ಮೈಸೂರಿನ ಅಜ್ಜನ ಮನೆಯಲ್ಲಿ ಶ್ರೀ ಶಂಕರ ಜಯಂತಿ ವೈಭವ; ಶತಾವಧಾನಿ ಗಣೇಶ್ ವಿಚಾರ ಮಂಥನ, ಯುವ ಕಲಾವಿದರ ಹಾಡು ನೃತ್ಯ ಸಂಗಮ
ಮೈಸೂರಿನಲ್ಲಿ ಎಂಟು ವರ್ಷದಿಂದ ಸಮಾಜ ಸೇವೆ ಮಾಡುತ್ತಲೇ ವಿಭಿನ್ನ ಚಟುವಟಿಕೆಗಳ ಮೂಲಕ ಗಮನ ಸೆಳೆದಿರುವ ಅಜ್ಜನ ಮನೆ ಸಂಘಟನೆ ಈ ಬಾರಿ ಶಂಕರ ಜಯಂತಿಯನ್ನು ವಿಭಿನ್ನವಾಗಿಯೇ ಆಚರಿಸಿತು. ಅದರ ಚಿತ್ರನೋಟ ಇಲ್ಲಿದೆ.
(1 / 6)
ಮೈಸೂರಿನ ಕುವೆಂಪುನಗರದ ಗಾನಭಾರತಿಯ ರಮಾಗೋವಿಂದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮದಲ್ಲಿ ವಿದುಷಿ ಕೃಪಾ ಫಡ್ಕೆ ಶಿಷ್ಯರು ನೃತ್ಯ ಪ್ರದರ್ಶನ ನಡೆಸಿಕೊಟ್ಟರು.
(2 / 6)
ಅಜ್ಜನ ಮನೆಯ ಶಂಕರ ನಮನ ಕಾರ್ಯಕ್ರಮದಲ್ಲಿ ಗಮನ ಸೆಳೆದ ವಿದುಷಿ ಆರ್.ಎನ್.ಶ್ರೀಲತಾ ಅವರ ಶಿಷ್ಯ ವೃಂದದ ಶಂಕರ ಗೀತೆಗಳ ಪ್ರಸ್ತುತಿ.,
(3 / 6)
ಕರ್ನಾಟಕದ ಖ್ಯಾತ ವಿದ್ವಾಂಸ ಡಾ.ಶತಾವಧಾನಿ ಗಣೇಶ್ ಅವರು ಶಂಕರರ ಕುರಿತು ಉಪನ್ಯಾಸ ನೀಡಿ ನಂತರ ಸಂವಾದ ನಡೆಸಿದರು.
(4 / 6)
ಶಂಕರ ನಮನ ಕಾರ್ಯಕ್ರಮದಲ್ಲಿ ವಿದುಷಿ ರಕ್ಷಿತಾ ರಮೇಶ್( ವೀಣೆ). ಶೃತಿ( ಪಿಟೀಲು), ವಿದ್ವಾನ್ ಕೇಶವಚಂದ್ರ( ಕೊಳಲು), ವಿದ್ವಾನ್ ಶರತ್ ಕೌಶಿಕ್ ( ಘಟ), ವಿದ್ವಾನ್ ರಾಧೇಶ್( ಮೃದಂಗ)ದೊಂದಿಗೆ ವಾದ್ಯ ನಮನ ನಡೆಸಿಕೊಟ್ಟರು.
(5 / 6)
ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ವಾರದಲ್ಲಿ ಒಂದು ದಿನ ಆಹಾರ ವಿತರಿಸುವ ಮೂಲಕ ಗಮನ ಸೆಳೆದಿರುವ ಮೈಸೂರಿನ ಅಜ್ಜನ ಮನೆ ಸಂಸ್ಥೆಯ ಶಂಕರ ನಮನ ಕಾರ್ಯಕ್ರಮಕ್ಕೆ ಶಿಕ್ಷಣ ತಜ್ಞ ದ್ವಾರಕಾನಾಥ್ ಚಾಲನೆ ಕೊಟ್ಟರು. ಸಂಸ್ಥೆಯ ಸಂಸ್ಥಾಪಕ ಕೃಷ್ಣ, ನಿರ್ದೇಶಕ ಎಚ್.ಕೆ.ನಾಗೇಶ್ ಜತೆಗಿದ್ದರು.
ಇತರ ಗ್ಯಾಲರಿಗಳು