ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಪಡೆದ ಡಾಲಿ ಧನಂಜಯ್; ಅರ್ಚಕರು, ದೇವಸ್ಥಾನದ ಸಿಬ್ಬಂದಿಗೂ ಆಮಂತ್ರಣ
- ಡಾಲಿ ಧನಂಜಯ್ -ಧನ್ಯತಾ ಜೋಡಿ ಇನ್ನೇನು ಫೆ. 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಈ ನಡುವೆ ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡಿದ ಧನಂಜಯ್, ಶ್ರೀಕಂಠೇಶ್ವರನ ಪಾದಕ್ಕೆ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ನಟ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದ್ದಾರೆ.
- ಡಾಲಿ ಧನಂಜಯ್ -ಧನ್ಯತಾ ಜೋಡಿ ಇನ್ನೇನು ಫೆ. 16ರಂದು ಮೈಸೂರಿನಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಈ ನಡುವೆ ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನಕ್ಕೆ ಭೇಟಿ ನೀಡಿದ ಧನಂಜಯ್, ಶ್ರೀಕಂಠೇಶ್ವರನ ಪಾದಕ್ಕೆ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ಸಲ್ಲಿಸಿದ್ದಾರೆ. ನಟ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದ್ದಾರೆ.
(1 / 6)
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ಮದುವೆ ತಯಾರಿಯಲ್ಲಿದ್ದಾರೆ. ಈಗಾಗಲೇ ರಾಜಕೀಯ, ಸಿನಿಮಾ ಸೇರಿ ಮಠಾಧೀಶರಿಗೂ ಮದುವೆಯ ಆಮಂತ್ರಣ ನೀಡುತ್ತಿದ್ದಾರೆ.
(2 / 6)
ಸ್ಯಾಂಡಲ್ವುಡ್ ಕಲಾವಿದರಿಗೂ ಈಗಾಗಲೇ ಲಗ್ನ ಪತ್ರಿಕೆ ನೀಡಿದ್ದಾರೆ. ಇನ್ನೇನು ಫೆಬ್ರವರಿ 16ರಂದು ಮೈಸೂರಿನಲ್ಲಿಯೇ ಧನ್ಯತಾ ಅವರನ್ನು ವರಿಸಲಿದ್ದಾರೆ.
(3 / 6)
ಇದೀಗ ಮೈಸೂರು ಸಮೀಪದ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಾನಕ್ಕೂ ಧನಂಜಯ್ ಭೇಟಿ ನೀಡಿದ್ದಾರೆ. ಶಾಸಕ ದರ್ಶನ್ ಧ್ರುವನಾರಾಯಣ್ ಡಾಲಿಗೆ ಸಾಥ್ ನೀಡಿದ್ದಾರೆ.
(4 / 6)
ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ ಪಾದಕ್ಕೆ ಮದುವೆ ಆಹ್ವಾನ ಪತ್ರಿಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ದೇವಸ್ಥಾನ ಅರ್ಚಕರು ಸಿಬ್ಬಂದಿಗೂ ಆಮಂತ್ರಣ ನೀಡಿದ್ದಾರೆ.
(5 / 6)
ಬಳಿಕ ಸನ್ನಿಧಾನದಲ್ಲಿನ ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಿದ ಧನಂಜಯ ಮತ್ತು ಶಾಸಕ ಧ್ರುವ ನಾರಾಯಣ್ ಅಲ್ಲಿಂದ ತೆರಳಿದ್ದಾರೆ.
ಇತರ ಗ್ಯಾಲರಿಗಳು