ಡೈರೆಕ್ಟರ್ ಕ್ಯಾಪ್ ತೊಟ್ಟ ಕನ್ನಡತಿ ರಂಜನಿ ರಾಘವನ್; ಕನ್ನಡ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜನ ಕರೆತಂದ ಪುಟ್ಟಗೌರಿ
- ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ರಂಜನಿ ರಾಘವನ್ ಇದೀಗ ನಿರ್ದೇಶಕಿಯ ಕ್ಯಾಪ್ ತೊಟ್ಟಿದ್ದಾರೆ. ರಂಜಿನಿ ರಾಘವನ್ ಅವರು ಡಿ ಡಿ ಢಿಕ್ಕ ಎಂಬ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜನನ್ನು ರಂಜಿನಿ ಕರೆತರುತ್ತಿದ್ದಾರೆ.
- ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ರಂಜನಿ ರಾಘವನ್ ಇದೀಗ ನಿರ್ದೇಶಕಿಯ ಕ್ಯಾಪ್ ತೊಟ್ಟಿದ್ದಾರೆ. ರಂಜಿನಿ ರಾಘವನ್ ಅವರು ಡಿ ಡಿ ಢಿಕ್ಕ ಎಂಬ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜನನ್ನು ರಂಜಿನಿ ಕರೆತರುತ್ತಿದ್ದಾರೆ.
(1 / 11)
ಪುಟ್ಟ ಗೌರಿ ಮದುವೆ ಮತ್ತು ಕನ್ನಡತಿ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ರಂಜನಿ ರಾಘವನ್ ಇದೀಗ ನಿರ್ದೇಶಕಿಯ ಕ್ಯಾಪ್ ತೊಟ್ಟಿದ್ದಾರೆ. ರಂಜಿನಿ ರಾಘವನ್ ಅವರು ಡಿ ಡಿ ಢಿಕ್ಕ ಎಂಬ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡ ಸಿನಿಮಾಕ್ಕೆ ಸಂಗೀತ ಮಾಂತ್ರಿಕ ಇಳೆಯರಾಜನನ್ನು ರಂಜಿನಿ ಕರೆತರುತ್ತಿದ್ದಾರೆ. ಇತ್ತೀಚೆಗೆ ಪ್ರೇಮ್ ಹುಟ್ಟುಹಬ್ಬದಂದು ಈ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಗಿತ್ತು.
(2 / 11)
ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಜತೆ ಗೋಲ್ಡನ್ ಸ್ಟಾರ್ ಗಣೇಶ್ ಮಗ ವಿಹಾನ್ ಕೂಡ ನಟಿಸುತ್ತಿದ್ದಾನೆ. ಈ ಸಿನಿಮಾ ಈಗ ನಿರ್ಮಾಣ ಹಂತದಲ್ಲಿದೆ.
(3 / 11)
ನಿರ್ದೇಶಕ ಮತ್ತು ಕಾಟೇರ ಸಿನಿಮಾದ ಕಥೆಗಾರ ಜಡೇಶ್ ಕೆ ಹಂಪಿ ಈ ಸಿನಿಮಾದ ಪ್ರೊಡ್ಯುಸರ್ ಆಗಿದ್ದಾರೆ. ಈ ಸಿನಿಮಾಕ್ಕೆ ಇಳೆಯರಾಜ ಸಂಗೀತ ನೀಡಲಿದ್ದಾರೆ.
(4 / 11)
ಚೊಚ್ಚಲ ನಿರ್ದೇಶಕಿಯಾಗಿರುವ ರಂಜನಿಗೆ ಹೆಚ್ಚು ಅನುಭವಿ ಚಲನಚಿತ್ರ ನಿರ್ಮಾಪಕರ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ತಿಳಿಯಿತಂತೆ. ಇದಕ್ಕಾಗಿ ಪ್ರಮುಖರ ಬೆಂಬಲ ಪಡೆದರು. ರಂಜನಿಯವರ ಕಥೆಯಿಂದ ತರುಣ್ ಸುಧೀರ್ ಮತ್ತು ಜಡೇಶಾ ಉತ್ಸುಕರಾಗಿದ್ದರು. ಇದೇ ಕಾರಣಕ್ಕೆ ಕ್ರಮವಾಗಿ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಆಯ್ಕೆಯಾದರು. ಈ ಚಿತ್ರದಲ್ಲಿ ಸಾಕಷ್ಟು ಹಾಸ್ಯ ಮತ್ತು ಭಾವನಾತ್ಮಕ ಡ್ರಾಮಾವಿದೆ ಎಂದು ರಂಜನಿ ರಾಘವನ್ ಹೇಳಿದ್ದಾರೆ.
