ಮೈಸೂರಿನಲ್ಲಿ ಹಲಸಿನ ಮೇಳಕ್ಕೆ ಚಾಲನೆ: ಮೊದಲ ದಿನವೇ ಹರಿದು ಬಂದ ಜನಸಾಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನಲ್ಲಿ ಹಲಸಿನ ಮೇಳಕ್ಕೆ ಚಾಲನೆ: ಮೊದಲ ದಿನವೇ ಹರಿದು ಬಂದ ಜನಸಾಗರ

ಮೈಸೂರಿನಲ್ಲಿ ಹಲಸಿನ ಮೇಳಕ್ಕೆ ಚಾಲನೆ: ಮೊದಲ ದಿನವೇ ಹರಿದು ಬಂದ ಜನಸಾಗರ

ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನ‌ಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದ ಜನ, ಇಲ್ಲಿವೆ ನೋಡಿ ರುಚಿಕರವಾದ ಫೋಟೊಗಳು

ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನ‌ಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದ ಜನ
icon

(1 / 9)

ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನ‌ಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದ ಜನ

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಹಲಸಿನ ಮೇಳ
icon

(2 / 9)

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ಪಶ್ಚಿಮದವರ ಸಂಯುಕ್ತಾಶ್ರಯದಲ್ಲಿ ಮೈಸೂರಿನ ವಿನೋಬ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನಗಳ ಹಲಸಿನ ಮೇಳ

ಎರಡು ದಿನಗಳ ಹಲಸಿನ ಮೇಳದಲ್ಲಿ ಕರ್ನಾಟಕದ ಹೆಮ್ಮೆಯ ಹಲಸಿನ ತಳಿಗಳಾದ ತೂಬಗೆರೆ ಕೆಂಪು, ಪ್ರಕಾಶ್ ಚಂದ್ರ, ರುದ್ರಾಕ್ಷಿ, ಶಂಕರ, ಸಿದ್ದು ಹಲಸು, ಹನಿ‌ಜಾಕ್,  ಲಾಲ್‌ಬಾಗ್ ಮಧುರ, ರಾಮಚಂದ್ರ, ಚಂದ್ರ ಹಲಸು, ಅಂಬಲಿ ಹಲಸು, ಸದಾನಂದ, ಸರ್ವಋತು, ಅಂಟು ರಹಿತ ಹಲಸು ಸೇರಿದಂತೆ 25ಕ್ಕೂ ಹೆಚ್ಚಿನ ಹಲಸು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
icon

(3 / 9)

ಎರಡು ದಿನಗಳ ಹಲಸಿನ ಮೇಳದಲ್ಲಿ ಕರ್ನಾಟಕದ ಹೆಮ್ಮೆಯ ಹಲಸಿನ ತಳಿಗಳಾದ ತೂಬಗೆರೆ ಕೆಂಪು, ಪ್ರಕಾಶ್ ಚಂದ್ರ, ರುದ್ರಾಕ್ಷಿ, ಶಂಕರ, ಸಿದ್ದು ಹಲಸು, ಹನಿ‌ಜಾಕ್, ಲಾಲ್‌ಬಾಗ್ ಮಧುರ, ರಾಮಚಂದ್ರ, ಚಂದ್ರ ಹಲಸು, ಅಂಬಲಿ ಹಲಸು, ಸದಾನಂದ, ಸರ್ವಋತು, ಅಂಟು ರಹಿತ ಹಲಸು ಸೇರಿದಂತೆ 25ಕ್ಕೂ ಹೆಚ್ಚಿನ ಹಲಸು ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಜತೆಗೆ ಜೇನು ಹಲಸು, ಬಿಳಿ ಹಲಸು, ಸಕ್ಕರಾಯಪಟ್ಟಣ ಹಲಸು, ಕಲ್ಲು ಹಲಸು, ಶಂಖು ಹಲಸು, ಕಪ್ಪುಚುಕ್ಕೆ ಹಲಸು, ಏಕಾದಶಿ ಹಲಸು, ಪಲ್ಯದ ಹಲಸು, ಬೆಟ್ಟದ ಹಲಸು, ನಾಗಚಂದ್ರ ಹಲಸುಗಳ ಪ್ರದರ್ಶನವೂ ಗಮನ ಸೆಳೆದಿದೆ.
icon

(4 / 9)

ಜತೆಗೆ ಜೇನು ಹಲಸು, ಬಿಳಿ ಹಲಸು, ಸಕ್ಕರಾಯಪಟ್ಟಣ ಹಲಸು, ಕಲ್ಲು ಹಲಸು, ಶಂಖು ಹಲಸು, ಕಪ್ಪುಚುಕ್ಕೆ ಹಲಸು, ಏಕಾದಶಿ ಹಲಸು, ಪಲ್ಯದ ಹಲಸು, ಬೆಟ್ಟದ ಹಲಸು, ನಾಗಚಂದ್ರ ಹಲಸುಗಳ ಪ್ರದರ್ಶನವೂ ಗಮನ ಸೆಳೆದಿದೆ.

ಕೆಂಪು ಹಲಸಿನ ತಳಿಗಳಾದ ಸಿದ್ದು , ಶಂಕರ, ಡೆಂಗ್ ಸೂರ್ಯ, ರುದ್ರಾಕ್ಷಿ  ಮತ್ತು ಇತರೆ ಗುಣಮಟ್ಟದ ಹಲಸಿನ ತಳಿಯ ಗಿಡಗಳನ್ನು ಮಾರಾಟಕ್ಕಿಡಲಾಗಿದೆ.
icon

(5 / 9)

ಕೆಂಪು ಹಲಸಿನ ತಳಿಗಳಾದ ಸಿದ್ದು , ಶಂಕರ, ಡೆಂಗ್ ಸೂರ್ಯ, ರುದ್ರಾಕ್ಷಿ ಮತ್ತು ಇತರೆ ಗುಣಮಟ್ಟದ ಹಲಸಿನ ತಳಿಯ ಗಿಡಗಳನ್ನು ಮಾರಾಟಕ್ಕಿಡಲಾಗಿದೆ.

ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ‌ ತಂದಿರುವ ವಿವಿಧ ಜಾತಿಯ ಹಲಸಿನ ಹಣ್ಣುಗಳನ್ನು ಮತ್ತು ರುದ್ರಾಕ್ಷಿ ಹಲಸು ಖರೀದಿಸಲು  ಜನರು ಮುಗಿಬಿದ್ದರು. ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನಿಂದ ತಂದಿರುವ ಕೆಂಪು ತೊಳೆಯ ಚಂದ್ರ ಹಲಸಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಕೊಳ್ಳೇಗಾಲದ ಸಹಜ ಕೃಷಿಕ ಕೈಲಾಸಮೂರ್ತಿಯವರು ತಮ್ಮ ತೋಟದ ಬಗೆಬಗೆಯ ಹಲಸಿನ ತಳಿಗಳನ್ನು ಜನರಿಗೆ ಪರಿಚಯಿಸಿದ್ದಾರೆ.
icon

(6 / 9)

ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ‌ ತಂದಿರುವ ವಿವಿಧ ಜಾತಿಯ ಹಲಸಿನ ಹಣ್ಣುಗಳನ್ನು ಮತ್ತು ರುದ್ರಾಕ್ಷಿ ಹಲಸು ಖರೀದಿಸಲು ಜನರು ಮುಗಿಬಿದ್ದರು. ಚಿಕ್ಕನಾಯಕನಹಳ್ಳಿ ಮತ್ತು ಚೇಳೂರಿನಿಂದ ತಂದಿರುವ ಕೆಂಪು ತೊಳೆಯ ಚಂದ್ರ ಹಲಸಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಕೊಳ್ಳೇಗಾಲದ ಸಹಜ ಕೃಷಿಕ ಕೈಲಾಸಮೂರ್ತಿಯವರು ತಮ್ಮ ತೋಟದ ಬಗೆಬಗೆಯ ಹಲಸಿನ ತಳಿಗಳನ್ನು ಜನರಿಗೆ ಪರಿಚಯಿಸಿದ್ದಾರೆ.

ಹಲಸಿನ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಯ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ. ಹಲಸಿನ ಹಣ್ಣಿನ ರಸಾಯನ, ಐಸ್ ಕ್ರೀಂ, ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವ, ಕಬಾಬ್, ಸಮೋಸ, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ ಮೊದಲಾದ ಹಲಸಿನ ಖಾದ್ಯದ ಮಳಿಗೆಗಳನ್ನು ತೆರೆಯಲಾಗಿದೆ.
icon

(7 / 9)

ಹಲಸಿನ ಮೇಳದಲ್ಲಿ, ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಯ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ. ಹಲಸಿನ ಹಣ್ಣಿನ ರಸಾಯನ, ಐಸ್ ಕ್ರೀಂ, ಚಿಪ್ಸ್, ಚಾಕೊಲೇಟ್, ಹಪ್ಪಳ, ಹಲ್ವ, ಕಬಾಬ್, ಸಮೋಸ, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ ಮೊದಲಾದ ಹಲಸಿನ ಖಾದ್ಯದ ಮಳಿಗೆಗಳನ್ನು ತೆರೆಯಲಾಗಿದೆ.

ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ಸಿರಿಧಾನ್ಯ ಮತ್ತು ದೇಸಿ ಭತ್ತದ ಬೀಜಗಳನ್ನು ಸಹಜ ಸೀಡ್ಸ್ ಮಾರಾಟ ಮಾಡುತ್ತಿದೆ. ಧಾರವಾಡದ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಸಿರಿಧಾನ್ಯ ಮತ್ತು ಬೇಳೆಕಾಳುಗಳನ್ನು ಮಾರಾಟಕ್ಕಿಟ್ಟಿದೆ. ಸಾವಯವದಲ್ಲಿ ಬೆಳೆದ ಮಾವು ಮತ್ತು ನೇರಳೆ ಹಣ್ಣುಗಳು ಕೂಡ ಮಾರಾಟಕ್ಕೆ ಲಭ್ಯವಿವೆ. 55ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು, ಕರಕುಶಲ ಸಾಮಗ್ರಿಗಳು ಮತ್ತು ಸೌಂದರ್ಯವರ್ಧಕ ಪ್ರಸಾಧನಗಳನ್ನು ಮಾರಾಟ ಮಾಡಲಾಗುತ್ತಿದೆ.
icon

(8 / 9)

ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ಸಿರಿಧಾನ್ಯ ಮತ್ತು ದೇಸಿ ಭತ್ತದ ಬೀಜಗಳನ್ನು ಸಹಜ ಸೀಡ್ಸ್ ಮಾರಾಟ ಮಾಡುತ್ತಿದೆ. ಧಾರವಾಡದ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಸಿರಿಧಾನ್ಯ ಮತ್ತು ಬೇಳೆಕಾಳುಗಳನ್ನು ಮಾರಾಟಕ್ಕಿಟ್ಟಿದೆ. ಸಾವಯವದಲ್ಲಿ ಬೆಳೆದ ಮಾವು ಮತ್ತು ನೇರಳೆ ಹಣ್ಣುಗಳು ಕೂಡ ಮಾರಾಟಕ್ಕೆ ಲಭ್ಯವಿವೆ. 55ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳು, ಕರಕುಶಲ ಸಾಮಗ್ರಿಗಳು ಮತ್ತು ಸೌಂದರ್ಯವರ್ಧಕ ಪ್ರಸಾಧನಗಳನ್ನು ಮಾರಾಟ ಮಾಡಲಾಗುತ್ತಿದೆ.

ಮೇ 4, 2025 ಭಾನುವಾರ ಮಧ್ಯಾಹ್ನ 2 ಗಂಟೆಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು, ಹೆಚ್ಚಿನ ವಿವರಗಳಿಗೆ : ಶಾಂತಕುಮಾರ್ ಅವರ ಮೊಬೈಲ್ ಸಂಖ್ಯೆ 94487 74871 ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
icon

(9 / 9)

ಮೇ 4, 2025 ಭಾನುವಾರ ಮಧ್ಯಾಹ್ನ 2 ಗಂಟೆಗೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು, ಹೆಚ್ಚಿನ ವಿವರಗಳಿಗೆ : ಶಾಂತಕುಮಾರ್ ಅವರ ಮೊಬೈಲ್ ಸಂಖ್ಯೆ 94487 74871 ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು