Ramachari Serial: ಹೆಣ್ಣು ನೋಡಲು ಬಂದವರಿಗೆ ಅವಮಾನ; ಜಾನಕಿ ಸಿಟ್ಟಾಗಿದ್ದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ramachari Serial: ಹೆಣ್ಣು ನೋಡಲು ಬಂದವರಿಗೆ ಅವಮಾನ; ಜಾನಕಿ ಸಿಟ್ಟಾಗಿದ್ದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ

Ramachari Serial: ಹೆಣ್ಣು ನೋಡಲು ಬಂದವರಿಗೆ ಅವಮಾನ; ಜಾನಕಿ ಸಿಟ್ಟಾಗಿದ್ದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಮದುವೆ ಮಾಡಬೇಕು ಎಂದು ನಾರಾಯಣಾಚಾರ್ಯರು ಅಂದುಕೊಂಡಿದ್ದಾರೆ. ಆದರೆ ಜಾನಕಿ ಕೂಡಿ ಬಂದ ಸಂಬಂಧವನ್ನು ನಿರಾಕರಿಸಿದ್ದಾಳೆ. 

ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿಯನ್ನು ನೋಡಲು ಗಂಡಿನ ಕಡೆಯವರು ಬಂದು ಕುಳಿತುಕೊಂಡಿರುತ್ತಾರೆ. ಆದರೆ ಎಷ್ಟು ಹೊತ್ತಾದರೂ ಶ್ರುತಿ ಮಾತ್ರ ಬರೋದಿಲ್ಲ. ಆಗ ರಾಮಾಚಾರಿ ಚಾರು ಬಳಿ ಅವಳನ್ನು ಕರೆದುಕೊಂಡು ಬರಲು ಹೇಳುತ್ತಾನೆ. 
icon

(1 / 8)

ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿಯನ್ನು ನೋಡಲು ಗಂಡಿನ ಕಡೆಯವರು ಬಂದು ಕುಳಿತುಕೊಂಡಿರುತ್ತಾರೆ. ಆದರೆ ಎಷ್ಟು ಹೊತ್ತಾದರೂ ಶ್ರುತಿ ಮಾತ್ರ ಬರೋದಿಲ್ಲ. ಆಗ ರಾಮಾಚಾರಿ ಚಾರು ಬಳಿ ಅವಳನ್ನು ಕರೆದುಕೊಂಡು ಬರಲು ಹೇಳುತ್ತಾನೆ. 

(Colors Kannada)

ಶ್ರುತಿ ಬಾರದಿರುವುದನ್ನು ಕಂಡು ಚಾರು ತಾನೇ ಹೋಗಿ ಅವಳನ್ನು ಕರೆದುಕೊಂಡು ಬರಬೇಕು ಎಂದು ನಿರ್ಧರಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಜಾನಕಿ ಬರುತ್ತಾಳೆ. 
icon

(2 / 8)

ಶ್ರುತಿ ಬಾರದಿರುವುದನ್ನು ಕಂಡು ಚಾರು ತಾನೇ ಹೋಗಿ ಅವಳನ್ನು ಕರೆದುಕೊಂಡು ಬರಬೇಕು ಎಂದು ನಿರ್ಧರಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಜಾನಕಿ ಬರುತ್ತಾಳೆ. 

(Colors Kannada)

ಜಾನಕಿ ಬಂದವಳೇ ಕೋಪದಿಂದ ನನಗೆ ಈ ಮದುವೆ ಇಷ್ಟ ಇಲ್ಲ. ನನ್ನ ಮಗಳನ್ನು ನಾನು ಇವರಿಗೆ ಕೊಡೋದಿಲ್ಲ ಎಂದು ಹೇಳುತ್ತಾಳೆ. 
icon

(3 / 8)

ಜಾನಕಿ ಬಂದವಳೇ ಕೋಪದಿಂದ ನನಗೆ ಈ ಮದುವೆ ಇಷ್ಟ ಇಲ್ಲ. ನನ್ನ ಮಗಳನ್ನು ನಾನು ಇವರಿಗೆ ಕೊಡೋದಿಲ್ಲ ಎಂದು ಹೇಳುತ್ತಾಳೆ. 

(Colors Kannada)

ಜಾನಕಿ ಆಡಿದ ಆ ಮಾತನ್ನು ಕೇಳಿ ನಾರಾಯಣಾಚಾರ್ಯರಿಗೆ ಕೋಪ ಬರುತ್ತದೆ. “ಜಾನಕಿ” ಎಂದು ಗದರುತ್ತಾರೆ. ಆದರೆ ಜಾನಕಿ ಯಾರ ಮಾತನ್ನೂ ಕೇಳೋದಿಲ್ಲ. 
icon

(4 / 8)

ಜಾನಕಿ ಆಡಿದ ಆ ಮಾತನ್ನು ಕೇಳಿ ನಾರಾಯಣಾಚಾರ್ಯರಿಗೆ ಕೋಪ ಬರುತ್ತದೆ. “ಜಾನಕಿ” ಎಂದು ಗದರುತ್ತಾರೆ. ಆದರೆ ಜಾನಕಿ ಯಾರ ಮಾತನ್ನೂ ಕೇಳೋದಿಲ್ಲ. 

(Colors Kannada)

ಗಂಡಿನ ಕಡೆಯವರಿಗೆ ಅವಮಾನ ಆಗುತ್ತದೆ. “ಯಾಕೆ? ಏನಾಯ್ತು? ನಮ್ಮಿಂದ ನಿಮಗೇನಾದ್ರೂ ಅಪಚಾರ ಆಯ್ತಾ?” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಜಾನಕಿ ಕಠುವಾಗಿ ಉತ್ತರಿಸುತ್ತಾಳೆ. 
icon

(5 / 8)

ಗಂಡಿನ ಕಡೆಯವರಿಗೆ ಅವಮಾನ ಆಗುತ್ತದೆ. “ಯಾಕೆ? ಏನಾಯ್ತು? ನಮ್ಮಿಂದ ನಿಮಗೇನಾದ್ರೂ ಅಪಚಾರ ಆಯ್ತಾ?” ಎಂದು ಪ್ರಶ್ನೆ ಮಾಡುತ್ತಾರೆ. ಆದರೆ ಜಾನಕಿ ಕಠುವಾಗಿ ಉತ್ತರಿಸುತ್ತಾಳೆ. 

(Colors Kannada)

ರಾಮಾಚಾರಿ ಹಾಗೂ ಚಾರು ಇಬ್ಬರಿಗೂ ಗಾಬರಿಯಾಗುತ್ತದೆ. ಜಾನಕಿ ಯಾವ ಕಾರಣಕ್ಕೆ ಇಷ್ಟೊಂದು ಸಿಟ್ಟಾಗಿದ್ದಾಳೆ ಎಂದು ಯಾರಿಗೂ ತಿಳಿಯುವುದಿಲ್ಲ. 
icon

(6 / 8)

ರಾಮಾಚಾರಿ ಹಾಗೂ ಚಾರು ಇಬ್ಬರಿಗೂ ಗಾಬರಿಯಾಗುತ್ತದೆ. ಜಾನಕಿ ಯಾವ ಕಾರಣಕ್ಕೆ ಇಷ್ಟೊಂದು ಸಿಟ್ಟಾಗಿದ್ದಾಳೆ ಎಂದು ಯಾರಿಗೂ ತಿಳಿಯುವುದಿಲ್ಲ. 

(Colors Kannada)

ಇನ್ನು ವೈಶಾಖಾ ಮತ್ತು ರುಕ್ಕು ಮನೆಯಲ್ಲಿ ಗಲಾಟೆ ಆಗುವುದನ್ನು ನೋಡಿ ಖುಷಿ ಪಡುತ್ತಾ ಇರುತ್ತಾರೆ. 
icon

(7 / 8)

ಇನ್ನು ವೈಶಾಖಾ ಮತ್ತು ರುಕ್ಕು ಮನೆಯಲ್ಲಿ ಗಲಾಟೆ ಆಗುವುದನ್ನು ನೋಡಿ ಖುಷಿ ಪಡುತ್ತಾ ಇರುತ್ತಾರೆ. 

(Colors Kannada)

ಜಾನಕಿ ಸೀದಾ ಬಂದು ಗಂಡಿನ ಕಡೆಯವರಿಗೆ “ನಿಮಗೆ ಆಗಬೇಕಾದ ಉಪಚಾರ ಆಯ್ತಲ್ಲ. ನೀವಿನ್ನು ಹೊರಡಬಹುದು” ಎಂದು ಹೇಳುತ್ತಾಳೆ. 
icon

(8 / 8)

ಜಾನಕಿ ಸೀದಾ ಬಂದು ಗಂಡಿನ ಕಡೆಯವರಿಗೆ “ನಿಮಗೆ ಆಗಬೇಕಾದ ಉಪಚಾರ ಆಯ್ತಲ್ಲ. ನೀವಿನ್ನು ಹೊರಡಬಹುದು” ಎಂದು ಹೇಳುತ್ತಾಳೆ. 

(Colors Kannada)


ಇತರ ಗ್ಯಾಲರಿಗಳು