(5 / 11)
ಚಿತ್ರದ ಬರವಣಿಗೆಯ ಸಮಯದಲ್ಲಿ ನನಗೆ ನೆನಪಿರಲಿ ಪ್ರೇಮ್ ಅವರನ್ನು ಮಾತ್ರ ನಾಯಕನಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ರಂಜಿನಿ ಹೇಳಿದ್ದಾರೆ. ಬಾಲನಟನ ಪಾತ್ರಕ್ಕೆ ಅಡಿಷನ್ ನಡೆಸಿದರೂ ಸೂಕ್ತ ನಟರು ಕಲಾವಿದರು ದೊರಕಲಿಲ್ಲ ಎಂದರು.
(6 / 11)
ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗನನ್ನು ಆಯ್ಕೆ ಮಾಡಲಾಯಿತು. ಆರಂಭದಲ್ಲಿ ಗಣೇಶ್ ಇದಕ್ಕೆ ಒಪ್ಪಲಿಲ್ಲ. ಆತ ಸ್ಟಡಿ ಬಗ್ಗೆ ಗಮನ ನೀಡಲು ಆದ್ಯತೆ ನೀಡುವುದಾಗಿ ಗಣೇಶ್ ಹೇಳಿದ್ದರಂತೆ.
(7 / 11)
ಹೀಗಿದ್ದರೂ, ಚಿತ್ರತಂಡವು ಗಣೇಶ್ ಅವರನ್ನು ಹಲವು ಬಾರಿ ಭೇಟಿಯಾದ ಬಳಿಕ ಮಗನನ್ನು ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದರು.
(8 / 11)
ಇಷ್ಟು ಮಾತ್ರವಲ್ಲ ಈ ಸಿನಿಮಾದಲ್ಲಿ ನಟಿಸಲು ಆರಂಭದಲ್ಲಿ ಪ್ರೇಮ್ ಒಪ್ಪಿರಲಿಲ್ಲ. ಪ್ರಣಯ ಚಿತ್ರ ಅಥವಾ ಕೌಟುಂಬಿಕ ಸಿನಿಮಾಕ್ಕೆ ಹೊರತಾದ ಬೇರೆ ಪ್ರಕಾರದ ಚಿತ್ರಗಳಲ್ಲಿ ನಟಿಸಲು ಅವರು ಕಾಯುತ್ತಿದ್ದರು.
(9 / 11)
ಚಿತ್ರಕಥೆ ಕೇಳಿದ ಬಳಿಕ ನಿರ್ಧಾರ ತೆಗೆದುಕೊಳ್ಳಬೇಕೆಂದು ತರುಣ್ ಸುಧೀರ್ ಒತ್ತಾಯಿಸಿದರು. ಚಿತ್ರಕಥೆ ಕೇಳಿದ ಬಳಿಕ ಪ್ರೇಮ್ ಈ ಸಿನಿಮಾದಲ್ಲಿ ನಟಿಸಲು ಒಪ್ಪಿದ್ದರು.
(10 / 11)
‘ಡಿ ಡಿ ಢಿಕ್ಕಿ’ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಗಿದಿದೆಯಂತೆ. ಪ್ರೇಮ್ಗೆ ಚಿತ್ರದಲ್ಲಿ ಜೋಡಿ ಇದ್ದು, ಸದ್ಯದಲ್ಲೇ ಅವರನ್ನು ಪರಿಚಯಿಸಲಾಗುತ್ತದಂತೆ. ಈ ಚಿತ್ರಕ್ಕೆ ಇಳಯರಾಜ ಸಂಗೀತ ಸಂಯೋಜಿಸಿದ್ದು, ಸುಧಾಕರ್ ಶೆಟ್ಟಿ ಆರೂರು ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರವನ್ನು ಹಂಪಿ ಪಿಕ್ಚರ್ಸ್, ಆರ್.ಕೆ ಆ್ಯಂಡ್ ಎ.ಕೆ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ, ಜಡೇಶ್ ಕೆ. ಹಂಪಿ, ರಾಮಕೃಷ್ಣ ಮತ್ತು ಆನಂದ್ ಕುಮಾರ್ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.
(11 / 11)
‘ನೆನಪಿರಲಿ’ ಪ್ರೇಮ್, ಶುಕ್ರವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರೇಮ್ ಹೊಸ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಚಿತ್ರವನ್ನು ನಟಿ ರಂಜನಿ ರಾಘವನ್ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ‘ಡಿ ಡಿ ಢಿಕ್ಕಿ’ ಎಂಬ ಹೆಸರು ಇಡಲಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಗಣೇಶ್ ಮಗ ವಿಹಾನ್, ಪ್ರೇಮ್ ಅವರ ಮಗನಾಗಿ ಕಾಣಿಸಿಕೊಂಡಿದ್ದು, ಚಿತ್ರದ ಮೋಷನ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.
ಇತರ ಗ್ಯಾಲರಿಗಳು