ಮೇ 7ಕ್ಕೆ ಮೋಕ್ ಡ್ರಿಲ್ ಎನ್ನುತ್ತಾ, ಆಪರೇಷನ್ ಸಿಂದೂರ ನಡೆಸಿಯೇ ಬಿಟ್ರು ಮೋದಿ; ಬಾಲಾಕೋಟ್ ದಾಳಿಯಂತೆ ಈ ಬಾರಿ ಕೂಡ ಯಾಮಾರಿದ್ರು ಪಾಕಿಗಳು
ಆಪರೇಷನ್ ಸಿಂದೂರ್: ವಾಹನ ಚಲಾಯಿಸುವಾಗ ಲೆಫ್ಟ್ ಇಂಡಿಕೇಟರ್ ಹಾಕಿ ರೈಟ್ಗೆ ತಿರುಗಿದರೆ ಹೇಗಿರುತ್ತೆ? ಈ ರೀತಿ ಮಾಡುವ ವಾಹನದ ಹಿಂಬದಿಯಲ್ಲಿ ಸಾಗುತ್ತಿರುವ ವಾಹನ ಸವಾರರು ಮತ್ತು ಮುಂಬದಿಯಿಂದ ಬರುವ ವಾಹನ ಸವಾರರು ಕಂಗಾಲಾಗುವುದು ಖಚಿತ. ಇದೇ ರೀತಿ, ಮೇ 7ಕ್ಕೆ ಮೋಕ್ ಡ್ರಿಲ್ ಎನ್ನುತ್ತಾ, ಆಪರೇಷನ್ ಸಿಂದೂರ ನಡೆಸಿಯೇ ಬಿಟ್ರು ಭಾರತದ ಪ್ರಧಾನಿ ಮೋದಿ.
(1 / 8)
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಈ ಬಾರಿ ಮೇ 7ಕ್ಕೆ ದೇಶದ ಉದ್ದಗಲಕ್ಕೂ ಮೋಕ್ ಡ್ರಿಲ್ ಮಾಡಬೇಕು ಎಂಬ ಆದೇಶ ನೀಡಿತ್ತು. ಎಲ್ಲರ ಗಮನ ಆ ಕಡೆಗೆ ಇರುವಂತೆಯೇ, ಮೇ 7 ರ ನಸುಕಿನಲ್ಲೇ ಆಪರೇಷನ್ ಸಿಂದೂರ ನಡೆಸಿ ಪಾಕಿಸ್ತಾನ ಸರ್ಕಾರವನ್ನು, ಅಲ್ಲಿ ಆಶ್ರಯ ಪಡೆದಿರುವ ಉಗ್ರರನ್ನು ಆಘಾತಕ್ಕೆ ಒಳಗಾಗುವಂತೆ ಮಾಡಿತು.
(2 / 8)
ಮೇ 7ಕ್ಕೆ ಭಾರತದ ಉದ್ದಗಲಕ್ಕೂ ಮಾಕ್ ಡ್ರಿಲ್ ಅಥವಾ ನಾಗರಿಕ ಸ್ವರಕ್ಷಾ ತಾಲೀಮು ನಡೆಸುವ ವಿಚಾರ ಪಾಕಿಸ್ತಾನದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಪಾಕಿಸ್ತಾನ ಸರ್ಕಾರ ಮತ್ತು ಅಲ್ಲಿ ಆಶ್ರಯ ಪಡೆದಿದ್ದ ಉಗ್ರರು ಉದ್ವಿಗ್ನತೆಯಲ್ಲಿ ಇದ್ದರೂ ಕೂಡ ಈ ರೀತಿ ದಾಳಿಯನ್ನು ಅದು ನಿರೀಕ್ಷಿಸಿರಲಿಲ್ಲ. (ಸಾಂಕೇತಿಕ ಚಿತ್ರ- ಕರ್ನಲ್ ಸೋಫಿಯಾ ಖುರೇಶಿ (ಎಡ), ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ರಿ (ಮಧ್ಯ), ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (ಬಲ) ಸುದ್ದಿಗೋಷ್ಠಿ ನಡೆಸಿದ ಸಂದರ್ಭ)
(HT_PRINT)(3 / 8)
ಮೇ 7ಕ್ಕೆ ಅಪರಾಹ್ನ ನಾಗರಿಕ ರಕ್ಷಣಾ ತಾಲೀಮು ಆಯೋಜನೆಯಾಗಿದ್ದು, ಎಲ್ಲರ ಗಮನ ಅದರತ್ತ ಇರುವಾಗಲೇ ಮೇ 7ರ ನಸುಕಿನ 1.05 ರಿಂದ 1.30ರ ಒಳಗೆ ಪಾಕಿಸ್ತಾನ, ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿಯಾಗಿತ್ತು. ಆಪರೇಷನ್ ಸಿಂದೂರ ಪಕ್ಕಾ ಅನುಷ್ಠಾನವಾಗಿತ್ತು.
(AFP)(4 / 8)
ಹೀಗೆ, ಗಮನ ಬೇರೆಡೆ ಸೆಳೆದು, ನಿಖರ ದಾಳಿ ನಡೆಸುವುದು ಸಮರ ಕಲೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿಯತ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬಂದರು. ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಿಲ್ಲ. ಮೂರು ಮೂರು ಸಲ ಉಗ್ರರು ಹಾಗೂ ಅವರನ್ನು ಪೋಷಿಸುತ್ತಿರುವವರಿಗೆ ಎಚ್ಚರಿಕೆ ನೀಡಿದರು. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ಪಾಕಿಸ್ತಾನ ಸರ್ಕಾರ, ಉಗ್ರರು ಯಾಮಾರಿದರು. (ಸಚಿವ ಸಂಪುಟ ಸಭೆಯ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದೆ)
(PMO)(5 / 8)
2019ರ ಫೆ 26ರಂದು ಬಾಲಾಕೋಟ್ ದಾಳಿ ನಡೆಸಿದ ಸಂದರ್ಭವನ್ನು ಗಮನಿಸಿದರೆ, ಅಂದು ಕೂಡ ನರೇಂದ್ರ ಮೋದಿ ಇದೇ ರೀತಿ ರಣತಂತ್ರ ಅನುಸರಿಸಿದ್ದರು. ಅದಕ್ಕೂ 48 ಗಂಟೆ ಮುಂಚಿತವಾಗಿ ಕೂಡ ಎಂದಿನಂತೆ ತಮ್ಮ ನಿಗದಿತ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಿದ್ದರು. ಫೆ 25ರಂದು ನ್ಯಾಷನಲ್ ವಾರ್ ಮೆಮೋರಿಯಲ್ಗೆ ಹೋಗಿ ಗೌರವ ಸಲ್ಲಿಸಿದ್ದರು. (ಸಾಂಕೇತಿಕ ಚಿತ್ರ)
(PMO)(6 / 8)
ಪಾಕಿಸ್ತಾನದ ಖೈಬರ್ ಫಕ್ತುಂಕ್ವಾ ಪ್ರಾಂತ್ಯದ ಜಿಹಾದಿಗಳ ತರಬೇತಿ ಶಿಬಿರದ ಮೇಲೆ ರಾತ್ರಿ 9 ಗಂಟೆಗೆ ವೈಮಾನಿಕ ದಾಳಿ ನಡೆಯುವ ಯಾವುದೇ ಸುಳಿವು ಪಾಕಿಸ್ತಾನ ಸರ್ಕಾರಕ್ಕೆ ಅಥವಾ ಉಗ್ರರಿಗೆ ಇರಲೇ ಇಲ್ಲ. ಇದಕ್ಕೂ ಮೊದಲು ಪ್ರಧಾನಿ ಮೋದಿ ಎಂದಿನಂತೆ ಸುದ್ದಿಗೋಷ್ಠಿ ನಡೆಸಿ ಹೋಗಿದ್ದರು. ಭಯೋತ್ಪಾದನೆ ನಿಗ್ರಹದ ವಿಚಾರವನ್ನೂ ಪ್ರಸ್ತಾಪಿಸಿದ್ದರು.
(PMO)(7 / 8)
ಯಾವುದೇ ಉದ್ವಿಗ್ನತೆ ಪ್ರದರ್ಶಿಸದೇ ಕೂಲ್ ಆಗಿ 2047ರ ವೇಳೆಗೆ ಭಾರತದ ಅರ್ಥ ವ್ಯವಸ್ಥೆ ಹೇಗಿರಬೇಕು ಎಂಬ ಕನಸನ್ನು ಹಂಚಿಕೊಂಡಿದ್ದರು. 30 ನಿಮಿಷ ಭಾಷಣ ಮಾಡಿದ್ದ ಅವರು, ತಮ್ಮ ಬಾಡಿ ಲಾಂಗ್ವೇಜ್ ಮೇಲೆ ಕೂಡ ಹಿಡಿತ ಹೊಂದಿದ್ದರು. ಸಚಿವ ಸಂಪುಟದ ಯಾವುದೇ ಸಚಿವನೂ ಈ ಕಾರ್ಯಾಚರಣೆ ಬಗ್ಗೆ ಹೇಳಿಕೆ ನೀಡಿಲ್ಲ. ಸರ್ಕಾರದ ಮೇಲಿನ ಹಿಡಿತ ಮತ್ತು ಈಗ ಮತ್ತೊಮ್ಮೆ ಅಂತಹದ್ದೇ ಸಮರ ಕಲೆ ಕೌಶಲವನ್ನು ಮೋದಿ ಸರ್ಕಾರ ಪ್ರದರ್ಶಿಸಿದ್ದು, ಗಮನಸೆಳೆದಿದೆ. (ಸಾಂಕೇತಿಕ ಚಿತ್ರ)
(PTI)ಇತರ ಗ್ಯಾಲರಿಗಳು