ಕನ್ನಡ ಸುದ್ದಿ  /  Photo Gallery  /  Mass Marriage At Muruga Mutt: Saamoohika Kalyana Mahotsava At Chitradurga Muruga Mutt; Four Couples Got Married

Mass marriage at Muruga mutt: ಚಿತ್ರದುರ್ಗ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ

Mass marriage at Muruga mutt: ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಗುರುವಾರ ನಡೆಯಿತು. ಇದರ ಸಚಿತ್ರ ವರದಿ ಇಲ್ಲಿದೆ. 

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು. 
icon

(1 / 4)

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು. (Muruga Mutt)

ಶ್ರೀ ಬಸವಪ್ರಭು ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದು, ತಾಳ ತಪ್ಪಿದರೆ ಸಂಗೀತ ಕೆಡುತ್ತದೆ, ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ. ಗಂಡ ಹೆಂಡತಿ ಮಧ್ಯೆ ಕೋಪ ಬಂದಾಗ ಯಾರಾದರು ಒಬ್ಬರು ಸುಮ್ಮನಾಗಬೇಕು. ಸತಿ-ಪತಿಗಳ ಮನಸ್ಸು ಒಂದಾಗಬೇಕು. ಅಣ್ಣ-ತಮ್ಮ, ಅಪ್ಪ-ಅಮ್ಮ ಅವರ ಮಧ್ಯೆ ಬಾಂಧವ್ಯ ಇರಬೇಕು. ಮಧುರ ಬಾಂಧವ್ಯ ಇರುವ ಮನೆ ಧರ್ಮಕ್ಷೇತ್ರ ಆಗುತ್ತದೆ ಎಂದು ಹೇಳಿದರು.
icon

(2 / 4)

ಶ್ರೀ ಬಸವಪ್ರಭು ಸ್ವಾಮಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದು, ತಾಳ ತಪ್ಪಿದರೆ ಸಂಗೀತ ಕೆಡುತ್ತದೆ, ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ. ಗಂಡ ಹೆಂಡತಿ ಮಧ್ಯೆ ಕೋಪ ಬಂದಾಗ ಯಾರಾದರು ಒಬ್ಬರು ಸುಮ್ಮನಾಗಬೇಕು. ಸತಿ-ಪತಿಗಳ ಮನಸ್ಸು ಒಂದಾಗಬೇಕು. ಅಣ್ಣ-ತಮ್ಮ, ಅಪ್ಪ-ಅಮ್ಮ ಅವರ ಮಧ್ಯೆ ಬಾಂಧವ್ಯ ಇರಬೇಕು. ಮಧುರ ಬಾಂಧವ್ಯ ಇರುವ ಮನೆ ಧರ್ಮಕ್ಷೇತ್ರ ಆಗುತ್ತದೆ ಎಂದು ಹೇಳಿದರು.(Muruga Mutt)

ಕೊಡ್ಲಿಪೇಟೆಯ ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮಿ ಮಾತನಾಡಿ, ಜೀವನ ಅಮೂಲ್ಯವಾದುದು. ಬಾಲ್ಯ, ಯೌವ್ವನ, ಮುಪ್ಪಿನ ಅವಸ್ಥೆ ಬರುತ್ತದೆ. ಸಂಸ್ಕಾರಗಳಲ್ಲಿ ವಿವಾಹ ಎನ್ನುವುದು ಪ್ರಮುಖ ಘಟ್ಟ, ಸತಿ-ಪತಿಗಳು ಬದುಕನ್ನು ಸಮವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
icon

(3 / 4)

ಕೊಡ್ಲಿಪೇಟೆಯ ಕಲ್ಲಳ್ಳಿಮಠದ ಶ್ರೀ ರುದ್ರಮುನಿ ಸ್ವಾಮಿ ಮಾತನಾಡಿ, ಜೀವನ ಅಮೂಲ್ಯವಾದುದು. ಬಾಲ್ಯ, ಯೌವ್ವನ, ಮುಪ್ಪಿನ ಅವಸ್ಥೆ ಬರುತ್ತದೆ. ಸಂಸ್ಕಾರಗಳಲ್ಲಿ ವಿವಾಹ ಎನ್ನುವುದು ಪ್ರಮುಖ ಘಟ್ಟ, ಸತಿ-ಪತಿಗಳು ಬದುಕನ್ನು ಸಮವಾಗಿ ಸ್ವೀಕರಿಸಬೇಕು ಎಂದು ಹೇಳಿದರು.(Muruga Mutt)

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾದ ವಧು, ವರರ ಬಂಧುಗಳು. ನಿವೃತ್ತ ನ್ಯಾಯಾಧೀಶ ಬಿ.ಎಸ್.ವಸ್ತ್ರಮಠ, ಪೈಲ್ವಾನ್‌ ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.  ಜಮುರಾ ಕಲಾವಿದರು ಪಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಬಸವಲಿಂಗ ನಿರೂಪಿಸಿದರು.
icon

(4 / 4)

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಭಾಗಿಯಾದ ವಧು, ವರರ ಬಂಧುಗಳು. ನಿವೃತ್ತ ನ್ಯಾಯಾಧೀಶ ಬಿ.ಎಸ್.ವಸ್ತ್ರಮಠ, ಪೈಲ್ವಾನ್‌ ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.  ಜಮುರಾ ಕಲಾವಿದರು ಪಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಬಸವಲಿಂಗ ನಿರೂಪಿಸಿದರು.(Muruga Mutt)


ಇತರ ಗ್ಯಾಲರಿಗಳು