ಬೆಂಗಳೂರು ತುಮಕೂರು ರಸ್ತೆ ಅಡಕಮಾರನಹಳ್ಳಿ ಶೆಲ್ ಆಯಿಲ್ ಗೋಡೌನ್ನಲ್ಲಿ ಭಾರಿ ಅಗ್ನಿದುರಂತ; ಚಿತ್ರನೋಟ
ಬೆಂಗಳೂರು - ತುಮಕೂರು ರಸ್ತೆಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್ನಲ್ಲಿ ಇಂದು (ಮೇ 13) ಬೆಳಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿದುರಂತದ ಆರಂಭಿಕ ಚಿತ್ರನೋಟ ಇಲ್ಲಿದೆ.
(1 / 10)
ಬೆಂಗಳೂರು - ತುಮಕೂರು ರಸ್ತೆಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್ನಲ್ಲಿ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಬೆಂಗಳೂರು - ತುಮಕೂರು ರಸ್ತೆಗೆ ಭಾರಿ ಅಗ್ನಿದುರಂತದ ದೃಶ್ಯ ಗೋಚರಿಸಿದ್ದು ಹೀಗೆ. ಈ ದುರಂತದ ಚಿತ್ರ ವಿವರ ಇಲ್ಲಿದೆ.
(2 / 10)
ಅಡಕಮಾರನಹಳ್ಳಿಯಲ್ಲಿರುವ ಶೆಲ್ ಆಯಿಲ್ ಕಂಪನಿಯ ಗೋಡೌನ್ನಲ್ಲಿ ಮಂಗಳವಾರ (ಮೇ 13) ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
(3 / 10)
ಅಗ್ನಿ ದುರಂತದ ತೀವ್ರತೆ ಅಲ್ಲಿಂದ ಹೊರಸೂಸುತ್ತಿದ್ದ ಭಾರಿ ಪ್ರಮಾಣದ ಹೊಗೆ ಬಿಂಬಿಸುವಂತೆ ಇತ್ತು. ಆಗಸದೆತ್ತರಕ್ಕೆ ಕಪ್ಪು ದಟ್ಟ ಹೊಗೆ ಆವರಿಸಿದ್ದು, ಸೂರ್ಯ ಕಿರಣವನ್ನು ಮುತ್ತಿಕ್ಕುವಂತೆ ಆಗಸದಲ್ಲಿ ಪಸರಿಸುತ್ತಿತ್ತು.
(4 / 10)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಆಯಿಲ್ ಗೋದಾಮಿನಲ್ಲಿ ಬೆಂಕಿ ದುರಂತ ಸಂಭವಿಸಿದೆ. ಕಿಡಿ ಹೊತ್ತಿಕೊಂಡ ಕೂಡಲೇ ಗೋದಾಮು ಧಗಧಗನೆ ಉರಿಯತೊಡಗಿತು. ದುರಂತದಲ್ಲಿ ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಸಾಧ್ಯತೆ ಇದೆ.
(5 / 10)
ಅಡಕಮಾರನಹಳ್ಳಿ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವವರಿಗೆ ಸೇರಿದ 33,000 ಚದರ ಅಡಿ ವಿಸ್ತೀರ್ಣದ ಬೃಹತ್ ಗೋದಾಮು ಬೆಂಕಿಗೆ ಆಹುತಿಯಾಗಿದೆ. ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸೋ ಕಾರ್ಯದಲ್ಲಿ ತೊಡಗಿದ್ದಾರೆ
(6 / 10)
ಶೆಲ್ ಕಂಪನಿಗೆ ಸೇರಿದ ಆಯಿಲ್ ಉತ್ಪನ್ನಗಳು ನಾಶವಾಗಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿರುವ ಶಂಕೆ ಇದೆ. ಸುಮಾರು 10-12 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸೋ ಕಾರ್ಯ ನಡೆಸಿದೆ
(7 / 10)
ನೆಲಮಂಗಲ, ಪೀಣ್ಯ ಹೆಬ್ಬಾಳ, ರಾಜಾಜಿನಗರ, ಥಣಿಸಂದ್ರ, ಸುಂಕದಕಟ್ಟೆ ಮತ್ತು ಯಶವಂತಪುರ ಅಗ್ನಿಶಾಮಕ ಠಾಣೆಗಳಿಂದ ಬೆಂಕಿ ನಂದಿಸುವ ವಾಹನಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಪ್ರಗತಿಯಲ್ಲಿದೆ.
(8 / 10)
ಆಯಿಲ್ ಉತ್ಪನ್ನವಾದ ಕಾರಣ ಬೆಂಕಿ ನಂದಿಸುವ ಕೆಲಸ ಸವಾಲಿನದ್ದಾಗಿದೆ. ಹೀಗಾಗಿ ಬೆಂಕಿ ನಂದಿಸುವುದಕ್ಕೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
(9 / 10)
60-70 ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಶೀಘ್ರವೇ ಅಗ್ನಿ ಅನಾಹುತದ ಪರಿಣಾಮವನ್ನು ನಿಯಂತ್ರಿಸುವ ವಿಶ್ವಾಸದಲ್ಲಿದ್ದಾರೆ.
ಇತರ ಗ್ಯಾಲರಿಗಳು