ನಾಗರಹೊಳೆ ಚಿರತೆಗಿಲ್ಲ ಇನ್ನು ಬಿಸಿಲಿನ ಚಿಂತೆ; ವನ್ಯಜೀವಿ ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಕ್ಯಾಮರಾ ಕಣ್ಣಲ್ಲಿ ಚಿರತೆ ಸೆರೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಾಗರಹೊಳೆ ಚಿರತೆಗಿಲ್ಲ ಇನ್ನು ಬಿಸಿಲಿನ ಚಿಂತೆ; ವನ್ಯಜೀವಿ ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಕ್ಯಾಮರಾ ಕಣ್ಣಲ್ಲಿ ಚಿರತೆ ಸೆರೆ

ನಾಗರಹೊಳೆ ಚಿರತೆಗಿಲ್ಲ ಇನ್ನು ಬಿಸಿಲಿನ ಚಿಂತೆ; ವನ್ಯಜೀವಿ ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಕ್ಯಾಮರಾ ಕಣ್ಣಲ್ಲಿ ಚಿರತೆ ಸೆರೆ

ವನ್ಯಜೀವಿಗಳನ್ನು ಕಾಡಲ್ಲಿ ಕಾಣುವುದೇ ಕಷ್ಟ. ಅದರಲ್ಲೂ ಚಿರತೆಯಂತ ನಾಚಿಕೆ ಸ್ವಭಾವದ ಪ್ರಾಣಿ ಸಿಗುವುದು ಅಪರೂಪವೇ. ಒಂದೇ ಚಿರತೆಯ ಭಿನ್ನ ಭಾವ ಭಂಗಿ ಸೆರೆ ಸಿಗುವುದು ಅದೃಷ್ಟವೇ. ಮೈಸೂರಿನ ಛಾಯಾಗ್ರಾಹಕ ಅನುರಾಗ್‌ ಬಸವರಾಜ್‌ ಅಂತಹ ಕ್ಷಣ ಸೆರೆ ಹಿಡಿದಿದ್ದಾರೆ.

ಈ ಬಾರಿ ಅರಣ್ಯದಲ್ಲಿ ಬಿಸಿಲೂ ಇತ್ತು. ಆಗಾಗ ಮಳೆಯೂ ಬಂದಿತು. ಇದರಿಂದ ಕಾಡಿನ ಬೆಂಕಿ ಬೇಗೆಯಂತೂ ಇರಲಿಲ್ಲ. ಇನ್ನೇನೂ ಮುಂಗಾರು ಪಕ್ಕದ ಕೇರಳದಿಂದ ಪ್ರವೇಸಿಸಲಿದೆ ಎನ್ನುತ್ತಿದೆ ನಾಗರಹೊಳೆ ಈ ಚಿರತೆ.
icon

(1 / 7)

ಈ ಬಾರಿ ಅರಣ್ಯದಲ್ಲಿ ಬಿಸಿಲೂ ಇತ್ತು. ಆಗಾಗ ಮಳೆಯೂ ಬಂದಿತು. ಇದರಿಂದ ಕಾಡಿನ ಬೆಂಕಿ ಬೇಗೆಯಂತೂ ಇರಲಿಲ್ಲ. ಇನ್ನೇನೂ ಮುಂಗಾರು ಪಕ್ಕದ ಕೇರಳದಿಂದ ಪ್ರವೇಸಿಸಲಿದೆ ಎನ್ನುತ್ತಿದೆ ನಾಗರಹೊಳೆ ಈ ಚಿರತೆ.

ದಿನದ ಊಟ ಈಗಾಗಲೇ ಆಗಿದೆ. ಕೆಲ ಹೊತ್ತು ಇನ್ನು ನಿದ್ರೆಯ ಸಮಯ. ಇದಕ್ಕೆ ಮರವೇರಿದ್ದೇನೆ. ನೋಡೋಣ ನಿದ್ರೆ ಬರುತ್ತಾ ಅಂತ.
icon

(2 / 7)

ದಿನದ ಊಟ ಈಗಾಗಲೇ ಆಗಿದೆ. ಕೆಲ ಹೊತ್ತು ಇನ್ನು ನಿದ್ರೆಯ ಸಮಯ. ಇದಕ್ಕೆ ಮರವೇರಿದ್ದೇನೆ. ನೋಡೋಣ ನಿದ್ರೆ ಬರುತ್ತಾ ಅಂತ.

ನಿದ್ರೆಗೆಂದು ಮರ ಏರಿ ಕುಳಿತರೆ ನನ್ನ ಕಾಲು ಕಡಿಯುತ್ತಿದೆ. ಒಂದಷ್ಟು ಸರಿಪಡಿಸಿಕೊಳ್ಳುತ್ತೇನೆ ಇರಿ ಸ್ವಾಮಿ.
icon

(3 / 7)

ನಿದ್ರೆಗೆಂದು ಮರ ಏರಿ ಕುಳಿತರೆ ನನ್ನ ಕಾಲು ಕಡಿಯುತ್ತಿದೆ. ಒಂದಷ್ಟು ಸರಿಪಡಿಸಿಕೊಳ್ಳುತ್ತೇನೆ ಇರಿ ಸ್ವಾಮಿ.

ಯಾರೋ ಬಂದ ಹಾಗಾಯಿತು. ಇಲ್ಲಿ ಇದ್ದರೆ ಚೆನ್ನಾಗಿಲ್ಲ. ನೋಡೋಣ ಇನ್ನೊಂದು ಮರ ಹುಡುಕಿಕೊಂಡು ಹೋಗೋಣ ಎನ್ನುತ್ತಾ ಇಳಿಯಲು ಹೊರಟಿತು ಕುತೂಹಲಿ ಚಿರತೆ.
icon

(4 / 7)

ಯಾರೋ ಬಂದ ಹಾಗಾಯಿತು. ಇಲ್ಲಿ ಇದ್ದರೆ ಚೆನ್ನಾಗಿಲ್ಲ. ನೋಡೋಣ ಇನ್ನೊಂದು ಮರ ಹುಡುಕಿಕೊಂಡು ಹೋಗೋಣ ಎನ್ನುತ್ತಾ ಇಳಿಯಲು ಹೊರಟಿತು ಕುತೂಹಲಿ ಚಿರತೆ.

ಮರ ಹತ್ತುವುದು ಇಳಿಯವುದು ನನಗೆ ಬಲು ಸಲೀಸು. ಲಗುಬಗೆಯಲ್ಲಿ ಮರ ಹತ್ತಿ ಮೂಲೆಯಲ್ಲೋ ಕುಳಿತು ಬಿಡುವ ನಾನು ಕ್ಷಣ ಮಾತ್ರದಲ್ಲಿ ಅಲ್ಲಿಂದ ಇಳಿದು ಹೊರಟು ಬಿಡುತ್ತೇನೆ,
icon

(5 / 7)

ಮರ ಹತ್ತುವುದು ಇಳಿಯವುದು ನನಗೆ ಬಲು ಸಲೀಸು. ಲಗುಬಗೆಯಲ್ಲಿ ಮರ ಹತ್ತಿ ಮೂಲೆಯಲ್ಲೋ ಕುಳಿತು ಬಿಡುವ ನಾನು ಕ್ಷಣ ಮಾತ್ರದಲ್ಲಿ ಅಲ್ಲಿಂದ ಇಳಿದು ಹೊರಟು ಬಿಡುತ್ತೇನೆ,

ಹೊರಟೆ , ಓಡಿ ಹೊರಟೆ, ನೋಡೋಣ ಮುಂದಿನ ಇನ್ಯಾವುದರೋ ಮರದಲ್ಲಿ ನಿರುಮ್ಮಳವಾಗಿ ನಿದ್ರೆ ಮಾಡಿಯೇ ತೀರುತ್ತೇನೆ. ಇನ್ನು ಮಳೆಗಾಲ ಶುರುವಾದರೆ ನಿದ್ರೆಗೂ ಈಗಲೇ ಸುರಕ್ಷಿತ ಜಾಗ ಹುಡುಕಿಕೊಳ್ಳಬೇಕಲ್ಲವೇ…
icon

(6 / 7)

ಹೊರಟೆ , ಓಡಿ ಹೊರಟೆ, ನೋಡೋಣ ಮುಂದಿನ ಇನ್ಯಾವುದರೋ ಮರದಲ್ಲಿ ನಿರುಮ್ಮಳವಾಗಿ ನಿದ್ರೆ ಮಾಡಿಯೇ ತೀರುತ್ತೇನೆ. ಇನ್ನು ಮಳೆಗಾಲ ಶುರುವಾದರೆ ನಿದ್ರೆಗೂ ಈಗಲೇ ಸುರಕ್ಷಿತ ಜಾಗ ಹುಡುಕಿಕೊಳ್ಳಬೇಕಲ್ಲವೇ…

ಮೈಸೂರಿನಲ್ಲಿ ಮೂರೂವರೆ ದಶಕದಿಂದ ಪತ್ರಿಕಾ ಛಾಯಾಗ್ರಾಹಕರಾಗಿರುವ ಅನುರಾಗ್‌ ಬಸವರಾಜ್‌ ವನ್ಯಜೀವಿ ಛಾಯಾಗ್ರಹಣದಲ್ಲೂ ಸಿದ್ದ ಹಸ್ತರು. ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳೂ ಅವರಿಗೆ ಲಭಿಸಿವೆ. ಚಿರತೆ ಚಿಂತೆ ಸರಣಿ ಸೆರೆ ಹಿಡಿದವರು ಇವರೇ.
icon

(7 / 7)

ಮೈಸೂರಿನಲ್ಲಿ ಮೂರೂವರೆ ದಶಕದಿಂದ ಪತ್ರಿಕಾ ಛಾಯಾಗ್ರಾಹಕರಾಗಿರುವ ಅನುರಾಗ್‌ ಬಸವರಾಜ್‌ ವನ್ಯಜೀವಿ ಛಾಯಾಗ್ರಹಣದಲ್ಲೂ ಸಿದ್ದ ಹಸ್ತರು. ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳೂ ಅವರಿಗೆ ಲಭಿಸಿವೆ. ಚಿರತೆ ಚಿಂತೆ ಸರಣಿ ಸೆರೆ ಹಿಡಿದವರು ಇವರೇ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು