ಆ ಖ್ಯಾತ ನಿರ್ದೇಶಕನಿಗೆ ʻನಿನ್ನ ತಲೆ ಕಡೀತಿನಿʼ ಎಂದಿದ್ದರು ಪಾರ್ವತಮ್ಮ ರಾಜ್‌ಕುಮಾರ್‌! ಅದರ ಹಿಂದಿತ್ತೊಂದು ಒಳ್ಳೇ ಉದ್ದೇಶ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆ ಖ್ಯಾತ ನಿರ್ದೇಶಕನಿಗೆ ʻನಿನ್ನ ತಲೆ ಕಡೀತಿನಿʼ ಎಂದಿದ್ದರು ಪಾರ್ವತಮ್ಮ ರಾಜ್‌ಕುಮಾರ್‌! ಅದರ ಹಿಂದಿತ್ತೊಂದು ಒಳ್ಳೇ ಉದ್ದೇಶ

ಆ ಖ್ಯಾತ ನಿರ್ದೇಶಕನಿಗೆ ʻನಿನ್ನ ತಲೆ ಕಡೀತಿನಿʼ ಎಂದಿದ್ದರು ಪಾರ್ವತಮ್ಮ ರಾಜ್‌ಕುಮಾರ್‌! ಅದರ ಹಿಂದಿತ್ತೊಂದು ಒಳ್ಳೇ ಉದ್ದೇಶ

ರಾಜ್‌ಕುಮಾರ್‌ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದರೆ, ಅದೇ ಅಣ್ಣಾವ್ರು ಯಾವ ಚಿತ್ರದಲ್ಲಿ ನಟಿಸಬೇಕು, ಅದರ ಕಥೆ ಹೇಗಿರಬೇಕು ಎಂದು ನಿರ್ಧರಿಸುವವರು ಪಾರ್ವತಮ್ಮ ರಾಜ್‌ಕುಮಾರ್‌. ಒಮ್ಮೆ ಸ್ಟಾರ್‌ ನಿರ್ದೇಶಕರೊಬ್ಬರು ಮಾಸ್ತಿ ವೆಂಕಟೇಶ್‌ ಅಯ್ಯಂಗಾರ ಅವರ ಕೃತಿ ಹಿಡಿದು ಬರ್ತಾರೆ. ಆ ಕಥೆ ಕೇಳಿದ ಪಾರ್ವತಮ್ಮ ಗರಂ ಆಗಿ, ಇಂಥ ಕಥೆ ತಂದ್ರೆ ನಿನ್ನ ತಲೆ ಕಡೀತಿನಿ ಅಂತಾರೆ.

ಅಷ್ಟಕ್ಕೂ ಇಂಥ ಕಥೆ ತಂದೆ ನಿನ್ನ ತಲೆ ಕಡೀತಿನಿ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಹೀಗೆ ಹೇಳಿದ್ದು ಯಾರಿಗೆ? ಅದರ ಹಿಂದಿನ ಉದ್ದೇಶ ಏನಾಗಿತ್ತು? ಕೊನೆಗೆ ಆ ಸಿನಿಮಾ ಆಯ್ತಾ? ಅದೆಲ್ಲದರ ಬಗ್ಗೆ ಇಲ್ಲಿದೆ ಉತ್ತರ.
icon

(1 / 11)

ಅಷ್ಟಕ್ಕೂ ಇಂಥ ಕಥೆ ತಂದೆ ನಿನ್ನ ತಲೆ ಕಡೀತಿನಿ ಎಂದು ಪಾರ್ವತಮ್ಮ ರಾಜ್‌ಕುಮಾರ್‌ ಹೀಗೆ ಹೇಳಿದ್ದು ಯಾರಿಗೆ? ಅದರ ಹಿಂದಿನ ಉದ್ದೇಶ ಏನಾಗಿತ್ತು? ಕೊನೆಗೆ ಆ ಸಿನಿಮಾ ಆಯ್ತಾ? ಅದೆಲ್ಲದರ ಬಗ್ಗೆ ಇಲ್ಲಿದೆ ಉತ್ತರ.
(Images\ Raghavendra Rajkumar)

ಅಣ್ಣಾವ್ರು ಯಾವುದೇ ಸಿನಿಮಾ ಮಾಡಿದರೂ, ಮೊದಲಿಗೆ ಪಾರ್ವತಮ್ಮ ಅವರ ಒಪ್ಪಿಗೆ ಬೇಕೇಬೇಕು. ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಮತ್ತು ವರದಪ್ಪ ಅವರ ಆಯ್ಕೆಯೇ ಅಂತಿಮ. ಏಕೆಂದರೆ ರಾಜ್‌ಕುಮಾರ್‌ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದರು. ಕಥೆ ಕೇಳುವ ವ್ಯವಧಾನವೂ ಇರುತ್ತಿರಲಿಲ್ಲ.
icon

(2 / 11)

ಅಣ್ಣಾವ್ರು ಯಾವುದೇ ಸಿನಿಮಾ ಮಾಡಿದರೂ, ಮೊದಲಿಗೆ ಪಾರ್ವತಮ್ಮ ಅವರ ಒಪ್ಪಿಗೆ ಬೇಕೇಬೇಕು. ಕಥೆಯ ಆಯ್ಕೆಯಲ್ಲಿ ಪಾರ್ವತಮ್ಮ ಮತ್ತು ವರದಪ್ಪ ಅವರ ಆಯ್ಕೆಯೇ ಅಂತಿಮ. ಏಕೆಂದರೆ ರಾಜ್‌ಕುಮಾರ್‌ ಹಲವು ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದರು. ಕಥೆ ಕೇಳುವ ವ್ಯವಧಾನವೂ ಇರುತ್ತಿರಲಿಲ್ಲ.

ಹೀಗಿರುವಾಗ ಆಗಿನ ಕಾಲದ ಸ್ಟಾರ್‌ ನಿರ್ದೇಶಕ ಮತ್ತು ರಾಜ್‌ಕುಮಾರ್‌ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದ ಭಗವಾನ್‌ ಅವರು 1982 ಹೊಸ ಬೆಳಕು ಸಿನಿಮಾ ಮಾಡಿ ಗೆದ್ದಿದ್ದರು.
icon

(3 / 11)

ಹೀಗಿರುವಾಗ ಆಗಿನ ಕಾಲದ ಸ್ಟಾರ್‌ ನಿರ್ದೇಶಕ ಮತ್ತು ರಾಜ್‌ಕುಮಾರ್‌ ಕುಟುಂಬದ ಆಪ್ತರಲ್ಲಿ ಒಬ್ಬರಾಗಿದ್ದ ಭಗವಾನ್‌ ಅವರು 1982 ಹೊಸ ಬೆಳಕು ಸಿನಿಮಾ ಮಾಡಿ ಗೆದ್ದಿದ್ದರು.

ಆ ಸಿನಿಮಾ ಬಳಿಕ ಅಣ್ಣಾವ್ರಿಗೆ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ ಅವರ ಸುಬ್ಬಣ್ಣ ಕೃತಿಯನ್ನು ಹಿಡಿದು ತಂದಿದ್ದರು.
icon

(4 / 11)

ಆ ಸಿನಿಮಾ ಬಳಿಕ ಅಣ್ಣಾವ್ರಿಗೆ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ ಅವರ ಸುಬ್ಬಣ್ಣ ಕೃತಿಯನ್ನು ಹಿಡಿದು ತಂದಿದ್ದರು.

ಆಗಿನ ಕಾಲದಲ್ಲಿಯೇ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರಿಗೆ 10 ಸಾವಿರ ನೀಡಿ ಕೃತಿಯ ಹಕ್ಕುಗಳನ್ನು ಪಡೆದಿದ್ದರು. ನೇರವಾಗಿ ವರದಪ್ಪ ಮತ್ತು ಅಣ್ಣಾವ್ರಿಗೆ ಕಥೆ ಹೇಳಿ ಓಕೆ ಮಾಡಿಸಿದ್ದರು. ಬಳಿಕ ಪಾರ್ವತಮ್ಮ ಇದೇ ಸಿನಿಮಾ ಕಥೆಯ ವಿಚಾರಕ್ಕೆ ಭಗವಾನ್‌ ಅವರನ್ನು ಮನೆಗೆ ಕರೆಸಿಕೊಂಡರು.
icon

(5 / 11)

ಆಗಿನ ಕಾಲದಲ್ಲಿಯೇ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರಿಗೆ 10 ಸಾವಿರ ನೀಡಿ ಕೃತಿಯ ಹಕ್ಕುಗಳನ್ನು ಪಡೆದಿದ್ದರು. ನೇರವಾಗಿ ವರದಪ್ಪ ಮತ್ತು ಅಣ್ಣಾವ್ರಿಗೆ ಕಥೆ ಹೇಳಿ ಓಕೆ ಮಾಡಿಸಿದ್ದರು. ಬಳಿಕ ಪಾರ್ವತಮ್ಮ ಇದೇ ಸಿನಿಮಾ ಕಥೆಯ ವಿಚಾರಕ್ಕೆ ಭಗವಾನ್‌ ಅವರನ್ನು ಮನೆಗೆ ಕರೆಸಿಕೊಂಡರು.

"ನೀನು ಏನಾದರೂ ಈ ಸಿನಿಮಾನ ಅಣ್ಣಾವ್ರನ್ನು ಹಾಕ್ಕೊಂಡು ಮಾಡಿದ್ರೆ, ನಿನ್ನ ತಲೆ ಕಡೀತಿನಿ!" ಎಂದು ಪಾರ್ವತಮ್ಮ ಭಗವಾನ್‌ಗೆ ಎಚ್ಚರಿಕೆ ನೀಡಿದರು. ಅಷ್ಟಕ್ಕೂ ಸುಬ್ಬಣ್ಣ ಕೃತಿಯಲ್ಲಿ ಅಂಥದ್ದೇನಿತ್ತು? ಪಾರ್ವತಮ್ಮ ಆ ಕಾದಂಬರಿಯನ್ನು ಸಿನಿಮಾ ಮಾಡದಿರಲು ಕಾರಣ ಏನಿರಬಹುದು? ಇಲ್ಲಿದೆ ಉತ್ತರ.
icon

(6 / 11)

"ನೀನು ಏನಾದರೂ ಈ ಸಿನಿಮಾನ ಅಣ್ಣಾವ್ರನ್ನು ಹಾಕ್ಕೊಂಡು ಮಾಡಿದ್ರೆ, ನಿನ್ನ ತಲೆ ಕಡೀತಿನಿ!" ಎಂದು ಪಾರ್ವತಮ್ಮ ಭಗವಾನ್‌ಗೆ ಎಚ್ಚರಿಕೆ ನೀಡಿದರು. ಅಷ್ಟಕ್ಕೂ ಸುಬ್ಬಣ್ಣ ಕೃತಿಯಲ್ಲಿ ಅಂಥದ್ದೇನಿತ್ತು? ಪಾರ್ವತಮ್ಮ ಆ ಕಾದಂಬರಿಯನ್ನು ಸಿನಿಮಾ ಮಾಡದಿರಲು ಕಾರಣ ಏನಿರಬಹುದು? ಇಲ್ಲಿದೆ ಉತ್ತರ.

ಸುಬ್ಬಣ್ಣ ಕಾದಂಬರಿಯ ಕಥೆ ಮಹಾರಾಜರ ಕಾಲದಲ್ಲಿ ನಡೆಯುವ ಕಥೆ. ಆಸ್ಥಾನ ವಿದ್ವಾಂಸರ ನಡುವೆ ಸಾಗುವ ಸ್ಟೋರಿ. ಆ ಆಸ್ಥಾನದ ನಾರಾಯಣಶಾಸ್ತ್ರಿಗಳು, ಪುರಾಣದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳಿಂದ ಬಹುಮಾನ ಸಿಗುತ್ತಿರುತ್ತದೆ. ಅದರಿಂದಲೇ ಜೀವನ ಸಾಗುತ್ತಿರುತ್ತದೆ.
icon

(7 / 11)

ಸುಬ್ಬಣ್ಣ ಕಾದಂಬರಿಯ ಕಥೆ ಮಹಾರಾಜರ ಕಾಲದಲ್ಲಿ ನಡೆಯುವ ಕಥೆ. ಆಸ್ಥಾನ ವಿದ್ವಾಂಸರ ನಡುವೆ ಸಾಗುವ ಸ್ಟೋರಿ. ಆ ಆಸ್ಥಾನದ ನಾರಾಯಣಶಾಸ್ತ್ರಿಗಳು, ಪುರಾಣದ ಕಥೆಗಳನ್ನು ಹೇಳುತ್ತಿರುತ್ತಾರೆ. ಆ ಕಥೆಗಳಿಂದ ಬಹುಮಾನ ಸಿಗುತ್ತಿರುತ್ತದೆ. ಅದರಿಂದಲೇ ಜೀವನ ಸಾಗುತ್ತಿರುತ್ತದೆ.

ಆ ನಾರಾಯಣ ಶಾಸ್ತ್ರಿಗಳ ಮಗನೇ ಸುಬ್ಬಣ್ಣ. ಸುಬ್ಬಣ್ಣನಿಗೆ ಕಥೆ ಪುರಾಣದಲ್ಲಿ ಆಸಕ್ತಿ ಕಡಿಮೆ. ಸಂಗೀತದಲ್ಲಿ ಆಸಕ್ತಿ ಹೆಚ್ಚು. ಒಮ್ಮೆ ಆಸ್ಥಾನದಲ್ಲಿ ಕಥೆ ಹೇಳು ಎಂದಾಗ, ಸಂಗೀತದ ಮೂಲಕ ಗುರುತಿಸಿಕೊಳ್ತಾನೆ ಸುಬ್ಬಣ್ಣ. ಅದನ್ನು ಮೆಚ್ಚಿ ರಾಜರಿಂದ ಬಹುಮಾನವೂ ಸಿಗುತ್ತೆ. ದೊಡ್ಡ ಸಂಗೀತಗಾರನಾಗು, ನಿನಗೂ ದೊಡ್ಡ ಬಹುಮಾನವನ್ನೇ ಕೊಡ್ತೆನೆ ಎನ್ನುತ್ತಾರೆ ರಾಜ.
icon

(8 / 11)

ಆ ನಾರಾಯಣ ಶಾಸ್ತ್ರಿಗಳ ಮಗನೇ ಸುಬ್ಬಣ್ಣ. ಸುಬ್ಬಣ್ಣನಿಗೆ ಕಥೆ ಪುರಾಣದಲ್ಲಿ ಆಸಕ್ತಿ ಕಡಿಮೆ. ಸಂಗೀತದಲ್ಲಿ ಆಸಕ್ತಿ ಹೆಚ್ಚು. ಒಮ್ಮೆ ಆಸ್ಥಾನದಲ್ಲಿ ಕಥೆ ಹೇಳು ಎಂದಾಗ, ಸಂಗೀತದ ಮೂಲಕ ಗುರುತಿಸಿಕೊಳ್ತಾನೆ ಸುಬ್ಬಣ್ಣ. ಅದನ್ನು ಮೆಚ್ಚಿ ರಾಜರಿಂದ ಬಹುಮಾನವೂ ಸಿಗುತ್ತೆ. ದೊಡ್ಡ ಸಂಗೀತಗಾರನಾಗು, ನಿನಗೂ ದೊಡ್ಡ ಬಹುಮಾನವನ್ನೇ ಕೊಡ್ತೆನೆ ಎನ್ನುತ್ತಾರೆ ರಾಜ.

ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಂಗೀತದಲ್ಲಿಯೇ ಮುಳುಗುತ್ತಾನೆ ಸುಬ್ಬಣ್ಣ. ಮುಂದೆ ಸುಬ್ಬಣ್ಣನ ಮದುವೆ ಆಗುತ್ತೆ, ಮಕ್ಕಳಾಗುತ್ತವೆ. ಆದರೆ, ಮನೆ ಜವಾಬ್ದಾರಿ ನಿಭಾಯಿಸುವಲ್ಲಿ, ಹೆಂಡತಿ ಮಕ್ಕಳ ಬಗ್ಗೆ ಕಾಳಜಿಯೂ ಇರಲ್ಲ. ಇದೇ ವಿಚಾರಕ್ಕೆ ಜಗಳವೂ ಆಗುತ್ತೆ. ಹೆಂಡತಿ ಮಕ್ಕಳ ಜತೆಗೆ ಮನೆ ಬಿಟ್ಟ ತೆರಳುತ್ತಾನೆ. ಬಳಿಕ ಅಪ್ಪನ ಅಮ್ಮನ ಸಾವಿನ ಸುದ್ದಿಯೂ ಅವನ ಗಮನಕ್ಕೆ ಬರುವುದಿಲ್ಲ. ಹೆಂಡತಿ ಮಕ್ಕಳೂ ತೀರಿಹೋಗ್ತಾರೆ. ಸುಬ್ಬಣ್ಣನ ಜೀವನ ನರಕ ಆಗುತ್ತೆ. ಇದು ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ಬರೆದ ಸುಬ್ಬಣ್ಣ ಕತೆ.
icon

(9 / 11)

ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಸಂಗೀತದಲ್ಲಿಯೇ ಮುಳುಗುತ್ತಾನೆ ಸುಬ್ಬಣ್ಣ. ಮುಂದೆ ಸುಬ್ಬಣ್ಣನ ಮದುವೆ ಆಗುತ್ತೆ, ಮಕ್ಕಳಾಗುತ್ತವೆ. ಆದರೆ, ಮನೆ ಜವಾಬ್ದಾರಿ ನಿಭಾಯಿಸುವಲ್ಲಿ, ಹೆಂಡತಿ ಮಕ್ಕಳ ಬಗ್ಗೆ ಕಾಳಜಿಯೂ ಇರಲ್ಲ. ಇದೇ ವಿಚಾರಕ್ಕೆ ಜಗಳವೂ ಆಗುತ್ತೆ. ಹೆಂಡತಿ ಮಕ್ಕಳ ಜತೆಗೆ ಮನೆ ಬಿಟ್ಟ ತೆರಳುತ್ತಾನೆ. ಬಳಿಕ ಅಪ್ಪನ ಅಮ್ಮನ ಸಾವಿನ ಸುದ್ದಿಯೂ ಅವನ ಗಮನಕ್ಕೆ ಬರುವುದಿಲ್ಲ. ಹೆಂಡತಿ ಮಕ್ಕಳೂ ತೀರಿಹೋಗ್ತಾರೆ. ಸುಬ್ಬಣ್ಣನ ಜೀವನ ನರಕ ಆಗುತ್ತೆ. ಇದು ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಅವರು ಬರೆದ ಸುಬ್ಬಣ್ಣ ಕತೆ.

ಈ ರೀತಿಯ ಕಥೆಯಲ್ಲಿ ರಾಜ್‌ಕುಮಾರ್‌ ನಟಿಸಿದರೆ, ಅದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತೆ? ಎಂದು ಭಗವಾನ್‌ಗೆ ತರಾಟೆ ತೆಗೆದುಕೊಳ್ಳುತ್ತಾರೆ ಪಾರ್ವತಮ್ಮ. ಇಂಥ ಕಥೆಯಲ್ಲಿ ರಾಜ್‌ಕುಮಾರ್‌ ನಟಿಸಿದರೆ ಜನರ ಅಭಿಪ್ರಾಯ ಹೇಗಿರುತ್ತೆ? ಮನೆಯ ಜವಾಬ್ದಾರಿ ಇಲ್ಲದ ಮನುಷ್ಯನ ಕಥೆ ಬೇಕಾ? ಎಂದು ಗುಡುಗಿದ್ದರು.
icon

(10 / 11)

ಈ ರೀತಿಯ ಕಥೆಯಲ್ಲಿ ರಾಜ್‌ಕುಮಾರ್‌ ನಟಿಸಿದರೆ, ಅದರಿಂದ ಸಮಾಜಕ್ಕೆ ಏನು ಸಂದೇಶ ಹೋಗುತ್ತೆ? ಎಂದು ಭಗವಾನ್‌ಗೆ ತರಾಟೆ ತೆಗೆದುಕೊಳ್ಳುತ್ತಾರೆ ಪಾರ್ವತಮ್ಮ. ಇಂಥ ಕಥೆಯಲ್ಲಿ ರಾಜ್‌ಕುಮಾರ್‌ ನಟಿಸಿದರೆ ಜನರ ಅಭಿಪ್ರಾಯ ಹೇಗಿರುತ್ತೆ? ಮನೆಯ ಜವಾಬ್ದಾರಿ ಇಲ್ಲದ ಮನುಷ್ಯನ ಕಥೆ ಬೇಕಾ? ಎಂದು ಗುಡುಗಿದ್ದರು.

ಈ ರೀತಿಯ ಕಥೆ ಕೇಳಿದಾಗ ನನ್ನನ್ನು ಮತ್ತು ನನ್ನ ಮಕ್ಕಳನ್ನು ಅವರು ನಡು ದಾರಿಯಲ್ಲಿ ಬಿಟ್ಟು ಹೋದಂತೆ ಅನಿಸುತ್ತಿತ್ತು. ಆ ಕಾರಣಕ್ಕೆ ಸುಬ್ಬಣ್ಣ ಕಾದಂಬರಿ ಆಧರಿತ ಸಿನಿಮಾ ಮಾಡೋದು ಬೇಡ, ಮಾಡಿದ್ರೆ ನಿನ್ನ ತಲೆ ಕಡೀತಿನಿ ಎಂದು ಭಗವಾನ್‌ಗೆ ಎಚ್ಚರಿಸಿದ್ದರು ಪಾರ್ವತಮ್ಮ. ಅಮ್ಮಾವ್ರ ಮಾತಂತೆ ಭಗವಾನ್‌ ಸಹ ಆ ಸಿನಿಮಾವನ್ನು ಕೈ ಬಿಡ್ತಾರೆ.
icon

(11 / 11)

ಈ ರೀತಿಯ ಕಥೆ ಕೇಳಿದಾಗ ನನ್ನನ್ನು ಮತ್ತು ನನ್ನ ಮಕ್ಕಳನ್ನು ಅವರು ನಡು ದಾರಿಯಲ್ಲಿ ಬಿಟ್ಟು ಹೋದಂತೆ ಅನಿಸುತ್ತಿತ್ತು. ಆ ಕಾರಣಕ್ಕೆ ಸುಬ್ಬಣ್ಣ ಕಾದಂಬರಿ ಆಧರಿತ ಸಿನಿಮಾ ಮಾಡೋದು ಬೇಡ, ಮಾಡಿದ್ರೆ ನಿನ್ನ ತಲೆ ಕಡೀತಿನಿ ಎಂದು ಭಗವಾನ್‌ಗೆ ಎಚ್ಚರಿಸಿದ್ದರು ಪಾರ್ವತಮ್ಮ. ಅಮ್ಮಾವ್ರ ಮಾತಂತೆ ಭಗವಾನ್‌ ಸಹ ಆ ಸಿನಿಮಾವನ್ನು ಕೈ ಬಿಡ್ತಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು