ಆಪರೇಷನ್ ಸಿಂದೂರ: ಭಾರತ ಸರ್ಕಾರ ಸುದ್ದಿಗೋಷ್ಠಿಯಲ್ಲಿ ತೋರಿಸಿದ 9 ಉಗ್ರ ನೆಲೆಗಳ ಉಪಗ್ರಹ ಚಿತ್ರ, ದಾಳಿ ನೋಟ ಮತ್ತು 10 ಅಂಶಗಳ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಪರೇಷನ್ ಸಿಂದೂರ: ಭಾರತ ಸರ್ಕಾರ ಸುದ್ದಿಗೋಷ್ಠಿಯಲ್ಲಿ ತೋರಿಸಿದ 9 ಉಗ್ರ ನೆಲೆಗಳ ಉಪಗ್ರಹ ಚಿತ್ರ, ದಾಳಿ ನೋಟ ಮತ್ತು 10 ಅಂಶಗಳ ವಿವರ

ಆಪರೇಷನ್ ಸಿಂದೂರ: ಭಾರತ ಸರ್ಕಾರ ಸುದ್ದಿಗೋಷ್ಠಿಯಲ್ಲಿ ತೋರಿಸಿದ 9 ಉಗ್ರ ನೆಲೆಗಳ ಉಪಗ್ರಹ ಚಿತ್ರ, ದಾಳಿ ನೋಟ ಮತ್ತು 10 ಅಂಶಗಳ ವಿವರ

ಆಪರೇಷನ್ ಸಿಂದೂರ್: ಭಾರತೀಯ ಸೇನೆ ಬುಧವಾರ ನಸುಕಿನ ವೇಳೆ ನಡೆಸಿದ ಆಪರೇಷನ್ ಸಿಂದೂರನ ವಿವರವನ್ನು ಭಾರತ ಸರ್ಕಾರ ನೀಡಿದೆ. ಭಾರತ ಸರ್ಕಾರ ಸುದ್ದಿಗೋಷ್ಠಿಯಲ್ಲಿ ತೋರಿಸಿದ 9 ಉಗ್ರ ನೆಲೆಗಳ ಉಪಗ್ರಹ ಚಿತ್ರ, ದಾಳಿ ನೋಟ ಮತ್ತು 10 ಅಂಶಗಳ ವಿವರ ಇಲ್ಲಿದೆ.

ಆಪರೇಷನ್ ಸಿಂದೂರ್: ಭಾರತದಲ್ಲಿ ವಿಶೇಷವಾಗಿ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಉಗ್ರರಿಗೆ ತರಬೇತಿ ನೀಡಿದ, ಪ್ರಚೋದಿಸಿ ಕಳುಹಿಸುತ್ತಿದ್ದ 9 ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ ಕುರಿತಾದ ಸುದ್ದಿಗೋಷ್ಠಿಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನಡೆಸಿಕೊಟ್ಟರು.
icon

(1 / 13)

ಆಪರೇಷನ್ ಸಿಂದೂರ್: ಭಾರತದಲ್ಲಿ ವಿಶೇಷವಾಗಿ ಜಮ್ಮು-ಕಾಶ್ಮೀರ ಭಾಗದಲ್ಲಿ ಭಯೋತ್ಪಾದನೆ ನಡೆಸುತ್ತಿದ್ದ ಉಗ್ರರಿಗೆ ತರಬೇತಿ ನೀಡಿದ, ಪ್ರಚೋದಿಸಿ ಕಳುಹಿಸುತ್ತಿದ್ದ 9 ಉಗ್ರ ನೆಲೆಗಳ ಮೇಲೆ ನಡೆಸಿದ ಆಪರೇಷನ್ ಸಿಂದೂರ ಕುರಿತಾದ ಸುದ್ದಿಗೋಷ್ಠಿಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ನಡೆಸಿಕೊಟ್ಟರು.

ಪಹಲ್ಗಾಮ್ ದಾಳಿಯಲ್ಲಿ 25 ಭಾರತೀಯರು ಹಾಗೂ ಒಬ್ಬ ನೇಪಾಳಿಯನ್ನು ಹತ್ಯೆ ಮಾಡಿದ ಉಗ್ರರನ್ನು ಮಟ್ಟ ಹಾಕುವುದಕ್ಕಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ಇಂದು (ಮೇ 7) ನಸುಕಿನ 1.05ಕ್ಕೆ ಶುರುವಾಗಿ 2 ಗಂಟೆ ಒಳಗೆ ಪೂರ್ಣಗೊಂಡಿದೆ ಎಂದು ಸರ್ಕಾರ ತಿಳಿಸಿದೆ.
icon

(2 / 13)

ಪಹಲ್ಗಾಮ್ ದಾಳಿಯಲ್ಲಿ 25 ಭಾರತೀಯರು ಹಾಗೂ ಒಬ್ಬ ನೇಪಾಳಿಯನ್ನು ಹತ್ಯೆ ಮಾಡಿದ ಉಗ್ರರನ್ನು ಮಟ್ಟ ಹಾಕುವುದಕ್ಕಾಗಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಈ ಕಾರ್ಯಾಚರಣೆಯ ಇಂದು (ಮೇ 7) ನಸುಕಿನ 1.05ಕ್ಕೆ ಶುರುವಾಗಿ 2 ಗಂಟೆ ಒಳಗೆ ಪೂರ್ಣಗೊಂಡಿದೆ ಎಂದು ಸರ್ಕಾರ ತಿಳಿಸಿದೆ.

ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಭಾಗದಲ್ಲಿ ಉಗ್ರ ನೆಲೆಗಳನ್ನು ಖಚಿತ ಗುಪ್ತಚರ ಮಾಹಿತಿ ಆಧಾರದ ಮೇಲೆ ಗುರುತಿಸಿಕೊಂಡಿರುವ ಭಾರತೀಯ ಸೇನೆ ಅವುಗಳ ವಿವರ ಬಹಿರಂಗಪಡಿಸಿದೆ. ಈ ಪೈಕಿ 9 ಉಗ್ರ ನೆಲೆಗಳನ್ನು ಟಾರ್ಗೆಟ್ ಮಾಡಿ ಇಂದು (ಮೇ 7) ದಾಳಿ ನಡೆಸಿದ್ದಾಗಿ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು.
icon

(3 / 13)

ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ ಭಾಗದಲ್ಲಿ ಉಗ್ರ ನೆಲೆಗಳನ್ನು ಖಚಿತ ಗುಪ್ತಚರ ಮಾಹಿತಿ ಆಧಾರದ ಮೇಲೆ ಗುರುತಿಸಿಕೊಂಡಿರುವ ಭಾರತೀಯ ಸೇನೆ ಅವುಗಳ ವಿವರ ಬಹಿರಂಗಪಡಿಸಿದೆ. ಈ ಪೈಕಿ 9 ಉಗ್ರ ನೆಲೆಗಳನ್ನು ಟಾರ್ಗೆಟ್ ಮಾಡಿ ಇಂದು (ಮೇ 7) ದಾಳಿ ನಡೆಸಿದ್ದಾಗಿ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು.

ಕೇವಲ 10 ನಿಮಿಷದ ಚುಟುಕು ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಮಾಹಿತಿ ನೀಡಿದ ಅವರು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ 5 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ಖಚಿತಪಡಿಸಿದರು. ಸವಾಯಿ ನಾಲಾ, ಮುಜಾಫರಾಬಾದ್‌, ಸೈಯೆದ್ನಾ ಬಿಲಾಲ್, ಮುಜಾಫರಾಬಾದ್‌, ಗುಲ್‌ಪುರ, ಕೋಟ್ಲಿ, ಬರ್ನಾಲಾ, ಭಿಂಬರ್‌, ಅಬ್ಬಾಸ್, ಕೋಟ್ಲಿ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದರು.
icon

(4 / 13)

ಕೇವಲ 10 ನಿಮಿಷದ ಚುಟುಕು ಸುದ್ದಿಗೋಷ್ಠಿಯಲ್ಲಿ ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಮಾಹಿತಿ ನೀಡಿದ ಅವರು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದ 5 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವುದನ್ನು ಖಚಿತಪಡಿಸಿದರು. ಸವಾಯಿ ನಾಲಾ, ಮುಜಾಫರಾಬಾದ್‌, ಸೈಯೆದ್ನಾ ಬಿಲಾಲ್, ಮುಜಾಫರಾಬಾದ್‌, ಗುಲ್‌ಪುರ, ಕೋಟ್ಲಿ, ಬರ್ನಾಲಾ, ಭಿಂಬರ್‌, ಅಬ್ಬಾಸ್, ಕೋಟ್ಲಿ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದರು.

ಪಾಕ್ ಆಕ್ರಮಿತ ಜಮ್ಮು- ಕಾಶ್ಮೀರ ಭಾಗದ ಸೈಯೆದ್ನಾ ಬಿಲಾಲ್‌ ಎಂಬಲ್ಲಿದ್ದ ಉಗ್ರ ಶಿಬಿರದ ಮೇಲೆ ನಿಶ್ಚಿತ ದಾಳಿ ನಡೆಸಿ ನಾಶಪಡಿಸಲಾಗಿದೆ. ನಾಗರಿಕರ ಮೇಲಾಗಲೀ, ಪಾಕಿಸ್ತಾನ ಸೇನೆ ಅಥವಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.
icon

(5 / 13)

ಪಾಕ್ ಆಕ್ರಮಿತ ಜಮ್ಮು- ಕಾಶ್ಮೀರ ಭಾಗದ ಸೈಯೆದ್ನಾ ಬಿಲಾಲ್‌ ಎಂಬಲ್ಲಿದ್ದ ಉಗ್ರ ಶಿಬಿರದ ಮೇಲೆ ನಿಶ್ಚಿತ ದಾಳಿ ನಡೆಸಿ ನಾಶಪಡಿಸಲಾಗಿದೆ. ನಾಗರಿಕರ ಮೇಲಾಗಲೀ, ಪಾಕಿಸ್ತಾನ ಸೇನೆ ಅಥವಾ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಭಾರತೀಯ ಸೇನೆ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತೆ ಮತ್ತೆ ಸ್ಪಷ್ಟಪಡಿಸಿದರು.

ಜಮ್ಮು - ಕಾಶ್ಮೀರ ಭಾಗದಲ್ಲಿ ಉಗ್ರ ಕೃತ್ಯ ನಡೆಸಿದ ಕೆಲವು ಉಗ್ರರಿಗೆ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಭಾಗದ ಕೋಟ್ಲಿ ಗುಲ್‌ಪುರ ಉಗ್ರ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು. ಇದು ಖಚಿತವಾದ ಕಾರಣ ಈ ನೆಲೆಯ ಮೇಲೆ ದಾಳಿ ನಡೆಸಲಾಯಿತು ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದರು.
icon

(6 / 13)

ಜಮ್ಮು - ಕಾಶ್ಮೀರ ಭಾಗದಲ್ಲಿ ಉಗ್ರ ಕೃತ್ಯ ನಡೆಸಿದ ಕೆಲವು ಉಗ್ರರಿಗೆ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಭಾಗದ ಕೋಟ್ಲಿ ಗುಲ್‌ಪುರ ಉಗ್ರ ಶಿಬಿರದಲ್ಲಿ ತರಬೇತಿ ನೀಡಲಾಗಿತ್ತು. ಇದು ಖಚಿತವಾದ ಕಾರಣ ಈ ನೆಲೆಯ ಮೇಲೆ ದಾಳಿ ನಡೆಸಲಾಯಿತು ಎಂದು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದರು.

ಕೋಟ್ಲಿ ಅಬ್ಬಾಸ್ ಎಂಬುದು ಇನ್ನೊಂದು ಉಗ್ರ ಶಿಬಿರವಾಗಿದ್ದು, ಇಲ್ಲಿ ಕೂಡ ಉಗ್ರ ತರಬೇತಿ ಮತ್ತು ಲಾಂಚ್ ಪ್ಯಾಡ್ ಇತ್ತು. ಹೀಗಾಗಿ ಈ ನೆಲೆಯನ್ನೂ ನಾಶಪಡಿಸಿರುವುದಾಗಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದರು.
icon

(7 / 13)

ಕೋಟ್ಲಿ ಅಬ್ಬಾಸ್ ಎಂಬುದು ಇನ್ನೊಂದು ಉಗ್ರ ಶಿಬಿರವಾಗಿದ್ದು, ಇಲ್ಲಿ ಕೂಡ ಉಗ್ರ ತರಬೇತಿ ಮತ್ತು ಲಾಂಚ್ ಪ್ಯಾಡ್ ಇತ್ತು. ಹೀಗಾಗಿ ಈ ನೆಲೆಯನ್ನೂ ನಾಶಪಡಿಸಿರುವುದಾಗಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ತಿಳಿಸಿದರು.

ಭಿಂಬರ್‌ನಲ್ಲಿ ಉಗ್ರ ನೆಲೆಯನ್ನು ಗುರುತಿಸಿದ ಬಳಿಕ ಅದನ್ನು ನಾಶಪಡಿಸಲಾಗಿದೆ ಎಂದು ದಾಳಿಗೆ ಮೊದಲು ಮತ್ತು ನಂತರದ ಉಪಗ್ರಹ ಚಿತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು.
icon

(8 / 13)

ಭಿಂಬರ್‌ನಲ್ಲಿ ಉಗ್ರ ನೆಲೆಯನ್ನು ಗುರುತಿಸಿದ ಬಳಿಕ ಅದನ್ನು ನಾಶಪಡಿಸಲಾಗಿದೆ ಎಂದು ದಾಳಿಗೆ ಮೊದಲು ಮತ್ತು ನಂತರದ ಉಪಗ್ರಹ ಚಿತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ತೋರಿಸಿ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ, ವಾಯುಪಡೆ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿವರಿಸಿದರು.

ಪಾಕಿಸ್ತಾನದಲ್ಲಿ ನಾಲ್ಕು ಉಗ್ರ ಶಿಬಿರಗಳನ್ನು ಗುರುತಿಸಲಾಗಿತ್ತು. ಬಹವಾಲ್ಪುರದಲ್ಲಿ, ಮುರಿಡ್ಕೆ, ಸರ್ಜಾಲ್, ಮಹೆಮೂನಾ ಜೋಯಾ ಎಂಬಲ್ಲಿ ಈ ಶಿಬಿರಗಳಿದ್ದವು. ಲಷ್ಕರ್ ಏ ತೊಯ್ಬಾ (ಎಲ್‌ಇಟಿ), ಜೈಷ್ ಏ ಮೊಹಮ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಉಗ್ರ ಸಂಘಟನೆಗಳ ಕೇಂದ್ರ ಕಚೇರಿಗಳೂ ಇಲ್ಲೇ ಇದ್ದು ಅವುಗಳನ್ನು ಗುರಿಯಾಗಿಟ್ಟುಕೊಂಡು ಭಾರತ ದಾಳಿ ನಡೆಸಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿದೆ.
icon

(9 / 13)

ಪಾಕಿಸ್ತಾನದಲ್ಲಿ ನಾಲ್ಕು ಉಗ್ರ ಶಿಬಿರಗಳನ್ನು ಗುರುತಿಸಲಾಗಿತ್ತು. ಬಹವಾಲ್ಪುರದಲ್ಲಿ, ಮುರಿಡ್ಕೆ, ಸರ್ಜಾಲ್, ಮಹೆಮೂನಾ ಜೋಯಾ ಎಂಬಲ್ಲಿ ಈ ಶಿಬಿರಗಳಿದ್ದವು. ಲಷ್ಕರ್ ಏ ತೊಯ್ಬಾ (ಎಲ್‌ಇಟಿ), ಜೈಷ್ ಏ ಮೊಹಮ್ಮದ್ (ಜೆಇಎಂ) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಉಗ್ರ ಸಂಘಟನೆಗಳ ಕೇಂದ್ರ ಕಚೇರಿಗಳೂ ಇಲ್ಲೇ ಇದ್ದು ಅವುಗಳನ್ನು ಗುರಿಯಾಗಿಟ್ಟುಕೊಂಡು ಭಾರತ ದಾಳಿ ನಡೆಸಿತ್ತು ಎಂಬುದನ್ನು ಸರ್ಕಾರ ಖಚಿತಪಡಿಸಿದೆ.

ಪಾಕಿಸ್ತಾನದ ಒಳಗಿರುವ ಮುರಿಡ್ಕೆ ಎಂಬಲ್ಲಿ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಸಂಘಟನೆಯ ಕೇಂದ್ರ ಕಚೇರಿ ಇದೆ. ಇಲ್ಲೇ ಭಾರತದಲ್ಲಿ 2008ರ 26/11 ಮುಂಬಯಿ ದಾಳಿ ಸಂಚುಕೋರ, ಉಗ್ರರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗಿತ್ತು. ಉಗ್ರ ಅಜ್ಮಲ್ ಕಸಬ್, ಸದ್ಯ ಅಮೆರಿಕದಿಂದ ಗಡೀಪಾರು ಆಗಿ ಭಾರತದಲ್ಲಿ ವಿಚಾರಣೆಗೊಳಪಟ್ಟಿರುವ ಡೇವಿಡ್ ಹೆಡ್ಲಿಗೂ ಇದೇ ಕಚೇರಿಯಲ್ಲಿ ತರಬೇತಿ ಸಿಕ್ಕಿದೆ. ಇದು ಕೂಡ ಟಾರ್ಗೆಟ್ ಆಗಿತ್ತು ಎಂದು ಸೇನೆ ಖಚಿತಪಡಿಸಿದೆ.
icon

(10 / 13)

ಪಾಕಿಸ್ತಾನದ ಒಳಗಿರುವ ಮುರಿಡ್ಕೆ ಎಂಬಲ್ಲಿ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಸಂಘಟನೆಯ ಕೇಂದ್ರ ಕಚೇರಿ ಇದೆ. ಇಲ್ಲೇ ಭಾರತದಲ್ಲಿ 2008ರ 26/11 ಮುಂಬಯಿ ದಾಳಿ ಸಂಚುಕೋರ, ಉಗ್ರರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗಿತ್ತು. ಉಗ್ರ ಅಜ್ಮಲ್ ಕಸಬ್, ಸದ್ಯ ಅಮೆರಿಕದಿಂದ ಗಡೀಪಾರು ಆಗಿ ಭಾರತದಲ್ಲಿ ವಿಚಾರಣೆಗೊಳಪಟ್ಟಿರುವ ಡೇವಿಡ್ ಹೆಡ್ಲಿಗೂ ಇದೇ ಕಚೇರಿಯಲ್ಲಿ ತರಬೇತಿ ಸಿಕ್ಕಿದೆ. ಇದು ಕೂಡ ಟಾರ್ಗೆಟ್ ಆಗಿತ್ತು ಎಂದು ಸೇನೆ ಖಚಿತಪಡಿಸಿದೆ.

ಸಿಯಾಲ್‌ ಕೋಟ್‌ನ ಸರ್ಜಾಲ್ ಇನ್ನೊಂದು ದೊಡ್ಡ ಉಗ್ರ ಶಿಬಿರ ಇದ್ದ ಜಾಗ. ಇಲ್ಲಿ ದಾಳಿಗೆ ಮೊದಲು ಮತ್ತು ನಂತರದ ಉಪಗ್ರಹ ಚಿತ್ರಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ.
icon

(11 / 13)

ಸಿಯಾಲ್‌ ಕೋಟ್‌ನ ಸರ್ಜಾಲ್ ಇನ್ನೊಂದು ದೊಡ್ಡ ಉಗ್ರ ಶಿಬಿರ ಇದ್ದ ಜಾಗ. ಇಲ್ಲಿ ದಾಳಿಗೆ ಮೊದಲು ಮತ್ತು ನಂತರದ ಉಪಗ್ರಹ ಚಿತ್ರಗಳನ್ನು ಭಾರತೀಯ ಸೇನೆ ಹಂಚಿಕೊಂಡಿದೆ.

ಪಾಕಿಸ್ತಾನದ ಸಿಯಾಲ್ ಕೋಟ್‌ನಲ್ಲಿರುವ ಮೆಹಮೂನಾ ಜೋಯಾ ಉಗ್ರ ಶಿಬಿರವನ್ನೂ ಭಾರತ ಸೇನೆ ಗುರುತಿಸಿಕೊಂಡಿದೆ. ಇದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಅತಿದೊಡ್ಡ ಕೇಂದ್ರವಾಗಿದ್ದು, ಇದರ ಮೇಲೆ ಬುಧವಾರ ನಸುಕಿನಲ್ಲಿ ದಾಳಿ ನಡೆಸಿದ್ದನ್ನು ಭಾರತೀಯ ಸೇನೆ ಖಚಿತಪಡಿಸಿದೆ.
icon

(12 / 13)

ಪಾಕಿಸ್ತಾನದ ಸಿಯಾಲ್ ಕೋಟ್‌ನಲ್ಲಿರುವ ಮೆಹಮೂನಾ ಜೋಯಾ ಉಗ್ರ ಶಿಬಿರವನ್ನೂ ಭಾರತ ಸೇನೆ ಗುರುತಿಸಿಕೊಂಡಿದೆ. ಇದು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಅತಿದೊಡ್ಡ ಕೇಂದ್ರವಾಗಿದ್ದು, ಇದರ ಮೇಲೆ ಬುಧವಾರ ನಸುಕಿನಲ್ಲಿ ದಾಳಿ ನಡೆಸಿದ್ದನ್ನು ಭಾರತೀಯ ಸೇನೆ ಖಚಿತಪಡಿಸಿದೆ.

ಪಾಕಿಸ್ತಾನದ ಮುರಿಡ್ಕೆ ಮರ್ಕಝ್ ತೈಬಾ ಉಗ್ರ ಶಿಬಿರ ಸ್ವಲ್ಪ ದೊಡ್ಡದಾಗಿದ್ದು, ಲಷ್ಕರ್ ಏ ತೊಯ್ಬಾದ ಕೇಂದ್ರ ಕಚೇರಿ ಇರುವಂತಹ ಜಾಗ. ಇಲ್ಲಿ ದಾಳಿ ನಡೆಸಿರುವ ಭಾರತೀಯ ಸೇನೆ ನಾಲ್ಕು ದಾಳಿಯ ಮೂಲಕ ಕಟ್ಟಡಗಳನ್ನು ನೆಲಸಮ ಮಾಡಿದ್ದಾಗಿ ಹೇಳಿಕೊಂಡಿದೆ.
icon

(13 / 13)

ಪಾಕಿಸ್ತಾನದ ಮುರಿಡ್ಕೆ ಮರ್ಕಝ್ ತೈಬಾ ಉಗ್ರ ಶಿಬಿರ ಸ್ವಲ್ಪ ದೊಡ್ಡದಾಗಿದ್ದು, ಲಷ್ಕರ್ ಏ ತೊಯ್ಬಾದ ಕೇಂದ್ರ ಕಚೇರಿ ಇರುವಂತಹ ಜಾಗ. ಇಲ್ಲಿ ದಾಳಿ ನಡೆಸಿರುವ ಭಾರತೀಯ ಸೇನೆ ನಾಲ್ಕು ದಾಳಿಯ ಮೂಲಕ ಕಟ್ಟಡಗಳನ್ನು ನೆಲಸಮ ಮಾಡಿದ್ದಾಗಿ ಹೇಳಿಕೊಂಡಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು