ಭಗವದ್ಗೀತೆಯ ಸಾರವೇ ಕಂಚಿನ ಪದಕ ಗೆಲ್ಲಲು ಪ್ರೇರಣೆ; ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದ ಮನು ಭಾಕರ್​
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಗವದ್ಗೀತೆಯ ಸಾರವೇ ಕಂಚಿನ ಪದಕ ಗೆಲ್ಲಲು ಪ್ರೇರಣೆ; ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದ ಮನು ಭಾಕರ್​

ಭಗವದ್ಗೀತೆಯ ಸಾರವೇ ಕಂಚಿನ ಪದಕ ಗೆಲ್ಲಲು ಪ್ರೇರಣೆ; ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದ ಮನು ಭಾಕರ್​

  • Manu Bhaker on Bhagavad Gita: 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಶೂಟರ್ ಮನು ಭಾಕರ್, ಭಗವದ್ಗೀತೆಯಲ್ಲಿ ಅರ್ಜುನನಿಗೆ ಕೃಷ್ಣ ಹೇಳಿದ್ದನ್ನು ನೆನೆದಿದ್ದಾರೆ.

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಮತ್ತು ಶೂಟಿಂಗ್​​​ನಲ್ಲಿ ಪದಕಕ್ಕೆ ಮುತ್ತಿಕ್ಕಿದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 22 ವರ್ಷದ ಮನು ಭಾಕರ್, ತನ್ನ ಗೆಲುವಿಗೆ ಕಾರಣ ಏನೆಂದು ತಿಳಿಸಿದ್ದಾರೆ.
icon

(1 / 5)

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಮತ್ತು ಶೂಟಿಂಗ್​​​ನಲ್ಲಿ ಪದಕಕ್ಕೆ ಮುತ್ತಿಕ್ಕಿದ ಪ್ರಥಮ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 22 ವರ್ಷದ ಮನು ಭಾಕರ್, ತನ್ನ ಗೆಲುವಿಗೆ ಕಾರಣ ಏನೆಂದು ತಿಳಿಸಿದ್ದಾರೆ.

ಜುಲೈ 28ರ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ ಸ್ಪರ್ಧೆಯಲ್ಲಿ ಮನು ಭಾಕರ್​ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಹಬ್ಬದಲ್ಲಿ ಭಾರತಕ್ಕೆ ಒಲಿದ ಚೊಚ್ಚಲ ಪದಕ ಇದಾಗಿದೆ.
icon

(2 / 5)

ಜುಲೈ 28ರ ಭಾನುವಾರ ನಡೆದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಫೈನಲ್​ ಸ್ಪರ್ಧೆಯಲ್ಲಿ ಮನು ಭಾಕರ್​ ಕಂಚಿನ ಪದಕ ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಹಬ್ಬದಲ್ಲಿ ಭಾರತಕ್ಕೆ ಒಲಿದ ಚೊಚ್ಚಲ ಪದಕ ಇದಾಗಿದೆ.
(Team India-X)

ಪದಕ ಗೆದ್ದಿರುವ ಸಂಭ್ರಮದಲ್ಲಿರುವ ಮನು ಭಾಕರ್​, ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇದೇ ವೇಳೆ ನೆನಪಿಸಿಕೊಂಡಿರುವ ಮನು, ತನ್ನ ಗೆಲುವಿನಲ್ಲಿ ಎಷ್ಟು ಪಾತ್ರವಹಿಸಿತು ಎಂಬುದನ್ನು ತಿಳಿಸಿದ್ದಾರೆ.
icon

(3 / 5)

ಪದಕ ಗೆದ್ದಿರುವ ಸಂಭ್ರಮದಲ್ಲಿರುವ ಮನು ಭಾಕರ್​, ತನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಇದೇ ವೇಳೆ ನೆನಪಿಸಿಕೊಂಡಿರುವ ಮನು, ತನ್ನ ಗೆಲುವಿನಲ್ಲಿ ಎಷ್ಟು ಪಾತ್ರವಹಿಸಿತು ಎಂಬುದನ್ನು ತಿಳಿಸಿದ್ದಾರೆ.
(PTI)

ಗೀತೆಯಲ್ಲಿರುವ ಕರ್ಮಫಲ ಸಿದ್ಧಾಂತದ ಕುರಿತು ಮಾತನಾಡಿದ ಮನು, ಫೈನಲ್​​​ನಲ್ಲಿ ಹೆಚ್ಚು ಸಹಾಯವಾಗಿದ್ದು ಭಗವದ್ಗೀತೆ. ಗೀತೆಯನ್ನು ನಾನು ತುಂಬಾ ಓದಿದ್ದೇನೆ. ಕರ್ಮದ ಮೇಲೆ ಕೇಂದ್ರೀಕರಿಸಬೇಕು, ಫಲಿತಾಂಶದ ಮೇಲಲ್ಲ ಎಂದು ಅರ್ಜುನನಿಗೆ ಕೃಷ್ಣ ಹೇಳುವ ಮಾತುಗಳು ಫೈನಲ್​​ನಲ್ಲಿ ನನ್ನ ತಲೆಯಲ್ಲಿ ಓಡುತ್ತಿದ್ದವು ಎಂದಿದ್ದಾರೆ.
icon

(4 / 5)

ಗೀತೆಯಲ್ಲಿರುವ ಕರ್ಮಫಲ ಸಿದ್ಧಾಂತದ ಕುರಿತು ಮಾತನಾಡಿದ ಮನು, ಫೈನಲ್​​​ನಲ್ಲಿ ಹೆಚ್ಚು ಸಹಾಯವಾಗಿದ್ದು ಭಗವದ್ಗೀತೆ. ಗೀತೆಯನ್ನು ನಾನು ತುಂಬಾ ಓದಿದ್ದೇನೆ. ಕರ್ಮದ ಮೇಲೆ ಕೇಂದ್ರೀಕರಿಸಬೇಕು, ಫಲಿತಾಂಶದ ಮೇಲಲ್ಲ ಎಂದು ಅರ್ಜುನನಿಗೆ ಕೃಷ್ಣ ಹೇಳುವ ಮಾತುಗಳು ಫೈನಲ್​​ನಲ್ಲಿ ನನ್ನ ತಲೆಯಲ್ಲಿ ಓಡುತ್ತಿದ್ದವು ಎಂದಿದ್ದಾರೆ.
(PTI)

ಮೂರು ವರ್ಷಗಳ ಹಿಂದೆ ಟೊಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಪಿಸ್ತೂಲ್​ ದೋಷ ಕಾಣಿಸಿಕೊಂಡ ಕಾರಣದಿಂದ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಇದೀಗ ಅವರು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
icon

(5 / 5)

ಮೂರು ವರ್ಷಗಳ ಹಿಂದೆ ಟೊಕಿಯೊ ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಪಿಸ್ತೂಲ್​ ದೋಷ ಕಾಣಿಸಿಕೊಂಡ ಕಾರಣದಿಂದ ಅವರಿಗೆ ಫೈನಲ್​ಗೇರುವ ಅವಕಾಶ ಕೈತಪ್ಪಿತ್ತು. ಇದೀಗ ಅವರು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.


ಇತರ ಗ್ಯಾಲರಿಗಳು