‘ಕಾರ್ಗತ್ತಲಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ಶುಭಾಶಯ ರವಾನಿಸಿದ ಮೇಘನಾ ರಾಜ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ‘ಕಾರ್ಗತ್ತಲಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ಶುಭಾಶಯ ರವಾನಿಸಿದ ಮೇಘನಾ ರಾಜ್‌

‘ಕಾರ್ಗತ್ತಲಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ಶುಭಾಶಯ ರವಾನಿಸಿದ ಮೇಘನಾ ರಾಜ್‌

  • ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್‌ ಅವರದ್ದು ಬಹು ವರ್ಷಗಳ ಪ್ರೀತಿ. ಆ ಪ್ರೀತಿಗೆ ಮದುವೆಯ ಮುದ್ರೆಯೂ ಬಿದ್ದಿತ್ತು. ಆದರೆ, ಆ ಖುಷಿ ಹೆಚ್ಚು ದಿನಗಳ ಕಾಲ ನಿಲ್ಲಲಿಲ್ಲ. ಮದುವೆಯಾಗಿ ಎರಡೇ ವರ್ಷಕ್ಕೆ ಚಿರು ಸರ್ಜಾ ನಿಧನರಾದರು. ಈಗ ಪತಿಯ ನೆನಪಿನಲ್ಲಿಯೇ ಮಗನ ಜತೆಗೆ ದಿನ ದೂಡುತ್ತಿದ್ದಾರೆ ಮೇಘನಾ. ಮದುವೆ ವಾರ್ಷಿಕೋತ್ಸವಕ್ಕೂ ವಿಶೇಷ ಪೋಸ್ಟ್‌ ಶೇರ್‌ ಮಾಡಿದ್ದಾರೆ.

ಚಂದನವನದ ಚೆಂದದ ಜೋಡಿ ಮೇಘನಾ ರಾಜ್‌ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಕನ್ನಡದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಪ್ರೀತಿ ಫಲಿಸಿ, ಮದುವೆಯಲ್ಲಿ ಒಂದಾಗಿದ್ದರು. 
icon

(1 / 6)

ಚಂದನವನದ ಚೆಂದದ ಜೋಡಿ ಮೇಘನಾ ರಾಜ್‌ ಸರ್ಜಾ ಮತ್ತು ಚಿರಂಜೀವಿ ಸರ್ಜಾ. ಕನ್ನಡದಲ್ಲಿ ಬೇಡಿಕೆಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಪ್ರೀತಿ ಫಲಿಸಿ, ಮದುವೆಯಲ್ಲಿ ಒಂದಾಗಿದ್ದರು. 

ಈಗ ಸೋಷಿಯಲ್‌ ಮೀಡಿಯಾದಲ್ಲಿ ಮೇಘನಾ ರಾಜ್‌ ಹೊಸ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನ ಹಿನ್ನೆಲೆ ನೋಡುವುದಾದರೆ, ಚಿರು ಜತೆ ಮದುವೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳನ್ನು ಕಳೆದಿದ್ದಾರೆ. 
icon

(2 / 6)

ಈಗ ಸೋಷಿಯಲ್‌ ಮೀಡಿಯಾದಲ್ಲಿ ಮೇಘನಾ ರಾಜ್‌ ಹೊಸ ಪೋಸ್ಟ್‌ ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನ ಹಿನ್ನೆಲೆ ನೋಡುವುದಾದರೆ, ಚಿರು ಜತೆ ಮದುವೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳನ್ನು ಕಳೆದಿದ್ದಾರೆ. 

2018ರ ಮೇ 2ರಂದು ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿತ್ತು. ಈಗ ಆ ವಿವಾಹ ವಾರ್ಷಿಕೋತ್ಸವದ ನೆನಪಿನಲ್ಲಿ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮೇಘನಾ. 
icon

(3 / 6)

2018ರ ಮೇ 2ರಂದು ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯದಂತೆ ಈ ಜೋಡಿಯ ಮದುವೆ ನಡೆದಿತ್ತು. ಈಗ ಆ ವಿವಾಹ ವಾರ್ಷಿಕೋತ್ಸವದ ನೆನಪಿನಲ್ಲಿ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿದ್ದಾರೆ ಮೇಘನಾ. 

ಮೇಣದ ಬತ್ತಿಯ ಬೆಳಕಿನಲ್ಲಿ ಒಂದು ಸುಮಧುರ ಗಳಿಗೆಯ ಕ್ಷಣದ ಫೋಟೋಗಳನ್ನು ಮೇಘನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಫೋಟೋಗಳಿಗೆ ಭಾವುಕ ಕ್ಯಾಪ್ಷನ್‌ ನೀಡಿದ್ದಾರೆ.
icon

(4 / 6)

ಮೇಣದ ಬತ್ತಿಯ ಬೆಳಕಿನಲ್ಲಿ ಒಂದು ಸುಮಧುರ ಗಳಿಗೆಯ ಕ್ಷಣದ ಫೋಟೋಗಳನ್ನು ಮೇಘನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಫೋಟೋಗಳಿಗೆ ಭಾವುಕ ಕ್ಯಾಪ್ಷನ್‌ ನೀಡಿದ್ದಾರೆ.

‘ನನ್ನ ಮಿಸ್ಟರ್‌ ರೈಟ್.‌ ಕರಾಳ ರಾತ್ರಿಯಲ್ಲೂ, ಸುರಂಗದಾಳದಲ್ಲೂ ಮಿನುಗುವ ಬೆಳಕು ನೀನು" ಎಂದು ಪೋಸ್ಟ್‌ ಮಾಡಿ, ಹ್ಯಾಪಿ ಆನಿವರ್ಸರಿ ಎಂದಿದ್ದಾರೆ. 
icon

(5 / 6)

‘ನನ್ನ ಮಿಸ್ಟರ್‌ ರೈಟ್.‌ ಕರಾಳ ರಾತ್ರಿಯಲ್ಲೂ, ಸುರಂಗದಾಳದಲ್ಲೂ ಮಿನುಗುವ ಬೆಳಕು ನೀನು" ಎಂದು ಪೋಸ್ಟ್‌ ಮಾಡಿ, ಹ್ಯಾಪಿ ಆನಿವರ್ಸರಿ ಎಂದಿದ್ದಾರೆ. 

 2020ರ ಜೂನ್‌ 7ರಂದು ನಟ ಚಿರಂಜೀವಿ ಸರ್ಜಾ ಹೃದಯ ಸ್ತಂಭನದಿಂದ ನಿಧನರಾದರು. ಚಿರು ನಿಧನದ ಬಳಿಕ ಅವನದೇ ರೂಪದಲ್ಲಿ ಮಗ ರಾಯನ್‌ ಆಗಮಿಸಿದ್ದಾನೆ. 
icon

(6 / 6)

 2020ರ ಜೂನ್‌ 7ರಂದು ನಟ ಚಿರಂಜೀವಿ ಸರ್ಜಾ ಹೃದಯ ಸ್ತಂಭನದಿಂದ ನಿಧನರಾದರು. ಚಿರು ನಿಧನದ ಬಳಿಕ ಅವನದೇ ರೂಪದಲ್ಲಿ ಮಗ ರಾಯನ್‌ ಆಗಮಿಸಿದ್ದಾನೆ. 


ಇತರ ಗ್ಯಾಲರಿಗಳು