ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ -Photos

ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ -Photos

  • Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025ರ ಶುಭಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಕೈಯಲ್ಲಿ 'ರುದ್ರಾಕ್ಷಿ ಮಾಲೆ' ಹಿಡಿದು ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೋದಿ, 'ಮಹಾ ಕುಂಭಮೇಳದಲ್ಲಿ ಭಾಗವಹಿಸಿ ನಾನು ದೇವರ ಆಶೀರ್ವಾದ ಪಡೆದಿದ್ದೇನೆ' ಎಂದು ಹೇಳಿದರು. 
icon

(1 / 10)

ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೋದಿ, 'ಮಹಾ ಕುಂಭಮೇಳದಲ್ಲಿ ಭಾಗವಹಿಸಿ ನಾನು ದೇವರ ಆಶೀರ್ವಾದ ಪಡೆದಿದ್ದೇನೆ' ಎಂದು ಹೇಳಿದರು. 
(DPR PMO)

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆ.5) ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುಣ್ಯಸ್ನಾನದ ಸಮಯದಲ್ಲಿ ಅವರು ಕೈಯಲ್ಲಿ 'ರುದ್ರಾಕ್ಷಿ' ಮಾಲೆ ಹಿಡಿದಿದ್ದರು.
icon

(2 / 10)

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆ.5) ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುಣ್ಯಸ್ನಾನದ ಸಮಯದಲ್ಲಿ ಅವರು ಕೈಯಲ್ಲಿ 'ರುದ್ರಾಕ್ಷಿ' ಮಾಲೆ ಹಿಡಿದಿದ್ದರು.
(ANI Grab)

ಪ್ರಧಾನಿ ನರೇಂದ್ರ ಮೋದಿ ಅವರು ಕಡು ಕಿತ್ತಳೆ ಬಣ್ಣದ ಬಟ್ಟೆ ಧರಿಸಿ ಸ್ನಾನ ಮಾಡಿದರು. ಮಂತ್ರಗಳ ಪಠಣದ ನಡುವೆ ಸೂರ್ಯ ಮತ್ತು ಗಂಗಾಮಾತೆಗೆ ಪ್ರಾರ್ಥನೆ ಸಲ್ಲಿಸಿದರು.
icon

(3 / 10)

ಪ್ರಧಾನಿ ನರೇಂದ್ರ ಮೋದಿ ಅವರು ಕಡು ಕಿತ್ತಳೆ ಬಣ್ಣದ ಬಟ್ಟೆ ಧರಿಸಿ ಸ್ನಾನ ಮಾಡಿದರು. ಮಂತ್ರಗಳ ಪಠಣದ ನಡುವೆ ಸೂರ್ಯ ಮತ್ತು ಗಂಗಾಮಾತೆಗೆ ಪ್ರಾರ್ಥನೆ ಸಲ್ಲಿಸಿದರು.
(DPR PMO)

ಪ್ರಧಾನಿ ಮೋದಿಯವರ ಸುಮಾರು 90 ನಿಮಿಷಗಳ ಪ್ರವಾಸ ಮಾಡಿ ಕುಂಭಮೇಳ ತಲುಪಿದರು. ಪ್ರಯಾಗ್ರಾಜ್ ವಿಮಾನ ನಿಲ್ದಾಣದಿಂದ ಸಂಗಮ್ ಬಳಿಯ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು. ನಂತರ ಅರೈಲ್ ಘಾಟ್‌ನಿಂದ ಪವಿತ್ರ ನದಿಗಳ ಸಂಗಮ ಸ್ಥಳಕ್ಕೆ ಮೋಟಾರು ದೋಣಿ ಮೂಲಕ ಸಾಗಿದರು.
icon

(4 / 10)

ಪ್ರಧಾನಿ ಮೋದಿಯವರ ಸುಮಾರು 90 ನಿಮಿಷಗಳ ಪ್ರವಾಸ ಮಾಡಿ ಕುಂಭಮೇಳ ತಲುಪಿದರು. ಪ್ರಯಾಗ್ರಾಜ್ ವಿಮಾನ ನಿಲ್ದಾಣದಿಂದ ಸಂಗಮ್ ಬಳಿಯ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು. ನಂತರ ಅರೈಲ್ ಘಾಟ್‌ನಿಂದ ಪವಿತ್ರ ನದಿಗಳ ಸಂಗಮ ಸ್ಥಳಕ್ಕೆ ಮೋಟಾರು ದೋಣಿ ಮೂಲಕ ಸಾಗಿದರು.
(PIB)

ಈ ಬಾರಿಯ ಪ್ರಯಾಗ್‌ರಾಜ್‌ ಪ್ರವಾಸವು, ಮೋದಿಯವರ 2019ರ ಕುಂಭಮೇಳ ಭೇಟಿಗಿಂತ ಕಡಿಮೆ ಅವಧಿಯದ್ದಾಗಿದೆ. ಆ ಸಮಯದಲ್ಲಿ, ಅವರು ನೈರ್ಮಲ್ಯ ಕಾರ್ಮಿಕರ ಪಾದ ತೊಳೆದು ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದರು. ಸುಮಾರು ಐದು ಗಂಟೆಗಳ ಅಲ್ಲೇ ಕಾಲ ಕಳೆದಿದ್ದರು.
icon

(5 / 10)

ಈ ಬಾರಿಯ ಪ್ರಯಾಗ್‌ರಾಜ್‌ ಪ್ರವಾಸವು, ಮೋದಿಯವರ 2019ರ ಕುಂಭಮೇಳ ಭೇಟಿಗಿಂತ ಕಡಿಮೆ ಅವಧಿಯದ್ದಾಗಿದೆ. ಆ ಸಮಯದಲ್ಲಿ, ಅವರು ನೈರ್ಮಲ್ಯ ಕಾರ್ಮಿಕರ ಪಾದ ತೊಳೆದು ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದರು. ಸುಮಾರು ಐದು ಗಂಟೆಗಳ ಅಲ್ಲೇ ಕಾಲ ಕಳೆದಿದ್ದರು.
(PIB)

ಪವಿತ್ರ ಸ್ನಾನದ ನಂತರ ಮೋದಿ ಅವರು ನದಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ತಾತ್ಕಾಲಿಕ ವೇದಿಕೆ ಹತ್ತಿ ಗಂಗಾಮಾತೆಗೆ 'ಆರತಿ' ಬೆಳಗಿದರು.
icon

(6 / 10)

ಪವಿತ್ರ ಸ್ನಾನದ ನಂತರ ಮೋದಿ ಅವರು ನದಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ತಾತ್ಕಾಲಿಕ ವೇದಿಕೆ ಹತ್ತಿ ಗಂಗಾಮಾತೆಗೆ 'ಆರತಿ' ಬೆಳಗಿದರು.
(PIB)

ಈ ವೇಳೆ ಮೋದಿ ಕಪ್ಪು ಬಣ್ಣದ ಜಾಕೆಟ್, ಬಿಳಿ ಪೈಜಾಮಾ, ಕೇಸರಿ ಶಾಲು ಮತ್ತು ಹಿಮಾಚಲಿ ಟೋಪಿಯನ್ನು ಧರಿಸಿ ಪವಿತ್ರ ನದಿಗಳಿಗೆ ಹಾಲು ಮತ್ತು ಹೂವುಗಳನ್ನು ಅರ್ಪಿಸಿದರು. 
icon

(7 / 10)

ಈ ವೇಳೆ ಮೋದಿ ಕಪ್ಪು ಬಣ್ಣದ ಜಾಕೆಟ್, ಬಿಳಿ ಪೈಜಾಮಾ, ಕೇಸರಿ ಶಾಲು ಮತ್ತು ಹಿಮಾಚಲಿ ಟೋಪಿಯನ್ನು ಧರಿಸಿ ಪವಿತ್ರ ನದಿಗಳಿಗೆ ಹಾಲು ಮತ್ತು ಹೂವುಗಳನ್ನು ಅರ್ಪಿಸಿದರು. 
(PIB)

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ನದಿಗಳ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಪುರೋಹಿತರೊಬ್ಬರು ಪ್ರಧಾನ ಮಂತ್ರಿಗೆ ಧಾರ್ಮಿಕ ಆಚರಣೆಗಳ ಮಾರ್ಗದರ್ಶನ ನೀಡಿದರು.
icon

(8 / 10)

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ನದಿಗಳ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಪುರೋಹಿತರೊಬ್ಬರು ಪ್ರಧಾನ ಮಂತ್ರಿಗೆ ಧಾರ್ಮಿಕ ಆಚರಣೆಗಳ ಮಾರ್ಗದರ್ಶನ ನೀಡಿದರು.
(ANI Grab)

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯಮುನಾ ನದಿಯಲ್ಲಿ ದೋಣಿ ಪ್ರವಾಸ ಕೈಗೊಂಡರು.
icon

(9 / 10)

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯಮುನಾ ನದಿಯಲ್ಲಿ ದೋಣಿ ಪ್ರವಾಸ ಕೈಗೊಂಡರು.
(ANI Grab)

ಮಹಾ ಕುಂಭಮೇಳ ಉತ್ಸವದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಪ್ರಧಾನಿ ನರೇಂದ್ರ ಮರಳುತ್ತಿರುವ ದೃಶ್ಯ.
icon

(10 / 10)

ಮಹಾ ಕುಂಭಮೇಳ ಉತ್ಸವದಲ್ಲಿ ಪವಿತ್ರ ಸ್ನಾನ ಮಾಡಿದ ನಂತರ ಪ್ರಧಾನಿ ನರೇಂದ್ರ ಮರಳುತ್ತಿರುವ ದೃಶ್ಯ.
(PTI)


ಇತರ ಗ್ಯಾಲರಿಗಳು