ಮುಂಗಾರು ಇನ್ನೇನು ಶುರು; ಕರ್ನಾಟಕದ ಈ 10 ಹಸಿರು ಮಾರ್ಗದಲ್ಲಿ ಖುಷ್‌ ಖುಷಿಯಾಗಿ ಡ್ರೈವ್‌ ಮಾಡಲು ಅಣಿಯಾಗಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಗಾರು ಇನ್ನೇನು ಶುರು; ಕರ್ನಾಟಕದ ಈ 10 ಹಸಿರು ಮಾರ್ಗದಲ್ಲಿ ಖುಷ್‌ ಖುಷಿಯಾಗಿ ಡ್ರೈವ್‌ ಮಾಡಲು ಅಣಿಯಾಗಿ

ಮುಂಗಾರು ಇನ್ನೇನು ಶುರು; ಕರ್ನಾಟಕದ ಈ 10 ಹಸಿರು ಮಾರ್ಗದಲ್ಲಿ ಖುಷ್‌ ಖುಷಿಯಾಗಿ ಡ್ರೈವ್‌ ಮಾಡಲು ಅಣಿಯಾಗಿ

ಮುಂಗಾರು ಮಳೆ ಶುರುವಾದರೆ ವಿಭಿನ್ನ ಪ್ರವಾಸೋದ್ಯಮ ತೆರೆದುಕೊಳ್ಳುತ್ತದೆ. ಕೆಲವರು ಬೈಕ್‌, ಮತ್ತೆ ಕೆಲವರು ಕಾರುಗಳಲ್ಲಿ ಡ್ರೈವ್‌ ಹೊರಟು ಮಳೆ, ಹಸಿರಿನ ಸೊಬಗನ್ನುಸವಿಯುತ್ತಾರೆ. ಕರ್ನಾಟಕದಲ್ಲಿ ಅಂತಹ ಕೆಲ ಮಾರ್ಗಗಳು ಇಲ್ಲಿವೆ.

ಶಿವಮೊಗ್ಗದಿಂದ ತೀರ್ಥಹಳ್ಳಿ ಅಲ್ಲಿಂದ ಆಗುಂಬೆ ಮಾರ್ಗವಾಗಿ ಸಂಚರಿಸುವ ಈ ಹಸಿರು ಪಥದ ಪ್ರವಾಸ ಎಂಥವರ ಮೈಮನ ಪುಳಕಿತಗೊಳಿಸುತ್ತದೆ.  ಕಾಡಿನ ಮಧ್ಯೆ ಹೋಗುವ ಖುಷಿಯೇ ಬೇರೆ.
icon

(1 / 10)

ಶಿವಮೊಗ್ಗದಿಂದ ತೀರ್ಥಹಳ್ಳಿ ಅಲ್ಲಿಂದ ಆಗುಂಬೆ ಮಾರ್ಗವಾಗಿ ಸಂಚರಿಸುವ ಈ ಹಸಿರು ಪಥದ ಪ್ರವಾಸ ಎಂಥವರ ಮೈಮನ ಪುಳಕಿತಗೊಳಿಸುತ್ತದೆ. ಕಾಡಿನ ಮಧ್ಯೆ ಹೋಗುವ ಖುಷಿಯೇ ಬೇರೆ.
(Travel and Trekking)

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಇಲ್ಲವೇ ಮೈಸೂರಿನಿಂದ ಸುಳ್ಯ ಮಾರ್ಗದಲ್ಲಿ ಬಂದರೆ ಸುಬ್ರಹ್ಮಣ್ಯ ಮಾರ್ಗದ ಯಾನ ಖುಷಿ ನೀಡಲಿದೆ.
icon

(2 / 10)

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಇಲ್ಲವೇ ಮೈಸೂರಿನಿಂದ ಸುಳ್ಯ ಮಾರ್ಗದಲ್ಲಿ ಬಂದರೆ ಸುಬ್ರಹ್ಮಣ್ಯ ಮಾರ್ಗದ ಯಾನ ಖುಷಿ ನೀಡಲಿದೆ.
(Team BHP )

ಶಿವಮೊಗ್ಗದಿಂದ ಆಯನೂರು ಅಲ್ಲಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಹೊಸನಗರದ ಕಡೆ ಹೋಗುವ ಯಾನವೂ ನಿಜಕ್ಕೂ ರೋಚಕ ಎನ್ನಿಸಲಿದೆ. ಇದು ಕೂಡ ಅತ್ಯುತ್ತಮ ಕಾಡು ಹಾಗೂ ಹಸುರಿನ ಮಾರ್ಗವೇ.
icon

(3 / 10)

ಶಿವಮೊಗ್ಗದಿಂದ ಆಯನೂರು ಅಲ್ಲಿಂದ ರಿಪ್ಪನ್‌ಪೇಟೆ ಮಾರ್ಗವಾಗಿ ಹೊಸನಗರದ ಕಡೆ ಹೋಗುವ ಯಾನವೂ ನಿಜಕ್ಕೂ ರೋಚಕ ಎನ್ನಿಸಲಿದೆ. ಇದು ಕೂಡ ಅತ್ಯುತ್ತಮ ಕಾಡು ಹಾಗೂ ಹಸುರಿನ ಮಾರ್ಗವೇ.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರವಾರ ಕಡೆಗೆ ಹೋಗುವ ಅಣಶಿ ಅರಣ್ಯದೊಳಗಿನ ಯಾನವಂತೂ ನಿಜಕ್ಕೂ ಮನಮೋಹಕವೇ. ನೂರು ಕಿ.ಮಿ ನಷ್ಟ ದೂರವನ್ನು ಕ್ರಮಿಸುವ ಮಧ್ಯೆ ಸಿಗುವ ಅರಣ್ಯದ ಸೊಬಗು ಸಂತಸ ತರಲಿದೆ.
icon

(4 / 10)

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಿಂದ ಕಾರವಾರ ಕಡೆಗೆ ಹೋಗುವ ಅಣಶಿ ಅರಣ್ಯದೊಳಗಿನ ಯಾನವಂತೂ ನಿಜಕ್ಕೂ ಮನಮೋಹಕವೇ. ನೂರು ಕಿ.ಮಿ ನಷ್ಟ ದೂರವನ್ನು ಕ್ರಮಿಸುವ ಮಧ್ಯೆ ಸಿಗುವ ಅರಣ್ಯದ ಸೊಬಗು ಸಂತಸ ತರಲಿದೆ.
(Roshan Kanade)

ಮೈಸೂರಿನಿಂದ ಎಚ್‌ಡಿಕೋಟೆ ಮಾರ್ಗವಾಗಿ ಕೇರಳದ ಮಾನಂದವಾಡಿ ಕಡೆಗೆ ಹೋಗುವ ಮಾರ್ಗ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ನಾಗರಹೊಳೆ ಅಭಯಾರಣ್ಯ, ಕಬಿನಿ ಜಲಾಶಯದ ನೋಟ ಖುಷಿ ಕೊಡಲಿದೆ.
icon

(5 / 10)

ಮೈಸೂರಿನಿಂದ ಎಚ್‌ಡಿಕೋಟೆ ಮಾರ್ಗವಾಗಿ ಕೇರಳದ ಮಾನಂದವಾಡಿ ಕಡೆಗೆ ಹೋಗುವ ಮಾರ್ಗ ಕೂಡ ಡ್ರೈವ್‌ಗೆ ಹೇಳಿ ಮಾಡಿಸಿದಂತಿದೆ. ನಾಗರಹೊಳೆ ಅಭಯಾರಣ್ಯ, ಕಬಿನಿ ಜಲಾಶಯದ ನೋಟ ಖುಷಿ ಕೊಡಲಿದೆ.
(MK Vishwanath)

ಚಿಕ್ಕಮಗಳೂರು ಜಿಲ್ಲೆ ದಟ್ಟಾರಣ್ಯದ ನಡುವೆ ಇರುವ ಕಳಸದ ಮಾರ್ಗದಲ್ಲಿ ಡ್ರೈವ್‌ ಮಾಡಲು ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಚಿಕ್ಕಮಗಳೂರು ಮೂಡಿಗೆರೆ ಕಳಸ ಮಾರ್ಗದಲ್ಲಿ ಹೊರಟರೆ ಆ ಪ್ರವಾಸದ ಖುಷಿ ನಿಜಕ್ಕೂ ಅವಿಸ್ಮರಣೀಯವೇ ಆಗಲಿದೆ.
icon

(6 / 10)

ಚಿಕ್ಕಮಗಳೂರು ಜಿಲ್ಲೆ ದಟ್ಟಾರಣ್ಯದ ನಡುವೆ ಇರುವ ಕಳಸದ ಮಾರ್ಗದಲ್ಲಿ ಡ್ರೈವ್‌ ಮಾಡಲು ಯಾರೂ ತಪ್ಪಿಸಿಕೊಳ್ಳುವುದಿಲ್ಲ. ಚಿಕ್ಕಮಗಳೂರು ಮೂಡಿಗೆರೆ ಕಳಸ ಮಾರ್ಗದಲ್ಲಿ ಹೊರಟರೆ ಆ ಪ್ರವಾಸದ ಖುಷಿ ನಿಜಕ್ಕೂ ಅವಿಸ್ಮರಣೀಯವೇ ಆಗಲಿದೆ.
(Bynekaadu)

ಬೆಂಗಳೂರು ಇಲ್ಲವೇ ಮೈಸೂರಿನಿಂದ ಕೊಳ್ಳೇಗಾಲ ಹನೂರು ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟದ ಕಡೆಗೆ ಹೋಗುವ ತಿರುವುಗಳ ಹಾಗೂ ಹಸಿರಿನ ಪಯಣವೂ ಮೈಮನಗಳಿಗೆ ಮುದ ನೀಡಲಿದೆ.
icon

(7 / 10)

ಬೆಂಗಳೂರು ಇಲ್ಲವೇ ಮೈಸೂರಿನಿಂದ ಕೊಳ್ಳೇಗಾಲ ಹನೂರು ಮಾರ್ಗವಾಗಿ ಮಲೈ ಮಹದೇಶ್ವರ ಬೆಟ್ಟದ ಕಡೆಗೆ ಹೋಗುವ ತಿರುವುಗಳ ಹಾಗೂ ಹಸಿರಿನ ಪಯಣವೂ ಮೈಮನಗಳಿಗೆ ಮುದ ನೀಡಲಿದೆ.

