ಆಸ್ಕರ್‌ ಪ್ರಶಸ್ತಿ ತಂದ ತೆಪ್ಪಕಾಡು ಆನೆ ಸೇವಕರಿಗೆ ಹೈಟೆಕ್‌ ಮಾವುತ್‌ ವಿಲೇಜ್‌: ತಮಿಳುನಾಡು ಸರ್ಕಾರದ ಕೊಡುಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆಸ್ಕರ್‌ ಪ್ರಶಸ್ತಿ ತಂದ ತೆಪ್ಪಕಾಡು ಆನೆ ಸೇವಕರಿಗೆ ಹೈಟೆಕ್‌ ಮಾವುತ್‌ ವಿಲೇಜ್‌: ತಮಿಳುನಾಡು ಸರ್ಕಾರದ ಕೊಡುಗೆ

ಆಸ್ಕರ್‌ ಪ್ರಶಸ್ತಿ ತಂದ ತೆಪ್ಪಕಾಡು ಆನೆ ಸೇವಕರಿಗೆ ಹೈಟೆಕ್‌ ಮಾವುತ್‌ ವಿಲೇಜ್‌: ತಮಿಳುನಾಡು ಸರ್ಕಾರದ ಕೊಡುಗೆ

ತಮಿಳುನಾಡಿನ ಮದುಮಲೈ ಹುಲಿ ಅಭಯಾರಣ್ಯದಲ್ಲಿರುವ ತೆಪ್ಪಕಾಡು ಆನೆ ಶಿಬಿರದಲ್ಲಿನ ನಿವಾಸಿಗಳಿಗೆ ಈಗ ಹೈಟೆಕ್‌ ಸೇವೆ. ಮನೆ, ಮಕ್ಕಳಿಗೆ ಆಟದ ಮೈದಾನ ಸಹಿತ ತಮಿಳುನಾಡು ಸರ್ಕಾರ ಅತ್ಯುತ್ತಮ ಸೇವೆಯನ್ನು ಒದಗಿಸಿಕೊಟ್ಟಿದೆ. ಅದರ ನೋಟ ಇಲ್ಲಿದೆ.

ಮೈಸೂರಿನಿಂದ ಬಂಡೀಪುರ ದಾಟಿಕೊಂಡು ಊಟಿ ಕಡೆಗೆ ಹೊರಟರೆ ಸಿಗುವುದೇ ಮದುಮಲೈ ಅರಣ್ಯ ಪ್ರದೇಶ. ಅದೂ ಕೂಡ ಹುಲಿ ರಾಷ್ಟ್ರೀಯ ಉದ್ಯಾನವೇ. ಶತಮಾನದಷ್ಟು ಹಳೆಯದಾದ ಅಲ್ಲಿನ ತೆಪ್ಪಕಾಡು ಆನೆ ಶಿಬಿರ ಗಮನ ಸೆಳೆಯುತ್ತದೆ.
icon

(1 / 9)

ಮೈಸೂರಿನಿಂದ ಬಂಡೀಪುರ ದಾಟಿಕೊಂಡು ಊಟಿ ಕಡೆಗೆ ಹೊರಟರೆ ಸಿಗುವುದೇ ಮದುಮಲೈ ಅರಣ್ಯ ಪ್ರದೇಶ. ಅದೂ ಕೂಡ ಹುಲಿ ರಾಷ್ಟ್ರೀಯ ಉದ್ಯಾನವೇ. ಶತಮಾನದಷ್ಟು ಹಳೆಯದಾದ ಅಲ್ಲಿನ ತೆಪ್ಪಕಾಡು ಆನೆ ಶಿಬಿರ ಗಮನ ಸೆಳೆಯುತ್ತದೆ.

ಎರಡು ವರ್ಷದ ಹಿಂದೆ ಆಸ್ಕರ್‌ ಪ್ರಶಸ್ತಿ ಮೂಲಕ ಗಮನ ಸೆಳೆದದ್ದು ಇದೇ ತೆಪ್ಪಕಾಡು ಅರಣ್ಯಪ್ರದೇಶವೇ. ಇಲ್ಲಿನ ಬೊಮ್ಮನ್‌ ಹಾಗೂ ಬೆಳ್ಳಿ ಎಂಬ ಜೋಡಿ ಆನೆ ಸಲಹುವ ಹಿನ್ನೆಲೆಯೊಂದಿಗೆ ರೂಪುಗೊಂಡ ಎಲೆಫೆಂಟ್‌ ವಿಸ್ಪರರ್ಸ್‌ ಎನ್ನುವ ಚಿತ್ರಕ್ಕೆ ಆಸ್ಕರ್‌ ಚಿತ್ರ ಬಂದಿತು.
icon

(2 / 9)

ಎರಡು ವರ್ಷದ ಹಿಂದೆ ಆಸ್ಕರ್‌ ಪ್ರಶಸ್ತಿ ಮೂಲಕ ಗಮನ ಸೆಳೆದದ್ದು ಇದೇ ತೆಪ್ಪಕಾಡು ಅರಣ್ಯಪ್ರದೇಶವೇ. ಇಲ್ಲಿನ ಬೊಮ್ಮನ್‌ ಹಾಗೂ ಬೆಳ್ಳಿ ಎಂಬ ಜೋಡಿ ಆನೆ ಸಲಹುವ ಹಿನ್ನೆಲೆಯೊಂದಿಗೆ ರೂಪುಗೊಂಡ ಎಲೆಫೆಂಟ್‌ ವಿಸ್ಪರರ್ಸ್‌ ಎನ್ನುವ ಚಿತ್ರಕ್ಕೆ ಆಸ್ಕರ್‌ ಚಿತ್ರ ಬಂದಿತು.
(The week)

ಯಾವಾಗ ತೆಪ್ಪಕಾಡು ಹಿನ್ನೆಲೆಯನ್ನು ಒಳಗೊಂಡ ಆನೆಗಳು ಹಾಗೂ ಅಲ್ಲಿನ ಗಜ ಸೇವಕರ ಕಥಾನಕ ಒಳಗೊಂಡ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಬಂತೋ ತಮಿಳುನಾಡು ಸರ್ಕಾರ ಸೌಲಭ್ಯ ನೀಡಲು ಮುಂದಾಯಿತು,
icon

(3 / 9)

ಯಾವಾಗ ತೆಪ್ಪಕಾಡು ಹಿನ್ನೆಲೆಯನ್ನು ಒಳಗೊಂಡ ಆನೆಗಳು ಹಾಗೂ ಅಲ್ಲಿನ ಗಜ ಸೇವಕರ ಕಥಾನಕ ಒಳಗೊಂಡ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ ಬಂತೋ ತಮಿಳುನಾಡು ಸರ್ಕಾರ ಸೌಲಭ್ಯ ನೀಡಲು ಮುಂದಾಯಿತು,

ಶತಮಾನದ ಹಿನ್ನೆಲೆಯ ತೆಪ್ಪಕಾಡು ಆನೆ ಶಿಬಿರದಲ್ಲಿ  27 ಆನೆಗಳಿದ್ದು, ನಿತ್ಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಗಳಿದ್ದಾರೆ. ಮಾವುತರು, ಕವಾಡಿಗರಿಗೆ ಆನೆ ಸೇವೆಯೇ ವೃತ್ತಿಯಾಗಿದೆ.
icon

(4 / 9)

ಶತಮಾನದ ಹಿನ್ನೆಲೆಯ ತೆಪ್ಪಕಾಡು ಆನೆ ಶಿಬಿರದಲ್ಲಿ 27 ಆನೆಗಳಿದ್ದು, ನಿತ್ಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆನೆಗಳನ್ನು ನೋಡಿಕೊಳ್ಳುವ ಸಿಬ್ಬಂದಿಗಳಿದ್ದಾರೆ. ಮಾವುತರು, ಕವಾಡಿಗರಿಗೆ ಆನೆ ಸೇವೆಯೇ ವೃತ್ತಿಯಾಗಿದೆ.
(Satyamoorti)

ಅತ್ಯುತ್ತಮ ರಸ್ತೆ, ಸುಂದರ ಆಟದ ಮೈದಾನ, ಉದ್ಯಾನಗಳು, ಅಲ್ಲಲ್ಲೆ ಕುಳಿತು ವಿಶ್ರಾಂತಿ ಪಡೆಯಲು‌ ಮರಗಳ ಸುತ್ತ ನಿರ್ಮಿಸಿರುವ ಆಕರ್ಷಕ ಕಟ್ಟೆಗಳು, ಸುಂದರ ಮನೆಗಳು ... ಇದು ಯಾವುದೊ ನಗರದ ಆಧುನಿಕ ಬಡಾವಣೆಯಲ್ಲ, ಇದು ತೆಪ್ಪಕಾಡು ಮಾವುತ್‌ ವಿಲೇಜ್‌ನ ನೋಟ.
icon

(5 / 9)

ಅತ್ಯುತ್ತಮ ರಸ್ತೆ, ಸುಂದರ ಆಟದ ಮೈದಾನ, ಉದ್ಯಾನಗಳು, ಅಲ್ಲಲ್ಲೆ ಕುಳಿತು ವಿಶ್ರಾಂತಿ ಪಡೆಯಲು‌ ಮರಗಳ ಸುತ್ತ ನಿರ್ಮಿಸಿರುವ ಆಕರ್ಷಕ ಕಟ್ಟೆಗಳು, ಸುಂದರ ಮನೆಗಳು ... ಇದು ಯಾವುದೊ ನಗರದ ಆಧುನಿಕ ಬಡಾವಣೆಯಲ್ಲ, ಇದು ತೆಪ್ಪಕಾಡು ಮಾವುತ್‌ ವಿಲೇಜ್‌ನ ನೋಟ.

ನಮ್ಮ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ, ತಮಿಳುನಾಡಿನ ಮದುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ತೆಪ್ಪಕಾಡು ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳಿಗೆ ಅಲ್ಲಿನ ಅರಣ್ಯ ಇಲಾಖೆ ನಿರ್ಮಿಸಿರುವ ಸುಂದರ, ಸುಸಜ್ಜಿತ ಬಡಾವಣೆ. ಇದರ ಹೆಸರು ಕೂಡ ಅರ್ಥಪೂರ್ಣ "ಮಾವುತ್ ವಿಲೇಜ್"
icon

(6 / 9)

ನಮ್ಮ ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ, ತಮಿಳುನಾಡಿನ ಮದುಮಲೈ ಅರಣ್ಯ ವ್ಯಾಪ್ತಿಯಲ್ಲಿರುವ ತೆಪ್ಪಕಾಡು ಸಾಕಾನೆ ಶಿಬಿರದ ಮಾವುತರು ಮತ್ತು ಕಾವಾಡಿಗಳಿಗೆ ಅಲ್ಲಿನ ಅರಣ್ಯ ಇಲಾಖೆ ನಿರ್ಮಿಸಿರುವ ಸುಂದರ, ಸುಸಜ್ಜಿತ ಬಡಾವಣೆ. ಇದರ ಹೆಸರು ಕೂಡ ಅರ್ಥಪೂರ್ಣ "ಮಾವುತ್ ವಿಲೇಜ್"

ಈ ರೀತಿ ಮಾವುತರಿಗೆ ಎಂದೇ ನಿರ್ಮಿಸಲಾದ ಭಾರತದ ಮೊದಲ ಬಡಾವಣೆ ಇದಾಗಿದೆ. ಇಲ್ಲಿ ಒಟ್ಟು 44 ಮನೆಗಳನ್ನು ಒಟ್ಟು 5.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬೀದಿಗಳಿಗೆ ಸಾಕಾನೆ ಶಿಬಿರದ ಪ್ರಸಿದ್ದ ಆನೆಗಳ ಹೆಸರನ್ನೆ ಇಡಲಾಗಿದೆ.
icon

(7 / 9)

ಈ ರೀತಿ ಮಾವುತರಿಗೆ ಎಂದೇ ನಿರ್ಮಿಸಲಾದ ಭಾರತದ ಮೊದಲ ಬಡಾವಣೆ ಇದಾಗಿದೆ. ಇಲ್ಲಿ ಒಟ್ಟು 44 ಮನೆಗಳನ್ನು ಒಟ್ಟು 5.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಬೀದಿಗಳಿಗೆ ಸಾಕಾನೆ ಶಿಬಿರದ ಪ್ರಸಿದ್ದ ಆನೆಗಳ ಹೆಸರನ್ನೆ ಇಡಲಾಗಿದೆ.

ಮನೆಯ ವಿನ್ಯಾಸದಿಂದ ಹಿಡಿದು, ಬ್ಯಾಸ್ಕೆಟ್‌ಬಾಲ್ ಅಂಗಳ, ಮಕ್ಕಳ ಆಟದ ಮೈದಾನದವರೆಗೆ ಈ ಗ್ರಾಮವನ್ನು ಮಾವುತರೊಂದಿಗೆ ಸಮಾಲೋಚಿಸಿ ಅವರ ಅಗತ್ಯಗಳಿಗೆ ಅನುಗುಣವಾಗಿ ಈ ಸಮುಚ್ಚಯ ನಿರ್ಮಿಸಲಾಗಿದೆ. ಸೌರ ವಿದ್ಯುತ್ ದೀಪಗಳಿಂದ ಬೆಳಗುವ ಗ್ರಾಮಕ್ಕೆ ಸೌರ ಬೇಲಿ ಕಾಡುಪ್ರಾಣಿಗಳಿಂದ ರಕ್ಷಣೆ ಒದಗಿಸುತ್ತದೆ.
icon

(8 / 9)

ಮನೆಯ ವಿನ್ಯಾಸದಿಂದ ಹಿಡಿದು, ಬ್ಯಾಸ್ಕೆಟ್‌ಬಾಲ್ ಅಂಗಳ, ಮಕ್ಕಳ ಆಟದ ಮೈದಾನದವರೆಗೆ ಈ ಗ್ರಾಮವನ್ನು ಮಾವುತರೊಂದಿಗೆ ಸಮಾಲೋಚಿಸಿ ಅವರ ಅಗತ್ಯಗಳಿಗೆ ಅನುಗುಣವಾಗಿ ಈ ಸಮುಚ್ಚಯ ನಿರ್ಮಿಸಲಾಗಿದೆ. ಸೌರ ವಿದ್ಯುತ್ ದೀಪಗಳಿಂದ ಬೆಳಗುವ ಗ್ರಾಮಕ್ಕೆ ಸೌರ ಬೇಲಿ ಕಾಡುಪ್ರಾಣಿಗಳಿಂದ ರಕ್ಷಣೆ ಒದಗಿಸುತ್ತದೆ.

ನೀವು ಊಟಿಗೆ ಹೊರಟಿದ್ದರೆ ಇಲ್ಲವೇ ಆ ಕಡೆಯಿಂದ ಬರುತ್ತಿದ್ದರೆ ಮದುಮಲೈ ಅರಣ್ಯ ವಿಭಾಗದಲ್ಲಿರುವ ತೆಪ್ಪಕಾಡು ಆನೆ ಶಿಬಿರ, ಅಲ್ಲಿನ ಮಾವುತರ ವಿಲೇಜ್‌ ಅನ್ನು ನೋಡಿಕೊಂಡು ಬರಬಹುದು. ಆನೆ ಶಿಬಿರದ ವಾತಾವರಣ ಎಂತವರಿಗೂ ಮುದ ನೀಡಲಿದೆ.
icon

(9 / 9)

ನೀವು ಊಟಿಗೆ ಹೊರಟಿದ್ದರೆ ಇಲ್ಲವೇ ಆ ಕಡೆಯಿಂದ ಬರುತ್ತಿದ್ದರೆ ಮದುಮಲೈ ಅರಣ್ಯ ವಿಭಾಗದಲ್ಲಿರುವ ತೆಪ್ಪಕಾಡು ಆನೆ ಶಿಬಿರ, ಅಲ್ಲಿನ ಮಾವುತರ ವಿಲೇಜ್‌ ಅನ್ನು ನೋಡಿಕೊಂಡು ಬರಬಹುದು. ಆನೆ ಶಿಬಿರದ ವಾತಾವರಣ ಎಂತವರಿಗೂ ಮುದ ನೀಡಲಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು