Mysore News:ಮೈಸೂರಿನ ದತ್ತವೆಂಕಟೇಶ್ವರ ಕ್ಷೇತ್ರದಲ್ಲಿ ರಜತ ಮಹೋತ್ಸವ ಸಡಗರ, ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರು photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mysore News:ಮೈಸೂರಿನ ದತ್ತವೆಂಕಟೇಶ್ವರ ಕ್ಷೇತ್ರದಲ್ಲಿ ರಜತ ಮಹೋತ್ಸವ ಸಡಗರ, ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರು Photos

Mysore News:ಮೈಸೂರಿನ ದತ್ತವೆಂಕಟೇಶ್ವರ ಕ್ಷೇತ್ರದಲ್ಲಿ ರಜತ ಮಹೋತ್ಸವ ಸಡಗರ, ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರು photos

  • ಸಾಂಸ್ಕೃತಿಕ ನಗರಿ ಮೈಸೂರು( Mysuru) ಧಾರ್ಮಿಕ ಕೇಂದ್ರವೂ ಹೌದು. ಗಣಪತಿ ಸಚ್ಚಿದಾನಂದ ಆಶ್ರಮ( Ganapati Sachidananda Ashram)ದಲ್ಲಿನ ದತ್ತ ವೆಂಕಟೇಶ್ವರದಲ್ಲಿ( Datta Venkateshwar) ರಜತ ಮಹೋತ್ಸವ ಸಡಗರ.ಇದರ ಭಾಗವಾಗಿ ನಡೆದ ನಾನಾ ಚಟುವಟಿಕೆಗಳ ಚಿತ್ರನೋಟ ಇಲ್ಲಿದೆ.,

ಮೈಸೂರು ನಗರದ ನಂಜನಗೂಡು ರಸ್ತೆಯ ವಿಶಾಲ ಜಾಗದಲ್ಲಿ ವಿಶ್ವವಿದ್ಯಾನಿಲಯದಂತೆಯೇ ರೂಪುಗೊಂಡಿರುವ ಗಣಪತಿ ಸಚ್ಚಿದಾನಂದ ಆಶ್ರಮ. ಅಲ್ಲಿನ ದತ್ತವೆಂಕಟೇಶ್ವರ ಕ್ಷೇತ್ರವೀಗ 25‌  ವರ್ಷ ಪೂರೈಸಿದೆ. ಇದರ ಅಂಗವಾಗಿ ನಾನಾ ಚಟುವಟಿಕೆಗಳು ನಡೆದಿವೆ.
icon

(1 / 8)

ಮೈಸೂರು ನಗರದ ನಂಜನಗೂಡು ರಸ್ತೆಯ ವಿಶಾಲ ಜಾಗದಲ್ಲಿ ವಿಶ್ವವಿದ್ಯಾನಿಲಯದಂತೆಯೇ ರೂಪುಗೊಂಡಿರುವ ಗಣಪತಿ ಸಚ್ಚಿದಾನಂದ ಆಶ್ರಮ. ಅಲ್ಲಿನ ದತ್ತವೆಂಕಟೇಶ್ವರ ಕ್ಷೇತ್ರವೀಗ 25‌  ವರ್ಷ ಪೂರೈಸಿದೆ. ಇದರ ಅಂಗವಾಗಿ ನಾನಾ ಚಟುವಟಿಕೆಗಳು ನಡೆದಿವೆ.

ದತ್ತಪೀಠದ ಸಂಸ್ಥಾಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿಯೇ ನಾನಾ ಚಟುವಟಿಕೆಗಳು ನಡೆದಿವೆ. ಪೂಜೆ ವೇಳೆ ಹಸುವಿಗೆ ಉಪಚಾರ ಮಾಡುವ ಸ್ವಾಮೀಜಿ ಅವರು.
icon

(2 / 8)

ದತ್ತಪೀಠದ ಸಂಸ್ಥಾಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿಯೇ ನಾನಾ ಚಟುವಟಿಕೆಗಳು ನಡೆದಿವೆ. ಪೂಜೆ ವೇಳೆ ಹಸುವಿಗೆ ಉಪಚಾರ ಮಾಡುವ ಸ್ವಾಮೀಜಿ ಅವರು.

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ಸ್ವಾಮೀಜಿ ಅವರೂ 25‌  ವರ್ಷದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
icon

(3 / 8)

ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ಸ್ವಾಮೀಜಿ ಅವರೂ 25‌  ವರ್ಷದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮೈಸೂರಿನ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ಆಯೋಜನೆಗೊಂಡಿರುವ 25‌ ನೇ ವರ್ಷದ ಕಾರ್ಯಕ್ರಮದಲ್ಲಿ ದೇಶದ ನಾನಾ ವಿದ್ವಾಂಸರನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪುರಸ್ಕರಿಸಿದರು.
icon

(4 / 8)

ಮೈಸೂರಿನ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ಆಯೋಜನೆಗೊಂಡಿರುವ 25‌ ನೇ ವರ್ಷದ ಕಾರ್ಯಕ್ರಮದಲ್ಲಿ ದೇಶದ ನಾನಾ ವಿದ್ವಾಂಸರನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪುರಸ್ಕರಿಸಿದರು.

ಗಣಪತಿ ಸಚ್ಚಿದಾನಂದ ಆಶ್ರಮದ ದತ್ತಪೀಠದಲ್ಲಿನ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡ ಭಕ್ತಗಣ.
icon

(5 / 8)

ಗಣಪತಿ ಸಚ್ಚಿದಾನಂದ ಆಶ್ರಮದ ದತ್ತಪೀಠದಲ್ಲಿನ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡ ಭಕ್ತಗಣ.

ಮೈಸೂರು ಊಟಿ ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ‌25‌ ನೇ ವಾರ್ಷಿಕೋತ್ಸವ ಸಮಾರಂಭದ ಸಂಭ್ರಮ ಗುರುವಾರವೂ ಇತ್ತು.ವಾರ್ಷಿಕೋತ್ಸವದ ಅಂಗವಾಗಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಿಂದ ಜರುಗಿವೆ. 
icon

(6 / 8)

ಮೈಸೂರು ಊಟಿ ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ‌25‌ ನೇ ವಾರ್ಷಿಕೋತ್ಸವ ಸಮಾರಂಭದ ಸಂಭ್ರಮ ಗುರುವಾರವೂ ಇತ್ತು.ವಾರ್ಷಿಕೋತ್ಸವದ ಅಂಗವಾಗಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಿಂದ ಜರುಗಿವೆ. 

ವೆಂಕಟೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಗುರುವಾರ ಸಂಜೆ ನೆರವೇರಿದೆ. ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಬಣ್ಣದ ದೀಪಗಳು ಹಾಗೂ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಶ್ರೀ ವೆಂಕಟೇಶ್ವರನ ಉತ್ಸವಮೂರ್ತಿಯನ್ನ ಸ್ಫಾಪಿಸಿ ಉತ್ಸವ ನಡೆಸಲಾಯಿತು.
icon

(7 / 8)

ವೆಂಕಟೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಗುರುವಾರ ಸಂಜೆ ನೆರವೇರಿದೆ. ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಬಣ್ಣದ ದೀಪಗಳು ಹಾಗೂ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಶ್ರೀ ವೆಂಕಟೇಶ್ವರನ ಉತ್ಸವಮೂರ್ತಿಯನ್ನ ಸ್ಫಾಪಿಸಿ ಉತ್ಸವ ನಡೆಸಲಾಯಿತು.

ಗಣಪತಿ  ಸಚ್ಚಿದಾನಂದ ಶ್ರೀಗಳ ಸಾನಿಧ್ಯದಲ್ಲಿ ಆಯೋಜಿಸಲಾಗಿದ್ದ ತೆಪ್ಪೋತ್ಸವ ಕಾರ್ಯಕ್ರಮ ಕರ್ನಾಟಕ ಮಾತ್ರವಲ್ಲದೇ.ವಿವಿಧ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ತೆಪ್ಪೋತ್ಸವ ಕಣ್ತುಂಬಿಕೊಂಡು ಪುನೀತರಾದರು.
icon

(8 / 8)

ಗಣಪತಿ  ಸಚ್ಚಿದಾನಂದ ಶ್ರೀಗಳ ಸಾನಿಧ್ಯದಲ್ಲಿ ಆಯೋಜಿಸಲಾಗಿದ್ದ ತೆಪ್ಪೋತ್ಸವ ಕಾರ್ಯಕ್ರಮ ಕರ್ನಾಟಕ ಮಾತ್ರವಲ್ಲದೇ.ವಿವಿಧ ರಾಜ್ಯಗಳಿಂದ ಆಗಮಿಸಿದ ಸಹಸ್ರಾರು ಭಕ್ತರು ತೆಪ್ಪೋತ್ಸವ ಕಣ್ತುಂಬಿಕೊಂಡು ಪುನೀತರಾದರು.


ಇತರ ಗ್ಯಾಲರಿಗಳು