ಮೈಸೂರು ಹುಣಸೂರು ಮಾರ್ಗವಾಗಿ ಮೂರ್ಕಲ್‌ನಿಂದ ನಾಗರಹೊಳೆ ಕೊಡಗಿನ ಕುಟ್ಟದವರೆಗಿನ ಕಾಡಿನ ಡ್ರೈವ್‌ ವನ್ಯಜೀವಿಗಳು, ಹಸಿರು ನೋಟದ ವೈಭವವೇ ಹೌದು. ಈ ಮಾರ್ಗದಲ್ಲಿ ಸಂಚರಿಸುವ ಯೋಚನೆ ಯೋಜನೆ ಬೆಸ್ಟ್‌ ಎನ್ನಿಸಲಿದೆ.
icon

(8 / 10)

ಮೈಸೂರು ಹುಣಸೂರು ಮಾರ್ಗವಾಗಿ ಮೂರ್ಕಲ್‌ನಿಂದ ನಾಗರಹೊಳೆ ಕೊಡಗಿನ ಕುಟ್ಟದವರೆಗಿನ ಕಾಡಿನ ಡ್ರೈವ್‌ ವನ್ಯಜೀವಿಗಳು, ಹಸಿರು ನೋಟದ ವೈಭವವೇ ಹೌದು. ಈ ಮಾರ್ಗದಲ್ಲಿ ಸಂಚರಿಸುವ ಯೋಚನೆ ಯೋಜನೆ ಬೆಸ್ಟ್‌ ಎನ್ನಿಸಲಿದೆ.
(Tapioca)

ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಅಜ್ಜಂಪುರ ಬೀರೂರು ಇಲ್ಲವೇ ತರೀಕೆರೆ ವರೆಗಿನ ಮಾರ್ಗವೂ ಕೂಡ ಡ್ರೈವ್‌ಗೆ ಚೆನ್ನಾಗಿದೆ.ಅರಣ್ಯದ ಜತೆಗೆ ಕೆರೆಗಳ ನೋಟವೂ ಖಂಡಿತ ಮುದ ನೀಡಲಿದೆ.
icon

(9 / 10)

ದಾವಣಗೆರೆ ಜಿಲ್ಲೆಯ ಚನ್ನಗಿರಿಯಿಂದ ಅಜ್ಜಂಪುರ ಬೀರೂರು ಇಲ್ಲವೇ ತರೀಕೆರೆ ವರೆಗಿನ ಮಾರ್ಗವೂ ಕೂಡ ಡ್ರೈವ್‌ಗೆ ಚೆನ್ನಾಗಿದೆ.ಅರಣ್ಯದ ಜತೆಗೆ ಕೆರೆಗಳ ನೋಟವೂ ಖಂಡಿತ ಮುದ ನೀಡಲಿದೆ.
(Arun Bharadwaj)

ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಭಟ್ಕಳ ಕಡೆಗೆ ಹೋಗುವ ಮಾರ್ಗವೂ ಕೂಡ ದಟ್ಟಾರಣ್ಯದ ಹಾಗೂ ಮುದ ನೀಡುವ ಮಾರ್ಗವೇ.  ಮಲೆನಾಡಿನ ಯಾವುದೇ ಮಾರ್ಗ ಆಯ್ದುಕೊಂಡರೂ ಅದು ನಿಜಕ್ಕೂ ಅವಿಸ್ಮರಣೀಯ ಎನ್ನಿಸಲಿದೆ.
icon

(10 / 10)

ಶಿವಮೊಗ್ಗದಿಂದ ಸಾಗರ ಮಾರ್ಗವಾಗಿ ಭಟ್ಕಳ ಕಡೆಗೆ ಹೋಗುವ ಮಾರ್ಗವೂ ಕೂಡ ದಟ್ಟಾರಣ್ಯದ ಹಾಗೂ ಮುದ ನೀಡುವ ಮಾರ್ಗವೇ. ಮಲೆನಾಡಿನ ಯಾವುದೇ ಮಾರ್ಗ ಆಯ್ದುಕೊಂಡರೂ ಅದು ನಿಜಕ್ಕೂ ಅವಿಸ್ಮರಣೀಯ ಎನ್ನಿಸಲಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು