New Year 2025: ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಕ್ಕೆ ಹೊರಟಿದ್ದೀರಾ, ಕರ್ನಾಟಕದ ಈ ಪ್ರದೇಶಗಳಲ್ಲೆಲ್ಲಾ ನಿಷೇಧವಿದೆ ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year 2025: ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಕ್ಕೆ ಹೊರಟಿದ್ದೀರಾ, ಕರ್ನಾಟಕದ ಈ ಪ್ರದೇಶಗಳಲ್ಲೆಲ್ಲಾ ನಿಷೇಧವಿದೆ ಗಮನಿಸಿ

New Year 2025: ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಕ್ಕೆ ಹೊರಟಿದ್ದೀರಾ, ಕರ್ನಾಟಕದ ಈ ಪ್ರದೇಶಗಳಲ್ಲೆಲ್ಲಾ ನಿಷೇಧವಿದೆ ಗಮನಿಸಿ

  • ಹೊಸ ವರ್ಷಾರಣೆಗೆ ಬೆಂಗಳೂರಿನ ನಂದಿಬೆಟ್ಟ, ಮೈಸೂರಿನ ಚಾಮುಂಡಿಬೆಟ್ಟ, ಚಿಕ್ಕಮಗಳೂರು ಮುಳ್ಳಯ್ಯನಗಿರಿ, ಬಂಡೀಪುರ ಸಹಿತ ಹಲವು ಕಡೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅದರ ಮಾಹಿತಿ ಇಲ್ಲಿದೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ತೀರದ ಬಲಮುರಿ ಹಾಗೂ ಎಡಮುರಿಗೂ ಮಂಗಳವಾರದಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಇಲ್ಲಿಯೂ ನಿಷೇಧವನ್ನು ಹೇರಲಾಗಿದೆ. 
icon

(1 / 7)

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ತೀರದ ಬಲಮುರಿ ಹಾಗೂ ಎಡಮುರಿಗೂ ಮಂಗಳವಾರದಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಇಲ್ಲಿಯೂ ನಿಷೇಧವನ್ನು ಹೇರಲಾಗಿದೆ.
 

ಬೆಂಗಳೂರು ಹೊರ ವಲಯದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಪ್ರವೇಶಕ್ಕೆ ಯಾರಿಗೂ ಅವಕಾಶ ಇರುವುದಿಲ್ಲ. ಡಿ.31ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 1 ಸಂಜೆ 7 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಕ್ಕೆ ಪ್ರವೇಶ ನೀಡುವ ಗೇಟ್‌ಗಳನ್ನು ಬಂದ್‌ ಮಾಡಲಾಗುತ್ತದೆ. 
icon

(2 / 7)

ಬೆಂಗಳೂರು ಹೊರ ವಲಯದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಪ್ರವೇಶಕ್ಕೆ ಯಾರಿಗೂ ಅವಕಾಶ ಇರುವುದಿಲ್ಲ. ಡಿ.31ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 1 ಸಂಜೆ 7 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಕ್ಕೆ ಪ್ರವೇಶ ನೀಡುವ ಗೇಟ್‌ಗಳನ್ನು ಬಂದ್‌ ಮಾಡಲಾಗುತ್ತದೆ. 

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಡಿ.31 ಮತ್ತು 2025ರ ಜ.1 ರಂದು ಬಂಡೀಪುರ‌ ಅರಣ್ಯ ಇಲಾಖೆ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಸಫಾರಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
icon

(3 / 7)

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಡಿ.31 ಮತ್ತು 2025ರ ಜ.1 ರಂದು ಬಂಡೀಪುರ‌ ಅರಣ್ಯ ಇಲಾಖೆ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಸಫಾರಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.

ಬೆಂಗಳೂರು ಭಾಗದಿಂದ ಹೆಚ್ಚು ಪ್ರವಾಸಿಗರು ಬರುವ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾವೇರಿ ತೀರದಲ್ಲಿರುವ ಮುತ್ತತ್ತಿ ಪ್ರವಾಸಿ ತಾಣದಲ್ಲೂ ನಿಷೇಧವನ್ನು ಒಂದು ದಿನದ ಮಟ್ಟಿಗೆ ಮಂಡ್ಯ ಪೊಲೀಸ್‌ ಇಲಾಖೆಯಿಂದ ಜಾರಿಗೊಳಿಸಲಾಗಿದೆ.
icon

(4 / 7)

ಬೆಂಗಳೂರು ಭಾಗದಿಂದ ಹೆಚ್ಚು ಪ್ರವಾಸಿಗರು ಬರುವ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾವೇರಿ ತೀರದಲ್ಲಿರುವ ಮುತ್ತತ್ತಿ ಪ್ರವಾಸಿ ತಾಣದಲ್ಲೂ ನಿಷೇಧವನ್ನು ಒಂದು ದಿನದ ಮಟ್ಟಿಗೆ ಮಂಡ್ಯ ಪೊಲೀಸ್‌ ಇಲಾಖೆಯಿಂದ ಜಾರಿಗೊಳಿಸಲಾಗಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ 2024ರ ಡಿಸೆಂಬರ್‌  31ರ ಸಂಜೆ 6 ರಿಂದ 2025 ರ ಜನವರಿ 1 ಬೆಳಿಗ್ಗೆ 6ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.  ರೇವ್ ಪಾರ್ಟಿ,  ಡ್ರಗ್ಸ್  ಪಾರ್ಟಿ ಆಚರಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಪ್ರವಾಸಿ ತಾಣದ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ವಿಕ್ರಮ್ ಆಮ್ಟೆ ಹೇಳಿದ್ದಾರೆ. 
icon

(5 / 7)

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ 2024ರ ಡಿಸೆಂಬರ್‌  31ರ ಸಂಜೆ 6 ರಿಂದ 2025 ರ ಜನವರಿ 1 ಬೆಳಿಗ್ಗೆ 6ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ.  ರೇವ್ ಪಾರ್ಟಿ,  ಡ್ರಗ್ಸ್  ಪಾರ್ಟಿ ಆಚರಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಪ್ರವಾಸಿ ತಾಣದ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ವಿಕ್ರಮ್ ಆಮ್ಟೆ ಹೇಳಿದ್ದಾರೆ.
 

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಹಿನ್ನೀರಿನಲ್ಲೂ ಮಂಗಳವಾರ ಸಂಜೆ ನಂತರ ಸಾರ್ವಜನಿಕರ ಪ್ರವೇಶ ಬಂದ್‌ ಮಾಡಲಾಗಿದೆ. ಇಲ್ಲಿ ಅಕ್ರಮವಾಗಿ ಪ್ರವೇಶಿಸಿ ಯಾವುದೇ ಚಟುವಟಿಕೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
icon

(6 / 7)

ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಹಿನ್ನೀರಿನಲ್ಲೂ ಮಂಗಳವಾರ ಸಂಜೆ ನಂತರ ಸಾರ್ವಜನಿಕರ ಪ್ರವೇಶ ಬಂದ್‌ ಮಾಡಲಾಗಿದೆ. ಇಲ್ಲಿ ಅಕ್ರಮವಾಗಿ ಪ್ರವೇಶಿಸಿ ಯಾವುದೇ ಚಟುವಟಿಕೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಸಂಜೆಯಿಂದಲೇ ನಿಷೇಧವಿದೆ. ಚಾಮುಂಡಿಬೆಟ್ಟಕೆ ಹೋಗುವ ಉತ್ತನಹಳ್ಳಿ ಕ್ರಾಸ್‌ ಗೇಟ್‌, ದೇವಿವನ ಗೇಟ್‌, ಚಾಮುಂಡಿಬೆಟ್ಟದ ಪಾದದ ಗೇಟ್‌, ಲಲಿತಮಹಲ್‌ ಗೇಟ್‌ನಲ್ಲಿ ಸಂಜೆ 7 ರಿಂದಲೇ ನಿಷೇಧ ಜಾರಿಗೆ ಬರಲಿದೆ. ರಾತ್ರಿ 8 ರಿಂದ ತಾವರೆಕಟ್ಟೆ ಗೇಟ್‌ನಲ್ಲೂ ಸಂಚಾರ ಇರುವುದಿಲ್ಲ.
icon

(7 / 7)

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮಂಗಳವಾರ ಸಂಜೆಯಿಂದಲೇ ನಿಷೇಧವಿದೆ. ಚಾಮುಂಡಿಬೆಟ್ಟಕೆ ಹೋಗುವ ಉತ್ತನಹಳ್ಳಿ ಕ್ರಾಸ್‌ ಗೇಟ್‌, ದೇವಿವನ ಗೇಟ್‌, ಚಾಮುಂಡಿಬೆಟ್ಟದ ಪಾದದ ಗೇಟ್‌, ಲಲಿತಮಹಲ್‌ ಗೇಟ್‌ನಲ್ಲಿ ಸಂಜೆ 7 ರಿಂದಲೇ ನಿಷೇಧ ಜಾರಿಗೆ ಬರಲಿದೆ. ರಾತ್ರಿ 8 ರಿಂದ ತಾವರೆಕಟ್ಟೆ ಗೇಟ್‌ನಲ್ಲೂ ಸಂಚಾರ ಇರುವುದಿಲ್ಲ.


ಇತರ ಗ್ಯಾಲರಿಗಳು