ಕೊಡಗಿನಿಂದ ಮಂಗಳೂರಿಗೆ ಸಂಪರ್ಕಿಸುವ ಮೈಸೂರು ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ; ಮೋದಿ ಚಾಲನೆ ಮಾಡಿದ 2 ವರ್ಷ ಬಳಿಕ ಶುರು
ಮೈಸೂರಿನಿಂದ ಕೊಡಗು ಹಾಗೂ ಮಂಗಳೂರು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕುಶಾಲನಗರ ಹೆದ್ದಾರಿಯ ವಿಸ್ತರಣೆ ಯೋಜನೆ ಕಾಮಗಾರಿ ಶುರುವಾಗಿದೆ. ಇದರ ನೋಟ ಇಲ್ಲಿದೆ.
(1 / 7)
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವ ರಿಂದ 2018ರಲ್ಲೇ ಅನುಮೋದನೆ ಪಡೆದುಕೊಂಡು 2023, ಮಾರ್ಚ್ 12ರಂದು ಚಾಲನೆ ದೊರೆತಿದ್ದು ಕುಶಾಲನಗರ ಚತುಷ್ಪಥ ಕಾಮಗಾರಿ ಈಗ ಶುರುವಾಗಿದೆ.
(2 / 7)
ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ದಿನವೇ ಗೆಜ್ಜಲಗೆರೆಯಲ್ಲಿ ಪ್ರಧಾನಿ ಮೋದೀ ಅವರಿಂದ ಭೂಮಿ ಪೂಜೆ ಮಾಡಿಸಿದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯ ಕಾಮಗಾರಿ ಇದೇ ಏಪ್ರಿಲ್ ನಲ್ಲಿ ಆರಂಭವಾಗಿದೆ
(3 / 7)
ಒಟ್ಟು 92 ಕಿಮೀ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ 4 ಪ್ಯಾಕೇಜ್ ಗಳಿದ್ದು ತ್ವರಿತಗತಿಯಲ್ಲಿ ಈ ರಸ್ತೆ ವಿಸ್ತರಣೆ ಕೆಲಸ ಮುಗಿಸುವ ನಿರೀಕ್ಷೆಯಿದೆ.
(4 / 7)
ಪ್ಯಾಕೇಜ್ -5 ರಡಿ ಬಿ ಅಗ್ರಹಾರ( ಶ್ರೀರಂಗಪಟ್ಟಣ) ದಿಂದ ಯಲಚಹಳ್ಳಿ (ಮೈಸೂರು ತಾಲೂಕು) 19 ಕಿಮೀ ಮತ್ತು ಪ್ಯಾಕೇಜ್-3 ಹುಣಸೂರು ತಾಲೂಕಿನ ಬೆಳತ್ತೂರುನಿಂದ ಪಿರಿಯಾಪಟ್ಟಣ ತಾಲೂಕಿನ ಹರವೆಮಲ್ಲಿರಾಜಪಟ್ಟಣ ವರೆಗಿನ 24.10 ಕಿಮೀ) ಕಾಮಗಾರಿ ವೇಗವಾಗಿ ನಡೆಯುತ್ತಿದೆ
(5 / 7)
ಪ್ಯಾಕೇಜ್-4 ಸದ್ಯದಲ್ಲೇ ಆರಂಭವಾಗಲಿದ್ದು, ಪ್ಯಾಕೇಜ್-2 ಅರಣ್ಯ ಇಲಾಖೆಯ ಅನುಮತಿಗಾಗಿ ಕಾದಿದೆ. ಇದಕ್ಕೂ ಶೀಘ್ರವೇ ಅನುಮತಿ ಸಿಗುವ ನಿರೀಕ್ಷೆಯನ್ನು ಹೆದ್ದಾರಿ ಪ್ರಾಧಿಕಾರ ಇಟ್ಟುಕೊಂಡಿದೆ.
(6 / 7)
ಕುಶಾಲನಗರದಿಂದ ಮಡಿಕೇರಿ ಕಡೆಗೆ ಆರಂಭವಾಗಬೇಕಿರುವ 22 ಕಿಮೀ ಉದ್ಧದ ಪ್ಯಾಕೇಜ್-1 ಅನ್ನು ಪರಿಸರವಾದಿಗಳ ತಕರಾರು ಮತ್ತು ಹೈಕೋರ್ಟ್ ಕೇಸಿನಿಂದಾಗಿ ಕೈಬಿಟ್ಟು ಕುಶಾಲನಗರದವರೆಗೂ ಮಾತ್ರ ಯೋಜನೆ ಕೈಗೆತ್ತಿಕೊಂಡಿದ್ದೆವು. ಎಂದು ಮೈಸೂರು- ಕೊಡಗು ಮಾಜಿ ಸಂಸದ ಪ್ರತಾಪಸಿಂಹ ಪೋಸ್ಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು