ಕನ್ನಡ ಸುದ್ದಿ  /  Photo Gallery  /  Sandalwood Geetha Shivarajkumar Daughter In Law Of Dr Rajkumar Adopted Annapurneswari School Of Ingalagi Hospet Mnk

Geetha Shiva Rajkumar: ಅಪ್ಪು ಕನಸಿಗೆ ನೀರೆರೆದ ದೊಡ್ಮನೆ ಹಿರಿ ಸೊಸೆ; ಮೆಚ್ಚುವ ಕೆಲಸಕ್ಕೆ ಕೈ ಜೋಡಿಸಿದ ಗೀತಾ ಶಿವರಾಜ್‌ಕುಮಾರ್‌

  • Geetha Shiva Rajkumar: ಸಿನಿಮಾ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಿಂದಲೂ ಕರ್ನಾಟಕದ ದೊಡ್ಮನೆ ಡಾ. ರಾಜ್‌ (Dr Rajkumar) ಕುಟುಂಬ ಗುರುತಿಸಿಕೊಂಡಿದೆ. ಸಮಾಜಮುಖಿ ಕಾರ್ಯಗಳಿಂದ ಜನಮಾನಸದಲ್ಲಿ ಹಸಿರಾಗಿ ಬೇರೂರಿದೆ. ಈಗ ಆ ಕಾರ್ಯಕ್ಕೆ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಸಾಥ್‌ ನೀಡಿದ್ದಾರೆ. ಈ ಮೂಲಕ ಅಪ್ಪು ಕನಸಿಗೆ ನೀರೆರೆದಿದ್ದಾರೆ.

ಗೀತಾ ಶಿವರಾಜ್‌ಕುಮಾರ್‌ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಅದರ ಜತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ಅವರು ಮುಂದು. ಅದಕ್ಕೆ ಸಾಕ್ಷಿ ಒಂದೆರಡಲ್ಲ. ಈಗಾಗಲೇ ಮೈಸೂರಿನಲ್ಲಿ ಶಕ್ತಿಧಾಮ ಶಾಲೆಯನ್ನು ಮುನ್ನಡೆಸುತ್ತಿದ್ದಾರವರು.
icon

(1 / 7)

ಗೀತಾ ಶಿವರಾಜ್‌ಕುಮಾರ್‌ ಸಿನಿಮಾ ನಿರ್ಮಾಣಕ್ಕೂ ಇಳಿದಿದ್ದಾರೆ. ಅದರ ಜತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ಅವರು ಮುಂದು. ಅದಕ್ಕೆ ಸಾಕ್ಷಿ ಒಂದೆರಡಲ್ಲ. ಈಗಾಗಲೇ ಮೈಸೂರಿನಲ್ಲಿ ಶಕ್ತಿಧಾಮ ಶಾಲೆಯನ್ನು ಮುನ್ನಡೆಸುತ್ತಿದ್ದಾರವರು.

ಇದೀಗ ಚುನಾವಣಾ ಕೆಲಸಗಳ ನಡುವೆಯೇ ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ ಗೀತಾ ಶಿವರಾಜ್‌ಕುಮಾರ್.‌ ಈ ಮೂಲಕ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿಗೆ ಅತ್ತಿಗೆ ನೀರೆರೆಯುತ್ತಿದ್ದಾರೆ.
icon

(2 / 7)

ಇದೀಗ ಚುನಾವಣಾ ಕೆಲಸಗಳ ನಡುವೆಯೇ ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾಗಿದ್ದಾರೆ ಗೀತಾ ಶಿವರಾಜ್‌ಕುಮಾರ್.‌ ಈ ಮೂಲಕ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿಗೆ ಅತ್ತಿಗೆ ನೀರೆರೆಯುತ್ತಿದ್ದಾರೆ.

ಅಂದಹಾಗೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿನ ಅನ್ನಪೂರ್ಣೇಶ್ವರಿ ವಿದ್ಯಾಪೀಠದ ಅನ್ನಪೂರ್ಣೇಶ್ವರಿ ಬಡ ಮಕ್ಕಳ ಉಚಿತ ಊಟ ಮತ್ತು ವಸತಿ ಸಹಿತ ಪ್ರೌಢ ಶಾಲೆಯನ್ನು ಗೀತಾ ಶಿವರಾಜ್‌ಕುಮಾರ್ ದತ್ತು ಸ್ವೀಕರಿಸಿದ್ದಾರೆ.
icon

(3 / 7)

ಅಂದಹಾಗೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿನ ಅನ್ನಪೂರ್ಣೇಶ್ವರಿ ವಿದ್ಯಾಪೀಠದ ಅನ್ನಪೂರ್ಣೇಶ್ವರಿ ಬಡ ಮಕ್ಕಳ ಉಚಿತ ಊಟ ಮತ್ತು ವಸತಿ ಸಹಿತ ಪ್ರೌಢ ಶಾಲೆಯನ್ನು ಗೀತಾ ಶಿವರಾಜ್‌ಕುಮಾರ್ ದತ್ತು ಸ್ವೀಕರಿಸಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ಗೆ ಹೊಸಪೇಟೆ ಎಂದರೆ ಅದೇನೋ ಖುಷಿ. ಇದೀಗ ಅದೇ ಹೊಸಪೇಟೆಯ ತಾಲೂಕಿನ ಶಾಲೆಯೊಂದನ್ನು ಗೀತಾ ಶಿವರಾಜ್‌ಕುಮಾರ್‌ ಅಡಾಪ್ಟ್‌ ಮಾಡಿಕೊಂಡಿದ್ದಾರೆ. 
icon

(4 / 7)

ಪುನೀತ್‌ ರಾಜ್‌ಕುಮಾರ್‌ಗೆ ಹೊಸಪೇಟೆ ಎಂದರೆ ಅದೇನೋ ಖುಷಿ. ಇದೀಗ ಅದೇ ಹೊಸಪೇಟೆಯ ತಾಲೂಕಿನ ಶಾಲೆಯೊಂದನ್ನು ಗೀತಾ ಶಿವರಾಜ್‌ಕುಮಾರ್‌ ಅಡಾಪ್ಟ್‌ ಮಾಡಿಕೊಂಡಿದ್ದಾರೆ. 

ಇತ್ತೀಚೆಗಷ್ಟೇ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಆಡಳಿತ ಮಂಡಳಿಯ ಜತೆಗೆ ಮತ್ತು ಪೀಠದ ದಿಗಂಬರ ರಾಜಾ  ಭಾರತಿ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡು ಬಳಿಕ ದತ್ತು ಸ್ವೀಕಾರ ನಿರ್ಧಾರ ತೆಗೆದುಕೊಂಡಿದ್ದಾರೆ. 
icon

(5 / 7)

ಇತ್ತೀಚೆಗಷ್ಟೇ ಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿನ ವ್ಯವಸ್ಥೆಗಳ ಬಗ್ಗೆ ಆಡಳಿತ ಮಂಡಳಿಯ ಜತೆಗೆ ಮತ್ತು ಪೀಠದ ದಿಗಂಬರ ರಾಜಾ  ಭಾರತಿ ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡು ಬಳಿಕ ದತ್ತು ಸ್ವೀಕಾರ ನಿರ್ಧಾರ ತೆಗೆದುಕೊಂಡಿದ್ದಾರೆ. 

ವೇದ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಬಳ್ಳಾರಿಗೆ ಬಂದಿದ್ದ ಗೀತಾ ಶಿವರಾಜ್‌ಕುಮಾರ್‌ ಈ ಶಾಲೆಗೆ ಭೇಟಿ ನೀಡಿದ್ದರು. ಇದೀಗ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.
icon

(6 / 7)

ವೇದ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಬಳ್ಳಾರಿಗೆ ಬಂದಿದ್ದ ಗೀತಾ ಶಿವರಾಜ್‌ಕುಮಾರ್‌ ಈ ಶಾಲೆಗೆ ಭೇಟಿ ನೀಡಿದ್ದರು. ಇದೀಗ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿದ್ದಾರೆ.

ನಟ ಪುನೀತ್‌ ರಾಜ್‌ಕುಮಾರ್‌ ಸಹ ತಮ್ಮ ಅನೇಕ ಸಮಾಜ ಸೇವೆಗಳ ಮೂಲಕವೇ ಸುದ್ದಿ ಮಾಡಿದವರು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇದೀಗ ಅದೇ ಕೆಲಸವನ್ನೂ ಈಗಾಗಲೇ ಮುಂದುವರಿಸಿರುವ ಗೀತಾ, ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 
icon

(7 / 7)

ನಟ ಪುನೀತ್‌ ರಾಜ್‌ಕುಮಾರ್‌ ಸಹ ತಮ್ಮ ಅನೇಕ ಸಮಾಜ ಸೇವೆಗಳ ಮೂಲಕವೇ ಸುದ್ದಿ ಮಾಡಿದವರು. ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಇದೀಗ ಅದೇ ಕೆಲಸವನ್ನೂ ಈಗಾಗಲೇ ಮುಂದುವರಿಸಿರುವ ಗೀತಾ, ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. 


ಇತರ ಗ್ಯಾಲರಿಗಳು