಾರಂಭವಾಯಿತು. ಪ್ರಯಾಗ್ ರಾಜ್‍ನ ತ್ರಿವೇಣಿ ಸಂಗಮದಲ್ಲಿ ಸಾಕಷ್ಟು ಜನಸಮೂಹಕ್ಕೆ ಸಾಕ್ಷಿಯಾಯಿತು. ಫೆಬ್ರವರಿ 26ರ ವೇಳೆಗೆ 45 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

(HT Photo)

ಉದ್ಘಾಟನಾ ದಿನದಂದು ಭಕ್ತರ ಅಪಾರ ಉತ್ಸಾಹವು ಮುಂದಿನ ನಲವತ್ತೈದು ದಿನಗಳಲ್ಲಿ ಮಹಾ ಕುಂಭ 2025 ರಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ ಉತ್ತರ ಪ್ರದೇಶ ಸರ್ಕಾರದ ನಿರೀಕ್ಷೆಗಳನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ.
icon

(11 / 16)

ಉದ್ಘಾಟನಾ ದಿನದಂದು ಭಕ್ತರ ಅಪಾರ ಉತ್ಸಾಹವು ಮುಂದಿನ ನಲವತ್ತೈದು ದಿನಗಳಲ್ಲಿ ಮಹಾ ಕುಂಭ 2025 ರಲ್ಲಿ ಭಾಗವಹಿಸುವ ಭಕ್ತರ ಸಂಖ್ಯೆ ಉತ್ತರ ಪ್ರದೇಶ ಸರ್ಕಾರದ ನಿರೀಕ್ಷೆಗಳನ್ನು ಮೀರಬಹುದು ಎಂದು ಅಂದಾಜಿಸಲಾಗಿದೆ.

(HT Photo)

ಕಲ್ಪವಾಸಿಗಳು ಕಟ್ಟುನಿಟ್ಟಾದ ಕಲ್ಪವಾಸ್ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಪುಷ್ಯ ಪೂರ್ಣಿಮೆಯ ದಿನದಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಈ ಸಮಯದಲ್ಲಿ ಅವರು ಸದ್ಗುಣ, ಮೋಕ್ಷ ಮತ್ತು ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
icon

(12 / 16)

ಕಲ್ಪವಾಸಿಗಳು ಕಟ್ಟುನಿಟ್ಟಾದ ಕಲ್ಪವಾಸ್ ನಿಯಮಗಳನ್ನು ಪಾಲಿಸುತ್ತಾರೆ ಮತ್ತು ಪುಷ್ಯ ಪೂರ್ಣಿಮೆಯ ದಿನದಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಈ ಸಮಯದಲ್ಲಿ ಅವರು ಸದ್ಗುಣ, ಮೋಕ್ಷ ಮತ್ತು ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

(HT photo/Deepak gupta)

ಜೈ ಶ್ರೀ ರಾಮ್, ಜೈ ಬಜರಂಗ ಬಲಿ ಮತ್ತು ಹರ ಹರ ಮಹಾದೇವ್ ಘೋಷಣೆಗಳು ಎಲ್ಲಾ ಘಾಟ್‍ಗಳಲ್ಲಿ ಪ್ರತಿಧ್ವನಿಸಿತು. ಪ್ರಯಾಗ್‍ರಾಜ್ ಮತ್ತು ನೆರೆಯ ಪ್ರದೇಶಗಳು, ಹಾಗೆಯೇ ಬಿಹಾರ, ಹರಿಯಾಣ, ಬಂಗಾಳ, ಒಡಿಶಾ, ದೆಹಲಿ, ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಮೊದಲ ದಿನ ಗಣನೀಯ ಪ್ರಮಾಣದ ತುಕಡಿಯನ್ನು ಕಳುಹಿಸಿದ್ದವು.
icon

(13 / 16)

ಜೈ ಶ್ರೀ ರಾಮ್, ಜೈ ಬಜರಂಗ ಬಲಿ ಮತ್ತು ಹರ ಹರ ಮಹಾದೇವ್ ಘೋಷಣೆಗಳು ಎಲ್ಲಾ ಘಾಟ್‍ಗಳಲ್ಲಿ ಪ್ರತಿಧ್ವನಿಸಿತು. ಪ್ರಯಾಗ್‍ರಾಜ್ ಮತ್ತು ನೆರೆಯ ಪ್ರದೇಶಗಳು, ಹಾಗೆಯೇ ಬಿಹಾರ, ಹರಿಯಾಣ, ಬಂಗಾಳ, ಒಡಿಶಾ, ದೆಹಲಿ, ಉತ್ತರಾಖಂಡ, ಪಂಜಾಬ್, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಮೊದಲ ದಿನ ಗಣನೀಯ ಪ್ರಮಾಣದ ತುಕಡಿಯನ್ನು ಕಳುಹಿಸಿದ್ದವು.

(HT photo/Deepak gupta)

ನಮಾಮಿ ಗಂಗೆ ತಂಡವು ಭಾನುವಾರ ಸಂಗಮದಲ್ಲಿ ದೊಡ್ಡ ಪ್ರಮಾಣದ ಯಜ್ಞವನ್ನು ಯೋಜಿಸಿದೆ. 200ಕ್ಕೂ ಹೆಚ್ಚು ಗಂಗಾ ಸೇವಾದೂತರು ಮತ್ತು ಸಾವಿರಾರು ಜನರು ಭಾಗವಹಿಸಿ, ಗಂಗಾವನ್ನು ಸ್ವಚ್ಛವಾಗಿ ಮತ್ತು ಹರಿಯುವಂತೆ ಮಾಡಲು ಬದ್ಧರಾಗಿದ್ದರು.
icon

(14 / 16)

ನಮಾಮಿ ಗಂಗೆ ತಂಡವು ಭಾನುವಾರ ಸಂಗಮದಲ್ಲಿ ದೊಡ್ಡ ಪ್ರಮಾಣದ ಯಜ್ಞವನ್ನು ಯೋಜಿಸಿದೆ. 200ಕ್ಕೂ ಹೆಚ್ಚು ಗಂಗಾ ಸೇವಾದೂತರು ಮತ್ತು ಸಾವಿರಾರು ಜನರು ಭಾಗವಹಿಸಿ, ಗಂಗಾವನ್ನು ಸ್ವಚ್ಛವಾಗಿ ಮತ್ತು ಹರಿಯುವಂತೆ ಮಾಡಲು ಬದ್ಧರಾಗಿದ್ದರು.

(HT photo)

ನಮಾಮಿ ಗಂಗೆ ತಂಡವು ಭಾನುವಾರ ಸಂಗಮದಲ್ಲಿ ದೊಡ್ಡ ಪ್ರಮಾಣದ ಯಜ್ಞವನ್ನು ಯೋಜಿಸಿದೆ. 200ಕ್ಕೂ ಹೆಚ್ಚು ಗಂಗಾ ಸೇವಾದೂತರು ಮತ್ತು ಸಾವಿರಾರು ಜನರು ಭಾಗವಹಿಸಿ, ಗಂಗಾವನ್ನು ಸ್ವಚ್ಛವಾಗಿ ಮತ್ತು ಹರಿಯುವಂತೆ ಮಾಡಲು ಬದ್ಧರಾಗಿದ್ದರು.
icon

(15 / 16)

ನಮಾಮಿ ಗಂಗೆ ತಂಡವು ಭಾನುವಾರ ಸಂಗಮದಲ್ಲಿ ದೊಡ್ಡ ಪ್ರಮಾಣದ ಯಜ್ಞವನ್ನು ಯೋಜಿಸಿದೆ. 200ಕ್ಕೂ ಹೆಚ್ಚು ಗಂಗಾ ಸೇವಾದೂತರು ಮತ್ತು ಸಾವಿರಾರು ಜನರು ಭಾಗವಹಿಸಿ, ಗಂಗಾವನ್ನು ಸ್ವಚ್ಛವಾಗಿ ಮತ್ತು ಹರಿಯುವಂತೆ ಮಾಡಲು ಬದ್ಧರಾಗಿದ್ದರು.

(HT photo)

ಬೆಳಗ್ಗೆ 9 ಗಂಟೆಯವರೆಗೆ ಸುಮಾರು 6 ಮಿಲಿಯನ್ ಯಾತ್ರಾರ್ಥಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಸರ್ಕಾರಿ ವಕ್ತಾರರು ವರದಿ ಮಾಡಿದ್ದಾರೆ.
icon

(16 / 16)

ಬೆಳಗ್ಗೆ 9 ಗಂಟೆಯವರೆಗೆ ಸುಮಾರು 6 ಮಿಲಿಯನ್ ಯಾತ್ರಾರ್ಥಿಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಸರ್ಕಾರಿ ವಕ್ತಾರರು ವರದಿ ಮಾಡಿದ್ದಾರೆ.

(HT photo)


ಇತರ ಗ್ಯಾಲರಿಗಳು