ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ; ಆಪರೇಷನ್‌ ಸಿಂಧೂರ್‌ಗೆ ಕನ್ನಡ ನಟ ಕಿಚ್ಚ ಸುದೀಪ್‌ ಸೆಲ್ಯೂಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ; ಆಪರೇಷನ್‌ ಸಿಂಧೂರ್‌ಗೆ ಕನ್ನಡ ನಟ ಕಿಚ್ಚ ಸುದೀಪ್‌ ಸೆಲ್ಯೂಟ್‌

ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ; ಆಪರೇಷನ್‌ ಸಿಂಧೂರ್‌ಗೆ ಕನ್ನಡ ನಟ ಕಿಚ್ಚ ಸುದೀಪ್‌ ಸೆಲ್ಯೂಟ್‌

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಎಲ್ಲೆಡೆ ಬಹುಪರಾಕ್‌ ಕೇಳಿಬರುತ್ತಿದೆ. ಕನ್ನಡ ನಟ ಕಿಚ್ಚ ಸುದೀಪ್‌ ಕೂಡ ಭಾರತದ ಸೇನೆಯ ದಿಟ್ಟ ಪ್ರತ್ಯುತ್ತರಕ್ಕೆ ಸೆಲ್ಯೂಟ್‌ ಎಂದಿದ್ದಾರೆ.

ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಕನ್ನಡ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ ಹೀಗಿದೆ. "ಒಬ್ಬ ಭಾರತೀಯನಾಗಿ... ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನೋವಿನ ನಡುಕವನ್ನು ನಾನು ಅನುಭವಿಸಿದೆ" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಪಹಲ್ಗಾಮ್‌  ದಾಳಿಯ ಸಂದರ್ಭದಲ್ಲಿ ಸುದೀಪ್‌ ನೋವಿನ ಮಾತುಗಳನ್ನಾಡಿದ್ದರು. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
icon

(1 / 8)

ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ ಕನ್ನಡ ನಟ ಕಿಚ್ಚ ಸುದೀಪ್‌ ಪ್ರತಿಕ್ರಿಯೆ ಹೀಗಿದೆ. "ಒಬ್ಬ ಭಾರತೀಯನಾಗಿ... ಈ ಪವಿತ್ರ ಮಣ್ಣಿನ ಮಗನಾಗಿ, ಪಹಲ್ಗಾಮ್‌ನಲ್ಲಿ ನೋವಿನ ನಡುಕವನ್ನು ನಾನು ಅನುಭವಿಸಿದೆ" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ. ಪಹಲ್ಗಾಮ್‌ ದಾಳಿಯ ಸಂದರ್ಭದಲ್ಲಿ ಸುದೀಪ್‌ ನೋವಿನ ಮಾತುಗಳನ್ನಾಡಿದ್ದರು. ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಇದು ಅಭಿಮಾನಿಗಳು ಕಿಚ್ಚನ ಫೋಟೋ ಜೋಡಿಸಿ ಮಾಡಿದ ಕೋಲಾಜ್‌. ಇದೀಗ ಸುದೀಪ್‌ ಹೀಗೆ ಬರೆದಿದ್ದಾರೆ. "ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ. ಆಪರೇಷನ್ ಸಿಂಧೂರ್: ಕೇವಲ ಒಂದು ಧ್ಯೇಯವಲ್ಲ, ಆದರೆ ಪವಿತ್ರ ಪ್ರತಿಜ್ಞೆ" ಎಂದು ಸುದೀಪ್‌ ಹೇಳಿದ್ದಾರೆ.
icon

(2 / 8)

ಇದು ಅಭಿಮಾನಿಗಳು ಕಿಚ್ಚನ ಫೋಟೋ ಜೋಡಿಸಿ ಮಾಡಿದ ಕೋಲಾಜ್‌. ಇದೀಗ ಸುದೀಪ್‌ ಹೀಗೆ ಬರೆದಿದ್ದಾರೆ. "ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ. ಆಪರೇಷನ್ ಸಿಂಧೂರ್: ಕೇವಲ ಒಂದು ಧ್ಯೇಯವಲ್ಲ, ಆದರೆ ಪವಿತ್ರ ಪ್ರತಿಜ್ಞೆ" ಎಂದು ಸುದೀಪ್‌ ಹೇಳಿದ್ದಾರೆ.

ಇದೀಗ ಸುದೀಪ್‌ ಹೀಗೆ ಬರೆದಿದ್ದಾರೆ. "ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ. ಆಪರೇಷನ್ ಸಿಂಧೂರ್: ಕೇವಲ ಒಂದು ಧ್ಯೇಯವಲ್ಲ, ಆದರೆ ಪವಿತ್ರ ಪ್ರತಿಜ್ಞೆ" ಎಂದು ಸುದೀಪ್‌ ಹೇಳಿದ್ದಾರೆ.
icon

(3 / 8)

ಇದೀಗ ಸುದೀಪ್‌ ಹೀಗೆ ಬರೆದಿದ್ದಾರೆ. "ಇಂದು, ನಾನು ನ್ಯಾಯದ ಗುಡುಗನ್ನು ಅನುಭವಿಸುತ್ತೇನೆ. ಆಪರೇಷನ್ ಸಿಂಧೂರ್: ಕೇವಲ ಒಂದು ಧ್ಯೇಯವಲ್ಲ, ಆದರೆ ಪವಿತ್ರ ಪ್ರತಿಜ್ಞೆ" ಎಂದು ಸುದೀಪ್‌ ಹೇಳಿದ್ದಾರೆ.

"ಭಾರತದ ಸಿಂಧೂರದ ಮೇಲೆ ಕಲೆ ಬಿದ್ದಿತ್ತು.... ನಮ್ಮ ಧೈರ್ಯಶಾಲಿ ಹೃದಯಗಳು ಬೆಂಕಿ ಮತ್ತು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದವು. ನಮ್ಮ ಸಶಸ್ತ್ರ ಪಡೆಗಳಿಗೆ, ನನ್ನ ಅಂತ್ಯವಿಲ್ಲದ ವಂದನೆ" ಎಂದು ಸುದೀಪ್‌  ಹೇಳಿದ್ದಾರೆ.
icon

(4 / 8)

"ಭಾರತದ ಸಿಂಧೂರದ ಮೇಲೆ ಕಲೆ ಬಿದ್ದಿತ್ತು.... ನಮ್ಮ ಧೈರ್ಯಶಾಲಿ ಹೃದಯಗಳು ಬೆಂಕಿ ಮತ್ತು ನಿಖರತೆಯಿಂದ ಅದರ ಗೌರವವನ್ನು ಪುನಃಸ್ಥಾಪಿಸಿದವು. ನಮ್ಮ ಸಶಸ್ತ್ರ ಪಡೆಗಳಿಗೆ, ನನ್ನ ಅಂತ್ಯವಿಲ್ಲದ ವಂದನೆ" ಎಂದು ಸುದೀಪ್‌ ಹೇಳಿದ್ದಾರೆ.

" ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಮತ್ತು ರಕ್ಷಣಾ ನಾಯಕತ್ವ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣವಾದ, ಗೌರವಯುತವಾದ ಮಾಹಿತಿಗಾಗಿ ವಂದನೆ. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ." ಎಂದು ಸುದೀಪ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
icon

(5 / 8)

" ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಮತ್ತು ರಕ್ಷಣಾ ನಾಯಕತ್ವ, ಎತ್ತರವಾಗಿ, ದೃಢವಾಗಿ ಮತ್ತು ನಿರ್ಭೀತವಾಗಿ ನಿಂತಿದ್ದಕ್ಕಾಗಿ ಧನ್ಯವಾದಗಳು. ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ತೀಕ್ಷ್ಣವಾದ, ಗೌರವಯುತವಾದ ಮಾಹಿತಿಗಾಗಿ ವಂದನೆ. ಭಾರತ ಮರೆಯುವುದಿಲ್ಲ. ಭಾರತ ಕ್ಷಮಿಸುವುದಿಲ್ಲ." ಎಂದು ಸುದೀಪ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ನಡೆದ ಹತ್ಯಾಕಾಂಡದ ಕುರಿತು ಸುದೀಪ್‌ ಬೇಸರ ವ್ಯಕ್ತಪಡಿಸಿದ್ದರು. "ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡುವ ಸಮಯ" ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿದ್ದರು.
icon

(6 / 8)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರಿಂದ ನಡೆದ ಹತ್ಯಾಕಾಂಡದ ಕುರಿತು ಸುದೀಪ್‌ ಬೇಸರ ವ್ಯಕ್ತಪಡಿಸಿದ್ದರು. "ಪಹಲ್ಗಾಮ್‌ನಲ್ಲಿ ಮುಗ್ಧ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿ ಹೃದಯ ವಿದ್ರಾವಕ. ಇದು ಕೇವಲ ವ್ಯಕ್ತಿಗಳ ಮೇಲಿನ ದಾಳಿಯಲ್ಲ, ಬದಲಾಗಿ ನಮ್ಮ ರಾಷ್ಟ್ರದ ಚೈತನ್ಯದ ಮೇಲಿನ ದಾಳಿ. ಇದು ಸಂಯಮದ ಸಮಯವಲ್ಲ, ಬಲವಾದ ಮತ್ತು ಸ್ಪಷ್ಟವಾದ ಪ್ರತಿಕ್ರಿಯೆ ನೀಡುವ ಸಮಯ" ಎಂದು ಕಿಚ್ಚ ಸುದೀಪ್‌ ಟ್ವೀಟ್‌ ಮಾಡಿದ್ದರು.

ಇಷ್ಟು ಮಾತ್ರವಲ್ಲದೆ ಇಂತಹ ಕ್ರೂರ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ನರೇಂದ್ರ ಮೋದಿ, ಅಮಿತ್‌ ಶಾ. ರಾಜನಾಥ್‌ ಸಿಂಗ್‌ ಬಳಿ ಮನವಿ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ,ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಅವರು ಈ ಹೇಡಿತನದ ಕೆಲಸ ಮಾಡಿದವರ ವಿರುದ್ಧ ತ್ವರಿತವಾಗಿ ಮತ್ತು ಕಠಿಣವಾಗಿ ಕ್ರಮಕೈಗೊಳ್ಳಬೇಕು" ಎಂದು ಸುದೀಪ್‌ ಮನವಿ ಮಾಡಿದ್ದರು.
icon

(7 / 8)

ಇಷ್ಟು ಮಾತ್ರವಲ್ಲದೆ ಇಂತಹ ಕ್ರೂರ ಕೃತ್ಯ ಎಸಗಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕೆಂದು ನರೇಂದ್ರ ಮೋದಿ, ಅಮಿತ್‌ ಶಾ. ರಾಜನಾಥ್‌ ಸಿಂಗ್‌ ಬಳಿ ಮನವಿ ಮಾಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ,ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಅವರು ಈ ಹೇಡಿತನದ ಕೆಲಸ ಮಾಡಿದವರ ವಿರುದ್ಧ ತ್ವರಿತವಾಗಿ ಮತ್ತು ಕಠಿಣವಾಗಿ ಕ್ರಮಕೈಗೊಳ್ಳಬೇಕು" ಎಂದು ಸುದೀಪ್‌ ಮನವಿ ಮಾಡಿದ್ದರು.

ಒಂದೆಡೆ ಭಾರತದಲ್ಲಿ ಇಂದು ಸೇನೆ ಡ್ರಿಲ್‌ ನಡೆಸಲಿದೆ. ಎಲ್ಲರ ಗಮನ ಸೇನಾ ಡ್ರಿಲ್‌ ಮೇಲಿರುವಾಗ ಭಾರತೀಯ ಸೇನೆಯು ಸೈಲೆಂಟ್‌ ಆಗಿ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದು ಭಾರತೀಯರಿಗೆ ರೋಮಾಂಚನ ಉಂಟುಮಾಡಿದೆ.
icon

(8 / 8)

ಒಂದೆಡೆ ಭಾರತದಲ್ಲಿ ಇಂದು ಸೇನೆ ಡ್ರಿಲ್‌ ನಡೆಸಲಿದೆ. ಎಲ್ಲರ ಗಮನ ಸೇನಾ ಡ್ರಿಲ್‌ ಮೇಲಿರುವಾಗ ಭಾರತೀಯ ಸೇನೆಯು ಸೈಲೆಂಟ್‌ ಆಗಿ ಪಾಕ್‌ ಆಕ್ರಮಿತ ಕಾಶ್ಮೀರದ ಉಗ್ರರ ಅಡಗು ತಾಣಗಳ ಮೇಲೆ ದಾಳಿ ನಡೆಸಿತ್ತು. ಇದು ಭಾರತೀಯರಿಗೆ ರೋಮಾಂಚನ ಉಂಟುಮಾಡಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು