ವಾರಾಂತ್ಯದ ಬಿಡುವು, ಬನ್ನಿ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತೋತ್ಸವಕೆ, ನಾಳೆಯಿಂದ ಎರಡು ದಿನ ಹಬ್ಬದ ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಾರಾಂತ್ಯದ ಬಿಡುವು, ಬನ್ನಿ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತೋತ್ಸವಕೆ, ನಾಳೆಯಿಂದ ಎರಡು ದಿನ ಹಬ್ಬದ ಸಡಗರ

ವಾರಾಂತ್ಯದ ಬಿಡುವು, ಬನ್ನಿ ಮಂಡ್ಯ ಜಿಲ್ಲೆಯ ಗಗನಚುಕ್ಕಿ ಜಲಪಾತೋತ್ಸವಕೆ, ನಾಳೆಯಿಂದ ಎರಡು ದಿನ ಹಬ್ಬದ ಸಡಗರ

  • Mandya Tourism  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ ತಾಣದಲ್ಲಿ ಶನಿವಾರ ಹಾಗೂ ಭಾನುವಾರ ಎರಡು ದಿನಗಳ ಉತ್ಸವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹೇಗಿರಲಿದೆ ಜಲಪಾತೋತ್ಸವ. ಇಲ್ಲಿದೆ ಚಿತ್ರ ನೋಟ.

ಮೈಸೂರು, ಚಾಮರಾಜನಗರ ಜಿಲ್ಲೆ ದಾಟಿಕೊಂಡು ಮತ್ತೆ ಮಂಡ್ಯ ಜಿಲ್ಲೆ ಪ್ರವೇಶಿಸುವ ಕಾವೇರಿ ನದಿ ಶಿವನಸಮುದ್ರ ಬಳಿ ರೂಪಿಸಿರುವ ದೃಶ್ಯ ವೈಭವವೇ ಗಗನಚುಕ್ಕಿ  ಜಲಪಾತ.
icon

(1 / 8)

ಮೈಸೂರು, ಚಾಮರಾಜನಗರ ಜಿಲ್ಲೆ ದಾಟಿಕೊಂಡು ಮತ್ತೆ ಮಂಡ್ಯ ಜಿಲ್ಲೆ ಪ್ರವೇಶಿಸುವ ಕಾವೇರಿ ನದಿ ಶಿವನಸಮುದ್ರ ಬಳಿ ರೂಪಿಸಿರುವ ದೃಶ್ಯ ವೈಭವವೇ ಗಗನಚುಕ್ಕಿ  ಜಲಪಾತ.

ಮೇಲಿಂದ ಧುಮ್ಮುಕ್ಕಿ ಕಣಿವೆ ಕಡೆಗೆ ಬೀಳುವ ಕಾವೇರಿ ನದಿಯನ್ನು ಗಗನಚುಕ್ಕಿಯಾಗಿ ನೋಡುವ ಖುಷಿಯೇ ಬೇರೆ. ಈಗಲೂ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.
icon

(2 / 8)

ಮೇಲಿಂದ ಧುಮ್ಮುಕ್ಕಿ ಕಣಿವೆ ಕಡೆಗೆ ಬೀಳುವ ಕಾವೇರಿ ನದಿಯನ್ನು ಗಗನಚುಕ್ಕಿಯಾಗಿ ನೋಡುವ ಖುಷಿಯೇ ಬೇರೆ. ಈಗಲೂ ಸಹಸ್ರಾರು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಣ್ತುಂಬಿಕೊಳ್ಳುತ್ತಾರೆ.

ಕೆಲ ವರ್ಷಗಳ ಬಿಡುವಿನ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಈ ವಾರಾಂತ್ಯದಲ್ಲಿ ಆಯೋಜನೆಗೊಂಡಿದೆ. ಪ್ರಕೃತ್ತಿ ದತ್ತವಾಗಿ ಚಲುವನ್ನು ಹೊಂದಿರುವ ಗಗನಚುಕ್ಕಿಗೆ ಜನರನ್ನು ಸೆಳೆಯಲು ವಿಜೃಂಭಣೆಯಿಂದ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಹಮ್ಮಿಕೊಳ್ಳಲಾಗಿದೆ.
icon

(3 / 8)

ಕೆಲ ವರ್ಷಗಳ ಬಿಡುವಿನ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿ ಜಲಪಾತೋತ್ಸವ ಈ ವಾರಾಂತ್ಯದಲ್ಲಿ ಆಯೋಜನೆಗೊಂಡಿದೆ. ಪ್ರಕೃತ್ತಿ ದತ್ತವಾಗಿ ಚಲುವನ್ನು ಹೊಂದಿರುವ ಗಗನಚುಕ್ಕಿಗೆ ಜನರನ್ನು ಸೆಳೆಯಲು ವಿಜೃಂಭಣೆಯಿಂದ ಜಲಪಾತೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 14 ಹಾಗೂ 15 ರಂದು ಹಮ್ಮಿಕೊಳ್ಳಲಾಗಿದೆ.

ಎರಡು ದಿನಗಳ ಉತ್ಸವದಲ್ಲಿ ಬೆಳಕಿನ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳಮೋಜು ಮಸ್ತಿ ಉತ್ಸವದ ಮೆರಗನ್ನು ಹೆಚ್ಚಿಸಲಿದೆ. 
icon

(4 / 8)

ಎರಡು ದಿನಗಳ ಉತ್ಸವದಲ್ಲಿ ಬೆಳಕಿನ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳಮೋಜು ಮಸ್ತಿ ಉತ್ಸವದ ಮೆರಗನ್ನು ಹೆಚ್ಚಿಸಲಿದೆ. 

ಶಿವನಸಮುದ್ರದಲ್ಲಿ ನಡೆಯುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ಭರದ ಸಿದ್ದತೆಗಳು ನಡೆದಿವೆ. ಈ ಉತ್ಸವದ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಂತಿನ ಸಿದ್ದತೆಗಳನ್ನು ಪರಿಶೀಲಿಸಿದರು.
icon

(5 / 8)

ಶಿವನಸಮುದ್ರದಲ್ಲಿ ನಡೆಯುವ ಗಗನಚುಕ್ಕಿ ಜಲಪಾತೋತ್ಸವಕ್ಕೆ ಭರದ ಸಿದ್ದತೆಗಳು ನಡೆದಿವೆ. ಈ ಉತ್ಸವದ ಉಸ್ತುವಾರಿ ಹೊತ್ತಿರುವ ಮಾಜಿ ಸಚಿವ ಹಾಗೂ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಅವರು ಅಂತಿನ ಸಿದ್ದತೆಗಳನ್ನು ಪರಿಶೀಲಿಸಿದರು.

ಬೆಂಗಳೂರು- ಕನಕಪುರ-ಮಳವಳ್ಳಿ- ಕೊಳ್ಳೇಗಾಲ ಹೆದ್ದಾರಿಯಲ್ಲಿರುವ  ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಸ್‌ಗಳ ಸೌಲಭ್ಯಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಿಂದಲೂ ಪ್ರವಾಸಿಗರು ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ.
icon

(6 / 8)

ಬೆಂಗಳೂರು- ಕನಕಪುರ-ಮಳವಳ್ಳಿ- ಕೊಳ್ಳೇಗಾಲ ಹೆದ್ದಾರಿಯಲ್ಲಿರುವ  ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಸ್‌ಗಳ ಸೌಲಭ್ಯಗಳನ್ನು ಪ್ರವಾಸಿಗರಿಗಾಗಿ ಒದಗಿಸಲಾಗುತ್ತಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಿಂದಲೂ ಪ್ರವಾಸಿಗರು ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಶಿವನಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಗಗನಚುಕ್ಕಿ ಜಲಪಾತದ ಸ್ಥಳಕ್ಕೆ  ಹೋಗುವ ಮಾರ್ಗದುದ್ದಕ್ಕೂ ಅಲಂಕಾರವನ್ನು ಮಾಡಲಾಗಿದ್ದು, ಹಬ್ಬದ ವಾತಾವರಣ ಕಂಡು ಬಂದಿದೆ.
icon

(7 / 8)

ಶಿವನಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಗಗನಚುಕ್ಕಿ ಜಲಪಾತದ ಸ್ಥಳಕ್ಕೆ  ಹೋಗುವ ಮಾರ್ಗದುದ್ದಕ್ಕೂ ಅಲಂಕಾರವನ್ನು ಮಾಡಲಾಗಿದ್ದು, ಹಬ್ಬದ ವಾತಾವರಣ ಕಂಡು ಬಂದಿದೆ.

ಎರಡು ದಿನವೂ ಜಲಪಾತೋತ್ಸವದ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ನಾನಾ ಭಾಗಗಳಿಂದ ಕಲಾವಿದರು ಕಾರ್ಯಕ್ರಮ ನೀಡಿ ರಂಜಿಸಲು ಆಗಮಿಸುತ್ತಿದ್ದಾರೆ. ಇದಕ್ಕಾಗಿ ಬೃಹತ್‌ ವೇದಿಕೆಯನ್ನೂ ಅಣಿಗೊಳಿಸಲಾಗಿದೆ.
icon

(8 / 8)

ಎರಡು ದಿನವೂ ಜಲಪಾತೋತ್ಸವದ ಭಾಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಡಿನ ನಾನಾ ಭಾಗಗಳಿಂದ ಕಲಾವಿದರು ಕಾರ್ಯಕ್ರಮ ನೀಡಿ ರಂಜಿಸಲು ಆಗಮಿಸುತ್ತಿದ್ದಾರೆ. ಇದಕ್ಕಾಗಿ ಬೃಹತ್‌ ವೇದಿಕೆಯನ್ನೂ ಅಣಿಗೊಳಿಸಲಾಗಿದೆ.


ಇತರ ಗ್ಯಾಲರಿಗಳು