Ranganathittu: ಕೆಆರ್ಎಸ್ನಿಂದ ಭಾರೀ ನೀರು, ಕಾವೇರಿ ತೀರದ ರಂಗನತಿಟ್ಟು ಪಕ್ಷಿಧಾಮಕ್ಕೂ ನುಗ್ಗಿದ ನೀರು, ಪಕ್ಷಿಗಳಿಗೂ ಸಂಕಟ
- Mandya News ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದು. ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.
- Mandya News ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಪ್ರವಾಹದಿಂದ ತೊಂದರೆಗೆ ಒಳಗಾಗಿದ್ದು. ಪ್ರವಾಸಿಗರಿಗೆ ಬಂದ್ ಮಾಡಲಾಗಿದೆ.
(1 / 7)
ಶ್ರೀರಂಗಪಟ್ಟಣ ಕೆಆರ್ಎಸ್ ರಸ್ತೆಯಲ್ಲಿರುವ ರಂಗನತಿಟ್ಟು ಪಕ್ಷಿಧಾಮವು ಕಾವೇರಿ ನದಿ ನೀರಿನ ಹೆಚ್ಚಿನ ನೀರು ಹರಿಸುತ್ತಿರುವುದರಿಂದ ತೊಂದರೆಗೆ ಒಳಗಾಗಿದೆ.
(2 / 7)
ಕಾವೇರಿ ನದಿ ಮೂಲಕ ಒಂದು ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಮುನ್ಸೂಚನೆಯಿದೆ. ಈಗಾಗಲೇ ಹೆಚ್ಚಿನ ನೀರು ಹರಿಬಿಡುತ್ತಿರುವುದರಿಂದ ಬೋಟಿಂಗ್ ಪಾಯಿಂಟ್ವರೆಗೂ ನೀರು ಹರಿಯುತ್ತಿದೆ.
(3 / 7)
ಸಂಜೆ ನಂತರ ನೀರಿನ ಹೊರಹರಿವು ಹೆಚ್ಚಾಗಿದ್ದರಿಂದ ರಂಗನತಿಟ್ಟು ಪಕ್ಷಿಧಾಮದ ಕಚೇರಿ ಆವರಣಕ್ಕೂ ನೀರು ನುಗ್ಗಿತ್ತು.
(4 / 7)
ರಂಗನತಿಟ್ಟು ಕಾವೇರಿ ನದಿ ತೀರದಲ್ಲಿದೆ. ರಂಗನತಿಟ್ಟಿಗೆ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಮಾಡಿರುವ ವ್ಯವೆಸ್ಥೆ ಬಳಿಯೇ ಭಾರೀ ನೀರು ನುಗ್ಗಿದೆ.
(5 / 7)
ರಂಗನತಿಟ್ಟಿನ ಒಳಕ್ಕೆ ನೀರು ನುಗ್ಗಿದ್ದು ಪ್ರವಾಸಿಗರು ವೀಕ್ಷಣಾ ಗೋಪುರಕ್ಕೆ ಹೋಗುವ ಮಾರ್ಗದಲ್ಲೂ ನೀರು ನಿಂತಿದೆ.
(6 / 7)
ಕಾವೇರಿ ನದಿಗೆ ಇನ್ನೂ ಹೆಚ್ಚಿನ ನೀರು ಹರಿಸುವ ಸೂಚನೆ ಇರುವುದರಿಂದ ಇನ್ನೂ ಹೆಚ್ಚಿನ ನೀರು ರಂಗನತಿಟ್ಟು ಪಕ್ಷಿಧಾಮದ ಒಳಗೆ ನುಗ್ಗಿ ಪಕ್ಷಿಗಳಿಗೂ ತೊಂದರೆಯಾಗುವ ಆತಂಕವಿದೆ.
ಇತರ ಗ್ಯಾಲರಿಗಳು